<p>ಕಾಷ್ಠಾದಗ್ನಿರ್ಜಾಯತೇ ಮಥ್ಯಮಾನಾತ್</p>.<p>ಭೂಮಿಸ್ತೋಯಂ ಖನ್ಯಮಾನಾ ದದಾತಿ |</p>.<p>ಸೋತ್ಸಾಹಾನಾಂ ನಾಸ್ತ್ಯಸಾಧ್ಯಂ ನರಾಣಾಂ</p>.<p>ಮಾರ್ಗಾರಬ್ಧಾಃ ಸರ್ವಯತ್ನಾಃ ಫಲನ್ತಿ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಮರದ ತುಂಡಿನಿಂದ ಬೆಂಕಿ ಹುಟ್ಟುತ್ತದೆ. ಭೂಮಿಯನ್ನು ಅಗೆದರೆ ನೀರು ಲಭಿಸುತ್ತದೆ. ಉತ್ಸಾಹಶಾಲಿಗಳಾದ ಮನುಷ್ಯರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸರಿಯಾದ ದಾರಿಯಲ್ಲಿ ಆರಂಭಿಸಿದ ಪ್ರಯತ್ನಗಳು ಫಲವನ್ನು ಕೊಡುವುದರಲ್ಲಿ ಅನುಮಾನವಿಲ್ಲ.’</p>.<p>ಪ್ರಯತ್ನ, ಅದೂ ಸರಿಯಾದ ದಾರಿಯಲ್ಲಿ ಪ್ರಯತ್ನವನ್ನು ನಡೆಸಬೇಕು; ಆಗ ನಾವು ಆರಂಭಿಸಿದ ಕೆಲಸ ಫಲವನ್ನು ಕೊಡುವುದು ನಿಶ್ವಯ ಎನ್ನುತ್ತಿದೆ ಸುಭಾಷಿತ.</p>.<p>ಮರದ ತುಂಡಿನಲ್ಲಿ ಬೆಂಕಿ ಇದೆ ಎಂದು ಮೇಲ್ನೋಟಕ್ಕೆ ತಿಳಿಯವುದೇ ಇಲ್ಲ; ಆದರೆ ಅದನ್ನು ಮಥಿಸಿದಾಗ ಬೆಂಕಿ ಹುಟ್ಟಿಕೊಳ್ಳುತ್ತದೆ. ಹೀಗೆಯೇ ಭೂಮಿಯ ಒಳಗೆ ನೀರಿರುವುದು ಕಣ್ಣಿಗೆ ಕಾಣುವುದಿಲ್ಲ; ಆದರೆ ಅದನ್ನು ಅಗೆಯುತ್ತಹೋದಾಗ ನೀರು ಸಿಕ್ಕುತ್ತದೆ. ಎಂದರೆ ಎಲ್ಲಿ ಏನಿದೆ – ಎಂದು ಸರಿಯಾಗಿ ತಿಳಿದು, ಪ್ರಯತ್ನಶೀಲರಾದಾಗ ಸಫಲತೆ ಸಹಜವಾಗಿಯೇ ಸಿದ್ಧಿಸುತ್ತದೆ. ಕಷ್ಟ ಪಟ್ಟರೆ ಸುಖ ಉಂಟು, ಹೌದು; ಆದರೆ ಸುಮ್ಮನೆ ಕಷ್ಟಪಟ್ಟರೂ ಪ್ರಯೋಜವಿರುವುದಿಲ್ಲ. ಸರಿಯಾದ ದಾರಿಯಲ್ಲಿ ಪ್ರಯತ್ನವನ್ನು ಮಾಡಬೇಕು.</p>.<p>ಕರೋತಿ ಸಫಲಂ ಜಂತೋಃ ಕರ್ಮ ಯಚ್ಚ ಕರೋತಿ ಸಃ ।</p>.<p>ತಸ್ಮಾದನಿರ್ವೇದಕರಂ ಯತ್ನಂ ಕುರ್ಯಾದನುತ್ತಮಮ್ ।।</p>.