<p><strong>ನವದೆಹಲಿ: </strong>‘2018–19ರಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು (ಪಿಎಸ್ಬಿ) ಮನ್ನಾ ಮಾಡಿರುವ ಸಾಲದ ಮೊತ್ತಕ್ಕಿಂತಲೂ ವಸೂಲಿ ಮಾಡಿರುವ ಮೊತ್ತವೇ ಅಧಿಕವಾಗಿದೆ‘ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.</p>.<p>ಲೋಕಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, 2018–19ರಲ್ಲಿ ₹ 36,377 ಕೋಟಿ ಸಾಲ ಮನ್ನಾ ಮಾಡಲಾಗಿದ್ದು, ₹ 45,593 ಕೋಟಿ ಮೊತ್ತದ ಸಾಲ ವಸೂಲಿಯಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.</p>.<p>‘ಮನ್ನಾ ಮಾಡಿರುವ ಸಾಲದ ಮೊತ್ತಕ್ಕೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಸಾಲ ವಸೂಲಿ ವೇಗವಾಗಿ ನಡೆಯುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.</p>.<p>‘2008ರ ಮಾರ್ಚ್ನಲ್ಲಿ ₹ 18.19 ಲಕ್ಷ ಕೋಟಿಗಳಷ್ಟಿದ್ದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಸರಾಸರಿ ಮುಂಗಡವು 2014ರ ಮಾರ್ಚ್ ಅಂತ್ಯಕ್ಕೆ ₹ 52.16 ಲಕ್ಷ ಕೋಟಿಗೆ ಏರಿಕೆಯಾಗಿದೆ. ಬ್ಯಾಂಕ್ಗಳ ಸುಸ್ತಿ ಸಾಲ ಹೆಚ್ಚಾಗಲು ಆಕ್ರಮಣಕಾರಿ ಸಾಲ ನೀಡಿಕೆ ನೀತಿ, ಉದ್ದೇಶಪೂರ್ವಕ ಸುಸ್ತಿದಾರ, ಭ್ರಷ್ಟಾಚಾರ, ಇನ್ನೂ ಕೆಲವು ಸಂದರ್ಭಗಳಲ್ಲಿ ಮಂದಗತಿಯ ಆರ್ಥಿಕ ಪ್ರಗತಿ ಕಾರಣ’ ಎಂದಿದ್ದಾರೆ.</p>.<p>ಸಾಲ ವಸೂಲಿ ಹೆಚ್ಚಾಗುವಂತೆ ಮಾಡಲು, ಹಣಕಾಸು ನಷ್ಟ ಮತ್ತು ದಿವಾಳಿ ಕಾಯ್ದೆ, ಹಣಕಾಸು ಸ್ವತ್ತಿನ ಮರು ಹೊಂದಾಣಿಕೆಯಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>‘2018–19ರಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳು (ಪಿಎಸ್ಬಿ) ಮನ್ನಾ ಮಾಡಿರುವ ಸಾಲದ ಮೊತ್ತಕ್ಕಿಂತಲೂ ವಸೂಲಿ ಮಾಡಿರುವ ಮೊತ್ತವೇ ಅಧಿಕವಾಗಿದೆ‘ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.</p>.<p>ಲೋಕಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, 2018–19ರಲ್ಲಿ ₹ 36,377 ಕೋಟಿ ಸಾಲ ಮನ್ನಾ ಮಾಡಲಾಗಿದ್ದು, ₹ 45,593 ಕೋಟಿ ಮೊತ್ತದ ಸಾಲ ವಸೂಲಿಯಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.</p>.<p>‘ಮನ್ನಾ ಮಾಡಿರುವ ಸಾಲದ ಮೊತ್ತಕ್ಕೆ ಹೋಲಿಸಿದರೆ, ವರ್ಷದಿಂದ ವರ್ಷಕ್ಕೆ ಸಾಲ ವಸೂಲಿ ವೇಗವಾಗಿ ನಡೆಯುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.</p>.<p>‘2008ರ ಮಾರ್ಚ್ನಲ್ಲಿ ₹ 18.19 ಲಕ್ಷ ಕೋಟಿಗಳಷ್ಟಿದ್ದ ಸರ್ಕಾರಿ ಸ್ವಾಮ್ಯದ ಬ್ಯಾಂಕ್ಗಳ ಸರಾಸರಿ ಮುಂಗಡವು 2014ರ ಮಾರ್ಚ್ ಅಂತ್ಯಕ್ಕೆ ₹ 52.16 ಲಕ್ಷ ಕೋಟಿಗೆ ಏರಿಕೆಯಾಗಿದೆ. ಬ್ಯಾಂಕ್ಗಳ ಸುಸ್ತಿ ಸಾಲ ಹೆಚ್ಚಾಗಲು ಆಕ್ರಮಣಕಾರಿ ಸಾಲ ನೀಡಿಕೆ ನೀತಿ, ಉದ್ದೇಶಪೂರ್ವಕ ಸುಸ್ತಿದಾರ, ಭ್ರಷ್ಟಾಚಾರ, ಇನ್ನೂ ಕೆಲವು ಸಂದರ್ಭಗಳಲ್ಲಿ ಮಂದಗತಿಯ ಆರ್ಥಿಕ ಪ್ರಗತಿ ಕಾರಣ’ ಎಂದಿದ್ದಾರೆ.</p>.<p>ಸಾಲ ವಸೂಲಿ ಹೆಚ್ಚಾಗುವಂತೆ ಮಾಡಲು, ಹಣಕಾಸು ನಷ್ಟ ಮತ್ತು ದಿವಾಳಿ ಕಾಯ್ದೆ, ಹಣಕಾಸು ಸ್ವತ್ತಿನ ಮರು ಹೊಂದಾಣಿಕೆಯಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>