<p class="Subhead"><strong>ಬೆಂಗಳೂರು: </strong>ಮತ್ತಿಕೆರೆ ವಾರ್ಡ್ನಲ್ಲಿನ ಕಾವೇರಿ ನೀರು ಪೂರೈಕೆಯ ಕೊಳವೆಗಳಲ್ಲಿ ಗುರುವಾರ ಕೊಳಚೆ ಮಿಶ್ರಿತ ನೀರು ಸರಬರಾಜು ಆಯಿತು. ಇದರಿಂದ ಜನ ಜಲಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.</p>.<p>ರಾಮಯ್ಯ ಬಸ್ ನಿಲ್ದಾಣದಿಂದ ನೇತಾಜಿ ವೃತ್ತದ ವರೆಗಿನ ನೂರಾರು ಮನೆಗಳಿಗೆ ಕೊಳಚೆ ಮಿಶ್ರಿತ ನೀರು ಹರಿಯಿತು. ಆ ನೀರಿನಿಂದ ಗಬ್ಬು ವಾಸನೆಯೂ ಬರುತ್ತಿತ್ತು.</p>.<p>‘ಆರು ತಿಂಗಳುಗಳಿಂದಲೂ ಸ್ವಲ್ಪ ಮಟ್ಟಿನ ಕಲುಷಿತ ನೀರು ಮಿಶ್ರಣಗೊಂಡು ಸರಬರಾಜು ಆಗುತ್ತಿತ್ತು. ಆ ಬಗ್ಗೆ ಪಾಲಿಕೆಯ ಸ್ಥಳೀಯ ಸದಸ್ಯರು ಹಾಗೂ ಜಲಮಂಡಳಿಯ ಅಧಿಕಾರಗಳ ಗಮನ ಸೆಳೆದಿದ್ದೆವು. ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಮೊನ್ನೆಯ ಮಳೆಗೆ ಮೂರ್ನಾಲ್ಕು ಮ್ಯಾನ್ಹೋಲ್ಗಳು ಕುಸಿದು ಕಾವೇರಿ ನೀರಿಗೆ ಚರಂಡಿ ನೀರು ಸೇರುತ್ತಿದೆ’ ಎಂದು ಸ್ಥಳೀಯರಾದ ನಾಗರಾಜ್ ಹೇಳಿದರು.</p>.<p>ಸ್ಥಳೀಯ ನಿವಾಸಿ ಮಂಜುನಾಥ್,‘ಇಷ್ಟು ದಿನ ಕಡಿಮೆ ಕಲುಷಿತ ನೀರು ಬರುತ್ತಿತ್ತು. ಗುರುವಾರವಂತೂ ಕೆಂಗೇರಿ ಮೋರಿಯ ನೀರಿನಂತಹ ನೀರೇ ಈ ಪ್ರದೇಶದ ಸುಮಾರು 3,000 ಮನೆಗಳಿಗೆ ಬಂತು. ಅದರಿಂದ ವಾಸನೆಯೂ ಬರುತ್ತಿತ್ತು. ನನ್ನ ನಾಲ್ವರು ಸ್ನೇಹಿತರು ಗೊತ್ತಾಗದೆ, ಅದೇ ನೀರನ್ನು ಕುಡಿದಿದ್ದಾರೆ. ಅವರಿಗೆ ಗಂಟಲು ನೋವು ಶುರುವಾಗಿದೆ. ಇದಕ್ಕೆಲ್ಲ ಯಾರು ಹೊಣೆ’ ಎಂದು ಕಿಡಿಕಾರಿದರು.</p>.<p>‘ಈ ಸಮಸ್ಯೆಯನ್ನು ಜಲಮಂಡಳಿಯ ಅಧಿಕಾರಿಗಳ ಗಮನಕ್ಕೆ ತರುತ್ತಲೇ ಇದ್ದೇವೆ. ಅವರಂತೂ ಸರಿಯಾಗಿ ಸ್ಪಂದಿಸುತ್ತಿಲ್ಲ. ದೂರು ನೀಡಲು ಹೋದವರಿಗೇನೇ ಅವಾಚ್ಯ ಶಬ್ದಗಳಿಂದ ಬೈಯ್ದು ಕಳಿಸುತ್ತಾರೆ’ ಎಂದು ಆರೋಪಿಸಿದರು.</p>.<p>‘ನೀರಿಲ್ಲದೆ ಅಡುಗೆ, ಸ್ನಾನಕ್ಕೂ ತೊಂದರೆಯಾಯಿತು. ಪಕ್ಕದ ವಾರ್ಡ್ಗೆ ಹೋಗಿ ಕ್ಯಾನ್ಗಳಲ್ಲಿ ನೀರು ತುಂಬಿಸಿಕೊಂಡು ಬಂದೆವು’ ಎಂದು ಸ್ಥಳೀಯರಾದ ಮಂಜುಳಾ ತಿಳಿಸಿದರು.</p>.<p><strong>‘ರಾಜಕಾಲುವೆ ನೀರು ಸೇರುತ್ತಿತ್ತು’</strong></p>.