ನವನಗರದಲ್ಲಿ ಶನಿವಾರ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ‘ಬೆಂಬಲಿಗರ ಸಭೆ ರದ್ದಾಗಿದೆಯೆಂದು ಹೇಳಿ ವದಂತಿ ಹರಡಿ ಮುಖಂಡರು, ಕಾರ್ಯಕರ್ತರು ಬಾರದಂತೆ ಕುತಂತ್ರ ಮಾಡಿದ್ದಾರೆ’ ಎಂದರು.
‘ಜಿಲ್ಲೆಯ ಶಾಸಕರ ಗೆಲುವಿಗಾಗಿ ಶ್ರಮಿಸಿದ್ದೇನೆ. ಆದರೆ, ಅವರು ನನ್ನ ಹೆಸರು ಹೇಳಿಲ್ಲ. ಶಾಸಕರಿಗೆ ಮಾಡಿದ ಅನ್ಯಾಯ ಏನು? ಪಕ್ಷದ ಪರ ಕೆಲಸ ಮಾಡಿದ್ದು ತಪ್ಪೇ? ಯಾಕೆ ನನಗೆ ಅನ್ಯಾಯ ಮಾಡಲಾಯಿತು’ ಎಂದು ಅವರು ಪ್ರಶ್ನಿಸಿದರು.
‘ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಿಗುತ್ತಿಲ್ಲ ಎಂದು ಸಚಿವ ಶಿವಾನಂದ ಪಾಟೀಲ ಹಾಗೂ ಸಂಯುಕ್ತಾ ಪಾಟೀಲ ಹೇಳಿದ್ದಾರೆ. ನಾನೇನೂ ವಿದೇಶಕ್ಕೆ ಹೋಗಿಲ್ಲ. ಮೊಬೈಲ್ ಫೋನ್ಗೂ ಯಾವ ಕರೆಯು ಬಂದಿಲ್ಲ’ ಎಂದರು.
‘ಪತಿ ಬಂದರೆ ಪತ್ನಿ ಬರುತ್ತಾರೆ ಎಂಬ ಉಡಾಫೆ ಹೇಳಿಕೆ ಸರಿಯಲ್ಲ. ರಾಜಕೀಯಕ್ಕೆ ತರುವಲ್ಲಿ ಪತಿ ಪಾತ್ರ ಮುಖ್ಯ ಇದೆ. ನಂತರ ಹೆಸರು ಗಳಿಸಲು ಶ್ರಮಿಸಿದ್ದೇನೆ. ನಾನು ಹಣಕ್ಕಾಗಿ ರಾಜಕಾರಣ ಮಾಡುತ್ತಿಲ್ಲ’ ಎಂದರು.