ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನ ಭವಿಷ್ಯ ಮೇ 14

Last Updated 13 ಮೇ 2020, 15:58 IST
ಅಕ್ಷರ ಗಾತ್ರ

ಶಾರ್ವರಿ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ವೈಶಾಖ ಮಾಸ ಕೃಷ್ಣ ಪಕ್ಷ ಮಳೆ ನಕ್ಷತ್ರ ಕೃತ್ತಿಕಾ ಸಪ್ತಮಿ ಗಂ. 8-31 (ಬೆ. 9-26) ಗುರುವಾರ ನಿತ್ಯ ನಕ್ಷತ್ರ ಶ್ರವಣ ಗಂ. 7-29 (ಬೆ. 9-01) ಬ್ರಹ್ಮ ನಾಮ ಯೋಗ ಗಂ 53-57 ಬವ ಕರಣ ಗಂ 8-31 ವಿಷ ಗಂ. 18-6 ಅಮೃತ ಗಂ 43-19 ರಾಹುಕಾಲ ಮ ಗಂ. 1-30 ರಿಂದ 3-00 ಗುಳಿಕ ಕಾಲ ಬೆ ಗಂ 9-00 ರಿಂದ 10-30 ಯಮಗಂಡ ಕಾಲ ಬೆ ಗಂ 6-00 ರಿಂದ 7-30 ಸೂರ್ಯೋದಯ: 5-59 ಸೂರ್ಯಾಸ್ತ: 6-33 ಅದೃಷ್ಟ ಸಂಖ್ಯೆ 2, 7

ಮೇಷ: ಕೆಲಸದ ಒತ್ತಡದಿಂದಾಗಿ ತಾಳ್ಮೆ ಕಳೆದುಕೊಳ್ಳುವ ಸಾಧ್ಯತೆ. ವಿನಾಕಾರಣ ಉದ್ವೇಗಕ್ಕೆ ಒಳಗಾಗಿ ಮನೆಯವರ ಮೇಲೆ ಹರಿಹಾಯುವ ಸಾಧ್ಯತೆಯಿದ್ದು ಸಮಾಧಾನಚಿತ್ತರಾಗಿ ವ್ಯವಹರಿಸುವುದು ಉತ್ತಮ.

ವೃಷಭ: ನಿರ್ಲಕ್ಷ್ಯದಿಂದಾಗಿ ಸಿಗುವ ಲಾಭವನ್ನು ಕಳೆದುಕೊಳ್ಳುವ ಸಾಧ್ಯತೆ ಇದ್ದು, ಆಸಕ್ತಿ ವಹಿಸಿ ಕೆಲಸ ಮಾಡಿ. ಬಂಧುಗಳ ನೆರವನ್ನು ನಿರೀಕ್ಷಿಸಬಹುದು. ವಿದ್ಯಾರ್ಥಿಗಳಿಗೆ ಸಂತಸ ನಿರ್ಣಯವೊಂದನ್ನು ಕೇಳುವ ಅವಕಾಶ ಸಿಗಲಿದೆ.

ಮಿಥುನ: ನಿಮ್ಮ ಕಾರ್ಯದಕ್ಷತೆಗೆ ಪ್ರಶಂಸೆಯ ಜೊತೆಗೆ ಹೆಚ್ಚಿನ ಜವಾಬ್ದಾರಿಯನ್ನು ಹೊರಬೇಕಾದ ಪ್ರಸಂಗ ಬರಲಿದೆ. ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಂಡು ಯಶಸ್ಸನ್ನು ಸಾಧಿಸಲಿದ್ದೀರಿ. ಉದ್ಯೋಗದಲ್ಲಿ ಮುಂಬಡ್ತಿ.

ಕರ್ಕಾಟಕ: ಬಹುದಿನಗಳ ನಿಮ್ಮ ಕನಸಿನ ಯೋಜನೆಯೊಂದಕ್ಕೆ ಉತ್ಸಾಹದ ಚಾಲನೆ ದೊರೆಯಲಿದೆ. ಕಾರ್ಯನಿಮಿತ್ತ ದೂರದ ಪ್ರಯಾಣ ಅನಿವಾರ್ಯವಾದೀತು. ಸ್ವಯಂ ಉದ್ಯೋಗಿಗಳಿಗೆ ಅನುಕೂಲಕರ ವಾತಾವರಣ.

ಸಿಂಹ: ಬೇರೆಯವರ ವಿವಾದಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಮಧ್ಯಸ್ಥಿಕೆ ವಹಿಸಿ ಯಶಸ್ಸನ್ನು ಸಾಧಿಸಲಿದ್ದೀರಿ. ಬಂಧುಗಳ ಭೇಟಿಯಿಂದ ಸಂತಸದ ಕ್ಷಣಗಳನ್ನು ಅನುಭವಿಸುವಿರಿ. ವಿಶೇಷ ಭೋಜನದಲ್ಲಿ ಪಾಲ್ಗೊಳ್ಳುವ ಸಾಧ್ಯತೆ.

