<p>ಅಂಚೆ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲು ಈಚೆಗೆ ಇಲಾಖೆಯ ನೌಕರರು ಹಮ್ಮಿಕೊಂಡಿದ್ದ ‘ಪೋಸ್ಟಲ್ ಸೈಕ್ಲೋತ್ಥಾನ- 2019’ ಅಭಿಯಾನ, ಬೀದಿ ನಾಟಕ ಪ್ರದರ್ಶನ ಜನರ ಗಮನ ಸೆಳೆಯಿತು.</p>.<p>ವಿಜಯಪುರದಿಂದ ಬಸವನಬಾಗೇವಾಡಿವರೆಗೆ (42 ಕಿ.ಮೀ) ನಡೆದ ಸೈಕಲ್ ಜಾಥಾದಲ್ಲಿ, ಜಿಲ್ಲೆಯ 60ಕ್ಕೂ ಹೆಚ್ಚು ನೌಕರರು ಸೈಕಲ್ ತುಳಿದರು. ಹಾದಿ ನಡುವೆ ಇಲಾಖೆ ನೀಡುವ ಸೇವೆಗಳ ಬಗ್ಗೆ ಜಾಗೃತಿ ಮೂಡಿಸಿದರು.</p>.<p>ಹಿಟ್ನಳ್ಳಿ, ಮನಗೂಳಿ, ಯರನಾಳ ಗ್ರಾಮಗಳಲ್ಲಿ ಜಾಥಾ ಹಾದು ಹೋಗುವಾಗ ಕಿರು ನಾಟಕ ಪ್ರದರ್ಶಿಸಿ, ಗ್ರಾಮೀಣರ ಗಮನ ಸೆಳೆದರು. ಇಲಾಖೆಯ ಟಪಾಲು, ಬ್ಯಾಂಕಿಂಗ್, ವಿಮಾ ಸೇವೆ, ಸುಕನ್ಯಾ ಸಮೃದ್ಧಿ, ಅಟಲ್ ಪಿಂಚಣಿ ಯೋಜನೆ ಸೇರಿದಂತೆ ವಿವಿಧ ಸೇವೆಗಳ ಕುರಿತು ಮಾಹಿತಿ ನೀಡಿದರು.</p>.<p>‘ದೇಶದಾದ್ಯಂತ 1.55 ಲಕ್ಷ ಅಂಚೆ ಕಚೇರಿಗಳ ಮೂಲಕ ಜನರ ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸಲಾಗುತ್ತಿದೆ. ಅಂಚೆ ಸೇವೆಗಳ ಬಗ್ಗೆ ಮತ್ತಷ್ಟು ಮಾಹಿತಿ ನೀಡುವುದಕ್ಕಾಗಿ ಈ ಜಾಥಾ ಆಯೋಜನೆ ಮಾಡಲಾಗಿದೆ. ಜಿಲ್ಲೆಯ ಅಂಚೆ ಇಲಾಖೆ ನೌಕರರು, ಗ್ರಾಮೀಣ ಅಂಚೆ ನೌಕರರು ಸಾಮೂಹಿಕವಾಗಿ ಸೈಕಲ್ ಜಾಥಾ ನಡೆಸಿದ್ದು ಖುಷಿ ತಂದಿತು. ಈ ರೀತಿ ಜಾಗೃತಿ ಮೂಡಿಸುವುದರಿಂದ ಜನರಿಗೆ ಇಲಾಖೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದಂತಾಗಿದೆ’ ಎಂದು ವಿಜಯಪುರ ಅಂಚೆ ಅಧೀಕ್ಷಕ ಮಹಾದೇವಪ್ಪ ಕರಬುಚೆ, ಸಹಾಯಕ ಅಂಚೆ ಅಧೀಕ್ಷಕ ಎಂ.