ಅಂಗನವಾಡಿಯಲ್ಲಿ ಕುಕ್ಕರ್ ಸ್ಫೋಟ: ಇಬ್ಬರು ಮಕ್ಕಳು ಆಸ್ಪತ್ರೆಗೆ

ಸಾವಳಗಿ (ಬಾಗಲಕೋಟೆ ಜಿಲ್ಲೆ): ಗ್ರಾಮದ ಬ್ಯಾಡಗಿ ವಸ್ತಿ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಕುಕ್ಕರ್ ಸ್ಫೋಟಗೊಂಡು ಇಬ್ಬರು ಮಕ್ಕಳಿಗೆ ಗಂಭೀರ ಗಾಯವಾಗಿದ್ದು ಅವರನ್ನು ಜಮಖಂಡಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಮರ್ಥ ಹಣಮಂತ ಅಟ್ಯಾಳ (4) ಹಾಗೂ ಅದ್ವಿಕ್ ಹಣಮಂತ ಅಟ್ಯಾಳ (3) ಗಾಯಗೊಂಡ ಮಕ್ಕಳು. ಈ ಘಟನೆಯಲ್ಲಿ ಒಂದು ಮಗುವಿನ ಕಿವಿಗೆ ಹಾಗೂ ಇನ್ನೊಂದು ಮಗುವಿನ ತಲೆಗೆ ಹೆಚ್ಚು ಗಾಯಗಳಾಗಿವೆ.
‘ಅಂಗನವಾಡಿ ಕೇಂದ್ರದಲ್ಲಿದ್ದವರ ನಿರ್ಲಕ್ಷ್ಯದಿಂದ ಕುಕ್ಕರ್ ಸ್ಫೋಟಗೊಂಡಿದೆ. ಇಷ್ಟೆಲ್ಲ ಆಗಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಪೋಷಕ ಹಣಮಂತ ಅಟ್ಯಾಳ ಒತ್ತಾಯಿಸಿದರು.
‘ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದೆ ಅಷ್ಟೆ. ಅಂಗನವಾಡಿ ಸಹಾಯಕಿ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಕ್ಕಳಿಗೆ ಕುಕ್ಕರ್ ಬಡಿದಿಲ್ಲ; ಮಕ್ಕಳು ಗಾಬರಿಗೊಂಡು ಗೋಡೆಗೆ ಡಿಕ್ಕಿ ಹೊಡೆದು ಗಾಯಗಳಾಗಿರಬಹುದು’ ಎಂದು ಜಮಖಂಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಅನುರಾಧಾ ಹಾದಿಮನಿ ’ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.