<p>‘ರಾಜಕಾಲುವೆ ಪಕ್ಕವೇ ಕಾವೇರಿ ನೀರಿನ ಕೊಳವೆ ಹಾದುಹೋಗಿದೆ. ಎರಡು ಕಡೆ ಕೊಳವೆ ಒಡೆದಿದ್ದರಿಂದ ಕಾಲುವೆ ನೀರು ಮಿಶ್ರಣಗೊಂಡು ನಾಲ್ಕೈದು ಅಡ್ಡರಸ್ತೆಗಳ ಕೆಲವು ಮನೆಗಳಿಗೆ ಮಾತ್ರ ಸರಬರಾಜು ಆಗಿತ್ತು’ ಎಂದು ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಜಿ.ಪುರುಷೋತ್ತಮ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಕಲುಷಿತ ನೀರು ಸೇರುತ್ತಿದ್ದ ಪಾಯಿಂಟ್ಗಳನ್ನು ನಮ್ಮ ಸಿಬ್ಬಂದಿ ಬುಧವಾರ ಬೆಳಿಗ್ಗೆಯಿಂದ ತುಂಬಾ ಕಷ್ಟಪಟ್ಟು ಗುರುವಾರ ಮಧ್ಯಾಹ್ನ ಗುರುತಿಸಿದ್ದಾರೆ. ಅದನ್ನು ಶುಕ್ರವಾರ ಸಂಜೆಯೊತ್ತಿಗೆ ಸರಿಪಡಿಸುತ್ತೇವೆ. ಶನಿವಾರದಂದು ಕೊಳವೆಮಾರ್ಗವನ್ನು ಶುಚಿಗೊಳಿಸಿ, ಎಂದಿನಂತೆ ಶುದ್ಧ ನೀರನ್ನು ಹರಿಸುತ್ತೇವೆ’ ಎಂದು ಅವರು ಹೇಳಿದರು.</p>.<p><strong>ಜಲಮಂಡಳಿ ನೌಕರರಿಂದ ಜೂನ್ 3ರಂದು ಪ್ರತಿಭಟನೆ</strong></p>.<p>ಬೆಂಗಳೂರು: ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಜಲಮಂಡಳಿಯ ನೌಕರರ ಸಂಘವು ಜೂನ್ 3ರಂದು ಪ್ರತಿಭಟನೆ ಮಾಡಲು ನಿರ್ಧರಿಸಿದೆ.</p>.<p>‘ಮಂಡಳಿಯಲ್ಲಿ 3,500 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 1,944 ಸ್ಥಾನಗಳು ಮಾತ್ರ ಭರ್ತಿಯಾಗಿವೆ. ಇದರಿಂದ ನೌಕರರು ಒತ್ತಡದ ನಡುವೆ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ 500 ಸಿಬ್ಬಂದಿ ನಿವೃತ್ತರಾಗುತ್ತಾರೆ. ಇದರಿಂದ ಮತ್ತಷ್ಟು ಒತ್ತಡ ಹೆಚ್ಚಲಿದೆ’ ಎಂದು ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.</p>.<p>‘ಸಿಬ್ಬಂದಿ ಕೊರತೆಯ ನೆಪದಲ್ಲಿ ಮಂಡಳಿಯ ಬಹುತೇಕ ವಿಭಾಗಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಖಾಸಗಿ ಕಂಪನಿಗಳಿಗೆ ದೀರ್ಘಕಾಲಿಕ ಹೊರಗುತ್ತಿಗೆ ನೀಡುವುದನ್ನು ರದ್ದುಪಡಿಸಬೇಕು. 2006ರ ನಂತರ ನೇಮಕಾತಿ ಹೊಂದಿರುವ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮುಂದುವರೆಸಬೇಕು’ ಎಂದು ಒತ್ತಾಯಿಸಿದೆ.