<p><strong>ಆಯುರ್ವಿತ್ತಂ ಗೃಹಚ್ಛಿದ್ರಂ ಸಾಹಸಂ ಮಂತ್ರಮೌಷಧಮ್ ।</strong></p>.<p><strong>ತಪೋ ದಾನಾವಮಾನೌ ಚ ನವ ಗೋಪ್ಯಾನಿ ಕಾರಯೇತ್ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong>‘ಆಯುಸ್ಸು, ಹಣ, ಮನೆಯಲ್ಲಿಯ ಜಗಳ, ದುಡುಕಿನಿಂದಾದ ಕಾರ್ಯ, ಮಂತ್ರ, ಔಷಧ, ತಪಸ್ಸು, ದಾನ, ಅವಮಾನ – ಈ ಒಂಬತ್ತನ್ನು ರಹಸ್ಯವಾಗಿ ಇಟ್ಟಿರಬೇಕು.’</p>.<p>ನಾವು ಕೆಲವೊಂದನ್ನು ರಹಸ್ಯವಾಗಿರಿಸಿಕೊಳ್ಳಬೇಕು, ಕೆಲವೊಂದನ್ನು ಬಯಲುಮಾಡಬೇಕು. ನಾವು ರಹಸ್ಯವಾಗಿರಿಸಿಕೊಳ್ಳಬೇಕಾದವುಗಳನ್ನು ಸುಭಾಷಿತ ಇಲ್ಲಿ ಹೇಳುತ್ತಿದೆ. ಅಂಥ ಒಂಬತ್ತು ಸಂಗತಿಗಳನ್ನು ಅದು ಪಟ್ಟಿ ಮಾಡಿದೆ.</p>.<p>ಆಯುಸ್ಸನ್ನು ಹೇಳಬಾರದು. ನೀನು ಇಷ್ಟು ದಿನ ಬದುಕುವೆ – ಎಂದು ಯಾರಿಗೂ ಹೇಳಬಾರದು. ಬಹುಶಃ ವೈದ್ಯರು, ಜ್ಯೌತಿಷಿಗಳನ್ನು ಉದ್ದೇಶದಲ್ಲಿಟ್ಟುಕೊಂಡು ಸುಭಾಷಿತ ಇದನ್ನು ಹೇಳುತ್ತಿರಬಹುದು. ಯಾರಿಗೂ ಇನ್ನೊಬ್ಬರ ಆಯುಸ್ಸು ಇಷ್ಟೇ ಎಂದು ಗೊತ್ತಿರಲು ಸಾಧ್ಯವಿಲ್ಲ. ಹೀಗಿರುವಾಗ ಒಬ್ಬರ ಆಯುಸ್ಸಿನ ಬಗ್ಗೆ ಸುಳ್ಳು ಹೇಳುವ ಮೂಲಕ ಅವರನ್ನು ಭೀತಿಗೆ ಒಡ್ಡಬಾರದು.</p>.<p>ನಮ್ಮಲ್ಲಿರುವ ಹಣ ಎಷ್ಟು ಎಂಬುದನ್ನು ರಟ್ಟು ಮಾಡಬಾರದು. ಇಂಥ ಘೋಷಣೆ ನಮಗೆ ಅಪಾಯವನ್ನು ಉಂಟುಮಾಡುವುದು ಖಂಡಿತ. ಮೋಸಗಾರರಿಗೆ, ಕಳ್ಳರಿಗೆ ನಾವಾಗಿ ಆಹ್ವಾನವನ್ನೂ ಕೊಟ್ಟಂತಾಗುತ್ತದೆ.</p>.<p>ಸಂಸಾರದ ಜಗಳವನ್ನು ನಾಲ್ಕು ಜನರಲ್ಲಿ ಹಂಚಿಕೊಂಡರೆ ನಮ್ಮ ಕುಟುಂಬದ ಮರ್ಯಾದೆಯೇ ಹೋಗುತ್ತದೆ. ಇದರಿಂದ ನಮ್ಮ ಬಗ್ಗೆ ತಾತ್ಸಾರವೂ ಮೂಡಬಹುದು. ಮನೆಯಲ್ಲಿ ಒಗ್ಗಟು ಇಲ್ಲ ಎಂಬ ಕಾರಣದಿಂದ ಶತ್ರುಗಳೂ ಅವಕಾಶವನ್ನು ಉಪಯೋಗಿಸಿಕೊಂಡು ನಮಗೆ ಕೇಡು ಬಗೆಯಲು ಸಿದ್ಧರಾಗಬಹುದು.