<p><strong>ಬಾಗಲಕೋಟೆ:</strong> ‘ಮಾನವೀಯ ಮೌಲ್ಯಗಳೊಂದಿಗೆ ಸತ್ಯ, ನಿಷ್ಠೆ ಕಾಯಕ ಮಾಡಿ ಕೈಲಾಸ ಕಂಡವರು 12ನೇ ಶತಮಾನದ ಶರಣರು’ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು.</p>.<p>ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಮಾದಾರ ಚೆನ್ನಯ್ಯ, ಮಾದರ ಧೂಳಯ್ಯ ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿ ಎಂಬ ಶರಣರು ಕಾಯಕ ಜೀವಿಗಳಾಗಿದ್ದು, ಅವರು ಮಾಡುವ ಕಾಯಕ ನಿಷ್ಠೆಯಿಂದ ಮಾಡುವುದಲ್ಲದೇ ಬಸವಾದಿ ಶರಣರ ಪ್ರೀತಿಗೆ ಪಾತ್ರರಾಗಿದ್ದರು’ ಎಂದರು.</p>.<p>‘ಮೇಲು– ಕೀಳುಗಳೆಂಬ ಅನಾಚಾರಗಳಿಂದ ಕೂಡಿದ ಅಂದಿನ ದಿನಗಳಲ್ಲಿ ಎಲ್ಲರನ್ನೂ ಭೇದ ಭಾವವಿಲ್ಲದೆ ವಿಶ್ವಾಸಕ್ಕೆ ಪಡೆದು ಎಲ್ಲರ ಪಾಲಿನ ಅಣ್ಣನಾಗಿದ್ದ ಬಸವಣ್ಣ ಇಂದು ವಿಶ್ವ ಮಾನವ ಸ್ಥಾನದಲ್ಲಿದ್ದಾರೆ. ಇಂತಹ ಶರಣರು ನಮ್ಮ ನೆಲದಲ್ಲಿ ಆಗಿ ಹೋಗಿದ್ದು, ನಮ್ಮೆಲ್ಲರ ಭಾಗ್ಯ’ ಎಂದು ಹೇಳಿದರು.</p>.<p>ಗ್ಯಾರಂಟಿ ಯೋಜನೆ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ ದಡ್ಡಿ ಮಾತನಾಡಿ, ‘ಜಾತಿ ವ್ಯವಸ್ಥೆಯಲ್ಲಿ ಕಾಯಕ ನಿಷ್ಠೆ ತೋರಿ ಸತ್ಯಶರಣ ನೆನೆಸಿದವರು ಕಾಯಕ ಶರಣರು. ಅವರ ಮಾತುಗಳು ವಚನಗಳಾಗಿ ದಾರಿದೀಪಗಳಾಗಿವೆ. ಅವರೆಲ್ಲರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾದರೆ ಸಮುದಾಯದ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು’ ಎಂದರು.</p>.<p>ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ‘ಕಲ್ಯಾಣದಲ್ಲಿಯ ಮಹಾಮನೆ ಜಗತ್ತಿನಲ್ಲಿ ಅತಿ ಶ್ರೇಷ್ಠವಾದ ಪ್ರಜಾಪ್ರಭುತ್ವದ ಕೇಂದ್ರವಾಗಿತ್ತು. ಅಲ್ಲಿ ಅಸ್ಪ್ರಶ್ಯರೆನಿಸಿಕೊಂಡವರಲ್ಲದೇ ಅಕ್ಕಮಹಾದೇವಿಯಂತವರಿಗೂ ಅವಕಾಶ ಒದಗಿಸಿ ಕೊಟ್ಟು ಎಲ್ಲರೂ ಸಮಾನರು ಎಂಬುದನ್ನು ತೋರಿಸಲಾಗಿತ್ತು’ ಎಂದು ತಿಳಿಸಿದರು.</p>.<p>ಉಪನ್ಯಾಸಕ ಚಂದ್ರಶೇಖರ್ ಕಾಳನ್ನವರ, ಕಾಯಕ ಶರಣರ ಜೀವನ ಚರಿತ್ರೆ ಹಾಗೂ ಕಾರ್ಯನಿಷ್ಠೆಯ ಸಮಗ್ರ ಮಾಹಿತಿ ನೀಡಿದರು.</p>.<p>ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಸಮುದಾಯದ ಮುಖಂಡರಾದ ಮನೋಹರ ಕದಂ, ಯಲ್ಲಪ್ಪ ಸಂಖ್ಯಾನವರ್, ವಿವೇಕಾನಂದ ಗರಸಂಗಿ, ಅಡಿವೆಪ್ಪ ಚಂದಾವರಿ, ಚಂದ್ರಕಾಂತ ಕೇಸ್ನೂರ ಇದ್ದರು.</p>.<div><blockquote>ಶರಣರ ತತ್ವಗಳು ಪ್ರಚಲಿತವಾಗಬೇಕಾದರೆ ಇಂತಹ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳಲ್ಲಿ ಆಯೋಜಿಸಬೇಕು </blockquote><span class="attribution">ಪರಶುರಾಮ ಬಸವಣ್ಣ ಉಪನ್ಯಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ‘ಮಾನವೀಯ ಮೌಲ್ಯಗಳೊಂದಿಗೆ ಸತ್ಯ, ನಿಷ್ಠೆ ಕಾಯಕ ಮಾಡಿ ಕೈಲಾಸ ಕಂಡವರು 12ನೇ ಶತಮಾನದ ಶರಣರು’ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು.