<p><strong>ಬೆಂಗಳೂರು: </strong>ರಾಜ್ಯದಲ್ಲಿ ಎದುರಾಗಿರುವ ನಗದು ಕೊರತೆ ಸಮಸ್ಯೆ ನಿವಾರಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತುರ್ತಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಇತರ ರಾಜ್ಯಗಳಿಂದ ನಗದು ತರಿಸಿ ಬೆಂಗಳೂರಿನ ಎಟಿಎಂಗಳಿಗೆ ಭರ್ತಿ ಮಾಡಲು ನಿರ್ಧರಿಸಿದೆ.</p>.<p>‘ಬ್ಯಾಂಕ್ಗಳಲ್ಲಿ ಗ್ರಾಹಕರು ಉಳಿತಾಯ, ಚಾಲ್ತಿ ಖಾತೆಗಳೂ ಸೇರಿದಂತೆ ಹಣ ಜಮೆ ಮಾಡುವುದರ ಮೇಲಿನ ಶೇ 0.75 ನಗದು ನಿರ್ವಹಣೆ ಶುಲ್ಕ ರದ್ದು ಮಾಡಿದೆ. ಇದರಿಂದ ಬ್ಯಾಂಕ್ಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ಹರಿದು ಬರಲಿದೆ. ಆ ಮೊತ್ತವನ್ನು ಎಟಿಎಂಗಳಿಗೆ ಭರ್ತಿ ಮಾಡುವುದರಿಂದ ಅವುಗಳ ಮೇಲಿನ ಒತ್ತಡ ದೂರವಾಗಲಿದೆ. ಹಣ ಠೇವಣಿ ಇಡುವುದರ ಮೇಲಿನ ಶುಲ್ಕ ಮನ್ನಾ ಮಾಡುವು ದರಿಂದ ಬ್ಯಾಂಕ್ಗೆ ಪ್ರತಿ ದಿನ ₹48.75 ಕೋಟಿ ನಷ್ಟವಾಗಲಿದೆ’ ಎಂದು ಎಸ್ಬಿಐ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ನೀರಜ್ ವ್ಯಾಸ್ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>‘ಎಸ್ಬಿಐನಿಂದ ಪ್ರತಿ ದಿನ ಸರಾಸರಿ ₹ 9,000 ಕೋಟಿಗಳಷ್ಟು ಮೊತ್ತವನ್ನು ವಾಪಸ್ ಪಡೆಯಲಾಗುತ್ತಿದೆ. ಪ್ರತಿ ದಿನ ಬ್ಯಾಂಕ್ಗೆ ಜಮೆಯಾಗುವ ಮೊತ್ತ ₹ 6,500 ಕೋಟಿಗಳಷ್ಟಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ನಗದು ಅಭಾವ ಸಮಸ್ಯೆ ತೀವ್ರಗೊಂಡಿದೆ. ಬ್ಯಾಂಕ್ನ ಇತರ ವೃತ್ತಗಳಿಂದ ನಗದು ತರಿಸಲಾಗುವುದು. ಇದರಿಂದ ನಗದು ಬೇಡಿಕೆ ಮೇಲಿನ ಒತ್ತಡ ಕಡಿಮೆಯಾಗಲಿದೆ’ ಎಂದು ವ್ಯಾಸ್ ಹೇಳಿದ್ದಾರೆ.</p>.<p><strong>ಸುಧಾರಿಸದ ಪರಿಸ್ಥಿತಿ: </strong>ನಾಲ್ಕೈದು ದಿನಗಳಿಂದ ಎದುರಾಗಿರುವ ನಗದು ಕೊರತೆ ಸಮಸ್ಯೆ ಈಗಲೂ ದೂರವಾಗಿಲ್ಲ. ‘ಶುಕ್ರವಾರ ಬೆಳಿಗ್ಗೆ ಏಳು ಎಟಿಎಂಗಳಿಗೆ ಭೇಟಿ ನೀಡಿದರೂ ನನಗೆ ಹಣ ಸಿಗಲಿಲ್ಲ’ ಎಂದು ಎಚ್ಡಿಎಫ್ಸಿ ಬ್ಯಾಂಕ್ನ ಗ್ರಾಹಕರೊಬ್ಬರು ದೂರಿದ್ದಾರೆ.</p>.<p><strong>ಈಡೇರದ ಭರವಸೆ</strong><br /> ನಗದು ಕೊರತೆ ತಗ್ಗಿಸಲು ಕ್ರಮ ಕೈಗೊಳ್ಳಲಾಗಿದೆ. ಮೂರು ದಿನಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ ಎನ್ನುವ ಕೇಂದ್ರ ಸರ್ಕಾರದ ಭರವಸೆ ಇದುವರೆಗೂ ಈಡೇರಿಲ್ಲ. ಬ್ಯಾಂಕಿಂಗ್ ವ್ಯವಸ್ಥೆಗೆ ಹೆಚ್ಚುವರಿ ಹಣ ಪೂರೈಕೆಯಾಗಿಲ್ಲ.</p>.<p>‘ರಾತ್ರಿ ಬೆಳಗಾಗುವುದ ರೊಳಗೆ ಹೆಚ್ಚುವರಿ ಹಣ ಪೂರೈಸಲು ಸಾಧ್ಯವಾಗಲಾರದು. ನಗದು ಪೂರೈಸಲು ಹಲವಾರು ಅಡಚಣೆಗಳೂ ಇವೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ವಕ್ತಾರ ತಿಳಿಸಿದ್ದಾರೆ. ಬ್ಯಾಂಕ್ನ ಹಿರಿಯ ಅಧಿಕಾರಿಗಳು ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ<br /> ಪರಿಶೀಲಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಜ್ಯದಲ್ಲಿ ಎದುರಾಗಿರುವ ನಗದು ಕೊರತೆ ಸಮಸ್ಯೆ ನಿವಾರಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತುರ್ತಾಗಿ ಹಲವು ಕ್ರಮಗಳನ್ನು ಕೈಗೊಂಡಿದೆ. ಇತರ ರಾಜ್ಯಗಳಿಂದ ನಗದು ತರಿಸಿ ಬೆಂಗಳೂರಿನ ಎಟಿಎಂಗಳಿಗೆ ಭರ್ತಿ ಮಾಡಲು ನಿರ್ಧರಿಸಿದೆ.