<p><strong>ನವದೆಹಲಿ (ಪಿಟಿಐ):</strong> ಕೋವಿಡ್–19 ಸಾಂಕ್ರಾಮಿಕವು ದೇಶಕ್ಕೆ ಅಪ್ಪಳಿಸಿದ ನಂತರದಲ್ಲಿ, ದೇಶದ ಮೊದಲ 100 ಶತಕೋಟ್ಯಧೀಶರ ಸಂಪತ್ತು ಒಟ್ಟು<br />₹12.97 ಲಕ್ಷ ಕೋಟಿಯಷ್ಟು ಹೆಚ್ಚಳ ಆಗಿದೆ. ಈ ಮೊತ್ತವನ್ನು ಬಳಸಿ ಭಾರತದ 13.8 ಕೋಟಿ ಕಡುಬಡವರಿಗೆ ತಲಾ<br />₹ 94 ಸಾವಿರದ ಚೆಕ್ ನೀಡಲು ಸಾಧ್ಯ!</p>.<p>‘ಅಸಮಾನತೆಯ ವೈರಾಣು’ ಹೆಸ ರಿನ ಆಕ್ಸ್ಫ್ಯಾಮ್ ವರದಿಯಲ್ಲಿ ಈ ವಿವರಗಳು ಇವೆ.</p>.<p>ಉದ್ಯಮಿ ಮುಕೇಶ್ ಅಂಬಾನಿ ಅವರು ಸಾಂಕ್ರಾಮಿಕದ ಅವಧಿಯಲ್ಲಿ ಒಂದು ಗಂಟೆಯಲ್ಲಿ ಸಂಪಾದಿಸಿದಷ್ಟು ಹಣವನ್ನು ಕೌಶಲವಿಲ್ಲದ ಕಾರ್ಮಿಕ ನೊಬ್ಬ ದುಡಿಯಲು 10 ಸಾವಿರ ವರ್ಷ ಗಳು ಬೇಕಾಗುತ್ತವೆ ಎಂದು ವರದಿ ಅಂದಾಜಿಸಿದೆ.</p>.<p>ಮುಕೇಶ್ ಅಂಬಾನಿ ಅವರು ಒಂದು ಸೆಕೆಂಡ್ ಅವಧಿಯಲ್ಲಿ ಸಂಪಾದಿಸುವಷ್ಟು ಹಣವನ್ನು ದುಡಿಯಲು ಅದೇ ಕಾರ್ಮಿಕನಿಗೆ ಮೂರು ವರ್ಷಗಳು ಬೇಕಾಗುತ್ತವೆ ಎಂದೂ ವರದಿ ಹೇಳಿದೆ.</p>.<p>ವಿಶ್ವ ಆರ್ಥಿಕ ವೇದಿಕೆ ಆಯೋಜಿಸಿ ರುವ ‘ದಾವೋಸ್ ಡಯಲಾಗ್ಸ್’ ಕಾರ್ಯಕ್ರಮದ ಮೊದಲ ದಿನ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ.</p>.<p>ಕೋವಿಡ್–19 ಸಾಂಕ್ರಾಮಿಕವು ವಿಶ್ವವು ನೂರು ವರ್ಷಗಳಲ್ಲಿ ಕಂಡ ಅತ್ಯಂತ ಕೆಟ್ಟ ಆರೋಗ್ಯ ಬಿಕ್ಕಟ್ಟು ಎಂದು ವರದಿ ವಿವರಿಸಿದೆ.</p>.<p>‘ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತದ 11 ಅತ್ಯಂತ ಶ್ರೀಮಂತರ ಸಂಪತ್ತಿನಲ್ಲಿ ಆಗಿರುವ ಹೆಚ್ಚಳಕ್ಕೆ ಶೇಕಡ 1ರಷ್ಟು ತೆರಿಗೆ ವಿಧಿಸಿದರೆ, ಜನೌಷಧಿ ಯೋಜನೆಗೆ ನೀಡುತ್ತಿರುವ ಅನುದಾನ ವನ್ನು 140 ಪಟ್ಟು ಹೆಚ್ಚಿಸಲು ಸಾಧ್ಯವಿದೆ’ ಎಂದು ಆಕ್ಸ್ಫ್ಯಾಮ್ ಅಂದಾಜಿಸಿದೆ.