<p>‘ಮನುಷ್ಯನು ಯಾವ ಕೆಲಸವನ್ನು ಮಾಡುತ್ತಾನೋ ಅದೇ ಸಾಫಲ್ಯವನ್ನು ಉಂಟುಮಾಡುತ್ತದೆ. ಆದುದರಿಂದ ಉತ್ಸಾಹಯುಕ್ತವಾದ ಉತ್ತಮ ಪ್ರಯತ್ನವನ್ನು ಮಾಡಬೇಕು’ ಎಂಬುದು ಇದರ ತಾತ್ಪರ್ಯ.</p>.<p>ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುವುದರಿಂದ ನಾವು ಸರಿಯಾದ ದಾರಿಯಲ್ಲಿ ಕ್ರಮಿಸಬೇಕು.</p>.<p>ಸರಿಯಾದ ದಾರಿ ಯಾವುದೆಂದು ಗೊತ್ತಾದಮೇಲೆ ಉತ್ಸಾಹದಿಂದ ಕೆಲಸವನ್ನು ಮಾಡಬೇಕು. ಏಕೆಂದರೆ,</p>.<p>ಉತ್ಸಾಹಸಂಪನ್ನಂ ಅದೀರ್ಘಸೂತ್ರಂ</p>.<p>ಕ್ರಿಯಾವಿಧಿಜ್ಞಂ ವ್ಯಸನೇಷ್ವಸಕ್ತಮ್ ।</p>.<p>ಶೂರಂ ಕೃತಜ್ಞಂ ದೃಢಸೌಹೃದಂ ಚ</p>.<p>ಲಕ್ಷ್ಮೀಃ ಸ್ವಯಂ ಯಾತಿ ನಿವಾಸಹೇತೋಃ ।।</p>.<p>‘ಉತ್ಸಾಹದಿಂದ ಕೂಡಿದವನೂ ಸೋಮಾರಿಯಲ್ಲದವನೂ ಕೆಲಸಮಾಡುವ ವಿಧಾನವನ್ನು ಅರಿತವನೂ ಕೆಟ್ಟ ಅಭ್ಯಾಸಗಳಲ್ಲಿ ಆಸಕ್ತಿ ಇಲ್ಲದವನೂ ಶೂರನೂ ಕೃತಜ್ಞನೂ ಸ್ಥಿರವಾದ ಸ್ನೇಹಸ್ವಭಾವವನ್ನು ಉಳ್ಳವನೂ ಆದವನಲ್ಲಿ ಲಕ್ಷ್ಮಿಯು ತಾನಾಗಿಯೇ ನೆಲಸಲು ಧಾವಿಸುತ್ತಾಳೆ.’</p>.<p>ಉತ್ಸಾಹೋ ಬಲವನ್ನ್ಯಾಯ್ಯೋ ನಾಸ್ತ್ಯುತ್ಸಾಹಾತ್ಪರಂ ಬಲಮ್ ।</p>.<p>ಉತ್ಸಾಹರಂಭಮಾತ್ರೇಣ ಜಾಯಂತೇ ಸರ್ವಸಂಪದಃ ।।</p>.<p>’ಉತ್ಸಾಹದಲ್ಲಿ ಬಲವಿದೆ; ಅದು ನ್ಯಾಯವಾದುದು ಕೂಡ. ಉತ್ಸಾಹಕ್ಕಿತಂಲೂ ಮಿಗಿಲಾದ ಬಲ ಮತ್ತೊಂದಿಲ್ಲ; ಉತ್ಸಾಹದಿಂದ ಆರಂಭಮಾಡಿದರೆ ಸಾಕು ಸಕಲ ಸಂಪತ್ತುಗಳೂ ಉಂಟಾಗುತ್ತವೆ.‘</p>.<p>ನಾವು ಎಂಥ ಸಂದರ್ಭದಲ್ಲೂ ಉತ್ಸಾಹವನ್ನು ಕಳೆದುಕೊಳ್ಳಬಾರದು; ಅದೊಂದು ಇದ್ದರೆ ಎಂಥ ಕೆಲಸದಲ್ಲೂ ಸಾಫಲ್ಯವನ್ನು ಪಡೆಯಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾಷ್ಠಾದಗ್ನಿರ್ಜಾಯತೇ ಮಥ್ಯಮಾನಾತ್</p>.