ಕನ್ಯಾ: ಅನಿರೀಕ್ಷಿತ ತೊಂದರೆಗಳು ಎದುರಾಗುವ ಸಾಧ್ಯತೆ ಕಂಡಬಂದರೂ ಬೇರೆಯವರ ಸಹಕಾರದಿಂದ ಎಲ್ಲವೂ ನಿರಾಳವಾಗಲಿದೆ. ಯೋಜನಾಬದ್ಧವಾದ ಕಾರ್ಯವೊಂದನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ.

ತುಲಾ: ದಿನದ ಮಟ್ಟಿಗೆ ನಿಮ್ಮ ಮಾತಿನಿಂದ ಸಂಕಷ್ಟಗಳು ಎದುರಾಗುವ ಸಾಧ್ಯತೆ ಇದೆ. ಮಾತಿನ ಮೇಲೆ ಹಿಡಿತ ಸಾಧಿಸಿವುದು ಉತ್ತಮ. ವಿನಾಕಾರಣ ನೆರೆಹೊರೆಯವರೊಂದಿಗೆ ಸಂಬಂಧಗಳನ್ನು ಕೆಡಿಸಿಕೊಳ್ಳುವ ಸಾಧ್ಯತೆ ಇದೆ.

ವೃಶ್ಚಿಕ: ಮಾಡಿದ ಕೆಲಸವನ್ನೇ ಪುನಃ ಪರಾಮರ್ಷಿಸಬೇಕಾದ ಅನಿವಾರ್ಯತೆ ಎದುರಾದೀತು. ತಾಳ್ಮೆಗೆಡದೆ ವ್ಯವಹರಿಸಿ. ಫಲ ನಿಮ್ಮದಾಗಲಿದೆ. ಮಂಗಳಕಾರ್ಯಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯಕ್ಕೆ ಬರಲಿದ್ದೀರಿ.

ಧನು: ನಿಮ್ಮ ಕೆಲಸ–ಕಾರ್ಯಗಳಲ್ಲಿ ಸುಲಭವಾಗಿ ಯಶಸ್ಸನ್ನು ಸಾಧಿಸುವಿರಿ. ಉದರ ಸಂಬಂಧಿ ಕಾಯಿಲೆಗಳ ಸಾಧ್ಯತೆ ಕಂಡುಬರುತ್ತಿದ್ದು ಆಹಾರದ ವಿಷಯದಲ್ಲಿ ಎಚ್ಚರಿಕೆ ವಹಿಸಿ. ವ್ಯವಹಾರದಲ್ಲಿ ಶ್ರೇಯಸ್ಸು ನಿಮ್ಮದಾಗಲಿದೆ.

ಮಕರ: ನಿಮ್ಮ ಉನ್ನತಿಯ ವಿಷಯದಲ್ಲಿ ಸ್ವಜನರಿಂದ ಉತ್ತಮವಾದ ಸಲಹೆಗಳು ದೊರಕಲಿದ್ದು, ತಿರಸ್ಕರಿಸದೆ ಪರಶೀಲಿಸುವುದು ಉತ್ತಮ. ಸರ್ಕಾರದಿಂದ ನೆರವು ದೊರೆತು ನೆಮ್ಮದಿಯ ದಿನವನ್ನಾಗಿಸಲಿದೆ.

ಕುಂಭ: ನಿಮ್ಮ ವಿರೋಧಿಗಳೂ ನಿಮ್ಮನ್ನು ಹಿಂಬಾಲಿಸುವ ಸಾಧ್ಯತೆ ಕಂಡುಬರುತ್ತಿದೆ. ಅನ್ಯರ ನಡೆ–ನುಡಿಯ ಬಗ್ಗೆ ಮಾತನಾಡುವುದಕ್ಕಿಂತ ಮೌನ ವಹಿಸುವುದೇ ಉತ್ತಮ. ಗಣ್ಯರ ದರ್ಶನದಿಂದ ಸಂತಸವನ್ನು ಕಾಣುವಿರಿ.

ಮೀನ: ನಿಮ್ಮ ನಡೆ–ನುಡಿ ಕೃತ್ಯಗಳು ಅತ್ಯಂತ ಪಾರದರ್ಶಕವಾಗಿರಲಿ. ಮೇಲಧಿಕಾರಿಗಳಿಂದ ತೊಂದರೆ ತಾಪತ್ರಯಗಳನ್ನು ಎದುರಿಸಬೇಕಾದೀತು. ಉದ್ಯೋಗಾಕಾಂಕ್ಷಿಗಳಿಗೆ ಅಷ್ಟೊಂದು ಅನುಕೂಲವಾಗಿಲ್ಲದ ದಿನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT