<p>ದೇವರು ಯಾವ ರೂಪದಲ್ಲಿ, ಹೆಸರಿನಲ್ಲಿದ್ದೇನು? ನಮ್ಮ ನಮ್ಮ ಭಾವಕ್ಕೆ ತಕ್ಕಂತೆ ಆರಾಧಿಸುತ್ತೇವಲ್ಲಾ. ಹಾಗೆಯೇ ಇಲ್ಲೊಂದು ಆರಾಧನೆ ಇದೆ. ಇಲ್ಲಿ ದಸರಾ ಹಬ್ಬದಲ್ಲಿ ಹತ್ತು ದಿನ ಲಕ್ಷ್ಮೀ ನರಸಿಂಹ ಸ್ವಾಮಿ ದೇವರಿಗೆ ಹತ್ತು ಬಗೆಯ ಅಲಂಕಾರ ಮಾಡಿ ಭಕ್ತಿ ಅರ್ಪಿಸುತ್ತಾರೆ ಭಕ್ತರು.</p>.<p>ಇಂದಿರಾನಗರದಲ್ಲಿರುವ ಲಕ್ಷ್ಮೀ ನರಸಿಂಹ ದೇಗುಲದಲ್ಲಿ ನವರಾತ್ರಿಯಲ್ಲಿ ಮೂಲ ವಿಗ್ರಹಕ್ಕೆ ನಿತ್ಯವೂ ವಿಷ್ಣುವಿನ ಒಂದೊಂದು ಅವತಾರದ ಅಲಂಕಾರ ಮಾಡಿ ಪೂಜಿಸಲಾಗುತ್ತಿದೆ. ನರಸಿಂಹಸ್ವಾಮಿ ಜೊತೆಗಿರುವ ಲಕ್ಷ್ಮಿ ದೇವಿಗೂ ವಿಶೇಷ ಪೂಜೆ. ಅವಳೂ ಹತ್ತು ದಿನಗಳ ಕಾಲ ಹತ್ತು ಬಗೆಯಲ್ಲಿ ಅಲಂಕರಿಸಿಕೊಂಡು ಅವತರಿಸುತ್ತಾಳೆ.</p>.<p>ದುರ್ಗೆಯ ಬದಲು ನರಸಿಂಹನಿಗೆ ಅಲಂಕಾರವೇ ಎಂದು ಕೇಳಬಹುದು. ಹಾಗೇನಿಲ್ಲ, ಪುರಾಣದಲ್ಲಿ ಹುಡುಕಿದರೆ ಬ್ರಹ್ಮ, ವಿಷ್ಣು, ಈಶ್ವರ ಈ ಮೂವರೂ ಆದಿ ಮಾಯೆಯ ಸೃಷ್ಟಿಗಳೇ ಅಲ್ಲವೇ? ಹಾಗಿರುವಾಗ ತಾಯಿಯ ಆರಾಧನೆ ದೊಡ್ಡ ಮಟ್ಟದಲ್ಲೇ ನಡೆಯುತ್ತದೆ. ಅದೇ ಹೊತ್ತಿನಲ್ಲಿ ಆಕೆಯ ಸೃಷ್ಟಿಯಾದ ವಿಷ್ಣುವಿಗೂ ಒಂದು ಭಕ್ತಿ ಸಮರ್ಪಣೆ ನಡೆಯುತ್ತದೆ‘ ಎಂಬುದು ಭಕ್ತರ ಸಮಜಾಯಿಷಿ.</p>.<p>‘ದುರ್ಗೆ ಅವತರಿಸಿದ್ದೂ ದುಷ್ಟಶಕ್ತಿಗಳ ನಿಗ್ರಹಕ್ಕಾಗಿ. ವಿಷ್ಣುವಿನ ಹತ್ತು ಅವತಾರಗಳು ದುಷ್ಟ ನಿಗ್ರಹ ಮತ್ತು ಸೃಷ್ಟಿಯ ಪಾಲನೆಯೇ ಆಗಿತ್ತು. ಹಾಗಿರುವಾಗ ಅವನ 10 ಅವತಾರಗಳನ್ನು ಅಲಂಕಾರದ ಮೂಲಕ ಕಣ್ತುಂಬಿಕೊಳ್ಳಲು ಖುಷಿ ಎನಿಸುತ್ತದೆ’ ಎಂದು ನುಡಿಯುತ್ತಾರೆ ಈ ಪರಿಕಲ್ಪನೆಯ ರೂವಾರಿ ಆಯುರ್ವೇದ ವೈದ್ಯೆ ಡಾ.ಸುಮಾ.</p>.<p>ಸುಮಾ ಮತ್ತು ಅವರ ತಂಡ ಪ್ರತಿದಿನ ಈ ಅಲಂಕಾರದಲ್ಲಿ ತೊಡಗುತ್ತದೆ. ಪ್ರತಿ ರಾತ್ರಿ 9 ಗಂಟೆಯಿಂದ ಅಲಂಕಾರ ನಡೆಯುತ್ತದೆ. ಮರುದಿನ ಬೆಳಿಗ್ಗೆ 7ರಿಂದ ಭಕ್ತರು ದರ್ಶನ ಪಡೆಯುತ್ತಾರೆ.</p>.<p>‘ಅರಿಶಿನ, ಲೋಹ, ಚಂದನ, ಹೂವು, ಒಣ ಹಣ್ಣು, ವಿಶೇಷ ಮಣಿಗಳು, ಶ್ರೀಗಂಧ, ಕುಂಕುಮ, ತುಳಸಿ ಹಾಗೂ ಅಗತ್ಯವೆನಿಸಿದ ಅಲಂಕಾರಿಕ ಪರಿಕರಗಳನ್ನು ಬಳಸುತ್ತೇವೆ. ಮೂಲ ವಿಗ್ರಹ ಲಕ್ಷ್ಮೀ ನರಸಿಂಹ ಸ್ವಾಮಿಯದ್ದು. ಅದರ ಸೌಂದರ್ಯ ಹಾಗೂ ದೈವೀಕತೆಗೆ ಅಡ್ಡಿಯಾಗದಂತೆ ಅಲಂಕಾರ ಮಾಡಲಾಗುತ್ತದೆ. ಈ ಅವಧಿಯಲ್ಲಿ ಶುದ್ಧತೆ, ಪಾವಿತತ್ರ್ಯತೆಗೂ ತುಂಬಾ ಮಹತ್ವ ಇದೆ’ ಎಂದರು ಸುಮಾ.</p>.<p>ನವರಾತ್ರಿಯ ಮೊದಲನೇ ದಿನ ಮತ್ಸ್ಯಾವತಾರ, ಎರಡನೇ ದಿನ ಕೂರ್ಮಾವತಾರ, ಮೂರನೇ ದಿನ ವರಾಹ, ನಾಲ್ಕನೇ ದಿನ ನರಸಿಂಹನ ವಿಶೇಷ ಅಲಂಕಾರವನ್ನು ಮಾಡಿದ್ದಾರೆ. ಐದನೇ ದಿನ ವಾಮನ, ನಂತರ ಪರಶುರಾಮ, ರಾಮ, ಬಲರಾಮ, ಕೃಷ್ಣ ಹಾಗೂ ಕಲ್ಕಿಯ ಅವತಾರ ಮಾಡಲು ಅಣಿಯಾಗಿದ್ದಾರೆ.</p>.<p>‘ಎರಡು ದಶಕಗಳಿಂದ ಇಸ್ಕಾನ್ನೊಂದಿಗೆ ಒಡನಾಟ ಹೊಂದಿರುವ ಸುಮಾ ಅಲ್ಲಿ ಸ್ವಯಂಸೇವಕರಾಗಿದ್ದಾರೆ. ವಿಜಯ ದಶಮಿ ಎಂದರೆ ರಾಮನ ಗೆಲುವನ್ನೂ ಪ್ರತಿನಿಧಿಸುವುದರಿಂದ ಈ ಅಲಂಕಾರ ಮಾಡಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬಹುತೇಕ ದೇಗುಲಗಳಲ್ಲಿ ವಿಷ್ಣುವಿನ ದಶಾವತಾರವನ್ನು ಪ್ರತಿನಿಧಿಸಿ ಪೂಜೆ ಮಾಡಲಾಗುತ್ತಿದೆ’ ಎನ್ನುತ್ತಾರೆ ಅವರು.</p>.<p>ದೇವರ ಮೂರ್ತಿ, ಅಲಂಕಾರಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವ ಸುಮಾ ಅವರು ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣ, ರಾಧೆಯರ ಮಣ್ಣಿನ ಮೂರ್ತಿ ಸಿದ್ಧಪಡಿಸಿ ಪುಣೆ ಹಾಗೂ ವಿಜಯವಾಡದ ದೇಗುಲಗಳಿಗೆ ನೀಡಿದ್ದರು.</p>.<p>ನವರಾತ್ರಿಯ ಎಲ್ಲ ದಿನ ಬೆಳಿಗ್ಗೆ 7ರಿಂದ ರಾತ್ರಿ 9 ಗಂಟೆವರೆಗೆ ಭಕ್ತರಿಗೆ ವಿಷ್ಣುವಿನ ಅವತಾರ ದರ್ಶನಕ್ಕೆ ಅವಕಾಶ ಇರಲಿದೆ.ನರಸಿಂಹನ ಇತರ ಅಲಂಕಾರಗಳನ್ನೂ ನೋಡಬೇಕೇ? ಇಂದಿರಾನಗರದ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಹೋಗಿಬನ್ನಿ.</p>.<p><strong>ಎಲ್ಲಿದೆ ದೇವಾಲಯ:</strong> ಇಂದಿರಾನಗರದ ಅಪ್ಪಾರೆಡ್ಡಿ ಪಾಳ್ಯದಲ್ಲಿನ ಮೂರನೇ ಕ್ರಾಸ್ನಲ್ಲಿರುವ ಇಎಸ್ಐ ಆಸ್ಪತ್ರೆ ಸಮೀಪದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೇವರು ಯಾವ ರೂಪದಲ್ಲಿ, ಹೆಸರಿನಲ್ಲಿದ್ದೇನು? ನಮ್ಮ ನಮ್ಮ ಭಾವಕ್ಕೆ ತಕ್ಕಂತೆ ಆರಾಧಿಸುತ್ತೇವಲ್ಲಾ. ಹಾಗೆಯೇ ಇಲ್ಲೊಂದು ಆರಾಧನೆ ಇದೆ. ಇಲ್ಲಿ ದಸರಾ ಹಬ್ಬದಲ್ಲಿ ಹತ್ತು ದಿನ ಲಕ್ಷ್ಮೀ ನರಸಿಂಹ ಸ್ವಾಮಿ ದೇವರಿಗೆ ಹತ್ತು ಬಗೆಯ ಅಲಂಕಾರ ಮಾಡಿ ಭಕ್ತಿ ಅರ್ಪಿಸುತ್ತಾರೆ ಭಕ್ತರು.</p>.<p>ಇಂದಿರಾನಗರದಲ್ಲಿರುವ ಲಕ್ಷ್ಮೀ ನರಸಿಂಹ ದೇಗುಲದಲ್ಲಿ ನವರಾತ್ರಿಯಲ್ಲಿ ಮೂಲ ವಿಗ್ರಹಕ್ಕೆ ನಿತ್ಯವೂ ವಿಷ್ಣುವಿನ ಒಂದೊಂದು ಅವತಾರದ ಅಲಂಕಾರ ಮಾಡಿ ಪೂಜಿಸಲಾಗುತ್ತಿದೆ. ನರಸಿಂಹಸ್ವಾಮಿ ಜೊತೆಗಿರುವ ಲಕ್ಷ್ಮಿ ದೇವಿಗೂ ವಿಶೇಷ ಪೂಜೆ. ಅವಳೂ ಹತ್ತು ದಿನಗಳ ಕಾಲ ಹತ್ತು ಬಗೆಯಲ್ಲಿ ಅಲಂಕರಿಸಿಕೊಂಡು ಅವತರಿಸುತ್ತಾಳೆ.</p>.