</p>.<p>‘2018ರ ಜುಲೈನಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಬೇಕು. ಜತೆಗೆ ಪಿಂಚಣಿ ನಿಧಿ ಯೋಜನೆ ಪ್ರಾರಂಭಿಸಬೇಕು’ ಎಂಬ ಬೇಡಿಕೆ ಮಂಡಿಸಿದೆ.</p>.<p><strong><strong>ಫೋನ್–ಇನ್ ನಾಳೆ</strong></strong></p>.<p>ಜಲಮಂಡಳಿಯು ಮೇ 4ರಂದು ಬೆಳಿಗ್ಗೆ 9ರಿಂದ 10.30ರ ವರೆಗೆ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದೆ.</p>.<p>ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ, ಮೀಟರ್ ರೀಡಿಂಗ್, ನೀರಿನ ಬಿಲ್ಗಳ ಕುರಿತ ಕುಂದುಕೊರತೆಗಳನ್ನು ಮಂಡಳಿಯ ಅಧ್ಯಕ್ಷರ ಗಮನಕ್ಕೆ ತರಬಹುದಾಗಿದೆ.</p>.<p>ನೀರಿನ ಸಂಪರ್ಕ ಹೊಂದಿರುವ ಗ್ರಾಹಕರು ಆರ್.ಆರ್.ಸಂಖ್ಯೆಯನ್ನು ತಿಳಿಸಿ ದೂರನ್ನು ನೀಡಲು ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.</p>.<p>ಸಂಪರ್ಕ: 080 22945119</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Subhead"><strong>ಬೆಂಗಳೂರು: </strong>ಮತ್ತಿಕೆರೆ ವಾರ್ಡ್ನಲ್ಲಿನ ಕಾವೇರಿ ನೀರು ಪೂರೈಕೆಯ ಕೊಳವೆಗಳಲ್ಲಿ ಗುರುವಾರ ಕೊಳಚೆ ಮಿಶ್ರಿತ ನೀರು ಸರಬರಾಜು ಆಯಿತು. ಇದರಿಂದ ಜನ ಜಲಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.</p>.<p>ರಾಮಯ್ಯ ಬಸ್ ನಿಲ್ದಾಣದಿಂದ ನೇತಾಜಿ ವೃತ್ತದ ವರೆಗಿನ ನೂರಾರು ಮನೆಗಳಿಗೆ ಕೊಳಚೆ ಮಿಶ್ರಿತ ನೀರು ಹರಿಯಿತು. ಆ ನೀರಿನಿಂದ ಗಬ್ಬು ವಾಸನೆಯೂ ಬರುತ್ತಿತ್ತು.</p>.<p>‘ಆರು ತಿಂಗಳುಗಳಿಂದಲೂ ಸ್ವಲ್ಪ ಮಟ್ಟಿನ ಕಲುಷಿತ ನೀರು ಮಿಶ್ರಣಗೊಂಡು ಸರಬರಾಜು ಆಗುತ್ತಿತ್ತು. ಆ ಬಗ್ಗೆ ಪಾಲಿಕೆಯ ಸ್ಥಳೀಯ ಸದಸ್ಯರು ಹಾಗೂ ಜಲಮಂಡಳಿಯ ಅಧಿಕಾರಗಳ ಗಮನ ಸೆಳೆದಿದ್ದೆವು. ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಮೊನ್ನೆಯ ಮಳೆಗೆ ಮೂರ್ನಾಲ್ಕು ಮ್ಯಾನ್ಹೋಲ್ಗಳು ಕುಸಿದು ಕಾವೇರಿ ನೀರಿಗೆ ಚರಂಡಿ ನೀರು ಸೇರುತ್ತಿದೆ’ ಎಂದು ಸ್ಥಳೀಯರಾದ ನಾಗರಾಜ್ ಹೇಳಿದರು.