<p>ಮನುಷ್ಯನ ಬದುಕನ್ನು ಅರ್ಥಪೂರ್ಣವಾಗಿಸಲು ಮತ್ತವನನ್ನು ಪರಿಪೂರ್ಣನನ್ನಾಗಿಸಲು ಸಂಸ್ಕೃತಿಯು ನಾಲ್ಕು ಸಾಧನಗಳನ್ನು ರೂಪಿಸಿಕೊಂಡಿದೆ. ಅವೇ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳು. ಈ ಪುರುಷಾರ್ಥಗಳ ಚೌಕಟ್ಟು ಈಗಾಗಲೇ ಅರ್ಥಕಾಮಗಳ ಕುರಿತಾಗಿ ಮನುಷ್ಯನಿಗಿರುವ ಅತ್ಯಂತ ಆಸ್ಥೆ ಮತ್ತು ಮಿತಿಮೀರಿದ ಹವಣಿಗೆ ಧರ್ಮದ ಕಡಿವಾಣವನ್ನು ತೊಡಿಸುತ್ತವೆ ಮತ್ತು ಮೋಕ್ಷದ ಗುರಿಯನ್ನು ತೋರಿಸುತ್ತವೆ.</p>.<p>ಇವುಗಳಲ್ಲಿ ಎರಡನೆಯದಾದ ಅರ್ಥವು - ಧರ್ಮ ಮತ್ತು ಧರ್ಮಕ್ಕೆ ಅವಿರುದ್ಧವಾದ ಕಾಮ - ಈ ಎರಡನ್ನೂ ಬೆಸೆಯುವ ಕೊಂಡಿಯಾಗಿ ಒದಗಿಬರುತ್ತದೆ. ಮನುಷ್ಯನೊಬ್ಬನ ಧರ್ಮಪೂರ್ಣವಾದ ಕಾಮ(ಬಯಕೆ)ಗಳನ್ನು ಅರ್ಥವು ಈಡೇರಿಸುತ್ತದೆ. ಮತ್ತೊಂದು ನೆಲೆಯಿಂದ ಹೇಳುವುದಾದರೆ ಧಾರ್ಮಿಕವಾದ ಕಾಮನೆಗಳನ್ನು ಸಾಧಿಸಲು ಒದಗಿಬರುವ ಸಾಧನಗಳೆಲ್ಲವೂ ‘ಅರ್ಥ’ಗಳೇ! ಅದು ಅಷ್ಟೈಶ್ವರ್ಯಗಳಿರಬಹುದು, ಸಿದ್ಧಿಗಳಿರಬಹುದು, ಸಂತಾನವಿರಬಹುದು ಅಥವಾ ವಿದ್ಯೆಯೂ ಇರಬಹುದು – ಎಲ್ಲವೂ ಒಂದರ್ಥದಲ್ಲಿ ಅರ್ಥಗಳೇ.</p>.<p>ಇಂಥ ಅರ್ಥವನ್ನು ಸನಾತನ ಪರಂಪರೆ ಸಾಕಾರಗೊಳಿಸಿಕೊಂಡಿರುವುದು ಲಕ್ಷ್ಮೀದೇವಿಯ ರೂಪದಲ್ಲಿ. ನಾಲ್ಕು ದಿಗ್ಗಜಗಳಿಂದ ಜಲಾಭಿಷೇಕವನ್ನು ಮಾಡಿಸಿಕೊಳ್ಳುತ್ತ ಕುಂಭವೊಂದರಲ್ಲಿ ಸಂಪತ್ತನ್ನು ತುಂಬಿಕೊಂಡು ಕಮಲದ ಮೇಲೆ ಕುಳಿತಿರುವಂತೆ ಸಾಮಾನ್ಯವಾಗಿ ಈಕೆ ಚಿತ್ರಿತಳಾಗುತ್ತಾಳೆ. ಅಂತಹ ಈ ದೇವಿಯು ಹರಿಯ ಹೃದಯವಾಸಿಯೂ ಹೌದು. ಹಾಗಾಗಿಯೇ ನಾರಾಯಣನು ರಮಾರಮಣನೂ ಹೌದು, ಶ್ರೀನಿಧಿಯೂ ಹೌದು. ಆತನ ಹೃದಯಕವಾಟವನ್ನು ತಟ್ಟಬಲ್ಲಷ್ಟು ಧರ್ಮದ ಸಂಚಯವಿರುವವರಿಗಷ್ಟೇ ಅದರೊಳಗಿನ ಲಕ್ಷ್ಮಿಯ ಪ್ರಾಪ್ತಿ ಎನ್ನುವುದೇ ಇದರ ಸಂಕೇತವಾಗಿದ್ದಿರಲಿಕ್ಕೂ ಸಾಕು!