ಮಹಾಲಿಂಗೇಶ್ವರ ಗೋಶಾಲೆ ಸಂರಕ್ಷಣೆ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಸಾರ್ವಜನಿಕರು, ಪುರಸಭೆಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮೇಲಿಂದ ಮೇಲೆ ಗೋಶಾಲೆಯಲ್ಲಿರುವ ಹಸುಗಳು ಬೀದಿನಾಯಿಗಳ ಕಡಿತದಿಂದ ಸಾವಿಗೀಡಾಗುತ್ತಿವೆ. ಎರಡು ದಿನದಲ್ಲಿ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಗೋಶಾಲೆಯಲ್ಲಿರುವ ಹಸುಗಳನ್ನು ಪುರಸಭೆ ಆವರಣದಲ್ಲಿ ಕಟ್ಟಲಾಗುವುದು ಎಂದು ಎಚ್ಚರಿಸಿದರು.