</p>.<p>ಸ್ಥಳೀಯ ನಿವಾಸಿ ಮಂಜುನಾಥ್,‘ಇಷ್ಟು ದಿನ ಕಡಿಮೆ ಕಲುಷಿತ ನೀರು ಬರುತ್ತಿತ್ತು. ಗುರುವಾರವಂತೂ ಕೆಂಗೇರಿ ಮೋರಿಯ ನೀರಿನಂತಹ ನೀರೇ ಈ ಪ್ರದೇಶದ ಸುಮಾರು 3,000 ಮನೆಗಳಿಗೆ ಬಂತು. ಅದರಿಂದ ವಾಸನೆಯೂ ಬರುತ್ತಿತ್ತು. ನನ್ನ ನಾಲ್ವರು ಸ್ನೇಹಿತರು ಗೊತ್ತಾಗದೆ, ಅದೇ ನೀರನ್ನು ಕುಡಿದಿದ್ದಾರೆ. ಅವರಿಗೆ ಗಂಟಲು ನೋವು ಶುರುವಾಗಿದೆ. ಇದಕ್ಕೆಲ್ಲ ಯಾರು ಹೊಣೆ’ ಎಂದು ಕಿಡಿಕಾರಿದರು.</p>.<p>‘ಈ ಸಮಸ್ಯೆಯನ್ನು ಜಲಮಂಡಳಿಯ ಅಧಿಕಾರಿಗಳ ಗಮನಕ್ಕೆ ತರುತ್ತಲೇ ಇದ್ದೇವೆ. ಅವರಂತೂ ಸರಿಯಾಗಿ ಸ್ಪಂದಿಸುತ್ತಿಲ್ಲ. ದೂರು ನೀಡಲು ಹೋದವರಿಗೇನೇ ಅವಾಚ್ಯ ಶಬ್ದಗಳಿಂದ ಬೈಯ್ದು ಕಳಿಸುತ್ತಾರೆ’ ಎಂದು ಆರೋಪಿಸಿದರು.</p>.<p>‘ನೀರಿಲ್ಲದೆ ಅಡುಗೆ, ಸ್ನಾನಕ್ಕೂ ತೊಂದರೆಯಾಯಿತು. ಪಕ್ಕದ ವಾರ್ಡ್ಗೆ ಹೋಗಿ ಕ್ಯಾನ್ಗಳಲ್ಲಿ ನೀರು ತುಂಬಿಸಿಕೊಂಡು ಬಂದೆವು’ ಎಂದು ಸ್ಥಳೀಯರಾದ ಮಂಜುಳಾ ತಿಳಿಸಿದರು.</p>.<p><strong>‘ರಾಜಕಾಲುವೆ ನೀರು ಸೇರುತ್ತಿತ್ತು’</strong></p>.<p>‘ರಾಜಕಾಲುವೆ ಪಕ್ಕವೇ ಕಾವೇರಿ ನೀರಿನ ಕೊಳವೆ ಹಾದುಹೋಗಿದೆ. ಎರಡು ಕಡೆ ಕೊಳವೆ ಒಡೆದಿದ್ದರಿಂದ ಕಾಲುವೆ ನೀರು ಮಿಶ್ರಣಗೊಂಡು ನಾಲ್ಕೈದು ಅಡ್ಡರಸ್ತೆಗಳ ಕೆಲವು ಮನೆಗಳಿಗೆ ಮಾತ್ರ ಸರಬರಾಜು ಆಗಿತ್ತು’ ಎಂದು ಜಲಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ಜಿ.ಪುರುಷೋತ್ತಮ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಕಲುಷಿತ ನೀರು ಸೇರುತ್ತಿದ್ದ ಪಾಯಿಂಟ್ಗಳನ್ನು ನಮ್ಮ ಸಿಬ್ಬಂದಿ ಬುಧವಾರ ಬೆಳಿಗ್ಗೆಯಿಂದ ತುಂಬಾ ಕಷ್ಟಪಟ್ಟು ಗುರುವಾರ ಮಧ್ಯಾಹ್ನ ಗುರುತಿಸಿದ್ದಾರೆ. ಅದನ್ನು ಶುಕ್ರವಾರ ಸಂಜೆಯೊತ್ತಿಗೆ ಸರಿಪಡಿಸುತ್ತೇವೆ. ಶನಿವಾರದಂದು ಕೊಳವೆಮಾರ್ಗವನ್ನು ಶುಚಿಗೊಳಿಸಿ, ಎಂದಿನಂತೆ ಶುದ್ಧ ನೀರನ್ನು ಹರಿಸುತ್ತೇವೆ’ ಎಂದು ಅವರು ಹೇಳಿದರು.</p>.<p><strong>ಜಲಮಂಡಳಿ ನೌಕರರಿಂದ ಜೂನ್ 3ರಂದು ಪ್ರತಿಭಟನೆ</strong></p>.