</p>.<p>ಲಕ್ಷ್ಮಿಯು ಅರ್ಥದ ಸಾಕಾರ ಎಂದು ನೋಡಿದೆವಷ್ಟೇ. ಹಾಗೆಂದೇ ಅದರ ಬಗೆಬಗೆಯ ರೂಪಗಳನ್ನು ಅವಳು ತಾಳುತ್ತಾಳೆ. ಒಮ್ಮೆ ಸಂತಾನಲಕ್ಷ್ಮಿಯಾಗಿಯೂ, ಮತ್ತೊಮ್ಮೆ ಅದೃಷ್ಟಲಕ್ಷ್ಮಿಯಾಗಿಯೂ, ಮಗದೊಮ್ಮೆ ವಿದ್ಯಾಲಕ್ಷ್ಮಿಯಾಗಿಯೂ, ಐಶ್ವರ್ಯಲಕ್ಷ್ಮೀ, ಗಜಲಕ್ಷ್ಮಿಯೇ ಮೊದಲಾದ ಎಂಟು ರೂಪಗಳಲ್ಲಿಯೂ ಪ್ರಕಟಳಾಗಿ ಜಗಚ್ಚಕ್ರವನ್ನು ಮುನ್ನಡೆಸುತ್ತಾಳೆ.</p>.<p>ಇಂಥ ದೇವಿಯನ್ನು ನಾವು ದೀಪಾವಳಿಯ ಹೊತ್ತಿನಲ್ಲಿ ಮನೆಗೆ ಬರಮಾಡಿಕೊಂಡು ಪೂಜಿಸುತ್ತೇವೆ. ಭಾರತದ ಉತ್ತರದ ದೇಶಗಳಲ್ಲಿ ತ್ರಯೋದಶಿಯಂದೇ ‘ಧನತ್ರಯೋದಶಿ’ ಅಥವಾ ‘ಧನ್ ತೆರಾಸ್’ ಎನ್ನುವುದಾಗಿ ಆಚರಿಸಲ್ಪಡುತ್ತದೆ, ಈ ಉತ್ಸವ. ಅಂದು ಲಕ್ಷ್ಮಿಯನ್ಮು ಆವಾಹಿಸಿ ಪೂಜೆಗೈದು ಮನೆಮನೆಗೆ ಸಿಹಿಯನ್ನು ಹಂಚಿ, ಆಪ್ತರೊಂದಿಗೆ ಸೇರಿ ನರ್ತಿಸುವುದೇ ಮೊದಲಾದ ವಿಧಾನಗಳಿಂದ ಉತ್ತರದವರು ಈ ಪರ್ವವನ್ನು ಸಂಭ್ರಮಿಸುತ್ತಾರೆ.</p>.<p>ಇನ್ನು ದಕ್ಷಿಣದವರು ಅಮಾವಾಸ್ಯೆಯಂದು ರಾತ್ರಿಯ ಕಾಲದಲ್ಲಿ ಲಕ್ಷ್ಮಿಯನ್ನು ಬರಮಾಡಿಕೊಳ್ಳುವರು. ತಾವು ಸಂಪತ್ತು ಎಂದು ಭಾವಿಸುವ ವಸ್ತುಗಳನ್ನು ವಿಶೇಷವಾಗಿ ಅಲಂಕರಿಸಿ ಪೂಜಿಸುತ್ತಾರೆ; ಫಲಪುಷ್ಪಾದಿಗಳನ್ನು ನಿವೇದಿಸುತ್ತಾರೆ. ಹತ್ತಿರದ ದೇವಾಲಯಗಳಲ್ಲಿ ಊರಿನವರೆಲ್ಲ ಜೊತೆಸೇರಿ ದೀಪಗಳನ್ನು ಬೆಳಗಿ ತಮ್ಮ ಪಾಲಿನ ಸೇವೆಯನ್ನರ್ಪಿಸಿ ಕೃತಾರ್ಥರಾಗುತ್ತಾರೆ.</p>.<p>ಉತ್ಸವಗಳು ಹೀಗೆ ಪುರುಷಾರ್ಥಗಳ ಸಾಧನೆಯನ್ನು ನೆನಪಿಸಿ ಆ ದಿಶೆಯಲ್ಲಿ ಮನುಷ್ಯರನ್ನು ಪ್ರೇರೇಪಿಸುವ ಶಕ್ತಿಯಾಗಿಯೂ, ಸಮುದಾಯಪ್ರಜ್ಞೆಯನ್ನು ಜಾಗ್ರತಗೊಳಿಸುವ ಸಾಧನಗಳಾಗಿಯೂ ಈ ನೆಲದ ಜನಜೀವನವನ್ನು ಲವಲವಿಕೆಯಿಂದ ತುಂಬಿಸಿವೆ.<br /><br /></p>