<p>ಭೂಮಿಸ್ತೋಯಂ ಖನ್ಯಮಾನಾ ದದಾತಿ |</p>.<p>ಸೋತ್ಸಾಹಾನಾಂ ನಾಸ್ತ್ಯಸಾಧ್ಯಂ ನರಾಣಾಂ</p>.<p>ಮಾರ್ಗಾರಬ್ಧಾಃ ಸರ್ವಯತ್ನಾಃ ಫಲನ್ತಿ ।।</p>.<p>ಇದರ ತಾತ್ಪರ್ಯ ಹೀಗೆ:</p>.<p>‘ಮರದ ತುಂಡಿನಿಂದ ಬೆಂಕಿ ಹುಟ್ಟುತ್ತದೆ. ಭೂಮಿಯನ್ನು ಅಗೆದರೆ ನೀರು ಲಭಿಸುತ್ತದೆ. ಉತ್ಸಾಹಶಾಲಿಗಳಾದ ಮನುಷ್ಯರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಸರಿಯಾದ ದಾರಿಯಲ್ಲಿ ಆರಂಭಿಸಿದ ಪ್ರಯತ್ನಗಳು ಫಲವನ್ನು ಕೊಡುವುದರಲ್ಲಿ ಅನುಮಾನವಿಲ್ಲ.’</p>.<p>ಪ್ರಯತ್ನ, ಅದೂ ಸರಿಯಾದ ದಾರಿಯಲ್ಲಿ ಪ್ರಯತ್ನವನ್ನು ನಡೆಸಬೇಕು; ಆಗ ನಾವು ಆರಂಭಿಸಿದ ಕೆಲಸ ಫಲವನ್ನು ಕೊಡುವುದು ನಿಶ್ವಯ ಎನ್ನುತ್ತಿದೆ ಸುಭಾಷಿತ.</p>.<p>ಮರದ ತುಂಡಿನಲ್ಲಿ ಬೆಂಕಿ ಇದೆ ಎಂದು ಮೇಲ್ನೋಟಕ್ಕೆ ತಿಳಿಯವುದೇ ಇಲ್ಲ; ಆದರೆ ಅದನ್ನು ಮಥಿಸಿದಾಗ ಬೆಂಕಿ ಹುಟ್ಟಿಕೊಳ್ಳುತ್ತದೆ. ಹೀಗೆಯೇ ಭೂಮಿಯ ಒಳಗೆ ನೀರಿರುವುದು ಕಣ್ಣಿಗೆ ಕಾಣುವುದಿಲ್ಲ; ಆದರೆ ಅದನ್ನು ಅಗೆಯುತ್ತಹೋದಾಗ ನೀರು ಸಿಕ್ಕುತ್ತದೆ. ಎಂದರೆ ಎಲ್ಲಿ ಏನಿದೆ – ಎಂದು ಸರಿಯಾಗಿ ತಿಳಿದು, ಪ್ರಯತ್ನಶೀಲರಾದಾಗ ಸಫಲತೆ ಸಹಜವಾಗಿಯೇ ಸಿದ್ಧಿಸುತ್ತದೆ. ಕಷ್ಟ ಪಟ್ಟರೆ ಸುಖ ಉಂಟು, ಹೌದು; ಆದರೆ ಸುಮ್ಮನೆ ಕಷ್ಟಪಟ್ಟರೂ ಪ್ರಯೋಜವಿರುವುದಿಲ್ಲ. ಸರಿಯಾದ ದಾರಿಯಲ್ಲಿ ಪ್ರಯತ್ನವನ್ನು ಮಾಡಬೇಕು.</p>.<p>ಕರೋತಿ ಸಫಲಂ ಜಂತೋಃ ಕರ್ಮ ಯಚ್ಚ ಕರೋತಿ ಸಃ ।</p>.<p>ತಸ್ಮಾದನಿರ್ವೇದಕರಂ ಯತ್ನಂ ಕುರ್ಯಾದನುತ್ತಮಮ್ ।।</p>.<p>‘ಮನುಷ್ಯನು ಯಾವ ಕೆಲಸವನ್ನು ಮಾಡುತ್ತಾನೋ ಅದೇ ಸಾಫಲ್ಯವನ್ನು ಉಂಟುಮಾಡುತ್ತದೆ. ಆದುದರಿಂದ ಉತ್ಸಾಹಯುಕ್ತವಾದ ಉತ್ತಮ ಪ್ರಯತ್ನವನ್ನು ಮಾಡಬೇಕು’ ಎಂಬುದು ಇದರ ತಾತ್ಪರ್ಯ.</p>.<p>ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುವುದರಿಂದ ನಾವು ಸರಿಯಾದ ದಾರಿಯಲ್ಲಿ ಕ್ರಮಿಸಬೇಕು.</p>.<p>ಸರಿಯಾದ ದಾರಿ ಯಾವುದೆಂದು ಗೊತ್ತಾದಮೇಲೆ ಉತ್ಸಾಹದಿಂದ ಕೆಲಸವನ್ನು ಮಾಡಬೇಕು. ಏಕೆಂದರೆ,</p>.<p>ಉತ್ಸಾಹಸಂಪನ್ನಂ ಅದೀರ್ಘಸೂತ್ರಂ</p>.<p>ಕ್ರಿಯಾವಿಧಿಜ್ಞಂ ವ್ಯಸನೇಷ್ವಸಕ್ತಮ್ ।</p>.<p>ಶೂರಂ ಕೃತಜ್ಞಂ ದೃಢಸೌಹೃದಂ ಚ</p>.<p>ಲಕ್ಷ್ಮೀಃ ಸ್ವಯಂ ಯಾತಿ ನಿವಾಸಹೇತೋಃ ।।</p>.<p>‘ಉತ್ಸಾಹದಿಂದ ಕೂಡಿದವನೂ ಸೋಮಾರಿಯಲ್ಲದವನೂ ಕೆಲಸಮಾಡುವ ವಿಧಾನವನ್ನು ಅರಿತವನೂ ಕೆಟ್ಟ ಅಭ್ಯಾಸಗಳಲ್ಲಿ ಆಸಕ್ತಿ ಇಲ್ಲದವನೂ ಶೂರನೂ ಕೃತಜ್ಞನೂ ಸ್ಥಿರವಾದ ಸ್ನೇಹಸ್ವಭಾವವನ್ನು ಉಳ್ಳವನೂ ಆದವನಲ್ಲಿ ಲಕ್ಷ್ಮಿಯು ತಾನಾಗಿಯೇ ನೆಲಸಲು ಧಾವಿಸುತ್ತಾಳೆ.’</p>.<p>ಉತ್ಸಾಹೋ ಬಲವನ್ನ್ಯಾಯ್ಯೋ ನಾಸ್ತ್ಯುತ್ಸಾಹಾತ್ಪರಂ ಬಲಮ್ ।</p>.<p>ಉತ್ಸಾಹರಂಭಮಾತ್ರೇಣ ಜಾಯಂತೇ ಸರ್ವಸಂಪದಃ ।।</p>.<p>’ಉತ್ಸಾಹದಲ್ಲಿ ಬಲವಿದೆ; ಅದು ನ್ಯಾಯವಾದುದು ಕೂಡ. ಉತ್ಸಾಹಕ್ಕಿತಂಲೂ ಮಿಗಿಲಾದ ಬಲ ಮತ್ತೊಂದಿಲ್ಲ; ಉತ್ಸಾಹದಿಂದ ಆರಂಭಮಾಡಿದರೆ ಸಾಕು ಸಕಲ ಸಂಪತ್ತುಗಳೂ ಉಂಟಾಗುತ್ತವೆ.‘</p>.<p>ನಾವು ಎಂಥ ಸಂದರ್ಭದಲ್ಲೂ ಉತ್ಸಾಹವನ್ನು ಕಳೆದುಕೊಳ್ಳಬಾರದು; ಅದೊಂದು ಇದ್ದರೆ ಎಂಥ ಕೆಲಸದಲ್ಲೂ ಸಾಫಲ್ಯವನ್ನು ಪಡೆಯಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>