<p><strong>ಬಾಗಲಕೋಟೆ:</strong> ವೀಳ್ಯದೆಲೆ ಬೆಲೆ ಏರಿಕೆಯಿಂದ ರೈತರು ಸಂತಸಗೊಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್ನಲ್ಲಿ 12,000 ಎಲೆಗಳಿರುವ ಒಂದು ಡಾಗ್ (ಅಂಡಿಗಿ) ₹2 ಸಾವಿರದಿಂದ 3 ಸಾವಿರಕ್ಕೆ ಮಾರಾಟವಾಗುತ್ತಿತ್ತು. ಈಗ ದರ ₹6,000 ದಿಂದ ₹8,500ಕ್ಕೆ ಏರಿಕೆಯಾಗಿದೆ.</p>.<p>ಜಿಲ್ಲೆಯಲ್ಲಿ ಜಗದಾಳ, ನಾವಲಗಿ, ಬಾದಾಮಿ ತಾಲ್ಲೂಕಿನ ಚೊಳಚಗುಡ್ಡ ಸುತ್ತಲಿನ ಪ್ರದೇಶದಲ್ಲಿ ವೀಳ್ಯದೆಲೆ ಬೆಳೆಯಲಿದ್ದು, ಮುಂಬೈ, ಪುಣೆ, ಹೈದರಾಬಾದ್, ಬೆಂಗಳೂರು, ಸತಾರಾ, ಬೆಳಗಾವಿ ಕಡೆ ರವಾನೆಯಾಗುತ್ತದೆ. </p>.<p>‘ಒಂದು ಎಕರೆಯಲ್ಲಿ ವೀಳ್ಯದೆಲೆ ಕೃಷಿಗೆ ವರ್ಷಕ್ಕೆ ₹ 2.5 ರಿಂದ 3 ಲಕ್ಷ ಖರ್ಚಾಗುತ್ತದೆ. ಈ ಬಾರಿ ಚಳಿ ಹೆಚ್ಚಿದ್ದ ಕಾರಣ ಇಳುವರಿ ತಗ್ಗಿದೆ. ಈಗ ಎಲೆಬಳ್ಳಿ ಕಟ್ಟುವುದರಿಂದ ಫಸಲು ಕಡಿಮೆ ಇರುತ್ತದೆ’ ಎಂದು ಜಗದಾಳದ ರೈತ ಸದಾಶಿವ ಬಂಗಿ ತಿಳಿಸಿದರು.</p>.<p>ಶುಭ ಕಾರ್ಯಗಳು, ತಾಂಬೂಲ ಹಾಕುವವರಿಗೆ, ಪಾನ್ಶಾಪ್ಗಳಲ್ಲಿ ವೀಳ್ಯದೆಲೆಗಳು ಬೇಕು. ವೀಳ್ಯದೆಲೆಗಳಿಗೆ ವರ್ಷಪೂರ್ತಿ ಬೇಡಿಕೆ ಇರುತ್ತದೆ. ದರ ಏರಿಕೆಯಿಂದ ತಾಂಬೂಲ ಪ್ರಿಯರಿಗೆ ಬಿಸಿ ತಟ್ಟಿದೆ. </p>.<p>‘₹ 10ಕ್ಕೆ 25–30 ಎಲೆಗಳನ್ನು ನೀಡುತ್ತಿದ್ದರು. ಈಗ ಪ್ರತಿ ಎಲೆಗೆ ಒಂದು ರೂಪಾಯಿ ದರ ಇದೆ. ತಾಂಬೂಲದ ಉಳಿದ ವಸ್ತುಗಳ ಬೆಲೆ ಏರಿತ್ತು. ಈಗ ಎಲೆಗಳ ಬೆಲೆಯೂ ಹೆಚ್ಚಿದೆ’ ಎನ್ನುತ್ತಾರೆ ಶಂಕರಗೌಡ ಪಾಟೀಲ</p>.<p>ಮಧ್ಯವರ್ತಿಗಳ ಹಾವಳಿ: ‘ಬೇರೆ, ಬೇರೆ ರಾಜ್ಯಗಳಿಗೆ ವೀಳ್ಯದೆಲೆಯನ್ನು ಕಳುಹಿಸಬೇಕು. ಭಾಷಾ ಸಮಸ್ಯೆಯಿಂದ ರೈತರು ಹೋಗುವುದಿಲ್ಲ. ಕೆಲವರೇ ಮಧ್ಯವರ್ತಿಗಳಾಗಿ, ಹೊರ ರಾಜ್ಯಗಳಿಗೆ ಎಲೆಗಳನ್ನು ಕಳುಹಿಸಿಕೊಡುತ್ತಾರೆ. ಸ್ಥಳೀಯವಾಗಿಯೇ ಮಾರುಕಟ್ಟೆಯಾದರೆ ಅನುಕೂಲವಾಗುತ್ತದೆ’ ಎಂದು ಅವರು ತಿಳಿಸಿದರು.</p>.<div><blockquote>ಚೊಳಚಗುಡ್ಡ ಭಾಗದಲ್ಲಿ ಅಂಬಾಡಿ ಎಲೆ ಬೆಳೆಯಲಾಗುತ್ತದೆ. 