<p><strong>ಇದಂ ಲಬ್ಧಮಿದಂ ನಷ್ಟಮಿದಂ ಲಪ್ಸ್ಯೇ ಪುರ್ನಧಿಯಾ ।</strong></p>.<p><strong>ಇದಂ ಚಿಂತಯತಾಮೇವ ಜೀರ್ಣಮಾಯುಃ ಶರೀರಿಣಾಮ್ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಇದು ಸಿಕ್ಕಿತು, ಇದು ಕಳೆದುಹೋಯಿತು, ಇದನ್ನು ಬುದ್ಧಿಶಕ್ತಿಯಿಂದ ಮತ್ತೆ ಗಳಿಸುವೆನು – ಎಂದು ಚಿಂತಿಸುತ್ತಲೇ ಜನರ ಆಯುಸ್ಸು ಮುಗಿದುಹೋಗುತ್ತದೆ.’</p>.<p>ಮನುಷ್ಯನ ಆಸೆಯ ಸೆಳೆತ ಎಷ್ಟು ಎಂಬುದನ್ನು ಸುಭಾಷಿತ ಹೇಳುತ್ತಿದೆ.</p>.<p>ನಮ್ಮ ಜೀವನವು ಚಕ್ರದಂತೆ ಸುತ್ತುತ್ತಲೇ ಇರುತ್ತದೆ; ಒಮ್ಮೆ ಸುಖ, ಇನ್ನೊಮ್ಮೆ ದುಃಖ; ಒಮ್ಮೆ ರಾಗ, ಇನ್ನೊಮ್ಮೆ ದ್ವೇಷ; ಒಮ್ಮೆ ಲಾಭ, ಇನ್ನೊಮ್ಮೆ ನಷ್ಟ – ಹೀಗೆ ಹಗಲು–ರಾತ್ರಿಗಳಂತೆ ಸುತ್ತುತ್ತಲೇ ಇರುತ್ತದೆ.</p>.<p>ಸುಖ ಬಂತು ಎಂದು ನಾವು ಸುಮ್ಮನೇ ಇರುವುದಿಲ್ಲ; ಮತ್ತಷ್ಟು ಸುಖಕ್ಕಾಗಿ ಹಂಬಲಿಸುತ್ತೇವೆ. ಇರುವ ಸುಖವನ್ನೂ ಕಳೆದುಕೊಳ್ಳುತ್ತೇವೆ. ದುಃಖಕ್ಕೆ ನಾವು ಸೋಲುವುದೂ ಇಲ್ಲ. ಮತ್ತೆ ಪ್ರಯತ್ನ ಪಡುತ್ತೇವೆ; ಕಳೆದುಕೊಂಡಿರುವ ಸುಖವನ್ನು ಮರಳಿ ಪಡೆಯಲು ಹೋರಾಟ ಮಾಡುತ್ತೇವೆ. ಒಟ್ಟಿನಲ್ಲಿ ನಿರಂತರವಾಗಿ ಯಾವುದೋ ಒಂದರ ಹಿಂದೆ ಓಡುತ್ತಲೇ ಇರುತ್ತೇವೆ.</p>.<p>ಸುಖ–ದುಃಖ – ಎರಡೂ ಶಾಶ್ವತವಲ್ಲ; ಜೀವನದಲ್ಲಿ ಏರಿಳಿತಗಳು ಸಹಜ. ನಮಗೆ ಆಸೆಯಷ್ಟೇ ಇಲ್ಲ, ದುರಾಸೆಯೇ ನಮ್ಮಲ್ಲಿ ಪ್ರಬಲವಾಗಿರುವುದು. ನಾವು ಇರುವ ಸುಖವನ್ನು ತೃಪ್ತಿಯಿಂದಲೂ ಸಂತೋಷದಿಂದಲೂ ಅನುಭವಿಸುವುದಿಲ್ಲ; ಈಗ ಸಿಕ್ಕಿರುವುದು ಸಾಲದು, ಮತ್ತಷ್ಟು ಬೇಕು – ಎಂಬ ದುರಾಸೆಯಲ್ಲಿ ಇರುವುದನ್ನೂ ಬಿಟ್ಟು, ಇಲ್ಲದುದನ್ನು ಹುಡುಕಿಕೊಂಡುಹೋಗುತ್ತೇವೆ. ಕೊನೆಗೆ ಅದೂ ಇಲ್ಲ, ಇದೂ ಇಲ್ಲ – ಎಂಬ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ.</p>.