<p>ಕೆಲವೊಮ್ಮೆ ನಡೆದ ಸಣ್ಣ ಸಣ್ಣ ಘಟನೆಗಳು ಬದುಕಿನ ಗತಿಯನ್ನೇ ಬದಲಿಸಿಬಿಡುತ್ತವೆ. ಘಟನೆ ನಡೆದಾಗ ಅದೊಂದು ಸಾಮಾನ್ಯ ವಿಷಯ ಎನ್ನಿಸಬಹುದು. ಆದರೆ ಅದು ನೀಡುವ ಸಂದೇಶವನ್ನು ಗಮನಿಸಿದರೆ ವ್ಯಕ್ತಿತ್ವವನ್ನೇ ಬದಲಿಸುವ ಸಂದರ್ಭ ಎಂದು ತೋರುತ್ತದೆ.<br /> <br /> ಈ ಘಟನೆ ನಡೆದದ್ದು ಇಂಗ್ಲೆಂಡಿನಲ್ಲಿ. ಒಂದು ಭಾನುವಾರ ಬಿಡುವಿನ ದಿನವಾದ್ದರಿಂದ ಮನೆಯವರೆಲ್ಲ ಮೋಜಿನ ಪ್ರವಾಸಕ್ಕೆ ನಡೆದರು. ತಮ್ಮ ಊರಿನಿಂದ ನೂರು ಮೈಲಿಯಾಚೆ ಒಂದು ಸುಂದರವಾದ ಪ್ರವಾಸಿ ತಾಣ. <br /> <br /> ಅಲ್ಲಿ ಬೆಟ್ಟಗಳು, ನೀರಿನ ಜಲಪಾತಗಳು ಮೈಮರೆಸುವಂತಿದ್ದವು. ಅಲ್ಲಿಯೇ ಇದ್ದ ಇನ್ನೊಂದು ಬಹುದೊಡ್ಡ ಸರೋವರ ಮತ್ತೊಂದು ಆಕರ್ಷಣೆ. ಅಲ್ಲಿ ಹೋಗಿ ಮೀನು ಹಿಡಿಯುವುದು ಈ ಪರಿವಾರದಲ್ಲಿದ್ದ ತಂದೆ ಮತ್ತು ಮಗನ ಉದ್ದೇಶ.<br /> <br /> ಆ ಪ್ರವಾಸೀ ತಾಣವನ್ನು ಮನೆಯವರೆಲ್ಲ ಬೇಗನೇ ಸೇರಿದರು. ಜಲಪಾತದ ನೀರಿನಲ್ಲಿ ನೆನೆದದ್ದಾಯಿತು, ಬೆಟ್ಟ ಹತ್ತಿದ್ದಾಯಿತು, ಬೇಕಾದಷ್ಟು ಛಾಯಾಚಿತ್ರಗಳನ್ನು ತೆಗೆದದ್ದಾಯಿತು ಕೊನೆಗೆ ಹೊಟ್ಟೆ ತುಂಬ ಊಟ ಮಾಡಿದ್ದಾಯಿತು. ಪರಿವಾರದ ಉಳಿದವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರೆ ತಂದೆ ಮತ್ತು ಮಗ ಎದ್ದರು.<br /> <br /> ಮೀನು ಹಿಡಿಯಲು ಬೇಕಾಗುವ ಎಲ್ಲ ಉಪಕರಣಗಳನ್ನು ಚೀಲದಲ್ಲಿ ತುಂಬಿಕೊಂಡು ಸದ್ದಿಲ್ಲದೇ ಸರೋವರದ ಕಡೆಗೆ ಹೊರಟರು. ಆಗಿನ್ನೂ ಸಂಜೆ ನಾಲ್ಕೂವರೆ ಗಂಟೆ. ಆ ಪ್ರದೇಶದಲ್ಲಿ ಕತ್ತಲಾಗುವುದು ತುಂಬ ತಡ. ರಾತ್ರಿ ಒಂಬತ್ತು ಗಂಟೆಯಾದರೂ ಸಾಕಷ್ಟು ಬೆಳಕಿರುತ್ತದೆ. ಇವರು ಅಲ್ಲಿಗೆ ಹೋದಾಗ ಯಾರೂ ಇರಲಿಲ್ಲ. <br /> <br /> ಇವರೇ ಒಂದು ನಾವೆಯನ್ನು ತೆಗೆದುಕೊಂಡು ನಿಧಾನವಾಗಿ ಸರೋವರದ ಒಂದು ಭಾಗದ ಕಡೆಗೆ ತೇಲಿಸಿದರು. ಮಗ ಮೀನು ಹಿಡಿಯಲು ಬಲೆಯನ್ನು ಹರಡಿದ. ನಂತರ ತನ್ನ ಗಾಳಕ್ಕೆ ಒಂದು ಹುಳವನ್ನು ಸಿಕ್ಕಿಸಿ ನೀರಿನಲ್ಲಿ ಬಿಟ್ಟು ಕಣ್ಣು ಮುಚ್ಚಿ ಕುಳಿತ. ಈ ಮೀನು ಹಿಡಿಯುವ ಕೆಲಸಕ್ಕೆ ತಾಳ್ಮೆ ತುಂಬ ಬೇಕು. ಮೀನುಗಳಿಗೇನು ಅವಸರ ಬಂದು ಸಿಕ್ಕಿ ಹಾಕಿಕೊಳ್ಳಲು?</p>.<p><br /> ಗಾಳ ಬಿಟ್ಟು ಐದು ನಿಮಿಷವಾಗುವುದರಲ್ಲಿ ಗಾಳವನ್ನು ಕೆಳಗೆ ಎಳೆದಂತಾಯಿತು. ಅಂದರೆ ಮೀನು ಗಾಳಕ್ಕೆ ಸಿಕ್ಕಿದೆ ಎಂದಾಯಿತು ಎಂದುಕೊಂಡು ತರುಣ ನಿಧಾನವಾಗಿ ಗಾಳವನ್ನು ಮೇಲಕ್ಕೆ ಎಳೆಯತೊಡಗಿದ. <br /> <br /> ಎಳೆಯುವುದು ಕಷ್ಟವಾದಾಗ ಮೀನು ದೊಡ್ಡದೇ ಇರಬೇಕೆಂಬ ಭಾವನೆ ಮೂಡಿತು. ಕೊನೆಗೆ ಅದನ್ನು ಹೊರಗೆ ಎಳೆದಾಗ ಅದೊಂದು ಭಾರೀ ಮೀನು! ಇದುವರೆಗೂ ಅಷ್ಟು ದೊಡ್ಡ ಮೀನನ್ನು ಆತ ಎಂದೂ ಹಿಡಿದಿರಲಿಲ್ಲ, ಅದನ್ನು ಕೈಯಲ್ಲಿ ಕಷ್ಟಪಟ್ಟು ಎತ್ತಿಹಿಡಿದು ಅಪ್ಪನನ್ನು ಕೂಗಿದ, `ಅಪ್ಪಾ ನೋಡಿ ಎಷ್ಟು ದೊಡ್ಡ ಮೀನು!~ ಅಪ್ಪ ಮಗನ ಕೈಯಲ್ಲಿದ್ದ ಮಿನನ್ನು ನೋಡಿದರು. ಅದು ನಿಜವಾಗಿಯೂ ದೊಡ್ಡದು. ನಗೆ, ಸಂತೋಷ, ಮಗನ ಮುಖವನ್ನೆಲ್ಲ ಹರಡಿಕೊಂಡಿತು. ಅಪ್ಪ ತಮ್ಮ ವಾಚ್ ನೋಡಿಕೊಂಡರು. <br /> <br /> ಆಗ ಸಮಯ ಐದೂಕಾಲು ಗಂಟೆ. ಸರೋವರದ ಪಕ್ಕದಲ್ಲಿ ದೊಡ್ಡ ಬೋರ್ಡ್ ಮೇಲೆ ಮೀನು ಹಿಡಿಯುವ ಸಮಯ ಸಂಜೆ ಆರರಿಂದ ಎಂಟು ಗಂಟೆ ಮಾತ್ರ ಎಂದು ಬರೆದಿತ್ತು. ಅದನ್ನು ಮತ್ತೊಮ್ಮೆ ನೋಡಿ ಮಗನಿಗೆ ಹೇಳಿದರು, `ಇನ್ನೂ ಮೀನು ಹಿಡಿಯುವ ಸಮಯವಾಗಿಲ್ಲ. <br /> <br /> ನಿಯಮಗಳನ್ನು ಮೀರುವಂತಿಲ್ಲ. ಮೀನನ್ನು ನೀರಿಗೆ ಬಿಟ್ಟುಬಿಡು.