<p><strong>ಬಾಗಲಕೋಟೆ:</strong> ಬಿಪಿಎಲ್ ಕುಟುಂಬಗಳಿಗೆ ಪ್ರತಿ ತಿಂಗಳು ಪ್ರತಿ ಕೆ.ಜಿ.ಗೆ ರೂ.1ರ ದರದಲ್ಲಿ 30 ಕೆ.ಜಿ. ಆಹಾರಧಾನ್ಯ ವಿತರಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ `ಅನ್ನ ಭಾಗ್ಯ' ಯೋಜನೆಯಡಿ ಜಿಲ್ಲೆಯ 2,54,740 ಕುಟುಂಬಗಳು ಪ್ರಯೋಜನ ಪಡೆದುಕೊಳ್ಳಲಿವೆ.<br /> <br /> `ಅನ್ನಭಾಗ್ಯ' ಯೋಜನೆ ಅನುಷ್ಠಾನಕ್ಕಾಗಿ ಜಿಲ್ಲೆಗೆ ಈ ತಿಂಗಳು 8,760 ಮೆಟ್ರಿಕ್ ಟನ್ ಆಹಾರಧಾನ್ಯ ಬಿಡುಗಡೆಯಾಗಿದೆ. ಅಂದರೆ, ಹೆಚ್ಚವರಿಯಾಗಿ 2987 ಮೆಟ್ರಿಕ್ ಟನ್ ಅಕ್ಕಿ ನೀಡಲಾಗಿದೆ. ಈ ಹಿಂದೆ ಜಿಲ್ಲೆಗೆ ಪ್ರತಿ ತಿಂಗಳು ಸಾರ್ವಜನಿಕ ಪಡಿತರ ವಿತರಣಾ ಪದ್ಧತಿಯಡಿ ಸುಮಾರು 5713 ಮೆಟ್ರಿಕ್ ಟನ್ ಆಹಾರ ಧಾನ್ಯ ಬಿಡುಗಡೆಯಾಗುತ್ತಿತ್ತು.<br /> <br /> ಈ ತಿಂಗಳಿಂದ ಯುನಿಟ್ ಪದ್ಧತಿಯಲ್ಲಿ ಪಡಿತರ ವಿತರಣೆ ಆಗಲಿರುವುದರಿಂದ ಜಿಲ್ಲೆಯಲ್ಲಿ 14,879 ಕುಟುಂಬಗಳಿಗೆ ತಿಂಗಳಿಗೆ 10 ಕೆ.ಜಿ., 25,455 ಕುಟುಂಬಳಿಗೆ 20 ಕೆ.ಜಿ. ಮತ್ತು 2,13,871 ಕುಟುಂಬಗಳಿಗೆ (ಒಟ್ಟು 2,54,740 ಬಿಪಿಎಲ್ ಕುಟುಂಬ) 30 ಕೆ.ಜಿ. ಅಕ್ಕಿಯನ್ನು ್ಙ1ಕ್ಕೆ ವಿತರಣೆ ಮಾಡಲಾಗುತ್ತದೆ.<br /> <br /> `ಅನ್ನ ಭಾಗ್ಯ' ಯೋಜನೆ ಜಾರಿಯಿಂದ ಬಿಪಿಎಲ್ ಪಡಿತರದಾರರಿಗೆ ಈ ತಿಂಗಳಿಂದ ಗೋದಿ ವಿತರಣೆ ಸ್ಥಗಿತವಾಗಲಿದೆ. ಅಲ್ಲದೇ, ಅನಿಲ ರಹಿತ ಎಲ್ಲ ಪಡಿತರದಾರರಿಗೂ ಪ್ರತಿ ತಿಂಗಳಿಗೆ 5 ಲೀಟರ್ ಸೀಮೆಎಣ್ಣೆ ವಿತರಣೆಯಾಗಲಿದೆ.<br /> <br /> ಜಿಲ್ಲೆಯಲ್ಲಿ 46,537 ಕುಟುಂಬಗಳು ಕೇಂದ್ರ ಸರ್ಕಾರದ ಅಂತ್ಯೋದಯ ಯೋಜನೆಯ ಫಲಾನುಭವಿಗಳಿದ್ದು, ಈ ಮೊದಲು ಪ್ರತಿ ಕೆ.ಜಿ.ಗೆ ರೂ.3 ನೀಡುತ್ತಿದ್ದ ಅಂತ್ಯೋದಯ ಫಲಾನುಭವಿಗಳು ಇದೀಗ ಅನ್ನಭಾಗ್ಯ ಯೋಜನೆಯ ಜಾರಿಯಿಂದ ರೂ.3 ರ ಬದಲು ರೂ 1ಕ್ಕೆ ಅಕ್ಕಿ ವಿತರಿಸಲಾಗುತ್ತದೆ.