<p>ಮನುಷ್ಯನ ಬದುಕನ್ನು ಅರ್ಥಪೂರ್ಣವಾಗಿಸಲು ಮತ್ತವನನ್ನು ಪರಿಪೂರ್ಣನನ್ನಾಗಿಸಲು ಸಂಸ್ಕೃತಿಯು ನಾಲ್ಕು ಸಾಧನಗಳನ್ನು ರೂಪಿಸಿಕೊಂಡಿದೆ. ಅವೇ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳು. ಈ ಪುರುಷಾರ್ಥಗಳ ಚೌಕಟ್ಟು ಈಗಾಗಲೇ ಅರ್ಥಕಾಮಗಳ ಕುರಿತಾಗಿ ಮನುಷ್ಯನಿಗಿರುವ ಅತ್ಯಂತ ಆಸ್ಥೆ ಮತ್ತು ಮಿತಿಮೀರಿದ ಹವಣಿಗೆ ಧರ್ಮದ ಕಡಿವಾಣವನ್ನು ತೊಡಿಸುತ್ತವೆ ಮತ್ತು ಮೋಕ್ಷದ ಗುರಿಯನ್ನು ತೋರಿಸುತ್ತವೆ.</p>.<p>ಇವುಗಳಲ್ಲಿ ಎರಡನೆಯದಾದ ಅರ್ಥವು - ಧರ್ಮ ಮತ್ತು ಧರ್ಮಕ್ಕೆ ಅವಿರುದ್ಧವಾದ ಕಾಮ - ಈ ಎರಡನ್ನೂ ಬೆಸೆಯುವ ಕೊಂಡಿಯಾಗಿ ಒದಗಿಬರುತ್ತದೆ. ಮನುಷ್ಯನೊಬ್ಬನ ಧರ್ಮಪೂರ್ಣವಾದ ಕಾಮ(ಬಯಕೆ)ಗಳನ್ನು ಅರ್ಥವು ಈಡೇರಿಸುತ್ತದೆ. ಮತ್ತೊಂದು ನೆಲೆಯಿಂದ ಹೇಳುವುದಾದರೆ ಧಾರ್ಮಿಕವಾದ ಕಾಮನೆಗಳನ್ನು ಸಾಧಿಸಲು ಒದಗಿಬರುವ ಸಾಧನಗಳೆಲ್ಲವೂ ‘ಅರ್ಥ’ಗಳೇ! ಅದು ಅಷ್ಟೈಶ್ವರ್ಯಗಳಿರಬಹುದು, ಸಿದ್ಧಿಗಳಿರಬಹುದು, ಸಂತಾನವಿರಬಹುದು ಅಥವಾ ವಿದ್ಯೆಯೂ ಇರಬಹುದು – ಎಲ್ಲವೂ ಒಂದರ್ಥದಲ್ಲಿ ಅರ್ಥಗಳೇ.</p>.<p>ಇಂಥ ಅರ್ಥವನ್ನು ಸನಾತನ ಪರಂಪರೆ ಸಾಕಾರಗೊಳಿಸಿಕೊಂಡಿರುವುದು ಲಕ್ಷ್ಮೀದೇವಿಯ ರೂಪದಲ್ಲಿ. ನಾಲ್ಕು ದಿಗ್ಗಜಗಳಿಂದ ಜಲಾಭಿಷೇಕವನ್ನು ಮಾಡಿಸಿಕೊಳ್ಳುತ್ತ ಕುಂಭವೊಂದರಲ್ಲಿ ಸಂಪತ್ತನ್ನು ತುಂಬಿಕೊಂಡು ಕಮಲದ ಮೇಲೆ ಕುಳಿತಿರುವಂತೆ ಸಾಮಾನ್ಯವಾಗಿ ಈಕೆ ಚಿತ್ರಿತಳಾಗುತ್ತಾಳೆ. ಅಂತಹ ಈ ದೇವಿಯು ಹರಿಯ ಹೃದಯವಾಸಿಯೂ ಹೌದು. ಹಾಗಾಗಿಯೇ ನಾರಾಯಣನು ರಮಾರಮಣನೂ ಹೌದು, ಶ್ರೀನಿಧಿಯೂ ಹೌದು. ಆತನ ಹೃದಯಕವಾಟವನ್ನು ತಟ್ಟಬಲ್ಲಷ್ಟು ಧರ್ಮದ ಸಂಚಯವಿರುವವರಿಗಷ್ಟೇ ಅದರೊಳಗಿನ ಲಕ್ಷ್ಮಿಯ ಪ್ರಾಪ್ತಿ ಎನ್ನುವುದೇ ಇದರ ಸಂಕೇತವಾಗಿದ್ದಿರಲಿಕ್ಕೂ ಸಾಕು!