</p>.<p>ನಮ್ಮ ದುಡುಕಿನಿಂದಾದ ಕಾರ್ಯವನ್ನೂ ಇನ್ನೊಬ್ಬರಲ್ಲಿ ಹಂಚಿಕೊಳ್ಳಬಾರದು. ಏಕೆಂದರೆ ನಮ್ಮ ಮಾನಸಿಕ ಸ್ಥಿತಿಯ ಬಗ್ಗೆಯೇ ಇದರಿಂದ ಜನರಲ್ಲಿ ಸಂಶಯ ಮೂಡಬಹುದು.</p>.<p>ಮಂತ್ರವನ್ನು ರಹಸ್ಯವಾಗಿರಿಸಬೇಕು ಎಂಬ ನಂಬಿಕೆ ಇದೆ. ಮಂತ್ರ ಎಂದರೆ ನಮ್ಮ ಆಲೋಚನೆ, ತಂತ್ರ ಎಂದೂ ಅರ್ಥಮಾಡಬಹುದು. ನಾವು ಯಾವುದಾದರೊಂದು ಕೆಲಸಕ್ಕೆ ಮಾಡಿಕೊಂಡ ಸಿದ್ಧತೆಯನ್ನು ಇತರರಿಗೆ ಹೇಳಿದರೆ ಅವರು ಆ ಕೆಲಸಕ್ಕೆ ವಿಘ್ನಗಳನ್ನು ಸೃಷ್ಟಿಸುವ ಅಪಾಯವೂ ಇರುತ್ತದೆ.</p>.<p>ಔಷಧವನ್ನು ಹೇಗೆ ಬಳಸಬೇಕೋ ಹಾಗೆಯೋ ಬಳಸಬೇಕು; ಅದಕ್ಕೆ ತಕ್ಕ ತಿಳಿವಳಿಕೆ ಬೇಕು. ಹೀಗಾಗಿ ಔಷಧದ ಗುಟ್ಟನ್ನು ಎಲ್ಲರಿಗೂ ಹಂಚಬಾರದು. ಹೀಗೆ ಹಂಚುವುದರಿಂದ ಜನರಿಗೆ ಅಪಾಯವೇ ಸಂಭವಿಸಬಹುದು.</p>.<p>ತಪಸ್ಸು ನಾವು ಮಾಡುವ ಸಾಧನೆ. ನಮ್ಮ ಸಾಧನೆಯನ್ನು ನಾವೇ ಹೇಳಿಕೊಳ್ಳಬಾರದು. ಇದರಿಂದ ನಮ್ಮ ಬಗ್ಗೆ ಜನರಿಗೆ ತಿರಸ್ಕಾರ ಹುಟ್ಟಬಹುದು; ನಾವು ಅಹಂಕಾರಿಗಳೆಂಬ ಅಪವಾದಕ್ಕೂ ತುತ್ತಾಗಬಹುದು.</p>.<p>ನಾವು ಇತರರಿಗೆ ಮಾಡಿರುವ ದಾನದ ಬಗ್ಗೆಯೂ ಜನರಿಗೆ ಹೇಳಬಾರದು. ದಾನ ತೆಗೆದುಕೊಂಡವನ ಆತ್ಮಾಭಿಮಾನಕ್ಕೂ ಇದು ಭಂಗ ತರಬಹುದು. ಮಾತ್ರವಲ್ಲ, ನಾವು ನಮ್ಮ ಹೆಚ್ಚುಗಾರಿಕೆಯನ್ನು ಪ್ರದರ್ಶಿಸುತ್ತಿದ್ದೇವೆ ಎಂಬ ಲೋಕಾಪವಾದವೂ ಇದರಿಂದ ಬರಬಹುದು. ಪುಣ್ಯವೂ ನಶಿಸುತ್ತದೆ ಎಂಬ ನಂಬಿಕೆ ಇದೆ.</p>.<p>ಇನ್ನು ತನಗಾದ ಅವಮಾನ. ಇದನ್ನು ಯಾರು ತಾನೆ ಹೇಳಿಕೊಂಡಾರು? ಹೇಳಿಕೊಂಡರೆ ಜನರ ದೃಷ್ಟಿಯಲ್ಲಿ ನಾವು ಸಣ್ಣವರಾಗುತ್ತೇವೆ. ನಾವು ಮಾಡುವ ಎಷ್ಟೋ ಒಳ್ಳೆಯ ಕೆಲಸಗಳಿಗೆ ಇದರಿಂದ ಅಡ್ಡಿಯಾಗುವ ಸಾಧ್ಯತೆಗಳೂ ಎದುರಾಗುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಯುರ್ವಿತ್ತಂ ಗೃಹಚ್ಛಿದ್ರಂ ಸಾಹಸಂ ಮಂತ್ರಮೌಷಧಮ್ ।