~ ಅವರ ಧ್ವನಿಯಲ್ಲಿ ಸಲಹೆ ಇರಲಿಲ್ಲ, ಆಜ್ಞೆ ಇತ್ತು. ಬಾಲಕ ಹಾಗೆಯೇ ಮಾಡಿದ. ಅಲ್ಲಿ ಯಾವ ಅಧಿಕಾರಿಯೂ ಇರಲಿಲ್ಲ, ಮತ್ತೆ ಯಾವ ನಾವೆಯೂ ಇರಲಿಲ್ಲ. ಬೇರೆ ಜನರೂ ಇರಲಿಲ್ಲ. ಮಗ ಕೇಳಿದ, `ಅಪ್ಪಾ, ನಾವು ಆರು ಗಂಟೆಯ ಮೊದಲೇ ಮೀನು ಹಿಡಿದಿದ್ದೇನೆಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಆದರೂ ಅದನ್ನು ಬಿಟ್ಟದ್ದು ಏಕೆ? ಅದು ಎಷ್ಟು ದೊಡ್ಡ ಮೀನು ಸಿಕ್ಕಿತ್ತು.~ ಅಪ್ಪ ಹೇಳಿದರು. <br /> <br /> `ಮತ್ತೊಬ್ಬರು ನೋಡುತ್ತಾರೆಂದು ಮಾತ್ರ ಕಾಯಿದೆ ಪಾಲಿಸಿದರೆ ನೀನು ಭವ್ಯ ರಾಷ್ಟ್ರವನ್ನು ಕಟ್ಟುವ ಪ್ರಜೆ ಆಗಲಾರೆ. ಯಾರು ನೋಡದಿದ್ದರೂ ಆತ್ಮಸಾಕ್ಷಿಯಿಂದ ಕಾಯಿದೆ ಪಾಲಿಸಿದರೆ ನೀನೂ ದೊಡ್ಡವನಾಗುತ್ತೀ, ದೇಶವನ್ನು ಶ್ರೇಷ್ಠವನ್ನಾಗಿಸುತ್ತೀ. ಇದನ್ನು ಮರೆಯಬೇಡ.~ ಮಗ ಮುಂದೆ ಎಂದೂ ಅಷ್ಟು ದೊಡ್ಡ ಮೀನನ್ನು ಹಿಡಿಯಲಿಲ್ಲ, ಆದರೆ ತಂದೆಯ ಮಾತನ್ನು ಮರೆಯಲಿಲ್ಲ. ಮೂವತ್ತು ವರ್ಷಗಳ ನಂತರ ಬಹುದೊಡ್ಡ ನಾಯಕನಾಗಿ ಬೆಳೆದುನಿಂತ, ಜನರಿಗೆ ಮಾದರಿಯಾದ.<br /> <br /> ಸಮಾಜದ ಒಳಿತಿಗೆಂದು ಮಾಡಿದ ಕಾಯಿದೆಗಳನ್ನು ಪಾಲಿಸುವುದು ನಮ್ಮ ನೈತಿಕತೆ. ಯಾರೂ ಗಮನಿಸದಿದ್ದಾಗ ಕಾಯಿದೆಗಳನ್ನು ಮುರಿದು ಮೋಸಮಾಡುವುದು ಕಳ್ಳತನ. ಇಂಥ ವ್ಯವಹಾರ ನಮ್ಮನ್ನು ದೊಡ್ಡವರನ್ನಾಗಿ ಮಾಡುವುದಿಲ್ಲ. <br /> <br /> ದೇಶವನ್ನೂ ಬೇರೆಯವರ ಕಣ್ಣಿನಲ್ಲಿ ಸಣ್ಣದಾಗಿಸುತ್ತದೆ. ಇದನ್ನು ಮಕ್ಕಳಿಗೆ ಹಿರಿಯರು ನಡೆದು ತೋರಿಸಿದರೆ ಅವರೂ ಪಾಲಿಸಿಯಾರು, ಆ ಹುಡುಗ ಮೀನನ್ನು ನೀರಿಗೆ ಮರಳಿ ಬಿಟ್ಟ ಹಾಗೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಲವೊಮ್ಮೆ ನಡೆದ ಸಣ್ಣ ಸಣ್ಣ ಘಟನೆಗಳು ಬದುಕಿನ ಗತಿಯನ್ನೇ ಬದಲಿಸಿಬಿಡುತ್ತವೆ. ಘಟನೆ ನಡೆದಾಗ ಅದೊಂದು ಸಾಮಾನ್ಯ ವಿಷಯ ಎನ್ನಿಸಬಹುದು. ಆದರೆ ಅದು ನೀಡುವ ಸಂದೇಶವನ್ನು ಗಮನಿಸಿದರೆ ವ್ಯಕ್ತಿತ್ವವನ್ನೇ ಬದಲಿಸುವ ಸಂದರ್ಭ ಎಂದು ತೋರುತ್ತದೆ.<br /> <br /> ಈ ಘಟನೆ ನಡೆದದ್ದು ಇಂಗ್ಲೆಂಡಿನಲ್ಲಿ. ಒಂದು ಭಾನುವಾರ ಬಿಡುವಿನ ದಿನವಾದ್ದರಿಂದ ಮನೆಯವರೆಲ್ಲ ಮೋಜಿನ ಪ್ರವಾಸಕ್ಕೆ ನಡೆದರು. ತಮ್ಮ ಊರಿನಿಂದ ನೂರು ಮೈಲಿಯಾಚೆ ಒಂದು ಸುಂದರವಾದ ಪ್ರವಾಸಿ ತಾಣ. <br /> <br /> ಅಲ್ಲಿ ಬೆಟ್ಟಗಳು, ನೀರಿನ ಜಲಪಾತಗಳು ಮೈಮರೆಸುವಂತಿದ್ದವು. ಅಲ್ಲಿಯೇ ಇದ್ದ ಇನ್ನೊಂದು ಬಹುದೊಡ್ಡ ಸರೋವರ ಮತ್ತೊಂದು ಆಕರ್ಷಣೆ. ಅಲ್ಲಿ ಹೋಗಿ ಮೀನು ಹಿಡಿಯುವುದು ಈ ಪರಿವಾರದಲ್ಲಿದ್ದ ತಂದೆ ಮತ್ತು ಮಗನ ಉದ್ದೇಶ.<br /> <br /> ಆ ಪ್ರವಾಸೀ ತಾಣವನ್ನು ಮನೆಯವರೆಲ್ಲ ಬೇಗನೇ ಸೇರಿದರು. ಜಲಪಾತದ ನೀರಿನಲ್ಲಿ ನೆನೆದದ್ದಾಯಿತು, ಬೆಟ್ಟ ಹತ್ತಿದ್ದಾಯಿತು, ಬೇಕಾದಷ್ಟು ಛಾಯಾಚಿತ್ರಗಳನ್ನು ತೆಗೆದದ್ದಾಯಿತು ಕೊನೆಗೆ ಹೊಟ್ಟೆ ತುಂಬ ಊಟ ಮಾಡಿದ್ದಾಯಿತು. ಪರಿವಾರದ ಉಳಿದವರು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರೆ ತಂದೆ ಮತ್ತು ಮಗ ಎದ್ದರು.<br /> <br /> ಮೀನು ಹಿಡಿಯಲು ಬೇಕಾಗುವ ಎಲ್ಲ ಉಪಕರಣಗಳನ್ನು ಚೀಲದಲ್ಲಿ ತುಂಬಿಕೊಂಡು ಸದ್ದಿಲ್ಲದೇ ಸರೋವರದ ಕಡೆಗೆ ಹೊರಟರು. ಆಗಿನ್ನೂ ಸಂಜೆ ನಾಲ್ಕೂವರೆ ಗಂಟೆ. ಆ ಪ್ರದೇಶದಲ್ಲಿ ಕತ್ತಲಾಗುವುದು ತುಂಬ ತಡ. ರಾತ್ರಿ ಒಂಬತ್ತು ಗಂಟೆಯಾದರೂ ಸಾಕಷ್ಟು ಬೆಳಕಿರುತ್ತದೆ. ಇವರು ಅಲ್ಲಿಗೆ ಹೋದಾಗ ಯಾರೂ ಇರಲಿಲ್ಲ. <br /> <br /> ಇವರೇ ಒಂದು ನಾವೆಯನ್ನು ತೆಗೆದುಕೊಂಡು ನಿಧಾನವಾಗಿ ಸರೋವರದ ಒಂದು ಭಾಗದ ಕಡೆಗೆ ತೇಲಿಸಿದರು. ಮಗ ಮೀನು ಹಿಡಿಯಲು ಬಲೆಯನ್ನು ಹರಡಿದ. ನಂತರ ತನ್ನ ಗಾಳಕ್ಕೆ ಒಂದು ಹುಳವನ್ನು ಸಿಕ್ಕಿಸಿ ನೀರಿನಲ್ಲಿ ಬಿಟ್ಟು ಕಣ್ಣು ಮುಚ್ಚಿ ಕುಳಿತ. ಈ ಮೀನು ಹಿಡಿಯುವ ಕೆಲಸಕ್ಕೆ ತಾಳ್ಮೆ ತುಂಬ ಬೇಕು. ಮೀನುಗಳಿಗೇನು ಅವಸರ ಬಂದು ಸಿಕ್ಕಿ ಹಾಕಿಕೊಳ್ಳಲು?</p>.<p><br /> ಗಾಳ ಬಿಟ್ಟು ಐದು ನಿಮಿಷವಾಗುವುದರಲ್ಲಿ ಗಾಳವನ್ನು ಕೆಳಗೆ ಎಳೆದಂತಾಯಿತು. ಅಂದರೆ ಮೀನು ಗಾಳಕ್ಕೆ ಸಿಕ್ಕಿದೆ ಎಂದಾಯಿತು ಎಂದುಕೊಂಡು ತರುಣ ನಿಧಾನವಾಗಿ ಗಾಳವನ್ನು ಮೇಲಕ್ಕೆ ಎಳೆಯತೊಡಗಿದ. <br /> <br /> ಎಳೆಯುವುದು ಕಷ್ಟವಾದಾಗ ಮೀನು ದೊಡ್ಡದೇ ಇರಬೇಕೆಂಬ ಭಾವನೆ ಮೂಡಿತು. ಕೊನೆಗೆ ಅದನ್ನು ಹೊರಗೆ ಎಳೆದಾಗ ಅದೊಂದು ಭಾರೀ ಮೀನು! ಇದುವರೆಗೂ ಅಷ್ಟು ದೊಡ್ಡ ಮೀನನ್ನು ಆತ ಎಂದೂ ಹಿಡಿದಿರಲಿಲ್ಲ, ಅದನ್ನು ಕೈಯಲ್ಲಿ ಕಷ್ಟಪಟ್ಟು ಎತ್ತಿಹಿಡಿದು ಅಪ್ಪನನ್ನು ಕೂಗಿದ, `ಅಪ್ಪಾ ನೋಡಿ ಎಷ್ಟು ದೊಡ್ಡ ಮೀನು!~ ಅಪ್ಪ ಮಗನ ಕೈಯಲ್ಲಿದ್ದ ಮಿನನ್ನು ನೋಡಿದರು. ಅದು ನಿಜವಾಗಿಯೂ ದೊಡ್ಡದು. ನಗೆ, ಸಂತೋಷ, ಮಗನ ಮುಖವನ್ನೆಲ್ಲ ಹರಡಿಕೊಂಡಿತು. ಅಪ್ಪ ತಮ್ಮ ವಾಚ್ ನೋಡಿಕೊಂಡರು. <br /> <br /> ಆಗ ಸಮಯ ಐದೂಕಾಲು ಗಂಟೆ. ಸರೋವರದ ಪಕ್ಕದಲ್ಲಿ ದೊಡ್ಡ ಬೋರ್ಡ್ ಮೇಲೆ ಮೀನು ಹಿಡಿಯುವ ಸಮಯ ಸಂಜೆ ಆರರಿಂದ ಎಂಟು ಗಂಟೆ ಮಾತ್ರ ಎಂದು ಬರೆದಿತ್ತು. ಅದನ್ನು ಮತ್ತೊಮ್ಮೆ ನೋಡಿ ಮಗನಿಗೆ ಹೇಳಿದರು, `ಇನ್ನೂ ಮೀನು ಹಿಡಿಯುವ ಸಮಯವಾಗಿಲ್ಲ. <br /> <br /> ನಿಯಮಗಳನ್ನು ಮೀರುವಂತಿಲ್ಲ. ಮೀನನ್ನು ನೀರಿಗೆ ಬಿಟ್ಟುಬಿಡು.