ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನಷ್ಟು ಅಸಹಾಯಕ ಬೇರೊಬ್ಬರಿಲ್ಲ ಎನ್ನುವುದಕ್ಕೆ ಕರ್ನಾಟಕದಲ್ಲಿನ ಸದ್ಯದ ಸ್ಥಿತಿ ನಿದರ್ಶನದಂತಿದೆ. ಮುಖ್ಯಮಂತ್ರಿ ಕುರ್ಚಿಯ ಸುತ್ತ ಗಿರಕಿ ಹೊಡೆಯುತ್ತಿರುವ ರಾಜಕಾರಣದಿಂದಾಗಿ ಆಡಳಿತ ಯಂತ್ರ ತೂಕಡಿಸುತ್ತಿದೆ; ಅಭಿವೃದ್ಧಿ ಚಟುವಟಿಕೆಗಳು ಕುಂಟುತ್ತಿವೆ. ಮತದಾರನೀಗ ಇಂಗು ತಿಂದ ಮಂಗ.