</p>.<p>‘ಬ್ಯಾಂಕ್ಗಳಲ್ಲಿ ಗ್ರಾಹಕರು ಉಳಿತಾಯ, ಚಾಲ್ತಿ ಖಾತೆಗಳೂ ಸೇರಿದಂತೆ ಹಣ ಜಮೆ ಮಾಡುವುದರ ಮೇಲಿನ ಶೇ 0.75 ನಗದು ನಿರ್ವಹಣೆ ಶುಲ್ಕ ರದ್ದು ಮಾಡಿದೆ. ಇದರಿಂದ ಬ್ಯಾಂಕ್ಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ಹರಿದು ಬರಲಿದೆ. ಆ ಮೊತ್ತವನ್ನು ಎಟಿಎಂಗಳಿಗೆ ಭರ್ತಿ ಮಾಡುವುದರಿಂದ ಅವುಗಳ ಮೇಲಿನ ಒತ್ತಡ ದೂರವಾಗಲಿದೆ. ಹಣ ಠೇವಣಿ ಇಡುವುದರ ಮೇಲಿನ ಶುಲ್ಕ ಮನ್ನಾ ಮಾಡುವು ದರಿಂದ ಬ್ಯಾಂಕ್ಗೆ ಪ್ರತಿ ದಿನ ₹48.75 ಕೋಟಿ ನಷ್ಟವಾಗಲಿದೆ’ ಎಂದು ಎಸ್ಬಿಐ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ನೀರಜ್ ವ್ಯಾಸ್ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>‘ಎಸ್ಬಿಐನಿಂದ ಪ್ರತಿ ದಿನ ಸರಾಸರಿ ₹ 9,000 ಕೋಟಿಗಳಷ್ಟು ಮೊತ್ತವನ್ನು ವಾಪಸ್ ಪಡೆಯಲಾಗುತ್ತಿದೆ. ಪ್ರತಿ ದಿನ ಬ್ಯಾಂಕ್ಗೆ ಜಮೆಯಾಗುವ ಮೊತ್ತ ₹ 6,500 ಕೋಟಿಗಳಷ್ಟಿದೆ. ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ನಗದು ಅಭಾವ ಸಮಸ್ಯೆ ತೀವ್ರಗೊಂಡಿದೆ. ಬ್ಯಾಂಕ್ನ ಇತರ ವೃತ್ತಗಳಿಂದ ನಗದು ತರಿಸಲಾಗುವುದು. ಇದರಿಂದ ನಗದು ಬೇಡಿಕೆ ಮೇಲಿನ ಒತ್ತಡ ಕಡಿಮೆಯಾಗಲಿದೆ’ ಎಂದು ವ್ಯಾಸ್ ಹೇಳಿದ್ದಾರೆ.</p>.<p><strong>ಸುಧಾರಿಸದ ಪರಿಸ್ಥಿತಿ: </strong>ನಾಲ್ಕೈದು ದಿನಗಳಿಂದ ಎದುರಾಗಿರುವ ನಗದು ಕೊರತೆ ಸಮಸ್ಯೆ ಈಗಲೂ ದೂರವಾಗಿಲ್ಲ. ‘ಶುಕ್ರವಾರ ಬೆಳಿಗ್ಗೆ ಏಳು ಎಟಿಎಂಗಳಿಗೆ ಭೇಟಿ ನೀಡಿದರೂ ನನಗೆ ಹಣ ಸಿಗಲಿಲ್ಲ’ ಎಂದು ಎಚ್ಡಿಎಫ್ಸಿ ಬ್ಯಾಂಕ್ನ ಗ್ರಾಹಕರೊಬ್ಬರು ದೂರಿದ್ದಾರೆ.</p>.<p><strong>ಈಡೇರದ ಭರವಸೆ</strong><br /> ನಗದು ಕೊರತೆ ತಗ್ಗಿಸಲು ಕ್ರಮ ಕೈಗೊಳ್ಳಲಾಗಿದೆ. ಮೂರು ದಿನಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿದೆ ಎನ್ನುವ ಕೇಂದ್ರ ಸರ್ಕಾರದ ಭರವಸೆ ಇದುವರೆಗೂ ಈಡೇರಿಲ್ಲ. ಬ್ಯಾಂಕಿಂಗ್ ವ್ಯವಸ್ಥೆಗೆ ಹೆಚ್ಚುವರಿ ಹಣ ಪೂರೈಕೆಯಾಗಿಲ್ಲ.</p>.<p>‘ರಾತ್ರಿ ಬೆಳಗಾಗುವುದ ರೊಳಗೆ ಹೆಚ್ಚುವರಿ ಹಣ ಪೂರೈಸಲು ಸಾಧ್ಯವಾಗಲಾರದು. ನಗದು ಪೂರೈಸಲು ಹಲವಾರು ಅಡಚಣೆಗಳೂ ಇವೆ’ ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ವಕ್ತಾರ ತಿಳಿಸಿದ್ದಾರೆ. ಬ್ಯಾಂಕ್ನ ಹಿರಿಯ ಅಧಿಕಾರಿಗಳು ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ<br /> ಪರಿಶೀಲಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>