<p>ಇದನ್ನೇ ಸುಭಾಷಿತ ಹೇಳುತ್ತಿರುವುದು ಅದನ್ನು ಪಡೆಯಬೇಕು, ಇದನ್ನು ಪಡೆಯಬೇಕೆಂಬ ಹೋರಾಟದಲ್ಲಿಯೇ ನಮ್ಮ ಆಯುಸ್ಸು ಮುಗಿದುಹೋಗುತ್ತದೆ.</p>.<p>ಈ ನಿರಂತರ ಕದನಕ್ಕೆ ನಮ್ಮ ಮನಸ್ಸನ್ನೂ ಬುದ್ಧಿಯನ್ನೂ ಸಿದ್ಧಗೊಳಿಸುವುದೇ ಅತಿಯಾಸೆ. ಈ ಆಸೆಯ ಪಾಶವನ್ನು ಕುರಿತು ಇನ್ನೊಂಧು ಸುಭಾಷಿತ ಸೊಗಸಾಗಿ ಹೇಳಿದೆ:</p>.<p><strong>ಆಶಾಯಾ ಯೇ ದಾಸಾಸ್ತೇ ದಾಸಾಃ ಸರ್ವಲೋಕಸ್ಯ ।</strong></p>.<p><strong>ಆಶಾ ಯೇಷಾಂ ದಾಸೀ ತೇಷಾಂ ದಾಸಾಯತೇ ಲೋಕಃ ।।</strong></p>.<p>‘ಆಸೆಗೆ ಯಾರು ದಾಸರೋ ಅವರು ಸಕಲಲೋಕಕ್ಕೂ ದಾಸರು. ಯಾರಿಗೆ ಆಸೆಯೇ ದಾಸಿಯಾಗಿರುತ್ತದೆಯೋ ಅವರಿಗೆ ಲೋಕವೇ ದಾಸವಾಗುತ್ತದೆ.’</p>.<p>ನಾವು ಆಸೆಗೆ ದಾಸರಾಗಬೇಕೋ ಅಥವಾ ಆಸೆಯೇ ನಮಗೆ ದಾಸಿಯಾಗಬೇಕು – ನಿರ್ಧಾರ ಮಾಡಬೇಕಾದವರು ನಾವೇ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಇದಂ ಲಬ್ಧಮಿದಂ ನಷ್ಟಮಿದಂ ಲಪ್ಸ್ಯೇ ಪುರ್ನಧಿಯಾ ।</strong></p>.<p><strong>ಇದಂ ಚಿಂತಯತಾಮೇವ ಜೀರ್ಣಮಾಯುಃ ಶರೀರಿಣಾಮ್ ।।</strong></p>.<p>ಇದರ ತಾತ್ಪರ್ಯ ಹೀಗೆ:</p>.<p>‘ಇದು ಸಿಕ್ಕಿತು, ಇದು ಕಳೆದುಹೋಯಿತು, ಇದನ್ನು ಬುದ್ಧಿಶಕ್ತಿಯಿಂದ ಮತ್ತೆ ಗಳಿಸುವೆನು – ಎಂದು ಚಿಂತಿಸುತ್ತಲೇ ಜನರ ಆಯುಸ್ಸು ಮುಗಿದುಹೋಗುತ್ತದೆ.’</p>.<p>ಮನುಷ್ಯನ ಆಸೆಯ ಸೆಳೆತ ಎಷ್ಟು ಎಂಬುದನ್ನು ಸುಭಾಷಿತ ಹೇಳುತ್ತಿದೆ.</p>.<p>ನಮ್ಮ ಜೀವನವು ಚಕ್ರದಂತೆ ಸುತ್ತುತ್ತಲೇ ಇರುತ್ತದೆ; ಒಮ್ಮೆ ಸುಖ, ಇನ್ನೊಮ್ಮೆ ದುಃಖ; ಒಮ್ಮೆ ರಾಗ, ಇನ್ನೊಮ್ಮೆ ದ್ವೇಷ; ಒಮ್ಮೆ ಲಾಭ, ಇನ್ನೊಮ್ಮೆ ನಷ್ಟ – ಹೀಗೆ ಹಗಲು–ರಾತ್ರಿಗಳಂತೆ ಸುತ್ತುತ್ತಲೇ ಇರುತ್ತದೆ.</p>.