ಬಿ.ಪಾಟೀಲ, ಕೆ.ಎಂ.ಗಜೇಂದ್ರ ತಿಳಿಸಿದರು.</p>.<p>ವಿಜಯಪುರದಿಂದ ಬಸವನಬಾಗೇವಾಡಿಗೆ ಬಂದ ಸೈಕಲ್ ಜಾಥಾಕ್ಕೆ ಸಂಭ್ರಮದ ಸ್ವಾಗತ ಸಿಕ್ಕಿತು. ಬಸವಜನ್ಮ ಸ್ಮಾರಕದಲ್ಲಿ ಜರುಗಿದ ಜಾಥಾದ ಸಮಾರೋಪದಲ್ಲಿ ಸುಕನ್ಯಾ ಸಮೃದ್ಧಿ, ಗ್ರಾಮೀಣ ಅಂಚೆ ಜೀವ ವಿಮೆ ಯೋಜನೆಗಳ ಫಲಾನುಭವಿಗಳನ್ನು ಹಾಗೂ ಸೈಕಲ್ ಸವಾರರನ್ನು ಸನ್ಮಾನಿಸಲಾಯಿತು.</p>.<p>ಜಾಥಾದಲ್ಲಿ ಅಂಚೆ ನಿರೀಕ್ಷಕರಾದ ಎಂ.ಎಲ್.ಬಾಗವಾನ, ಸಿ.ಕೆ.ಚವ್ಹಾಣ, ಎಸ್.ಎಸ್.ಕಾಸೆ, ಎಸ್.ಬಿ.ಪಾಟೀಲ, ಐ.ಎನ್.ಬಿದರಕುಂದಿ, ನಿಂಗಣ್ಣ ಹೆಬ್ಬಾಳ, ಮಡಿವಾಳಯ್ಯ ಹಿರೇಮಠ, ಪಿ.ಟಿ.ಕಬಾಡೆ ಸೇರಿದಂತೆ 60ಕ್ಕೂ ಹೆಚ್ಚು ಉದ್ಯೋಗಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಂಚೆ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸಲು ಈಚೆಗೆ ಇಲಾಖೆಯ ನೌಕರರು ಹಮ್ಮಿಕೊಂಡಿದ್ದ ‘ಪೋಸ್ಟಲ್ ಸೈಕ್ಲೋತ್ಥಾನ- 2019’ ಅಭಿಯಾನ, ಬೀದಿ ನಾಟಕ ಪ್ರದರ್ಶನ ಜನರ ಗಮನ ಸೆಳೆಯಿತು.</p>.<p>ವಿಜಯಪುರದಿಂದ ಬಸವನಬಾಗೇವಾಡಿವರೆಗೆ (42 ಕಿ.ಮೀ) ನಡೆದ ಸೈಕಲ್ ಜಾಥಾದಲ್ಲಿ, ಜಿಲ್ಲೆಯ 60ಕ್ಕೂ ಹೆಚ್ಚು ನೌಕರರು ಸೈಕಲ್ ತುಳಿದರು. ಹಾದಿ ನಡುವೆ ಇಲಾಖೆ ನೀಡುವ ಸೇವೆಗಳ ಬಗ್ಗೆ ಜಾಗೃತಿ ಮೂಡಿಸಿದರು.</p>.<p>ಹಿಟ್ನಳ್ಳಿ, ಮನಗೂಳಿ, ಯರನಾಳ ಗ್ರಾಮಗಳಲ್ಲಿ ಜಾಥಾ ಹಾದು ಹೋಗುವಾಗ ಕಿರು ನಾಟಕ ಪ್ರದರ್ಶಿಸಿ, ಗ್ರಾಮೀಣರ ಗಮನ ಸೆಳೆದರು. ಇಲಾಖೆಯ ಟಪಾಲು, ಬ್ಯಾಂಕಿಂಗ್, ವಿಮಾ ಸೇವೆ, ಸುಕನ್ಯಾ ಸಮೃದ್ಧಿ, ಅಟಲ್ ಪಿಂಚಣಿ ಯೋಜನೆ ಸೇರಿದಂತೆ ವಿವಿಧ ಸೇವೆಗಳ ಕುರಿತು ಮಾಹಿತಿ ನೀಡಿದರು.