</strong></p>.<p><strong>ತಪೋ ದಾನಾವಮಾನೌ ಚ ನವ ಗೋಪ್ಯಾನಿ ಕಾರಯೇತ್ ।।</strong></p>.<p><strong>ಇದರ ತಾತ್ಪರ್ಯ ಹೀಗೆ:</strong>‘ಆಯುಸ್ಸು, ಹಣ, ಮನೆಯಲ್ಲಿಯ ಜಗಳ, ದುಡುಕಿನಿಂದಾದ ಕಾರ್ಯ, ಮಂತ್ರ, ಔಷಧ, ತಪಸ್ಸು, ದಾನ, ಅವಮಾನ – ಈ ಒಂಬತ್ತನ್ನು ರಹಸ್ಯವಾಗಿ ಇಟ್ಟಿರಬೇಕು.’</p>.<p>ನಾವು ಕೆಲವೊಂದನ್ನು ರಹಸ್ಯವಾಗಿರಿಸಿಕೊಳ್ಳಬೇಕು, ಕೆಲವೊಂದನ್ನು ಬಯಲುಮಾಡಬೇಕು. ನಾವು ರಹಸ್ಯವಾಗಿರಿಸಿಕೊಳ್ಳಬೇಕಾದವುಗಳನ್ನು ಸುಭಾಷಿತ ಇಲ್ಲಿ ಹೇಳುತ್ತಿದೆ. ಅಂಥ ಒಂಬತ್ತು ಸಂಗತಿಗಳನ್ನು ಅದು ಪಟ್ಟಿ ಮಾಡಿದೆ.</p>.<p>ಆಯುಸ್ಸನ್ನು ಹೇಳಬಾರದು. ನೀನು ಇಷ್ಟು ದಿನ ಬದುಕುವೆ – ಎಂದು ಯಾರಿಗೂ ಹೇಳಬಾರದು. ಬಹುಶಃ ವೈದ್ಯರು, ಜ್ಯೌತಿಷಿಗಳನ್ನು ಉದ್ದೇಶದಲ್ಲಿಟ್ಟುಕೊಂಡು ಸುಭಾಷಿತ ಇದನ್ನು ಹೇಳುತ್ತಿರಬಹುದು. ಯಾರಿಗೂ ಇನ್ನೊಬ್ಬರ ಆಯುಸ್ಸು ಇಷ್ಟೇ ಎಂದು ಗೊತ್ತಿರಲು ಸಾಧ್ಯವಿಲ್ಲ. ಹೀಗಿರುವಾಗ ಒಬ್ಬರ ಆಯುಸ್ಸಿನ ಬಗ್ಗೆ ಸುಳ್ಳು ಹೇಳುವ ಮೂಲಕ ಅವರನ್ನು ಭೀತಿಗೆ ಒಡ್ಡಬಾರದು.</p>.<p>ನಮ್ಮಲ್ಲಿರುವ ಹಣ ಎಷ್ಟು ಎಂಬುದನ್ನು ರಟ್ಟು ಮಾಡಬಾರದು. ಇಂಥ ಘೋಷಣೆ ನಮಗೆ ಅಪಾಯವನ್ನು ಉಂಟುಮಾಡುವುದು ಖಂಡಿತ. ಮೋಸಗಾರರಿಗೆ, ಕಳ್ಳರಿಗೆ ನಾವಾಗಿ ಆಹ್ವಾನವನ್ನೂ ಕೊಟ್ಟಂತಾಗುತ್ತದೆ.</p>.<p>ಸಂಸಾರದ ಜಗಳವನ್ನು ನಾಲ್ಕು ಜನರಲ್ಲಿ ಹಂಚಿಕೊಂಡರೆ ನಮ್ಮ ಕುಟುಂಬದ ಮರ್ಯಾದೆಯೇ ಹೋಗುತ್ತದೆ. ಇದರಿಂದ ನಮ್ಮ ಬಗ್ಗೆ ತಾತ್ಸಾರವೂ ಮೂಡಬಹುದು. ಮನೆಯಲ್ಲಿ ಒಗ್ಗಟು ಇಲ್ಲ ಎಂಬ ಕಾರಣದಿಂದ ಶತ್ರುಗಳೂ ಅವಕಾಶವನ್ನು ಉಪಯೋಗಿಸಿಕೊಂಡು ನಮಗೆ ಕೇಡು ಬಗೆಯಲು ಸಿದ್ಧರಾಗಬಹುದು.</p>.