~ ಅವರ ಧ್ವನಿಯಲ್ಲಿ ಸಲಹೆ ಇರಲಿಲ್ಲ, ಆಜ್ಞೆ ಇತ್ತು. ಬಾಲಕ ಹಾಗೆಯೇ ಮಾಡಿದ. ಅಲ್ಲಿ ಯಾವ ಅಧಿಕಾರಿಯೂ ಇರಲಿಲ್ಲ, ಮತ್ತೆ ಯಾವ ನಾವೆಯೂ ಇರಲಿಲ್ಲ. ಬೇರೆ ಜನರೂ ಇರಲಿಲ್ಲ. ಮಗ ಕೇಳಿದ, `ಅಪ್ಪಾ, ನಾವು ಆರು ಗಂಟೆಯ ಮೊದಲೇ ಮೀನು ಹಿಡಿದಿದ್ದೇನೆಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಆದರೂ ಅದನ್ನು ಬಿಟ್ಟದ್ದು ಏಕೆ? ಅದು ಎಷ್ಟು ದೊಡ್ಡ ಮೀನು ಸಿಕ್ಕಿತ್ತು.~ ಅಪ್ಪ ಹೇಳಿದರು. <br /> <br /> `ಮತ್ತೊಬ್ಬರು ನೋಡುತ್ತಾರೆಂದು ಮಾತ್ರ ಕಾಯಿದೆ ಪಾಲಿಸಿದರೆ ನೀನು ಭವ್ಯ ರಾಷ್ಟ್ರವನ್ನು ಕಟ್ಟುವ ಪ್ರಜೆ ಆಗಲಾರೆ. ಯಾರು ನೋಡದಿದ್ದರೂ ಆತ್ಮಸಾಕ್ಷಿಯಿಂದ ಕಾಯಿದೆ ಪಾಲಿಸಿದರೆ ನೀನೂ ದೊಡ್ಡವನಾಗುತ್ತೀ, ದೇಶವನ್ನು ಶ್ರೇಷ್ಠವನ್ನಾಗಿಸುತ್ತೀ. ಇದನ್ನು ಮರೆಯಬೇಡ.~ ಮಗ ಮುಂದೆ ಎಂದೂ ಅಷ್ಟು ದೊಡ್ಡ ಮೀನನ್ನು ಹಿಡಿಯಲಿಲ್ಲ, ಆದರೆ ತಂದೆಯ ಮಾತನ್ನು ಮರೆಯಲಿಲ್ಲ. ಮೂವತ್ತು ವರ್ಷಗಳ ನಂತರ ಬಹುದೊಡ್ಡ ನಾಯಕನಾಗಿ ಬೆಳೆದುನಿಂತ, ಜನರಿಗೆ ಮಾದರಿಯಾದ.<br /> <br /> ಸಮಾಜದ ಒಳಿತಿಗೆಂದು ಮಾಡಿದ ಕಾಯಿದೆಗಳನ್ನು ಪಾಲಿಸುವುದು ನಮ್ಮ ನೈತಿಕತೆ. ಯಾರೂ ಗಮನಿಸದಿದ್ದಾಗ ಕಾಯಿದೆಗಳನ್ನು ಮುರಿದು ಮೋಸಮಾಡುವುದು ಕಳ್ಳತನ. ಇಂಥ ವ್ಯವಹಾರ ನಮ್ಮನ್ನು ದೊಡ್ಡವರನ್ನಾಗಿ ಮಾಡುವುದಿಲ್ಲ. <br /> <br /> ದೇಶವನ್ನೂ ಬೇರೆಯವರ ಕಣ್ಣಿನಲ್ಲಿ ಸಣ್ಣದಾಗಿಸುತ್ತದೆ. ಇದನ್ನು ಮಕ್ಕಳಿಗೆ ಹಿರಿಯರು ನಡೆದು ತೋರಿಸಿದರೆ ಅವರೂ ಪಾಲಿಸಿಯಾರು, ಆ ಹುಡುಗ ಮೀನನ್ನು ನೀರಿಗೆ ಮರಳಿ ಬಿಟ್ಟ ಹಾಗೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>