<p><strong>ಪೇಶಲಮಪಿ ಖಲವಚನಂ ದಹತಿತರಾಂ ಮಾನಸಂ ಸುತತ್ತ್ವವಿದಾಮ್ ।</strong></p>.<p><strong>ಪರುಷಮಪಿ ಸುಜನವಾಕ್ಯಂ ಮಲಯಜರಸವತ್ ಪ್ರಮೋದಯತಿ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ದುರ್ಜನರ ಮಾತು ಮೃದುವಾಗಿದ್ದರೂ ತತ್ತ್ವಜ್ಞರ ಮನಸ್ಸನ್ನು ಅತಿಯಾಗಿ ಸುಡುತ್ತದೆ. ಸಜ್ಜನರ ಮಾತು ನಿಷ್ಠುರವಾಗಿದ್ದರೂ ಚಂದನದ ರಸದಂತೆ ಆನಂದಗೊಳಿಸುತ್ತದೆ.’</p>.<p>‘ತಲೆಯವನ ಮಾತು ಮುಂದಕ್ಕೆ ಉಪ್ಪು; ಆದರೆ ಹಿಂದಕ್ಕೆ ಬೆಲ್ಲ‘ – ಎಂಬ ಮಾತೊಂದು ಇದೆ. ಬುದ್ಧಿವಂತರು, ಎಂದರೆ ಸಜ್ಜನರ ಮಾತುಗಳು ಮೇಲ್ನೋಟಕ್ಕೆ ಉಪ್ಪಾಗಿರುತ್ತವೆ, ಎಂದರೆ ಅವನ್ನು ಸ್ವೀಕರಿಸಲು ಕಷ್ಟವಾಗಿರುತ್ತವೆ; ನಿಜ, ಆದರೆ ಅದರ ಫಲ ಮಾತ್ರ ಬೆಲ್ಲ, ಎಂದರೆ ಸಿಹಿಯಾಗಿರುತ್ತವೆ, ನಮ್ಮ ಜೀವನಕ್ಕೆ ಹಿತವಾಗಿರುತ್ತವೆ. ಇದಕ್ಕೆ ವಿರುದ್ಧವಾಗಿ, ದುರ್ಜನರ ಮಾತುಗಳು ಕೇಳಲು ತುಂಬ ಸಿಹಿಯಾಗಿರುತ್ತವೆ; ಆದರೆ ಅದರಿಂದ ನಮಗೆ ಕಾಲಾಂತರದಲ್ಲಿ ತೊಂದರೆಗಳೇ ಎದುರಾಗುತ್ತವೆ. ಇದು ಇಲ್ಲಿ ಸುಭಾಷಿತ ನೀಡುತ್ತಿರುವ ಸಂದೇಶ.</p>.<p>ಇನ್ನೊಂದು ಸುಭಾಷಿತದ ಈ ಮಾತನ್ನು ಕೇಳಿ:</p>.<p>ಪರೋಕ್ಷೇ ಕಾರ್ಯಹಂತಾರಂ ಪ್ರತ್ಯಕ್ಷೇ ಪ್ರಿಯವಾದಿನಮ್ ।</p>.<p>ವರ್ಜಯೇತ್ತಾದೃಶಂ ಮಿತ್ರಂ ವಿಷಕುಂಭಂ ಪಯೋಮುಖಮ್ ।।</p>.<p>’ಎದುರಿಗೆ ಒಳ್ಳೆಯ ಮಾತನ್ನು ಆಡುತ್ತ, ಮರೆಯಲ್ಲಿ ಕೆಲಸವನ್ನು ಕೆಡಿಸುವ ಮಿತ್ರನು ಮೇಲೆ ಹಾಲಿರುವ ಒಳಗೆ ವಿಷವಿರುವ ಮಡಕೆಯಂತೆ ನಂಬಿಕೆಗೆ ಅರ್ಹನಲ್ಲ.‘</p>.