<p>ದುರ್ಗೆಯ ಬದಲು ನರಸಿಂಹನಿಗೆ ಅಲಂಕಾರವೇ ಎಂದು ಕೇಳಬಹುದು. ಹಾಗೇನಿಲ್ಲ, ಪುರಾಣದಲ್ಲಿ ಹುಡುಕಿದರೆ ಬ್ರಹ್ಮ, ವಿಷ್ಣು, ಈಶ್ವರ ಈ ಮೂವರೂ ಆದಿ ಮಾಯೆಯ ಸೃಷ್ಟಿಗಳೇ ಅಲ್ಲವೇ? ಹಾಗಿರುವಾಗ ತಾಯಿಯ ಆರಾಧನೆ ದೊಡ್ಡ ಮಟ್ಟದಲ್ಲೇ ನಡೆಯುತ್ತದೆ. ಅದೇ ಹೊತ್ತಿನಲ್ಲಿ ಆಕೆಯ ಸೃಷ್ಟಿಯಾದ ವಿಷ್ಣುವಿಗೂ ಒಂದು ಭಕ್ತಿ ಸಮರ್ಪಣೆ ನಡೆಯುತ್ತದೆ‘ ಎಂಬುದು ಭಕ್ತರ ಸಮಜಾಯಿಷಿ.</p>.<p>‘ದುರ್ಗೆ ಅವತರಿಸಿದ್ದೂ ದುಷ್ಟಶಕ್ತಿಗಳ ನಿಗ್ರಹಕ್ಕಾಗಿ. ವಿಷ್ಣುವಿನ ಹತ್ತು ಅವತಾರಗಳು ದುಷ್ಟ ನಿಗ್ರಹ ಮತ್ತು ಸೃಷ್ಟಿಯ ಪಾಲನೆಯೇ ಆಗಿತ್ತು. ಹಾಗಿರುವಾಗ ಅವನ 10 ಅವತಾರಗಳನ್ನು ಅಲಂಕಾರದ ಮೂಲಕ ಕಣ್ತುಂಬಿಕೊಳ್ಳಲು ಖುಷಿ ಎನಿಸುತ್ತದೆ’ ಎಂದು ನುಡಿಯುತ್ತಾರೆ ಈ ಪರಿಕಲ್ಪನೆಯ ರೂವಾರಿ ಆಯುರ್ವೇದ ವೈದ್ಯೆ ಡಾ.ಸುಮಾ.</p>.<p>ಸುಮಾ ಮತ್ತು ಅವರ ತಂಡ ಪ್ರತಿದಿನ ಈ ಅಲಂಕಾರದಲ್ಲಿ ತೊಡಗುತ್ತದೆ. ಪ್ರತಿ ರಾತ್ರಿ 9 ಗಂಟೆಯಿಂದ ಅಲಂಕಾರ ನಡೆಯುತ್ತದೆ. ಮರುದಿನ ಬೆಳಿಗ್ಗೆ 7ರಿಂದ ಭಕ್ತರು ದರ್ಶನ ಪಡೆಯುತ್ತಾರೆ.</p>.<p>‘ಅರಿಶಿನ, ಲೋಹ, ಚಂದನ, ಹೂವು, ಒಣ ಹಣ್ಣು, ವಿಶೇಷ ಮಣಿಗಳು, ಶ್ರೀಗಂಧ, ಕುಂಕುಮ, ತುಳಸಿ ಹಾಗೂ ಅಗತ್ಯವೆನಿಸಿದ ಅಲಂಕಾರಿಕ ಪರಿಕರಗಳನ್ನು ಬಳಸುತ್ತೇವೆ. ಮೂಲ ವಿಗ್ರಹ ಲಕ್ಷ್ಮೀ ನರಸಿಂಹ ಸ್ವಾಮಿಯದ್ದು. ಅದರ ಸೌಂದರ್ಯ ಹಾಗೂ ದೈವೀಕತೆಗೆ ಅಡ್ಡಿಯಾಗದಂತೆ ಅಲಂಕಾರ ಮಾಡಲಾಗುತ್ತದೆ. ಈ ಅವಧಿಯಲ್ಲಿ ಶುದ್ಧತೆ, ಪಾವಿತತ್ರ್ಯತೆಗೂ ತುಂಬಾ ಮಹತ್ವ ಇದೆ’ ಎಂದರು ಸುಮಾ.</p>.