ಕಷ್ಟಗಳು ಮಾತ್ರವೇ ಅಲ್ಲ, ಜೀವನದಲ್ಲಿ ಸುಖಾನುಭವ ದೊರೆಯುವ ಸ್ಥಳಗಳೂ ಇವೆ. ನಮ್ಮ ಕಲ್ಪನೆಗಳನ್ನೂ ಮೀರಿದ ಸುಖಗಳು ನಮಗೆ ಸಿಗಬಹುದಾದ ಸ್ಥಳ ಎಂದರೆ ಅದು ಸ್ವರ್ಗ, ದೇವೆಂದ್ರನ ಅರಮನೆ. ಇಲ್ಲಿ ಇಲ್ಲದ ಸುಖವೇ ಇಲ್ಲ. ಆದರೆ ಸುಭಾಷಿತ ಹೇಳುತ್ತಿದೆ, ಅದು ದೇವೆಂದ್ರನ ಅರಮನೆಯೇ ಆಗಿರಬಹುದು, ಮೂರ್ಖ ಇದ್ದರೆ ಮಾತ್ರ ಆ ಸ್ಥಳವೂ ಬೇಡವೇ ಬೇಡ. ಏಕೆಂದರೆ ಎಂಥ ಸುಖವನ್ನೂ ದುಃಖಮಯ ಮಾಡಬಲ್ಲಂಥ ಶಕ್ತಿ ಮೂರ್ಖರಿಗೆ ಇರುತ್ತದೆ! ಹೀಗಾಗಿ ನಮಗೆ ಎಂದಿಗೂ ಮೂರ್ಖರ ಸಹವಾಸ ಬೇಡವೇ ಬೇಡ.