<p>ನಾವು ಸಿಹಿಯನ್ನೇ ಇಷ್ಟಪಡುತ್ತೇವೆಯಷ್ಟೆ. ಹೀಗೆಯೇ ಸಿಹಿಯಾದ ಮಾತುಗಳನ್ನೇ ಇಷ್ಟಪಡುತ್ತೇವೆ. ದುಷ್ಟನಾದವನು ನಮ್ಮ ಮುಂದೆ ರುಚಿರುಚಿಯಾದ ಮಾತುಗಳನ್ನೇ ಆಡುತ್ತಾನೆ; ಆದರೆ ಅವನ ಮನಸ್ಸಿನ ತುಂಬ ವಿಷವೇ ತುಂಬಿರುತ್ತದೆ. ಅವನು ಒಳ್ಳೆಯ ಮಾತುಗಳ ಮೂಲಕ ನಮ್ಮ ಮುಂದೆ ನಟಿಸುವುದು ನಾವು ಅವನ ಬಲೆಯಲ್ಲಿ ಬೀಳಬೇಕು ಎಂಬು ಉದ್ದೇಶದಿಂದಲೇ. ನಾವು ಆ ಸಂದರ್ಭದಲ್ಲಿ ವಿವೇಕವನ್ನು ಕಳೆದುಕೊಳ್ಳುತ್ತೇವೆ; ಅವನ ಮೋಸದ ಮಾತುಗಳಿಗೆ ಸೋತುಹೋಗುತ್ತೇವೆ.</p>.<p>ನಮ್ಮ ಹಿತವನ್ನು ಬಯಸುವ ಸಜ್ಜನರು ನಮಗೆ ಒಳ್ಳೆಯದಾಗಲೆಂದು ಎಚ್ಚರಿಕೆಯ ಮಾತುಗಳನ್ನು ಆಡುತ್ತಾರೆ. ಆದರೆ ಅದು ನಮಗೆ ಹಿಡಿಸುವುದಿಲ್ಲ; ನಾವು ಅವರಿಂದ ದೂರ ಸರಿಯುತ್ತೇವೆ.</p>.<p>ಇನ್ನೊಂದು ಸುಭಾಷಿತ ಮಾತು ಹೀಗಿದೆ:</p>.<p>ಸ್ಪೃಶನ್ನಪಿ ಗಜೋ ಹಂತಿ ಜಿಘ್ರನ್ನಪಿ ಭುಜಂಗಮಃ ।</p>.<p>ಹಸನ್ನಪಿ ನೃಪೋ ಹಂತಿ ಮಾನಯನ್ನಪಿ ದುರ್ಜನಃ ।।</p>.<p>’ಕೇವಲ ಸ್ಪರ್ಶದಿಂದಲೇ ಆನೆಯು ಕೊಲ್ಲುತ್ತದೆ; ಹಾವು ಮೂಸಿನೋಡುವ ಮೂಲಕವೇ ಕೊಲ್ಲಬಲ್ಲದು; ರಾಜನಾದವನು ನಗುನಗುತ್ತಲೇ ಕೊಲ್ಲುತ್ತಾನೆ. ಅಂತೆಯೇ ದುರ್ಜನನಾದವನು ಗೌರವವನ್ನು ಪ್ರಟಕಮಾಡುತ್ತಲೇ ಕೊಲ್ಲುವನು.‘</p>.<p>ದುಷ್ಟರು ಆಡುವ ಒಳ್ಳೆಯ ಮಾತುಗಳ ಬಗ್ಗೆ, ಅವರು ತೋರಿಸುವ ಗೌರವದ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು. ಸಿಹಿಯಾದ ಮಾತುಗಳನ್ನು ಆಡುವವರು ಹಲವರು ದೊರೆಯುತ್ತಾರೆ. ಆದರೆ ನಮಗೆ ಒಳಿತಾಗುವಂಥ ಮಾತುಗಳನ್ನು ಆಡುವವರು ಸಿಗುವುದು ಕಷ್ಟ ಎಂಬುದನ್ನು ನಾವು ಮರೆಯಬಾರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೇಶಲಮಪಿ ಖಲವಚನಂ ದಹತಿತರಾಂ ಮಾನಸಂ ಸುತತ್ತ್ವವಿದಾಮ್ ।