ಆಡು–ಕರು ಸಾವು: ಜಮಖಂಡಿ ತಾಲ್ಲೂಕಿನ ಬಿದರಿ ಹಾಗೂ ವಿಜಯಪುರ ತಾಲ್ಲೂಕಿನ ದೇವರಗೆಣ್ಣೂರು, ಬಬಲಾದಿ ಹಾಗೂ ಕೆಂಗಲಗುತ್ತಿ ಗ್ರಾಮಗಳಲ್ಲಿ ಅಪರಿಚಿತ ಪ್ರಾಣಿಯ ದಾಳಿಗೆ ಒಂದು ಆಡು ಹಾಗೂ ಎಮ್ಮೆ ಕರುಗಳು ಬಲಿಯಾಗಿವೆ. ಬಿದರಿ ಹಾಗೂ ಬಬಲಾದಿ ಗ್ರಾಮಗಳಲ್ಲಿ ಮೂರು ಎಮ್ಮೆ ಕರುಗಳ ಮೇಲೆ ದಾಳಿ ನಡೆಸಿದೆ. ಬಿದರಿಯಲ್ಲಿ ದಾಳಿ ನಡೆದ ಜಮೀನುಗಳಲ್ಲಿ ಎರಡು ಕಡೆ ಕ್ಯಾಮೆರಾ ಅಳವಡಿಸಿದ್ದರೂ ಪ್ರಾಣಿಯ ಚಿತ್ರ ಮಾತ್ರ ಸೆರೆ ಸಿಕ್ಕಿಲ್ಲ.