</p>.<p>‘ದೇಶದಾದ್ಯಂತ 1.55 ಲಕ್ಷ ಅಂಚೆ ಕಚೇರಿಗಳ ಮೂಲಕ ಜನರ ಮನೆ ಬಾಗಿಲಿಗೆ ಸೇವೆಗಳನ್ನು ಒದಗಿಸಲಾಗುತ್ತಿದೆ. ಅಂಚೆ ಸೇವೆಗಳ ಬಗ್ಗೆ ಮತ್ತಷ್ಟು ಮಾಹಿತಿ ನೀಡುವುದಕ್ಕಾಗಿ ಈ ಜಾಥಾ ಆಯೋಜನೆ ಮಾಡಲಾಗಿದೆ. ಜಿಲ್ಲೆಯ ಅಂಚೆ ಇಲಾಖೆ ನೌಕರರು, ಗ್ರಾಮೀಣ ಅಂಚೆ ನೌಕರರು ಸಾಮೂಹಿಕವಾಗಿ ಸೈಕಲ್ ಜಾಥಾ ನಡೆಸಿದ್ದು ಖುಷಿ ತಂದಿತು. ಈ ರೀತಿ ಜಾಗೃತಿ ಮೂಡಿಸುವುದರಿಂದ ಜನರಿಗೆ ಇಲಾಖೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದಂತಾಗಿದೆ’ ಎಂದು ವಿಜಯಪುರ ಅಂಚೆ ಅಧೀಕ್ಷಕ ಮಹಾದೇವಪ್ಪ ಕರಬುಚೆ, ಸಹಾಯಕ ಅಂಚೆ ಅಧೀಕ್ಷಕ ಎಂ.ಬಿ.ಪಾಟೀಲ, ಕೆ.ಎಂ.ಗಜೇಂದ್ರ ತಿಳಿಸಿದರು.</p>.<p>ವಿಜಯಪುರದಿಂದ ಬಸವನಬಾಗೇವಾಡಿಗೆ ಬಂದ ಸೈಕಲ್ ಜಾಥಾಕ್ಕೆ ಸಂಭ್ರಮದ ಸ್ವಾಗತ ಸಿಕ್ಕಿತು. ಬಸವಜನ್ಮ ಸ್ಮಾರಕದಲ್ಲಿ ಜರುಗಿದ ಜಾಥಾದ ಸಮಾರೋಪದಲ್ಲಿ ಸುಕನ್ಯಾ ಸಮೃದ್ಧಿ, ಗ್ರಾಮೀಣ ಅಂಚೆ ಜೀವ ವಿಮೆ ಯೋಜನೆಗಳ ಫಲಾನುಭವಿಗಳನ್ನು ಹಾಗೂ ಸೈಕಲ್ ಸವಾರರನ್ನು ಸನ್ಮಾನಿಸಲಾಯಿತು.</p>.<p>ಜಾಥಾದಲ್ಲಿ ಅಂಚೆ ನಿರೀಕ್ಷಕರಾದ ಎಂ.ಎಲ್.ಬಾಗವಾನ, ಸಿ.ಕೆ.ಚವ್ಹಾಣ, ಎಸ್.ಎಸ್.ಕಾಸೆ, ಎಸ್.ಬಿ.ಪಾಟೀಲ, ಐ.ಎನ್.ಬಿದರಕುಂದಿ, ನಿಂಗಣ್ಣ ಹೆಬ್ಬಾಳ, ಮಡಿವಾಳಯ್ಯ ಹಿರೇಮಠ, ಪಿ.ಟಿ.ಕಬಾಡೆ ಸೇರಿದಂತೆ 60ಕ್ಕೂ ಹೆಚ್ಚು ಉದ್ಯೋಗಿಗಳು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>