</p>.<p>ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.</p>.<p>‘ಮಾದಾರ ಚೆನ್ನಯ್ಯ, ಮಾದರ ಧೂಳಯ್ಯ ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಉರಿಲಿಂಗ ಪೆದ್ದಿ ಎಂಬ ಶರಣರು ಕಾಯಕ ಜೀವಿಗಳಾಗಿದ್ದು, ಅವರು ಮಾಡುವ ಕಾಯಕ ನಿಷ್ಠೆಯಿಂದ ಮಾಡುವುದಲ್ಲದೇ ಬಸವಾದಿ ಶರಣರ ಪ್ರೀತಿಗೆ ಪಾತ್ರರಾಗಿದ್ದರು’ ಎಂದರು.</p>.<p>‘ಮೇಲು– ಕೀಳುಗಳೆಂಬ ಅನಾಚಾರಗಳಿಂದ ಕೂಡಿದ ಅಂದಿನ ದಿನಗಳಲ್ಲಿ ಎಲ್ಲರನ್ನೂ ಭೇದ ಭಾವವಿಲ್ಲದೆ ವಿಶ್ವಾಸಕ್ಕೆ ಪಡೆದು ಎಲ್ಲರ ಪಾಲಿನ ಅಣ್ಣನಾಗಿದ್ದ ಬಸವಣ್ಣ ಇಂದು ವಿಶ್ವ ಮಾನವ ಸ್ಥಾನದಲ್ಲಿದ್ದಾರೆ. ಇಂತಹ ಶರಣರು ನಮ್ಮ ನೆಲದಲ್ಲಿ ಆಗಿ ಹೋಗಿದ್ದು, ನಮ್ಮೆಲ್ಲರ ಭಾಗ್ಯ’ ಎಂದು ಹೇಳಿದರು.</p>.<p>ಗ್ಯಾರಂಟಿ ಯೋಜನೆ ಜಿಲ್ಲಾ ಘಟಕದ ಅಧ್ಯಕ್ಷ ಅನಿಲಕುಮಾರ ದಡ್ಡಿ ಮಾತನಾಡಿ, ‘ಜಾತಿ ವ್ಯವಸ್ಥೆಯಲ್ಲಿ ಕಾಯಕ ನಿಷ್ಠೆ ತೋರಿ ಸತ್ಯಶರಣ ನೆನೆಸಿದವರು ಕಾಯಕ ಶರಣರು. ಅವರ ಮಾತುಗಳು ವಚನಗಳಾಗಿ ದಾರಿದೀಪಗಳಾಗಿವೆ. ಅವರೆಲ್ಲರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಾದರೆ ಸಮುದಾಯದ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು’ ಎಂದರು.</p>.<p>ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ‘ಕಲ್ಯಾಣದಲ್ಲಿಯ ಮಹಾಮನೆ ಜಗತ್ತಿನಲ್ಲಿ ಅತಿ ಶ್ರೇಷ್ಠವಾದ ಪ್ರಜಾಪ್ರಭುತ್ವದ ಕೇಂದ್ರವಾಗಿತ್ತು. ಅಲ್ಲಿ ಅಸ್ಪ್ರಶ್ಯರೆನಿಸಿಕೊಂಡವರಲ್ಲದೇ ಅಕ್ಕಮಹಾದೇವಿಯಂತವರಿಗೂ ಅವಕಾಶ ಒದಗಿಸಿ ಕೊಟ್ಟು ಎಲ್ಲರೂ ಸಮಾನರು ಎಂಬುದನ್ನು ತೋರಿಸಲಾಗಿತ್ತು’ ಎಂದು ತಿಳಿಸಿದರು.</p>.<p>ಉಪನ್ಯಾಸಕ ಚಂದ್ರಶೇಖರ್ ಕಾಳನ್ನವರ, ಕಾಯಕ ಶರಣರ ಜೀವನ ಚರಿತ್ರೆ ಹಾಗೂ ಕಾರ್ಯನಿಷ್ಠೆಯ ಸಮಗ್ರ ಮಾಹಿತಿ ನೀಡಿದರು.</p>.<p>ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್, ಸಮುದಾಯದ ಮುಖಂಡರಾದ ಮನೋಹರ ಕದಂ, ಯಲ್ಲಪ್ಪ ಸಂಖ್ಯಾನವರ್, ವಿವೇಕಾನಂದ ಗರಸಂಗಿ, ಅಡಿವೆಪ್ಪ ಚಂದಾವರಿ, ಚಂದ್ರಕಾಂತ ಕೇಸ್ನೂರ ಇದ್ದರು.</p>.<div><blockquote>ಶರಣರ ತತ್ವಗಳು ಪ್ರಚಲಿತವಾಗಬೇಕಾದರೆ ಇಂತಹ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳಲ್ಲಿ ಆಯೋಜಿಸಬೇಕು </blockquote><span class="attribution">ಪರಶುರಾಮ ಬಸವಣ್ಣ ಉಪನ್ಯಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>