</p>.<p>‘ಸಾಂಕ್ರಾಮಿಕದ ಕೆಟ್ಟ ಪರಿಣಾಮ ದಿಂದ ಶ್ರೀಮಂತರು ತಪ್ಪಿಸಿಕೊಂಡರು. ಕಚೇರಿಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದವರು, ಮನೆಯಿಂದ ಕೆಲಸ ಮಾಡಲು ಆರಂಭಿಸಿದರು. ಆದರೆ, ಹೆಚ್ಚು ಅದೃಷ್ಟ ಇಲ್ಲದಿದ್ದ ಬಹುತೇಕರು ತಮ್ಮ ಜೀವನೋಪಾಯವನ್ನೇ ಕಳೆದುಕೊಂಡರು’ ಎಂದು ಆಕ್ಸ್ಫ್ಯಾಮ್ ಹೇಳಿದೆ.</p>.<p>ತೀವ್ರವಾದ ಆರ್ಥಿಕ ಅಸಮಾನತೆ ಹೋಗಲಾಡಿಸಲು ಸಾಧ್ಯವಾಗದ್ದೇನೂ ಅಲ್ಲ. ಈಗ ಅಸಮಾನತೆಯ ವಿರುದ್ಧದ ಹೋರಾಟವು ಆರ್ಥಿಕ ಪುನಶ್ಚೇತನ ಪ್ರಯತ್ನಗಳ ಮುಖ್ಯ ಭಾಗವಾಗಬೇಕು.</p>.<p>– ಅಮಿತಾಭ್ ಬೆಹರ್, ಆಕ್ಸ್ಫ್ಯಾಮ್ ಇಂಡಿಯಾದ ಸಿಇಒ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ಕೋವಿಡ್–19 ಸಾಂಕ್ರಾಮಿಕವು ದೇಶಕ್ಕೆ ಅಪ್ಪಳಿಸಿದ ನಂತರದಲ್ಲಿ, ದೇಶದ ಮೊದಲ 100 ಶತಕೋಟ್ಯಧೀಶರ ಸಂಪತ್ತು ಒಟ್ಟು<br />₹12.97 ಲಕ್ಷ ಕೋಟಿಯಷ್ಟು ಹೆಚ್ಚಳ ಆಗಿದೆ. ಈ ಮೊತ್ತವನ್ನು ಬಳಸಿ ಭಾರತದ 13.8 ಕೋಟಿ ಕಡುಬಡವರಿಗೆ ತಲಾ<br />₹ 94 ಸಾವಿರದ ಚೆಕ್ ನೀಡಲು ಸಾಧ್ಯ!</p>.<p>‘ಅಸಮಾನತೆಯ ವೈರಾಣು’ ಹೆಸ ರಿನ ಆಕ್ಸ್ಫ್ಯಾಮ್ ವರದಿಯಲ್ಲಿ ಈ ವಿವರಗಳು ಇವೆ.</p>.<p>ಉದ್ಯಮಿ ಮುಕೇಶ್ ಅಂಬಾನಿ ಅವರು ಸಾಂಕ್ರಾಮಿಕದ ಅವಧಿಯಲ್ಲಿ ಒಂದು ಗಂಟೆಯಲ್ಲಿ ಸಂಪಾದಿಸಿದಷ್ಟು ಹಣವನ್ನು ಕೌಶಲವಿಲ್ಲದ ಕಾರ್ಮಿಕ ನೊಬ್ಬ ದುಡಿಯಲು 10 ಸಾವಿರ ವರ್ಷ ಗಳು ಬೇಕಾಗುತ್ತವೆ ಎಂದು ವರದಿ ಅಂದಾಜಿಸಿದೆ.</p>.