<br /> <br /> `ಅನ್ನ ಭಾಗ್ಯ' ಯೋಜನೆ ಬಿಪಿಎಲ್ ಪಡಿತರದಾರರಿಗೆ ಅನುಕೂಲವಾದರೇ ಎಪಿಎಲ್ ಪಡಿತರದಾರರಿಗೆ ಅನಾನುಕೂಲವಾಗಲಿದೆ. ಜಿಲ್ಲೆಯ 1,06,229 ಎಪಿಎಲ್ ಕುಟುಂಬಗಳಿಗೆ ಈ ತಿಂಗಳಿನಿಂದ ಪಡಿತರ ಅಕ್ಕಿ ವಿತರಣೆ ಸ್ಥಗಿತವಾಗಲಿದೆ.<br /> <br /> `ಅನ್ನಭಾಗ್ಯ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಿದ್ಧತೆ ಪೂರ್ಣಗೊಂಡಿದೆ' ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಮಂಗಳವಾರ `ಪ್ರಜಾವಾಣಿ'ಗೆ ತಿಳಿಸಿದರು.<br /> <br /> `ಜಿಲ್ಲೆಯ 677 ನ್ಯಾಯಬೆಲೆ ಅಂಗಡಿಗಳು, 802 ಚಿಲ್ಲರೆ ಸೀಮೆ ಎಣ್ಣೆ ಮಳಿಗೆಗಳು, 12 ಆಹಾರಧಾನ್ಯ ಸಗಟು ಮಳಿಗೆಗಳು ಮತ್ತು 11 ಸೀಮೆ ಎಣ್ಣೆ ಸಗಟು ಮಳಿಗೆಗಳಿಗೆ ಈಗಾಗಲೇ ಅಗತ್ಯ ಆಹಾರಧಾನ್ಯ ಮತ್ತು ಸೀಮೆ ಎಣ್ಣೆಯನ್ನು ಪೂರೈಕೆ ಮಾಡಲಾಗಿದೆ' ಎಂದರು.<br /> `ಹೊಸದಾಗಿ ಪಡಿತರ ಚೀಟಿ ಹೊಂದಲು ಅವಕಾಶವಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ' ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಬಿಪಿಎಲ್ ಕುಟುಂಬಗಳಿಗೆ ಪ್ರತಿ ತಿಂಗಳು ಪ್ರತಿ ಕೆ.ಜಿ.ಗೆ ರೂ.1ರ ದರದಲ್ಲಿ 30 ಕೆ.ಜಿ. ಆಹಾರಧಾನ್ಯ ವಿತರಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ `ಅನ್ನ ಭಾಗ್ಯ' ಯೋಜನೆಯಡಿ ಜಿಲ್ಲೆಯ 2,54,740 ಕುಟುಂಬಗಳು ಪ್ರಯೋಜನ ಪಡೆದುಕೊಳ್ಳಲಿವೆ.<br /> <br /> `ಅನ್ನಭಾಗ್ಯ' ಯೋಜನೆ ಅನುಷ್ಠಾನಕ್ಕಾಗಿ ಜಿಲ್ಲೆಗೆ ಈ ತಿಂಗಳು 8,760 ಮೆಟ್ರಿಕ್ ಟನ್ ಆಹಾರಧಾನ್ಯ ಬಿಡುಗಡೆಯಾಗಿದೆ. ಅಂದರೆ, ಹೆಚ್ಚವರಿಯಾಗಿ 2987 ಮೆಟ್ರಿಕ್ ಟನ್ ಅಕ್ಕಿ ನೀಡಲಾಗಿದೆ. ಈ ಹಿಂದೆ ಜಿಲ್ಲೆಗೆ ಪ್ರತಿ ತಿಂಗಳು ಸಾರ್ವಜನಿಕ ಪಡಿತರ ವಿತರಣಾ ಪದ್ಧತಿಯಡಿ ಸುಮಾರು 5713 ಮೆಟ್ರಿಕ್ ಟನ್ ಆಹಾರ ಧಾನ್ಯ ಬಿಡುಗಡೆಯಾಗುತ್ತಿತ್ತು.<br /> <br /> ಈ ತಿಂಗಳಿಂದ ಯುನಿಟ್ ಪದ್ಧತಿಯಲ್ಲಿ ಪಡಿತರ ವಿತರಣೆ ಆಗಲಿರುವುದರಿಂದ ಜಿಲ್ಲೆಯಲ್ಲಿ 14,879 ಕುಟುಂಬಗಳಿಗೆ ತಿಂಗಳಿಗೆ 10 ಕೆ.