<p>ನವರಾತ್ರಿಯ ಮೊದಲನೇ ದಿನ ಮತ್ಸ್ಯಾವತಾರ, ಎರಡನೇ ದಿನ ಕೂರ್ಮಾವತಾರ, ಮೂರನೇ ದಿನ ವರಾಹ, ನಾಲ್ಕನೇ ದಿನ ನರಸಿಂಹನ ವಿಶೇಷ ಅಲಂಕಾರವನ್ನು ಮಾಡಿದ್ದಾರೆ. ಐದನೇ ದಿನ ವಾಮನ, ನಂತರ ಪರಶುರಾಮ, ರಾಮ, ಬಲರಾಮ, ಕೃಷ್ಣ ಹಾಗೂ ಕಲ್ಕಿಯ ಅವತಾರ ಮಾಡಲು ಅಣಿಯಾಗಿದ್ದಾರೆ.</p>.<p>‘ಎರಡು ದಶಕಗಳಿಂದ ಇಸ್ಕಾನ್ನೊಂದಿಗೆ ಒಡನಾಟ ಹೊಂದಿರುವ ಸುಮಾ ಅಲ್ಲಿ ಸ್ವಯಂಸೇವಕರಾಗಿದ್ದಾರೆ. ವಿಜಯ ದಶಮಿ ಎಂದರೆ ರಾಮನ ಗೆಲುವನ್ನೂ ಪ್ರತಿನಿಧಿಸುವುದರಿಂದ ಈ ಅಲಂಕಾರ ಮಾಡಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬಹುತೇಕ ದೇಗುಲಗಳಲ್ಲಿ ವಿಷ್ಣುವಿನ ದಶಾವತಾರವನ್ನು ಪ್ರತಿನಿಧಿಸಿ ಪೂಜೆ ಮಾಡಲಾಗುತ್ತಿದೆ’ ಎನ್ನುತ್ತಾರೆ ಅವರು.</p>.<p>ದೇವರ ಮೂರ್ತಿ, ಅಲಂಕಾರಗಳಲ್ಲಿ ವಿಶೇಷ ಆಸಕ್ತಿ ಹೊಂದಿರುವ ಸುಮಾ ಅವರು ಕೃಷ್ಣ ಜನ್ಮಾಷ್ಟಮಿಯಂದು ಕೃಷ್ಣ, ರಾಧೆಯರ ಮಣ್ಣಿನ ಮೂರ್ತಿ ಸಿದ್ಧಪಡಿಸಿ ಪುಣೆ ಹಾಗೂ ವಿಜಯವಾಡದ ದೇಗುಲಗಳಿಗೆ ನೀಡಿದ್ದರು.</p>.<p>ನವರಾತ್ರಿಯ ಎಲ್ಲ ದಿನ ಬೆಳಿಗ್ಗೆ 7ರಿಂದ ರಾತ್ರಿ 9 ಗಂಟೆವರೆಗೆ ಭಕ್ತರಿಗೆ ವಿಷ್ಣುವಿನ ಅವತಾರ ದರ್ಶನಕ್ಕೆ ಅವಕಾಶ ಇರಲಿದೆ.ನರಸಿಂಹನ ಇತರ ಅಲಂಕಾರಗಳನ್ನೂ ನೋಡಬೇಕೇ? ಇಂದಿರಾನಗರದ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಹೋಗಿಬನ್ನಿ.</p>.<p><strong>ಎಲ್ಲಿದೆ ದೇವಾಲಯ:</strong> ಇಂದಿರಾನಗರದ ಅಪ್ಪಾರೆಡ್ಡಿ ಪಾಳ್ಯದಲ್ಲಿನ ಮೂರನೇ ಕ್ರಾಸ್ನಲ್ಲಿರುವ ಇಎಸ್ಐ ಆಸ್ಪತ್ರೆ ಸಮೀಪದಲ್ಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>