<p>ತುಳಸಿ ಪೂಜೆಗೆ ಹಿಂದೂ ಸಂಪ್ರಾದಯದಲ್ಲಿ ಮಹತ್ತರ ಸ್ಥಾನ ನೀಡಲಾಗಿದೆ. ತುಳಸಿ ಗಿಡದಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ, ಲಕ್ಷ್ಮೀ ತುಳಸಿ ಹಾಗೂ ವಿಷ್ಣು ತುಳಸಿ. ಈ ಎರಡು ತುಳಸಿಗಳನ್ನು ಪೂಜಿಸುವುದರಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿಯೋಣ.</p><ul><li><p>ಈ ಎರಡು ತುಳಸಿ ಗಿಡಗಳನ್ನು ಪೂಜಿಸಿದರೆ ಮಾತ್ರ, ಲಕ್ಷ್ಮೀನಾರಾಯಣರ ಆಶೀರ್ವಾದ ದೊರೆಯುತ್ತದೆ ಎಂದು ಜ್ಯೋತಿಷದಲ್ಲಿ ತಿಳಿಸಿದೆ. </p></li><li><p>ಒಂದೇ ತುಳಸಿ ಗಿಡಕ್ಕೆ ಪೂಜಿಸುವುದರಿಂದ ಪೂಜೆ ಫಲ ಲಭಿಸುವುದಿಲ್ಲ. ಆ ಪೂಜೆಯು ವ್ಯರ್ಥಕ್ಕೆ ಸಮವಾಗಿದೆ. </p></li><li><p>ತುಳಸಿ ಗಿಡಕ್ಕೆ ಪೂಜೆ ಸಲ್ಲಿಸುವಾಗ ದೀಪ, ಅಗರ ಬತ್ತಿಗಳನ್ನು ತುಳಸಿ ಕಟ್ಟೆಯ ಕೆಳಗಡೆ ಹಚ್ಚಬಾರದು. ಇದರಿಂದ ಬೆಂಕಿಯ ಶಾಖ ತುಳಸಿ ಗಿಡಕ್ಕೆ ತಗುಲಿ ಗಿಡ ಬಾಡುತ್ತದೆ. </p></li><li><p>ತುಳಸಿ ಗಿಡವನ್ನು ಪ್ರತ್ಯೇಕವಾದ ಗೋಡು ಅಥವಾ ಕಟ್ಟೆ ಮಾಡಿಸಿ ಅಲ್ಲಿ ಇಡುವುದು ಸೂಕ್ತ. ಸದಾ ಓಡಾಡುವ ಸ್ಥಳದಲ್ಲಿ ಇಡಬಾರದು. </p></li><li><p>ತುಳಸಿ ದಳವನ್ನು ಕತ್ತರಿಯ ಅಥವಾ ಚಾಕು ಬಳಸಿ ಹರಿತವಾದ ವಸ್ತುಗಳಿಂದ ಕತ್ತರಿಸಬಾರದು. ಕೈಗಳಿಂದ ಮಾತ್ರವೇ ತುಳಸಿ ದಳ ಬಿಡಿಸಬೇಕು. </p></li><li><p>ತುಳಸಿಯನ್ನು ದಳ ಕೀಳುವಾದ ‘ಓಂ ನಮೋ ನಾರಾಯಣಾಯ’ ಎನ್ನುವ ಅಷ್ಟಾಕ್ಷರಿ ಮಂತ್ರ ಜಪಿಸಿ, ತುಳಸಿ ಬಿಡಿಸುವ ಮೊದಲು ಸ್ವಲ್ಪ ನೀರನ್ನು ಹಾಕಿ ನಂತರ ಬಿಡಿಸುವುದು ಸೂಕ್ತ ಎಂದು ಹೇಳಲಾಗುತ್ತದೆ.</p></li><li><p>ಯಾವುದೇ ಕಾರಣಕ್ಕೂ ಚಪ್ಪಲಿ ಹಾಕಿಕೊಂಡು ಅಥವಾ ಸ್ನಾನ ಮಾಡದೆ ತುಳಿಸಿ ಮುಟ್ಟುವುದಾಗಲಿ ಅಥವಾ ಕೀಳುವಾದಾಗಲಿ ಮಾಡಲೇಬಾರದು.