<p>ಮುಕೇಶ್ ಅಂಬಾನಿ ಅವರು ಒಂದು ಸೆಕೆಂಡ್ ಅವಧಿಯಲ್ಲಿ ಸಂಪಾದಿಸುವಷ್ಟು ಹಣವನ್ನು ದುಡಿಯಲು ಅದೇ ಕಾರ್ಮಿಕನಿಗೆ ಮೂರು ವರ್ಷಗಳು ಬೇಕಾಗುತ್ತವೆ ಎಂದೂ ವರದಿ ಹೇಳಿದೆ.</p>.<p>ವಿಶ್ವ ಆರ್ಥಿಕ ವೇದಿಕೆ ಆಯೋಜಿಸಿ ರುವ ‘ದಾವೋಸ್ ಡಯಲಾಗ್ಸ್’ ಕಾರ್ಯಕ್ರಮದ ಮೊದಲ ದಿನ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ.</p>.<p>ಕೋವಿಡ್–19 ಸಾಂಕ್ರಾಮಿಕವು ವಿಶ್ವವು ನೂರು ವರ್ಷಗಳಲ್ಲಿ ಕಂಡ ಅತ್ಯಂತ ಕೆಟ್ಟ ಆರೋಗ್ಯ ಬಿಕ್ಕಟ್ಟು ಎಂದು ವರದಿ ವಿವರಿಸಿದೆ.</p>.<p>‘ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತದ 11 ಅತ್ಯಂತ ಶ್ರೀಮಂತರ ಸಂಪತ್ತಿನಲ್ಲಿ ಆಗಿರುವ ಹೆಚ್ಚಳಕ್ಕೆ ಶೇಕಡ 1ರಷ್ಟು ತೆರಿಗೆ ವಿಧಿಸಿದರೆ, ಜನೌಷಧಿ ಯೋಜನೆಗೆ ನೀಡುತ್ತಿರುವ ಅನುದಾನ ವನ್ನು 140 ಪಟ್ಟು ಹೆಚ್ಚಿಸಲು ಸಾಧ್ಯವಿದೆ’ ಎಂದು ಆಕ್ಸ್ಫ್ಯಾಮ್ ಅಂದಾಜಿಸಿದೆ.</p>.<p>‘ಸಾಂಕ್ರಾಮಿಕದ ಕೆಟ್ಟ ಪರಿಣಾಮ ದಿಂದ ಶ್ರೀಮಂತರು ತಪ್ಪಿಸಿಕೊಂಡರು. ಕಚೇರಿಯಲ್ಲೇ ಕುಳಿತು ಕೆಲಸ ಮಾಡುತ್ತಿದ್ದವರು, ಮನೆಯಿಂದ ಕೆಲಸ ಮಾಡಲು ಆರಂಭಿಸಿದರು. ಆದರೆ, ಹೆಚ್ಚು ಅದೃಷ್ಟ ಇಲ್ಲದಿದ್ದ ಬಹುತೇಕರು ತಮ್ಮ ಜೀವನೋಪಾಯವನ್ನೇ ಕಳೆದುಕೊಂಡರು’ ಎಂದು ಆಕ್ಸ್ಫ್ಯಾಮ್ ಹೇಳಿದೆ.</p>.<p>ತೀವ್ರವಾದ ಆರ್ಥಿಕ ಅಸಮಾನತೆ ಹೋಗಲಾಡಿಸಲು ಸಾಧ್ಯವಾಗದ್ದೇನೂ ಅಲ್ಲ. ಈಗ ಅಸಮಾನತೆಯ ವಿರುದ್ಧದ ಹೋರಾಟವು ಆರ್ಥಿಕ ಪುನಶ್ಚೇತನ ಪ್ರಯತ್ನಗಳ ಮುಖ್ಯ ಭಾಗವಾಗಬೇಕು.</p>.<p>– ಅಮಿತಾಭ್ ಬೆಹರ್, ಆಕ್ಸ್ಫ್ಯಾಮ್ ಇಂಡಿಯಾದ ಸಿಇಒ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>