<p><strong>ಬಾದಾಮಿ:</strong> ‘ಅಗಸ್ತ್ಯತೀರ್ಥ ದಂಡೆಯಲ್ಲಿರುವ 96 ಕುಟುಂಬಗಳ ಸ್ಥಳಾಂತರ ಕಾರ್ಯ ಶೀಘ್ರದಲ್ಲಿ ನಡೆಯಲಿದೆ. ಹಂತ ಹಂತವಾಗಿ ನಿವೇಶನಗಳನ್ನು ವಿತರಿಸಲಾಗುವುದು ’ ಎಂದು ಬಾಗಲಕೋಟೆ ಉಪವಿಭಾಗ ಅಧಿಕಾರಿ ಸಂತೋಷ ಜಗಲಾಸರ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.</p>.<p>‘ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮತ್ತು ಶಾಸಕ ಭೀಮಸೇನ ಚಿಮ್ಮನಕಟ್ಟಿ ನೇತೃತ್ವದಲ್ಲಿ ಸಭೆಗಳು ನಡೆದಿವೆ. ನಿವಾಸಿಗಳಿಗೆ 20/30 ಸೈಟ್ ಬದಲಾಗಿ 30/35 ಸೈಟ್ ಕೊಡುವ ಯೋಜನೆ ಇದೆ. ನಿವೇಶನದ ಅಪ್ರೂವಲ್ ಆದ ತಕ್ಷಣ ಹಂಚಿಕೆ ಮಾಡಲಾಗುವುದು ’ ಎಂದು ಅವರು ತಿಳಿಸಿದರು.</p>.<p>ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಲು ಎರಡು ದಶಕಗಳಿಂದ ಮನೆಗಳ ಸ್ಥಳಾಂತರ ಬಗ್ಗೆ ಬಾಗಲಕೋಟೆ ಮತ್ತು ಬಾದಾಮಿಯಲ್ಲಿ ಅನೇಕ ಬಾರಿ ಅಧಿಕಾರಿಗಳೊಂದಿಗೆ ನಿವಾಸಿಗಳ ಸಭೆಗಳು ನಡೆಸಿದ್ದನ್ನು ಸ್ಮರಿಸಬಹುದು.</p>.<p>ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಗಳು ನಡೆದು ಕೊನೆಯ ಹಂತ ತಲುಪಿದೆ ಎಂದು ತಿಳಿದಿದೆ.</p>.<p>‘ ಅಗಸ್ತ್ಯತೀರ್ಥ ದಂಡೆಯಲ್ಲಿರುವ 39 ಕುಟುಂಬಗಳು ಈಗಾಗಲೇ ಕಂದಾಯ ಇಲಾಖೆಗೆ ಸ್ಥಳಾಂತರಕ್ಕೆ ಒಪ್ಪಿಗೆ ಪತ್ರವನ್ನು ಕೊಟ್ಟು ಆರು ತಿಂಗಳಾಗಿದೆ. ಬೇಗ ಪರಿಹಾರ ಮತ್ತು ನಿವೇಶನ ಹಂಚಿಕೆ ಮಾಡಬೇಕು ’ ಎಂದು ಶಹಾಬುದ್ದೀನ ಮೋದಿನಸಾಬ್ ಸೌದಾಗರ ಒತ್ತಾಯಿಸಿದರು.</p>.<p>96 ಮನೆಗಳು ಸ್ಥಳಾಂತರವಾದರೆ ಮೇಣಬಸದಿ ಮತ್ತು ಮ್ಯೂಜಿಯಂ, ಭೂತನಾಥ ದೇವಾಲಯಕ್ಕೆ ಸಂಪರ್ಕ ರಸ್ತೆ ಕೈಗೊಂಡರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ‘ಅಗಸ್ತ್ಯತೀರ್ಥ ದಂಡೆಯಲ್ಲಿರುವ 96 ಕುಟುಂಬಗಳ ಸ್ಥಳಾಂತರ ಕಾರ್ಯ ಶೀಘ್ರದಲ್ಲಿ ನಡೆಯಲಿದೆ. ಹಂತ ಹಂತವಾಗಿ ನಿವೇಶನಗಳನ್ನು ವಿತರಿಸಲಾಗುವುದು ’ ಎಂದು ಬಾಗಲಕೋಟೆ ಉಪವಿಭಾಗ ಅಧಿಕಾರಿ ಸಂತೋಷ ಜಗಲಾಸರ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.</p>.<p>‘ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮತ್ತು ಶಾಸಕ ಭೀಮಸೇನ ಚಿಮ್ಮನಕಟ್ಟಿ ನೇತೃತ್ವದಲ್ಲಿ ಸಭೆಗಳು ನಡೆದಿವೆ. ನಿವಾಸಿಗಳಿಗೆ 20/30 ಸೈಟ್ ಬದಲಾಗಿ 30/35 ಸೈಟ್ ಕೊಡುವ ಯೋಜನೆ ಇದೆ. ನಿವೇಶನದ ಅಪ್ರೂವಲ್ ಆದ ತಕ್ಷಣ ಹಂಚಿಕೆ ಮಾಡಲಾಗುವುದು ’ ಎಂದು ಅವರು ತಿಳಿಸಿದರು.</p>.<p>ಪ್ರವಾಸಿಗರಿಗೆ ಸೌಲಭ್ಯ ಕಲ್ಪಿಸಲು ಎರಡು ದಶಕಗಳಿಂದ ಮನೆಗಳ ಸ್ಥಳಾಂತರ ಬಗ್ಗೆ ಬಾಗಲಕೋಟೆ ಮತ್ತು ಬಾದಾಮಿಯಲ್ಲಿ ಅನೇಕ ಬಾರಿ ಅಧಿಕಾರಿಗಳೊಂದಿಗೆ ನಿವಾಸಿಗಳ ಸಭೆಗಳು ನಡೆಸಿದ್ದನ್ನು ಸ್ಮರಿಸಬಹುದು.</p>.<p>ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಗಳು ನಡೆದು ಕೊನೆಯ ಹಂತ ತಲುಪಿದೆ ಎಂದು ತಿಳಿದಿದೆ.</p>.<p>‘ ಅಗಸ್ತ್ಯತೀರ್ಥ ದಂಡೆಯಲ್ಲಿರುವ 39 ಕುಟುಂಬಗಳು ಈಗಾಗಲೇ ಕಂದಾಯ ಇಲಾಖೆಗೆ ಸ್ಥಳಾಂತರಕ್ಕೆ ಒಪ್ಪಿಗೆ ಪತ್ರವನ್ನು ಕೊಟ್ಟು ಆರು ತಿಂಗಳಾಗಿದೆ. ಬೇಗ ಪರಿಹಾರ ಮತ್ತು ನಿವೇಶನ ಹಂಚಿಕೆ ಮಾಡಬೇಕು ’ ಎಂದು ಶಹಾಬುದ್ದೀನ ಮೋದಿನಸಾಬ್ ಸೌದಾಗರ ಒತ್ತಾಯಿಸಿದರು.</p>.<p>96 ಮನೆಗಳು ಸ್ಥಳಾಂತರವಾದರೆ ಮೇಣಬಸದಿ ಮತ್ತು ಮ್ಯೂಜಿಯಂ, ಭೂತನಾಥ ದೇವಾಲಯಕ್ಕೆ ಸಂಪರ್ಕ ರಸ್ತೆ ಕೈಗೊಂಡರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>