</p>.<p>ಲಕ್ಷ್ಮಿಯು ಅರ್ಥದ ಸಾಕಾರ ಎಂದು ನೋಡಿದೆವಷ್ಟೇ. ಹಾಗೆಂದೇ ಅದರ ಬಗೆಬಗೆಯ ರೂಪಗಳನ್ನು ಅವಳು ತಾಳುತ್ತಾಳೆ. ಒಮ್ಮೆ ಸಂತಾನಲಕ್ಷ್ಮಿಯಾಗಿಯೂ, ಮತ್ತೊಮ್ಮೆ ಅದೃಷ್ಟಲಕ್ಷ್ಮಿಯಾಗಿಯೂ, ಮಗದೊಮ್ಮೆ ವಿದ್ಯಾಲಕ್ಷ್ಮಿಯಾಗಿಯೂ, ಐಶ್ವರ್ಯಲಕ್ಷ್ಮೀ, ಗಜಲಕ್ಷ್ಮಿಯೇ ಮೊದಲಾದ ಎಂಟು ರೂಪಗಳಲ್ಲಿಯೂ ಪ್ರಕಟಳಾಗಿ ಜಗಚ್ಚಕ್ರವನ್ನು ಮುನ್ನಡೆಸುತ್ತಾಳೆ.</p>.<p>ಇಂಥ ದೇವಿಯನ್ನು ನಾವು ದೀಪಾವಳಿಯ ಹೊತ್ತಿನಲ್ಲಿ ಮನೆಗೆ ಬರಮಾಡಿಕೊಂಡು ಪೂಜಿಸುತ್ತೇವೆ. ಭಾರತದ ಉತ್ತರದ ದೇಶಗಳಲ್ಲಿ ತ್ರಯೋದಶಿಯಂದೇ ‘ಧನತ್ರಯೋದಶಿ’ ಅಥವಾ ‘ಧನ್ ತೆರಾಸ್’ ಎನ್ನುವುದಾಗಿ ಆಚರಿಸಲ್ಪಡುತ್ತದೆ, ಈ ಉತ್ಸವ. ಅಂದು ಲಕ್ಷ್ಮಿಯನ್ಮು ಆವಾಹಿಸಿ ಪೂಜೆಗೈದು ಮನೆಮನೆಗೆ ಸಿಹಿಯನ್ನು ಹಂಚಿ, ಆಪ್ತರೊಂದಿಗೆ ಸೇರಿ ನರ್ತಿಸುವುದೇ ಮೊದಲಾದ ವಿಧಾನಗಳಿಂದ ಉತ್ತರದವರು ಈ ಪರ್ವವನ್ನು ಸಂಭ್ರಮಿಸುತ್ತಾರೆ.</p>.<p>ಇನ್ನು ದಕ್ಷಿಣದವರು ಅಮಾವಾಸ್ಯೆಯಂದು ರಾತ್ರಿಯ ಕಾಲದಲ್ಲಿ ಲಕ್ಷ್ಮಿಯನ್ನು ಬರಮಾಡಿಕೊಳ್ಳುವರು. ತಾವು ಸಂಪತ್ತು ಎಂದು ಭಾವಿಸುವ ವಸ್ತುಗಳನ್ನು ವಿಶೇಷವಾಗಿ ಅಲಂಕರಿಸಿ ಪೂಜಿಸುತ್ತಾರೆ; ಫಲಪುಷ್ಪಾದಿಗಳನ್ನು ನಿವೇದಿಸುತ್ತಾರೆ. ಹತ್ತಿರದ ದೇವಾಲಯಗಳಲ್ಲಿ ಊರಿನವರೆಲ್ಲ ಜೊತೆಸೇರಿ ದೀಪಗಳನ್ನು ಬೆಳಗಿ ತಮ್ಮ ಪಾಲಿನ ಸೇವೆಯನ್ನರ್ಪಿಸಿ ಕೃತಾರ್ಥರಾಗುತ್ತಾರೆ.</p>.<p>ಉತ್ಸವಗಳು ಹೀಗೆ ಪುರುಷಾರ್ಥಗಳ ಸಾಧನೆಯನ್ನು ನೆನಪಿಸಿ ಆ ದಿಶೆಯಲ್ಲಿ ಮನುಷ್ಯರನ್ನು ಪ್ರೇರೇಪಿಸುವ ಶಕ್ತಿಯಾಗಿಯೂ, ಸಮುದಾಯಪ್ರಜ್ಞೆಯನ್ನು ಜಾಗ್ರತಗೊಳಿಸುವ ಸಾಧನಗಳಾಗಿಯೂ ಈ ನೆಲದ ಜನಜೀವನವನ್ನು ಲವಲವಿಕೆಯಿಂದ ತುಂಬಿಸಿವೆ.<br /><br /></p>