</strong></p>.<p><strong>ಪರುಷಮಪಿ ಸುಜನವಾಕ್ಯಂ ಮಲಯಜರಸವತ್ ಪ್ರಮೋದಯತಿ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong></p>.<p>‘ದುರ್ಜನರ ಮಾತು ಮೃದುವಾಗಿದ್ದರೂ ತತ್ತ್ವಜ್ಞರ ಮನಸ್ಸನ್ನು ಅತಿಯಾಗಿ ಸುಡುತ್ತದೆ. ಸಜ್ಜನರ ಮಾತು ನಿಷ್ಠುರವಾಗಿದ್ದರೂ ಚಂದನದ ರಸದಂತೆ ಆನಂದಗೊಳಿಸುತ್ತದೆ.’</p>.<p>‘ತಲೆಯವನ ಮಾತು ಮುಂದಕ್ಕೆ ಉಪ್ಪು; ಆದರೆ ಹಿಂದಕ್ಕೆ ಬೆಲ್ಲ‘ – ಎಂಬ ಮಾತೊಂದು ಇದೆ. ಬುದ್ಧಿವಂತರು, ಎಂದರೆ ಸಜ್ಜನರ ಮಾತುಗಳು ಮೇಲ್ನೋಟಕ್ಕೆ ಉಪ್ಪಾಗಿರುತ್ತವೆ, ಎಂದರೆ ಅವನ್ನು ಸ್ವೀಕರಿಸಲು ಕಷ್ಟವಾಗಿರುತ್ತವೆ; ನಿಜ, ಆದರೆ ಅದರ ಫಲ ಮಾತ್ರ ಬೆಲ್ಲ, ಎಂದರೆ ಸಿಹಿಯಾಗಿರುತ್ತವೆ, ನಮ್ಮ ಜೀವನಕ್ಕೆ ಹಿತವಾಗಿರುತ್ತವೆ. ಇದಕ್ಕೆ ವಿರುದ್ಧವಾಗಿ, ದುರ್ಜನರ ಮಾತುಗಳು ಕೇಳಲು ತುಂಬ ಸಿಹಿಯಾಗಿರುತ್ತವೆ; ಆದರೆ ಅದರಿಂದ ನಮಗೆ ಕಾಲಾಂತರದಲ್ಲಿ ತೊಂದರೆಗಳೇ ಎದುರಾಗುತ್ತವೆ. ಇದು ಇಲ್ಲಿ ಸುಭಾಷಿತ ನೀಡುತ್ತಿರುವ ಸಂದೇಶ.</p>.<p>ಇನ್ನೊಂದು ಸುಭಾಷಿತದ ಈ ಮಾತನ್ನು ಕೇಳಿ:</p>.<p>ಪರೋಕ್ಷೇ ಕಾರ್ಯಹಂತಾರಂ ಪ್ರತ್ಯಕ್ಷೇ ಪ್ರಿಯವಾದಿನಮ್ ।</p>.<p>ವರ್ಜಯೇತ್ತಾದೃಶಂ ಮಿತ್ರಂ ವಿಷಕುಂಭಂ ಪಯೋಮುಖಮ್ ।।</p>.<p>’ಎದುರಿಗೆ ಒಳ್ಳೆಯ ಮಾತನ್ನು ಆಡುತ್ತ, ಮರೆಯಲ್ಲಿ ಕೆಲಸವನ್ನು ಕೆಡಿಸುವ ಮಿತ್ರನು ಮೇಲೆ ಹಾಲಿರುವ ಒಳಗೆ ವಿಷವಿರುವ ಮಡಕೆಯಂತೆ ನಂಬಿಕೆಗೆ ಅರ್ಹನಲ್ಲ.‘</p>.