</p></li></ul><p><strong>ತುಳಸಿ ದಳವನ್ನು ಯಾವಾಗ ಕೀಳಬಾರದು:</strong> </p><ul><li><p>ಭಾನುವಾರ, ಮಂಗಳವಾರ, ಶುಕ್ರವಾರ, ಏಕಾದಶಿ, ದ್ವಾದಶಿ, ಹುಣ್ಣಿಮೆ ಹಾಗೂ ಅಮಾವಾಸ್ಯೆಯ ದಿನದಂದು ಯಾವುದೇ ಕಾರಣಕ್ಕೂ ತುಳಸಿ ದಳ ಕೇಳಬಾರದು. ಪೂಜೆಗಾಗಿ ಒಂದು ದಿವಸ ಮುಂಚಿತವೇ ಬಿಡಿಸಿ ಇಟ್ಟುಕೊಳ್ಳಬೇಕು. </p></li><li><p>ಸೂರ್ಯಾಸ್ತವಾದ ನಂತರ ತುಳಸಿಯನ್ನು ಕೀಳಬಾರದು. </p></li><li><p>ಮಾಂಸಹಾರ ಸೇವಿಸಿದವರು, ಋತುದೋಷ, ಸೂತಕದ ಛಾಯೆ ಇರುವವರು ತುಳಸಿ ಗಿಡವನ್ನು ಮುಟ್ಟಬಾರದು.</p></li><li><p>ಈ ನಿಯಮಗಳನ್ನು ಅನುಸರಿಸಿ ತುಳಸಿಯನ್ನು ನಿಷ್ಠೆಯಿಂದ ಪೂಜೆ ಮಾಡಿದರೆ ಶ್ರೀ ಲಕ್ಷ್ಮೀನಾರಾಯಣರ ಕೃಪೆ ನಿಮಗೆ ದೊರೆಯುತ್ತದೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.</p></li><li><p>ಯಾವುದೇ ಕಾರಣಕ್ಕೂ ಗಣಪತಿಗೆ ತುಳಸಿಯನ್ನು ಅರ್ಪಿಸಬಾರದು ಎಂದು ಹೇಳಲಾಗುತ್ತದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಳಸಿ ಪೂಜೆಗೆ ಹಿಂದೂ ಸಂಪ್ರಾದಯದಲ್ಲಿ ಮಹತ್ತರ ಸ್ಥಾನ ನೀಡಲಾಗಿದೆ. ತುಳಸಿ ಗಿಡದಲ್ಲಿ ಎರಡು ವಿಧಗಳಿವೆ. ಅವುಗಳೆಂದರೆ, ಲಕ್ಷ್ಮೀ ತುಳಸಿ ಹಾಗೂ ವಿಷ್ಣು ತುಳಸಿ. ಈ ಎರಡು ತುಳಸಿಗಳನ್ನು ಪೂಜಿಸುವುದರಿಂದ ಆಗುವ ಲಾಭಗಳೇನು ಎಂಬುದನ್ನು ತಿಳಿಯೋಣ.</p><ul><li><p>ಈ ಎರಡು ತುಳಸಿ ಗಿಡಗಳನ್ನು ಪೂಜಿಸಿದರೆ ಮಾತ್ರ, ಲಕ್ಷ್ಮೀನಾರಾಯಣರ ಆಶೀರ್ವಾದ ದೊರೆಯುತ್ತದೆ ಎಂದು ಜ್ಯೋತಿಷದಲ್ಲಿ ತಿಳಿಸಿದೆ. </p></li><li><p>ಒಂದೇ ತುಳಸಿ ಗಿಡಕ್ಕೆ ಪೂಜಿಸುವುದರಿಂದ ಪೂಜೆ ಫಲ ಲಭಿಸುವುದಿಲ್ಲ. ಆ ಪೂಜೆಯು ವ್ಯರ್ಥಕ್ಕೆ ಸಮವಾಗಿದೆ. </p></li><li><p>ತುಳಸಿ ಗಿಡಕ್ಕೆ ಪೂಜೆ ಸಲ್ಲಿಸುವಾಗ ದೀಪ, ಅಗರ ಬತ್ತಿಗಳನ್ನು ತುಳಸಿ ಕಟ್ಟೆಯ ಕೆಳಗಡೆ ಹಚ್ಚಬಾರದು. ಇದರಿಂದ ಬೆಂಕಿಯ ಶಾಖ ತುಳಸಿ ಗಿಡಕ್ಕೆ ತಗುಲಿ ಗಿಡ ಬಾಡುತ್ತದೆ. </p></li><li><p>ತುಳಸಿ ಗಿಡವನ್ನು ಪ್ರತ್ಯೇಕವಾದ ಗೋಡು ಅಥವಾ ಕಟ್ಟೆ ಮಾಡಿಸಿ ಅಲ್ಲಿ ಇಡುವುದು ಸೂಕ್ತ. ಸದಾ ಓಡಾಡುವ ಸ್ಥಳದಲ್ಲಿ ಇಡಬಾರದು. </p></li><li><p>ತುಳಸಿ ದಳವನ್ನು ಕತ್ತರಿಯ ಅಥವಾ ಚಾಕು ಬಳಸಿ ಹರಿತವಾದ ವಸ್ತುಗಳಿಂದ ಕತ್ತರಿಸಬಾರದು. ಕೈಗಳಿಂದ ಮಾತ್ರವೇ ತುಳಸಿ ದಳ ಬಿಡಿಸಬೇಕು. </p></li><li><p>ತುಳಸಿಯನ್ನು ದಳ ಕೀಳುವಾದ ‘ಓಂ ನಮೋ ನಾರಾಯಣಾಯ’ ಎನ್ನುವ ಅಷ್ಟಾಕ್ಷರಿ ಮಂತ್ರ ಜಪಿಸಿ, ತುಳಸಿ ಬಿಡಿಸುವ ಮೊದಲು ಸ್ವಲ್ಪ ನೀರನ್ನು ಹಾಕಿ ನಂತರ ಬಿಡಿಸುವುದು ಸೂಕ್ತ ಎಂದು ಹೇಳಲಾಗುತ್ತದೆ.</p></li><li><p>ಯಾವುದೇ ಕಾರಣಕ್ಕೂ ಚಪ್ಪಲಿ ಹಾಕಿಕೊಂಡು ಅಥವಾ ಸ್ನಾನ ಮಾಡದೆ ತುಳಿಸಿ ಮುಟ್ಟುವುದಾಗಲಿ ಅಥವಾ ಕೀಳುವಾದಾಗಲಿ ಮಾಡಲೇಬಾರದು.</p></li></ul><p><strong>ತುಳಸಿ ದಳವನ್ನು ಯಾವಾಗ ಕೀಳಬಾರದು:</strong> </p><ul><li><p>ಭಾನುವಾರ, ಮಂಗಳವಾರ, ಶುಕ್ರವಾರ, ಏಕಾದಶಿ, ದ್ವಾದಶಿ, ಹುಣ್ಣಿಮೆ ಹಾಗೂ ಅಮಾವಾಸ್ಯೆಯ ದಿನದಂದು ಯಾವುದೇ ಕಾರಣಕ್ಕೂ ತುಳಸಿ ದಳ ಕೇಳಬಾರದು. ಪೂಜೆಗಾಗಿ ಒಂದು ದಿವಸ ಮುಂಚಿತವೇ ಬಿಡಿಸಿ ಇಟ್ಟುಕೊಳ್ಳಬೇಕು. </p></li><li><p>ಸೂರ್ಯಾಸ್ತವಾದ ನಂತರ ತುಳಸಿಯನ್ನು ಕೀಳಬಾರದು. </p></li><li><p>ಮಾಂಸಹಾರ ಸೇವಿಸಿದವರು, ಋತುದೋಷ, ಸೂತಕದ ಛಾಯೆ ಇರುವವರು ತುಳಸಿ ಗಿಡವನ್ನು ಮುಟ್ಟಬಾರದು.</p></li><li><p>ಈ ನಿಯಮಗಳನ್ನು ಅನುಸರಿಸಿ ತುಳಸಿಯನ್ನು ನಿಷ್ಠೆಯಿಂದ ಪೂಜೆ ಮಾಡಿದರೆ ಶ್ರೀ ಲಕ್ಷ್ಮೀನಾರಾಯಣರ ಕೃಪೆ ನಿಮಗೆ ದೊರೆಯುತ್ತದೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.</p></li><li><p>ಯಾವುದೇ ಕಾರಣಕ್ಕೂ ಗಣಪತಿಗೆ ತುಳಸಿಯನ್ನು ಅರ್ಪಿಸಬಾರದು ಎಂದು ಹೇಳಲಾಗುತ್ತದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>