<p>ನಮ್ಮ ದುಡುಕಿನಿಂದಾದ ಕಾರ್ಯವನ್ನೂ ಇನ್ನೊಬ್ಬರಲ್ಲಿ ಹಂಚಿಕೊಳ್ಳಬಾರದು. ಏಕೆಂದರೆ ನಮ್ಮ ಮಾನಸಿಕ ಸ್ಥಿತಿಯ ಬಗ್ಗೆಯೇ ಇದರಿಂದ ಜನರಲ್ಲಿ ಸಂಶಯ ಮೂಡಬಹುದು.</p>.<p>ಮಂತ್ರವನ್ನು ರಹಸ್ಯವಾಗಿರಿಸಬೇಕು ಎಂಬ ನಂಬಿಕೆ ಇದೆ. ಮಂತ್ರ ಎಂದರೆ ನಮ್ಮ ಆಲೋಚನೆ, ತಂತ್ರ ಎಂದೂ ಅರ್ಥಮಾಡಬಹುದು. ನಾವು ಯಾವುದಾದರೊಂದು ಕೆಲಸಕ್ಕೆ ಮಾಡಿಕೊಂಡ ಸಿದ್ಧತೆಯನ್ನು ಇತರರಿಗೆ ಹೇಳಿದರೆ ಅವರು ಆ ಕೆಲಸಕ್ಕೆ ವಿಘ್ನಗಳನ್ನು ಸೃಷ್ಟಿಸುವ ಅಪಾಯವೂ ಇರುತ್ತದೆ.</p>.<p>ಔಷಧವನ್ನು ಹೇಗೆ ಬಳಸಬೇಕೋ ಹಾಗೆಯೋ ಬಳಸಬೇಕು; ಅದಕ್ಕೆ ತಕ್ಕ ತಿಳಿವಳಿಕೆ ಬೇಕು. ಹೀಗಾಗಿ ಔಷಧದ ಗುಟ್ಟನ್ನು ಎಲ್ಲರಿಗೂ ಹಂಚಬಾರದು. ಹೀಗೆ ಹಂಚುವುದರಿಂದ ಜನರಿಗೆ ಅಪಾಯವೇ ಸಂಭವಿಸಬಹುದು.</p>.<p>ತಪಸ್ಸು ನಾವು ಮಾಡುವ ಸಾಧನೆ. ನಮ್ಮ ಸಾಧನೆಯನ್ನು ನಾವೇ ಹೇಳಿಕೊಳ್ಳಬಾರದು. ಇದರಿಂದ ನಮ್ಮ ಬಗ್ಗೆ ಜನರಿಗೆ ತಿರಸ್ಕಾರ ಹುಟ್ಟಬಹುದು; ನಾವು ಅಹಂಕಾರಿಗಳೆಂಬ ಅಪವಾದಕ್ಕೂ ತುತ್ತಾಗಬಹುದು.</p>.<p>ನಾವು ಇತರರಿಗೆ ಮಾಡಿರುವ ದಾನದ ಬಗ್ಗೆಯೂ ಜನರಿಗೆ ಹೇಳಬಾರದು. ದಾನ ತೆಗೆದುಕೊಂಡವನ ಆತ್ಮಾಭಿಮಾನಕ್ಕೂ ಇದು ಭಂಗ ತರಬಹುದು. ಮಾತ್ರವಲ್ಲ, ನಾವು ನಮ್ಮ ಹೆಚ್ಚುಗಾರಿಕೆಯನ್ನು ಪ್ರದರ್ಶಿಸುತ್ತಿದ್ದೇವೆ ಎಂಬ ಲೋಕಾಪವಾದವೂ ಇದರಿಂದ ಬರಬಹುದು. ಪುಣ್ಯವೂ ನಶಿಸುತ್ತದೆ ಎಂಬ ನಂಬಿಕೆ ಇದೆ.</p>.<p>ಇನ್ನು ತನಗಾದ ಅವಮಾನ. ಇದನ್ನು ಯಾರು ತಾನೆ ಹೇಳಿಕೊಂಡಾರು? ಹೇಳಿಕೊಂಡರೆ ಜನರ ದೃಷ್ಟಿಯಲ್ಲಿ ನಾವು ಸಣ್ಣವರಾಗುತ್ತೇವೆ. ನಾವು ಮಾಡುವ ಎಷ್ಟೋ ಒಳ್ಳೆಯ ಕೆಲಸಗಳಿಗೆ ಇದರಿಂದ ಅಡ್ಡಿಯಾಗುವ ಸಾಧ್ಯತೆಗಳೂ ಎದುರಾಗುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>