ಜಿ., 25,455 ಕುಟುಂಬಳಿಗೆ 20 ಕೆ.ಜಿ. ಮತ್ತು 2,13,871 ಕುಟುಂಬಗಳಿಗೆ (ಒಟ್ಟು 2,54,740 ಬಿಪಿಎಲ್ ಕುಟುಂಬ) 30 ಕೆ.ಜಿ. ಅಕ್ಕಿಯನ್ನು ್ಙ1ಕ್ಕೆ ವಿತರಣೆ ಮಾಡಲಾಗುತ್ತದೆ.<br /> <br /> `ಅನ್ನ ಭಾಗ್ಯ' ಯೋಜನೆ ಜಾರಿಯಿಂದ ಬಿಪಿಎಲ್ ಪಡಿತರದಾರರಿಗೆ ಈ ತಿಂಗಳಿಂದ ಗೋದಿ ವಿತರಣೆ ಸ್ಥಗಿತವಾಗಲಿದೆ. ಅಲ್ಲದೇ, ಅನಿಲ ರಹಿತ ಎಲ್ಲ ಪಡಿತರದಾರರಿಗೂ ಪ್ರತಿ ತಿಂಗಳಿಗೆ 5 ಲೀಟರ್ ಸೀಮೆಎಣ್ಣೆ ವಿತರಣೆಯಾಗಲಿದೆ.<br /> <br /> ಜಿಲ್ಲೆಯಲ್ಲಿ 46,537 ಕುಟುಂಬಗಳು ಕೇಂದ್ರ ಸರ್ಕಾರದ ಅಂತ್ಯೋದಯ ಯೋಜನೆಯ ಫಲಾನುಭವಿಗಳಿದ್ದು, ಈ ಮೊದಲು ಪ್ರತಿ ಕೆ.ಜಿ.ಗೆ ರೂ.3 ನೀಡುತ್ತಿದ್ದ ಅಂತ್ಯೋದಯ ಫಲಾನುಭವಿಗಳು ಇದೀಗ ಅನ್ನಭಾಗ್ಯ ಯೋಜನೆಯ ಜಾರಿಯಿಂದ ರೂ.3 ರ ಬದಲು ರೂ 1ಕ್ಕೆ ಅಕ್ಕಿ ವಿತರಿಸಲಾಗುತ್ತದೆ.<br /> <br /> `ಅನ್ನ ಭಾಗ್ಯ' ಯೋಜನೆ ಬಿಪಿಎಲ್ ಪಡಿತರದಾರರಿಗೆ ಅನುಕೂಲವಾದರೇ ಎಪಿಎಲ್ ಪಡಿತರದಾರರಿಗೆ ಅನಾನುಕೂಲವಾಗಲಿದೆ. ಜಿಲ್ಲೆಯ 1,06,229 ಎಪಿಎಲ್ ಕುಟುಂಬಗಳಿಗೆ ಈ ತಿಂಗಳಿನಿಂದ ಪಡಿತರ ಅಕ್ಕಿ ವಿತರಣೆ ಸ್ಥಗಿತವಾಗಲಿದೆ.<br /> <br /> `ಅನ್ನಭಾಗ್ಯ ಯೋಜನೆಯನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಿದ್ಧತೆ ಪೂರ್ಣಗೊಂಡಿದೆ' ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ಮಂಗಳವಾರ `ಪ್ರಜಾವಾಣಿ'ಗೆ ತಿಳಿಸಿದರು.<br /> <br /> `ಜಿಲ್ಲೆಯ 677 ನ್ಯಾಯಬೆಲೆ ಅಂಗಡಿಗಳು, 802 ಚಿಲ್ಲರೆ ಸೀಮೆ ಎಣ್ಣೆ ಮಳಿಗೆಗಳು, 12 ಆಹಾರಧಾನ್ಯ ಸಗಟು ಮಳಿಗೆಗಳು ಮತ್ತು 11 ಸೀಮೆ ಎಣ್ಣೆ ಸಗಟು ಮಳಿಗೆಗಳಿಗೆ ಈಗಾಗಲೇ ಅಗತ್ಯ ಆಹಾರಧಾನ್ಯ ಮತ್ತು ಸೀಮೆ ಎಣ್ಣೆಯನ್ನು ಪೂರೈಕೆ ಮಾಡಲಾಗಿದೆ' ಎಂದರು.<br /> `ಹೊಸದಾಗಿ ಪಡಿತರ ಚೀಟಿ ಹೊಂದಲು ಅವಕಾಶವಿದ್ದು, ಅರ್ಹರು ಅರ್ಜಿ ಸಲ್ಲಿಸಬಹುದಾಗಿದೆ' ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>