ನೋಟು ರದ್ದತಿಯಿಂದ ಗ್ರಾಹಕರಲ್ಲಿ ನಗದು ಚಲಾವಣೆ ಪ್ರಮಾಣ ಕಡಿಮೆಯಾಗಿದೆ. ಇದರ ಪರಿಣಾಮದಿಂದ ಅವರ ಖರೀದಿ ಸಾಮರ್ಥವೂ ತಗ್ಗಿದೆ. ಕೊಳ್ಳುವವರೇ ಇಲ್ಲದೆ ತರಕಾರಿ ಮತ್ತು ಬೇಳೆಕಾಳುಗಳ ಬೆಲೆ ಇಳಿಕೆ ಕಂಡಿದೆ. ಹೀಗಾಗಿ, ಚಿಲ್ಲರೆ ಹಣದುಬ್ಬರ ಇಳಿಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಗ್ರಾಮೀಣ ಭಾಗದಲ್ಲಿ ಚಿಲ್ಲರೆ ಹಣದುಬ್ಬರ ಶೇ 3.83 ರಷ್ಟು ಮತ್ತು ನಗರ ಪ್ರದೇಶದಲ್ಲಿ ಶೇ 2.90ರಷ್ಟಿದೆ.