ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಬಾದಾಮಿ ವಿಧಾನಸಭಾ ಕ್ಷೇತ್ರದ ಗ್ರಾಮಗಳನ್ನು ಬಾಗಲಕೋಟೆ ಅಥವಾ ಗುಳೇದಗುಡ್ಡಕ್ಕೆ ಸೇರ್ಪಡೆಗೊಳಿಸುವ ಕುರಿತು ಶಾಸಕ ಎಚ್.ವೈ. ಮೇಟಿ ಪತ್ರ ಬರೆದಿರುವುದು
ತಹಶೀಲ್ದಾರ್ ಆದೇಶದಂತೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಜನರ ಅಭಿಪ್ರಾಯವನ್ನು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಗುವುದು
ಡಿ.ಎಸ್.ಯತ್ನಟ್ಟಿ ಕಂದಾಯ ನಿರೀಕ್ಷಕ
ಬಾಗಲಕೋಟೆ ಹಾಗೂ ಗುಳೇದಗುಡ್ಡಕ್ಕೆ ಹೋಲಿಸಿದರೆ ಹುನಗುಂದ ಸಮೀಪವಾಗುತ್ತದೆ. ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅನುಕೂಲವಾಗುತ್ತದೆ. ಹೀಗಾಗಿ ಹುನಗುಂದ ತಾಲ್ಲೂಕಿನಲ್ಲಿಯೇ ಮುಂದುವರೆಯಲಿ. ಸೇರ್ಪಡೆಗೆ ಮುಂದಾದರೆ ಪ್ರತ್ಯೇಕ ತಾಲ್ಲೂಕು ಮಾಡಲು ಹೋರಾಟ ಮಾಡಲಾಗುವುದು. - ಜಗದೀಶ ಬಿಸಲದಿನ್ನಿ