<p>ನಾವು ಸಿಹಿಯನ್ನೇ ಇಷ್ಟಪಡುತ್ತೇವೆಯಷ್ಟೆ. ಹೀಗೆಯೇ ಸಿಹಿಯಾದ ಮಾತುಗಳನ್ನೇ ಇಷ್ಟಪಡುತ್ತೇವೆ. ದುಷ್ಟನಾದವನು ನಮ್ಮ ಮುಂದೆ ರುಚಿರುಚಿಯಾದ ಮಾತುಗಳನ್ನೇ ಆಡುತ್ತಾನೆ; ಆದರೆ ಅವನ ಮನಸ್ಸಿನ ತುಂಬ ವಿಷವೇ ತುಂಬಿರುತ್ತದೆ. ಅವನು ಒಳ್ಳೆಯ ಮಾತುಗಳ ಮೂಲಕ ನಮ್ಮ ಮುಂದೆ ನಟಿಸುವುದು ನಾವು ಅವನ ಬಲೆಯಲ್ಲಿ ಬೀಳಬೇಕು ಎಂಬು ಉದ್ದೇಶದಿಂದಲೇ. ನಾವು ಆ ಸಂದರ್ಭದಲ್ಲಿ ವಿವೇಕವನ್ನು ಕಳೆದುಕೊಳ್ಳುತ್ತೇವೆ; ಅವನ ಮೋಸದ ಮಾತುಗಳಿಗೆ ಸೋತುಹೋಗುತ್ತೇವೆ.</p>.<p>ನಮ್ಮ ಹಿತವನ್ನು ಬಯಸುವ ಸಜ್ಜನರು ನಮಗೆ ಒಳ್ಳೆಯದಾಗಲೆಂದು ಎಚ್ಚರಿಕೆಯ ಮಾತುಗಳನ್ನು ಆಡುತ್ತಾರೆ. ಆದರೆ ಅದು ನಮಗೆ ಹಿಡಿಸುವುದಿಲ್ಲ; ನಾವು ಅವರಿಂದ ದೂರ ಸರಿಯುತ್ತೇವೆ.</p>.<p>ಇನ್ನೊಂದು ಸುಭಾಷಿತ ಮಾತು ಹೀಗಿದೆ:</p>.<p>ಸ್ಪೃಶನ್ನಪಿ ಗಜೋ ಹಂತಿ ಜಿಘ್ರನ್ನಪಿ ಭುಜಂಗಮಃ ।</p>.<p>ಹಸನ್ನಪಿ ನೃಪೋ ಹಂತಿ ಮಾನಯನ್ನಪಿ ದುರ್ಜನಃ ।।</p>.<p>’ಕೇವಲ ಸ್ಪರ್ಶದಿಂದಲೇ ಆನೆಯು ಕೊಲ್ಲುತ್ತದೆ; ಹಾವು ಮೂಸಿನೋಡುವ ಮೂಲಕವೇ ಕೊಲ್ಲಬಲ್ಲದು; ರಾಜನಾದವನು ನಗುನಗುತ್ತಲೇ ಕೊಲ್ಲುತ್ತಾನೆ. ಅಂತೆಯೇ ದುರ್ಜನನಾದವನು ಗೌರವವನ್ನು ಪ್ರಟಕಮಾಡುತ್ತಲೇ ಕೊಲ್ಲುವನು.‘</p>.<p>ದುಷ್ಟರು ಆಡುವ ಒಳ್ಳೆಯ ಮಾತುಗಳ ಬಗ್ಗೆ, ಅವರು ತೋರಿಸುವ ಗೌರವದ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು. ಸಿಹಿಯಾದ ಮಾತುಗಳನ್ನು ಆಡುವವರು ಹಲವರು ದೊರೆಯುತ್ತಾರೆ. ಆದರೆ ನಮಗೆ ಒಳಿತಾಗುವಂಥ ಮಾತುಗಳನ್ನು ಆಡುವವರು ಸಿಗುವುದು ಕಷ್ಟ ಎಂಬುದನ್ನು ನಾವು ಮರೆಯಬಾರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>