<p>ಬೆಂಗಳೂರು: ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಿ ಜಲಮಂಡಳಿಯ ನೌಕರರ ಸಂಘವು ಜೂನ್ 3ರಂದು ಪ್ರತಿಭಟನೆ ಮಾಡಲು ನಿರ್ಧರಿಸಿದೆ.</p>.<p>‘ಮಂಡಳಿಯಲ್ಲಿ 3,500 ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 1,944 ಸ್ಥಾನಗಳು ಮಾತ್ರ ಭರ್ತಿಯಾಗಿವೆ. ಇದರಿಂದ ನೌಕರರು ಒತ್ತಡದ ನಡುವೆ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ 500 ಸಿಬ್ಬಂದಿ ನಿವೃತ್ತರಾಗುತ್ತಾರೆ. ಇದರಿಂದ ಮತ್ತಷ್ಟು ಒತ್ತಡ ಹೆಚ್ಚಲಿದೆ’ ಎಂದು ಸಂಘವು ಪ್ರಕಟಣೆಯಲ್ಲಿ ತಿಳಿಸಿದೆ.</p>.<p>‘ಸಿಬ್ಬಂದಿ ಕೊರತೆಯ ನೆಪದಲ್ಲಿ ಮಂಡಳಿಯ ಬಹುತೇಕ ವಿಭಾಗಗಳ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಖಾಸಗಿ ಕಂಪನಿಗಳಿಗೆ ದೀರ್ಘಕಾಲಿಕ ಹೊರಗುತ್ತಿಗೆ ನೀಡುವುದನ್ನು ರದ್ದುಪಡಿಸಬೇಕು. 2006ರ ನಂತರ ನೇಮಕಾತಿ ಹೊಂದಿರುವ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮುಂದುವರೆಸಬೇಕು’ ಎಂದು ಒತ್ತಾಯಿಸಿದೆ.</p>.<p>‘2018ರ ಜುಲೈನಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಬೇಕು. ಜತೆಗೆ ಪಿಂಚಣಿ ನಿಧಿ ಯೋಜನೆ ಪ್ರಾರಂಭಿಸಬೇಕು’ ಎಂಬ ಬೇಡಿಕೆ ಮಂಡಿಸಿದೆ.</p>.<p><strong><strong>ಫೋನ್–ಇನ್ ನಾಳೆ</strong></strong></p>.<p>ಜಲಮಂಡಳಿಯು ಮೇ 4ರಂದು ಬೆಳಿಗ್ಗೆ 9ರಿಂದ 10.30ರ ವರೆಗೆ ಫೋನ್ ಇನ್ ಕಾರ್ಯಕ್ರಮ ಆಯೋಜಿಸಿದೆ.</p>.<p>ಕುಡಿಯುವ ನೀರಿನ ಸಮಸ್ಯೆ, ಒಳಚರಂಡಿ, ಮೀಟರ್ ರೀಡಿಂಗ್, ನೀರಿನ ಬಿಲ್ಗಳ ಕುರಿತ ಕುಂದುಕೊರತೆಗಳನ್ನು ಮಂಡಳಿಯ ಅಧ್ಯಕ್ಷರ ಗಮನಕ್ಕೆ ತರಬಹುದಾಗಿದೆ.</p>.<p>ನೀರಿನ ಸಂಪರ್ಕ ಹೊಂದಿರುವ ಗ್ರಾಹಕರು ಆರ್.ಆರ್.ಸಂಖ್ಯೆಯನ್ನು ತಿಳಿಸಿ ದೂರನ್ನು ನೀಡಲು ಮಂಡಳಿಯು ಪ್ರಕಟಣೆಯಲ್ಲಿ ತಿಳಿಸಿದೆ.</p>.<p>ಸಂಪರ್ಕ: 080 22945119</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>