10 ರಿಂದ 12 ದಿನ ಹಾಳಾಗುವುದಿಲ್ಲ. ಆದ್ದರಿಂದ ಇಲ್ಲಿನ ಎಲೆಗಳಿಗೆ ಉತ್ತಮ ಬೇಡಿಕೆ ಇದೆ</blockquote><span class="attribution">ಮೌನೇಶ ಮರಡಿ ರೈತ ಚೊಳಚಗುಡ್ಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ವೀಳ್ಯದೆಲೆ ಬೆಲೆ ಏರಿಕೆಯಿಂದ ರೈತರು ಸಂತಸಗೊಂಡಿದ್ದಾರೆ. ಕಳೆದ ವರ್ಷ ಡಿಸೆಂಬರ್ನಲ್ಲಿ 12,000 ಎಲೆಗಳಿರುವ ಒಂದು ಡಾಗ್ (ಅಂಡಿಗಿ) ₹2 ಸಾವಿರದಿಂದ 3 ಸಾವಿರಕ್ಕೆ ಮಾರಾಟವಾಗುತ್ತಿತ್ತು. ಈಗ ದರ ₹6,000 ದಿಂದ ₹8,500ಕ್ಕೆ ಏರಿಕೆಯಾಗಿದೆ.</p>.<p>ಜಿಲ್ಲೆಯಲ್ಲಿ ಜಗದಾಳ, ನಾವಲಗಿ, ಬಾದಾಮಿ ತಾಲ್ಲೂಕಿನ ಚೊಳಚಗುಡ್ಡ ಸುತ್ತಲಿನ ಪ್ರದೇಶದಲ್ಲಿ ವೀಳ್ಯದೆಲೆ ಬೆಳೆಯಲಿದ್ದು, ಮುಂಬೈ, ಪುಣೆ, ಹೈದರಾಬಾದ್, ಬೆಂಗಳೂರು, ಸತಾರಾ, ಬೆಳಗಾವಿ ಕಡೆ ರವಾನೆಯಾಗುತ್ತದೆ. </p>.<p>‘ಒಂದು ಎಕರೆಯಲ್ಲಿ ವೀಳ್ಯದೆಲೆ ಕೃಷಿಗೆ ವರ್ಷಕ್ಕೆ ₹ 2.5 ರಿಂದ 3 ಲಕ್ಷ ಖರ್ಚಾಗುತ್ತದೆ. ಈ ಬಾರಿ ಚಳಿ ಹೆಚ್ಚಿದ್ದ ಕಾರಣ ಇಳುವರಿ ತಗ್ಗಿದೆ. ಈಗ ಎಲೆಬಳ್ಳಿ ಕಟ್ಟುವುದರಿಂದ ಫಸಲು ಕಡಿಮೆ ಇರುತ್ತದೆ’ ಎಂದು ಜಗದಾಳದ ರೈತ ಸದಾಶಿವ ಬಂಗಿ ತಿಳಿಸಿದರು.</p>.<p>ಶುಭ ಕಾರ್ಯಗಳು, ತಾಂಬೂಲ ಹಾಕುವವರಿಗೆ, ಪಾನ್ಶಾಪ್ಗಳಲ್ಲಿ ವೀಳ್ಯದೆಲೆಗಳು ಬೇಕು. ವೀಳ್ಯದೆಲೆಗಳಿಗೆ ವರ್ಷಪೂರ್ತಿ ಬೇಡಿಕೆ ಇರುತ್ತದೆ. ದರ ಏರಿಕೆಯಿಂದ ತಾಂಬೂಲ ಪ್ರಿಯರಿಗೆ ಬಿಸಿ ತಟ್ಟಿದೆ. </p>.<p>‘₹ 10ಕ್ಕೆ 25–30 ಎಲೆಗಳನ್ನು ನೀಡುತ್ತಿದ್ದರು. ಈಗ ಪ್ರತಿ ಎಲೆಗೆ ಒಂದು ರೂಪಾಯಿ ದರ ಇದೆ. ತಾಂಬೂಲದ ಉಳಿದ ವಸ್ತುಗಳ ಬೆಲೆ ಏರಿತ್ತು. ಈಗ ಎಲೆಗಳ ಬೆಲೆಯೂ ಹೆಚ್ಚಿದೆ’ ಎನ್ನುತ್ತಾರೆ ಶಂಕರಗೌಡ ಪಾಟೀಲ</p>.<p>ಮಧ್ಯವರ್ತಿಗಳ ಹಾವಳಿ: ‘ಬೇರೆ, ಬೇರೆ ರಾಜ್ಯಗಳಿಗೆ ವೀಳ್ಯದೆಲೆಯನ್ನು ಕಳುಹಿಸಬೇಕು. ಭಾಷಾ ಸಮಸ್ಯೆಯಿಂದ ರೈತರು ಹೋಗುವುದಿಲ್ಲ. ಕೆಲವರೇ ಮಧ್ಯವರ್ತಿಗಳಾಗಿ, ಹೊರ ರಾಜ್ಯಗಳಿಗೆ ಎಲೆಗಳನ್ನು ಕಳುಹಿಸಿಕೊಡುತ್ತಾರೆ. ಸ್ಥಳೀಯವಾಗಿಯೇ ಮಾರುಕಟ್ಟೆಯಾದರೆ ಅನುಕೂಲವಾಗುತ್ತದೆ’ ಎಂದು ಅವರು ತಿಳಿಸಿದರು.</p>.<div><blockquote>ಚೊಳಚಗುಡ್ಡ ಭಾಗದಲ್ಲಿ ಅಂಬಾಡಿ ಎಲೆ ಬೆಳೆಯಲಾಗುತ್ತದೆ. 10 ರಿಂದ 12 ದಿನ ಹಾಳಾಗುವುದಿಲ್ಲ. ಆದ್ದರಿಂದ ಇಲ್ಲಿನ ಎಲೆಗಳಿಗೆ ಉತ್ತಮ ಬೇಡಿಕೆ ಇದೆ</blockquote><span class="attribution">ಮೌನೇಶ ಮರಡಿ ರೈತ ಚೊಳಚಗುಡ್ಡ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>