ಮಹಾಲಿಂಗಪುರ: ‘ತೇರದಾಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಪರ ಚಿತ್ರನಟಿ ತಾರಾ ಅನೂರಾಧಾ ಮಹಾಲಿಂಗಪುರ ಹಾಗೂ ಚಿಮ್ಮಡ ಗ್ರಾಮದಲ್ಲಿ ಭರ್ಜರಿ ರೋಡ್ ನಡೆಸಿ ಮತಯಾಚನೆ ಮಾಡಿದರು.
ರಸ್ತೆಯುದ್ದಕ್ಕೂ ಮತದಾರರಿಗೆ ಕೈ ಬೀಸಿ, ನಮಸ್ಕರಿಸಿ ಗಮನಸೆಳೆದರು. ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಮೀನಾಕ್ಷಿ ಸವದಿ ಜತೆಗಿದ್ದರು.
ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ತಾರಾ, ‘ಅಭಿವೃದ್ಧಿ ಕಾರ್ಯ ಮಾಡುವುದರಲ್ಲಿ ಸಿದ್ದು ಸವದಿ ನಿಷ್ಠಾವಂತರಾಗಿದ್ದು, ಅವರನ್ನು ಮತ್ತೊಂದು ಸಲ ಗೆಲ್ಲಿಸಬೇಕು. ರಾಜ್ಯ ಮತ್ತು ದೇಶದಲ್ಲಿ ಮತ್ತೊಮ್ಮೆ ಡಬಲ್ ಎಂಜಿನ್ ಸರ್ಕಾರವಾದರೆ ಗ್ರಾಮ, ಪಟ್ಟಣಗಳಲ್ಲಿ ಅಭಿವೃದ್ಧಿ ಪರ್ವ ಇನ್ನಷ್ಟು ಹೆಚ್ಚಲಿದೆ’ ಎಂದು ಮನವಿ ಮಾಡಿದರು.