<p>ಸುಖ ಬಂತು ಎಂದು ನಾವು ಸುಮ್ಮನೇ ಇರುವುದಿಲ್ಲ; ಮತ್ತಷ್ಟು ಸುಖಕ್ಕಾಗಿ ಹಂಬಲಿಸುತ್ತೇವೆ. ಇರುವ ಸುಖವನ್ನೂ ಕಳೆದುಕೊಳ್ಳುತ್ತೇವೆ. ದುಃಖಕ್ಕೆ ನಾವು ಸೋಲುವುದೂ ಇಲ್ಲ. ಮತ್ತೆ ಪ್ರಯತ್ನ ಪಡುತ್ತೇವೆ; ಕಳೆದುಕೊಂಡಿರುವ ಸುಖವನ್ನು ಮರಳಿ ಪಡೆಯಲು ಹೋರಾಟ ಮಾಡುತ್ತೇವೆ. ಒಟ್ಟಿನಲ್ಲಿ ನಿರಂತರವಾಗಿ ಯಾವುದೋ ಒಂದರ ಹಿಂದೆ ಓಡುತ್ತಲೇ ಇರುತ್ತೇವೆ.</p>.<p>ಸುಖ–ದುಃಖ – ಎರಡೂ ಶಾಶ್ವತವಲ್ಲ; ಜೀವನದಲ್ಲಿ ಏರಿಳಿತಗಳು ಸಹಜ. ನಮಗೆ ಆಸೆಯಷ್ಟೇ ಇಲ್ಲ, ದುರಾಸೆಯೇ ನಮ್ಮಲ್ಲಿ ಪ್ರಬಲವಾಗಿರುವುದು. ನಾವು ಇರುವ ಸುಖವನ್ನು ತೃಪ್ತಿಯಿಂದಲೂ ಸಂತೋಷದಿಂದಲೂ ಅನುಭವಿಸುವುದಿಲ್ಲ; ಈಗ ಸಿಕ್ಕಿರುವುದು ಸಾಲದು, ಮತ್ತಷ್ಟು ಬೇಕು – ಎಂಬ ದುರಾಸೆಯಲ್ಲಿ ಇರುವುದನ್ನೂ ಬಿಟ್ಟು, ಇಲ್ಲದುದನ್ನು ಹುಡುಕಿಕೊಂಡುಹೋಗುತ್ತೇವೆ. ಕೊನೆಗೆ ಅದೂ ಇಲ್ಲ, ಇದೂ ಇಲ್ಲ – ಎಂಬ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ.</p>.<p>ಇದನ್ನೇ ಸುಭಾಷಿತ ಹೇಳುತ್ತಿರುವುದು ಅದನ್ನು ಪಡೆಯಬೇಕು, ಇದನ್ನು ಪಡೆಯಬೇಕೆಂಬ ಹೋರಾಟದಲ್ಲಿಯೇ ನಮ್ಮ ಆಯುಸ್ಸು ಮುಗಿದುಹೋಗುತ್ತದೆ.</p>.<p>ಈ ನಿರಂತರ ಕದನಕ್ಕೆ ನಮ್ಮ ಮನಸ್ಸನ್ನೂ ಬುದ್ಧಿಯನ್ನೂ ಸಿದ್ಧಗೊಳಿಸುವುದೇ ಅತಿಯಾಸೆ. ಈ ಆಸೆಯ ಪಾಶವನ್ನು ಕುರಿತು ಇನ್ನೊಂಧು ಸುಭಾಷಿತ ಸೊಗಸಾಗಿ ಹೇಳಿದೆ:</p>.<p><strong>ಆಶಾಯಾ ಯೇ ದಾಸಾಸ್ತೇ ದಾಸಾಃ ಸರ್ವಲೋಕಸ್ಯ ।</strong></p>.<p><strong>ಆಶಾ ಯೇಷಾಂ ದಾಸೀ ತೇಷಾಂ ದಾಸಾಯತೇ ಲೋಕಃ ।।</strong></p>.<p>‘ಆಸೆಗೆ ಯಾರು ದಾಸರೋ ಅವರು ಸಕಲಲೋಕಕ್ಕೂ ದಾಸರು. ಯಾರಿಗೆ ಆಸೆಯೇ ದಾಸಿಯಾಗಿರುತ್ತದೆಯೋ ಅವರಿಗೆ ಲೋಕವೇ ದಾಸವಾಗುತ್ತದೆ.’</p>.<p>ನಾವು ಆಸೆಗೆ ದಾಸರಾಗಬೇಕೋ ಅಥವಾ ಆಸೆಯೇ ನಮಗೆ ದಾಸಿಯಾಗಬೇಕು – ನಿರ್ಧಾರ ಮಾಡಬೇಕಾದವರು ನಾವೇ!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>