<p>ಹರಿಹರ ತಾಲ್ಲೂಕಿನ ಮಲೇಬೆನ್ನೂರು ಹೋಬಳಿ ವ್ಯಾಪ್ತಿಯ ತುಂಗಭದ್ರಾ ನದಿದಂಡೆಯ ಗ್ರಾಮ ಸುಕ್ಷೇತ್ರ ಉಕ್ಕಡಗಾತ್ರಿಯು ಪವಾಡಪುರುಷ, ಭವರೋಗ ಹರವೈದ್ಯನೆಂದೇ ಖ್ಯಾತಿ ಪಡೆದ ಕರಿಬಸವೇಶ್ವರ ಸ್ವಾಮಿ ಅಜ್ಜಯ್ಯನ ಗದ್ದುಗೆಯ ನೆಲೆವೀಡು.</p>.<p>ಪ್ರತಿ ವರ್ಷ ಮಾಘ ಬಹುಳ ಅಮಾವಾಸ್ಯೆಯಿಂದ ಫಾಲ್ಗುಣ ಶುದ್ಧ ಷಷ್ಠಿ ತನಕ ಒಂದು ವಾರ ಕಾಲ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಮಹಾರಥೋತ್ಸವ, ಪಲ್ಲಕ್ಕಿ ಉತ್ಸವ ಬೆಳ್ಳಿ ರಥೋತ್ಸವ ಪ್ರಸಿದ್ಧಿಯಾಗಿದ್ದು, ರಾಜ್ಯದ ವಿವಿಧಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ವರ್ಷ ಫೆ. 23ರಿಂದ ಮಾರ್ಚ್ 1ರ ತನಕ ಉತ್ಸವ ಆಯೋಜಿಸಲಾಗಿದ್ದು, ಫೆ. 24ರಂದು ಮಹಾರಥೋತ್ಸವ ಜರುಗಲಿದೆ.</p>.<p><strong>ಪವಾಡಪುರುಷ: </strong>ಮಾನಸಿಕ ರೋಗಿಗಳು, ಅಸ್ವಸ್ಥರು, ರೋಗರುಜಿನಗಳಿಂದ ಬಳಲಿ ಚಿಕಿತ್ಸೆಯಿಂದ ಗುಣಮುಖರಾಗದವರು ತುಂಗಭದ್ರೆಯಲ್ಲಿ ಸ್ನಾನಮಾಡಿ ಕ್ಷೇತ್ರಾಧಿಪತಿ ವಿಭೂತಿಪುರುಷ ಅಜ್ಜಯ್ಯನ ದರ್ಶನದಿಂದ ಪರಿಹಾರ ಕಂಡಿದ್ದಾರೆ ಎನ್ನುವವರಿದ್ದಾರೆ.ಕೆಲವರು ಗದ್ದುಗೆಯಲ್ಲಿ ಸೇವೆ ಮಾಡಿ ರೋಗದಿಂದ ಮುಕ್ತಿ ಪಡೆದು ವೈದ್ಯಕೀಯ ಶಾಸ್ತ್ರಕ್ಕೆ ಸವಾಲಾಗಿರುವುದು ಕ್ಷೇತ್ರದ ವಿಶೇಷತೆ ಎಂದು ಪ್ರತೀತಿ.</p>.<p>ಜಾತ್ರೆ ವೇಳೆ ಪ್ರತಿ ನಿತ್ಯ ಸಂಜೆ ನಡೆಯುವ ಸಾಮೂಹಿಕ ಭಜನೆ ಭಕ್ತ ಸಮುದಾಯದಲ್ಲಿ ಮಾನಸಿಕ ನೆಮ್ಮದಿ ಮೂಡಿಸುತ್ತಿದೆ.</p>.<p>ಈ ಕ್ಷೇತ್ರಕ್ಕೆ ಬೆಂಗಳೂರು ಸೇರಿ ಜಿಲ್ಲಾ ಕೇಂದ್ರ ದಾವಣಗೆರೆ, ಹರಿಹರ, ಹೊನ್ನಾಳಿ, ರಾಣೆಬೆನ್ನೂರುನಿಂದ ರಾಜ್ಯ ಸಾರಿಗೆ ಸಂಸ್ಥೆಯ ಹಾಗೂ ಖಾಸಗಿ ಬಸ್ ಸೌಲಭ್ಯವಿದೆ. ಭಕ್ತರಿಗೆ ಉಳಿದುಕೊಳ್ಳಲು ಉಚಿತ ವಸತಿಗೃಹಗಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹರಿಹರ ತಾಲ್ಲೂಕಿನ ಮಲೇಬೆನ್ನೂರು ಹೋಬಳಿ ವ್ಯಾಪ್ತಿಯ ತುಂಗಭದ್ರಾ ನದಿದಂಡೆಯ ಗ್ರಾಮ ಸುಕ್ಷೇತ್ರ ಉಕ್ಕಡಗಾತ್ರಿಯು ಪವಾಡಪುರುಷ, ಭವರೋಗ ಹರವೈದ್ಯನೆಂದೇ ಖ್ಯಾತಿ ಪಡೆದ ಕರಿಬಸವೇಶ್ವರ ಸ್ವಾಮಿ ಅಜ್ಜಯ್ಯನ ಗದ್ದುಗೆಯ ನೆಲೆವೀಡು.</p>.<p>ಪ್ರತಿ ವರ್ಷ ಮಾಘ ಬಹುಳ ಅಮಾವಾಸ್ಯೆಯಿಂದ ಫಾಲ್ಗುಣ ಶುದ್ಧ ಷಷ್ಠಿ ತನಕ ಒಂದು ವಾರ ಕಾಲ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಮಹಾರಥೋತ್ಸವ, ಪಲ್ಲಕ್ಕಿ ಉತ್ಸವ ಬೆಳ್ಳಿ ರಥೋತ್ಸವ ಪ್ರಸಿದ್ಧಿಯಾಗಿದ್ದು, ರಾಜ್ಯದ ವಿವಿಧಡೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ವರ್ಷ ಫೆ. 23ರಿಂದ ಮಾರ್ಚ್ 1ರ ತನಕ ಉತ್ಸವ ಆಯೋಜಿಸಲಾಗಿದ್ದು, ಫೆ. 24ರಂದು ಮಹಾರಥೋತ್ಸವ ಜರುಗಲಿದೆ.</p>.<p><strong>ಪವಾಡಪುರುಷ: </strong>ಮಾನಸಿಕ ರೋಗಿಗಳು, ಅಸ್ವಸ್ಥರು, ರೋಗರುಜಿನಗಳಿಂದ ಬಳಲಿ ಚಿಕಿತ್ಸೆಯಿಂದ ಗುಣಮುಖರಾಗದವರು ತುಂಗಭದ್ರೆಯಲ್ಲಿ ಸ್ನಾನಮಾಡಿ ಕ್ಷೇತ್ರಾಧಿಪತಿ ವಿಭೂತಿಪುರುಷ ಅಜ್ಜಯ್ಯನ ದರ್ಶನದಿಂದ ಪರಿಹಾರ ಕಂಡಿದ್ದಾರೆ ಎನ್ನುವವರಿದ್ದಾರೆ.ಕೆಲವರು ಗದ್ದುಗೆಯಲ್ಲಿ ಸೇವೆ ಮಾಡಿ ರೋಗದಿಂದ ಮುಕ್ತಿ ಪಡೆದು ವೈದ್ಯಕೀಯ ಶಾಸ್ತ್ರಕ್ಕೆ ಸವಾಲಾಗಿರುವುದು ಕ್ಷೇತ್ರದ ವಿಶೇಷತೆ ಎಂದು ಪ್ರತೀತಿ.</p>.<p>ಜಾತ್ರೆ ವೇಳೆ ಪ್ರತಿ ನಿತ್ಯ ಸಂಜೆ ನಡೆಯುವ ಸಾಮೂಹಿಕ ಭಜನೆ ಭಕ್ತ ಸಮುದಾಯದಲ್ಲಿ ಮಾನಸಿಕ ನೆಮ್ಮದಿ ಮೂಡಿಸುತ್ತಿದೆ.</p>.<p>ಈ ಕ್ಷೇತ್ರಕ್ಕೆ ಬೆಂಗಳೂರು ಸೇರಿ ಜಿಲ್ಲಾ ಕೇಂದ್ರ ದಾವಣಗೆರೆ, ಹರಿಹರ, ಹೊನ್ನಾಳಿ, ರಾಣೆಬೆನ್ನೂರುನಿಂದ ರಾಜ್ಯ ಸಾರಿಗೆ ಸಂಸ್ಥೆಯ ಹಾಗೂ ಖಾಸಗಿ ಬಸ್ ಸೌಲಭ್ಯವಿದೆ. ಭಕ್ತರಿಗೆ ಉಳಿದುಕೊಳ್ಳಲು ಉಚಿತ ವಸತಿಗೃಹಗಳಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>