<p><strong>ಕುಳಗೇರಿ ಕ್ರಾಸ್: </strong>ಸತತ ಮಳೆಯಾಗುತ್ತಿರುವುದರಿಂದ ಉಗಲವಾಟ–ಹಳಗೇರಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಬಂದ್ ಆಗಿದೆ.</p>.<p>ಮಳೆಗಾಲ ಬಂದರೆ ಈ ಗ್ರಾಮಗಳ ಜನರ ಹಾಗೂ ವಾಹನ ಸವಾರಿಗೆ ಪ್ರತಿ ವರ್ಷ ಇಂತಹ ಪರಿಸ್ಥಿತಿ ಎದುರಾಗುತ್ತದೆ.</p>.<p>ಉಗಲವಾಟ, ಹಳಗೇರಿ ಗ್ರಾಮಗಳ ಜಮೀನುಗಳಲ್ಲಿನ ಅಪಾರ ಪ್ರಮಾಣದ ನೀರು ಹರಿದು ಬಂದು ಈ ಸೇತುವೆ ಮುಳುಗಡೆಯಾಗುತ್ತದೆ. ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ಸುತ್ತುವರೆದು ಗ್ರಾಮಗಳನ್ನು ತಲುಪುವ ಸ್ಥಿತಿ ಎದುರಾಗಿದೆ.</p>.<p>ಹಳಗೇರಿ–ಉಗಲವಾಟ ಮಾರ್ಗವಾಗಿ ಬಾದಾಮಿಗೆ ತೆರಳುವವರಿಗೆ ಹಳಗೇರಿ ಗ್ರಾಮದ ಮುಂಭಾಗದಲ್ಲಿರುವ ಸೇತುವೆ ಹಾಗೂ ಉಗಲವಾಟ ಗ್ರಾಮದ ಹೇಮ-ವೇಮ ಪ್ರೌಢ ಶಾಲೆಯ ಮುಂಭಾಗದಲ್ಲಿರುವ ಸೇತುವೆ ಮುಳುಗಡೆಯಾಗುತ್ತವೆ. </p>.<p>ಮಳೆಗಾಲ ಸಮಯದಲ್ಲಿ ಹಳಗೇರಿ ಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿಗಳು ಉಗಲವಾಟ ಗ್ರಾಮದಲ್ಲಿರುವ ಎರಡು ಪ್ರೌಢ ಶಾಲೆಗಳಿಗೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಾರೆ. ಮಳೆಗಾಲದಲ್ಲಿ ಇವರು ಶಾಲೆಗೆ ಹೋಗಲು ಪರದಾಡಬೇಕಿದೆ.</p>.<p>ಈ ಸೇತುವೆಗಳನ್ನು ಎತ್ತರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲ ಎಂದು ಮುಷ್ಟಿಗೇರಿ ಗ್ರಾಮದ ಸಿದ್ದಲಿಂಗಪ್ಪ ಘಟ್ಟಿ, ಹಳಗೇರಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಾ ಸೀಮಿಕೇರಿ ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಳಗೇರಿ ಕ್ರಾಸ್: </strong>ಸತತ ಮಳೆಯಾಗುತ್ತಿರುವುದರಿಂದ ಉಗಲವಾಟ–ಹಳಗೇರಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಬಂದ್ ಆಗಿದೆ.</p>.<p>ಮಳೆಗಾಲ ಬಂದರೆ ಈ ಗ್ರಾಮಗಳ ಜನರ ಹಾಗೂ ವಾಹನ ಸವಾರಿಗೆ ಪ್ರತಿ ವರ್ಷ ಇಂತಹ ಪರಿಸ್ಥಿತಿ ಎದುರಾಗುತ್ತದೆ.</p>.<p>ಉಗಲವಾಟ, ಹಳಗೇರಿ ಗ್ರಾಮಗಳ ಜಮೀನುಗಳಲ್ಲಿನ ಅಪಾರ ಪ್ರಮಾಣದ ನೀರು ಹರಿದು ಬಂದು ಈ ಸೇತುವೆ ಮುಳುಗಡೆಯಾಗುತ್ತದೆ. ಈ ಮಾರ್ಗವಾಗಿ ಸಂಚರಿಸುವ ವಾಹನ ಸವಾರರು ಹಾಗೂ ಸಾರ್ವಜನಿಕರು ಸುತ್ತುವರೆದು ಗ್ರಾಮಗಳನ್ನು ತಲುಪುವ ಸ್ಥಿತಿ ಎದುರಾಗಿದೆ.</p>.<p>ಹಳಗೇರಿ–ಉಗಲವಾಟ ಮಾರ್ಗವಾಗಿ ಬಾದಾಮಿಗೆ ತೆರಳುವವರಿಗೆ ಹಳಗೇರಿ ಗ್ರಾಮದ ಮುಂಭಾಗದಲ್ಲಿರುವ ಸೇತುವೆ ಹಾಗೂ ಉಗಲವಾಟ ಗ್ರಾಮದ ಹೇಮ-ವೇಮ ಪ್ರೌಢ ಶಾಲೆಯ ಮುಂಭಾಗದಲ್ಲಿರುವ ಸೇತುವೆ ಮುಳುಗಡೆಯಾಗುತ್ತವೆ. </p>.<p>ಮಳೆಗಾಲ ಸಮಯದಲ್ಲಿ ಹಳಗೇರಿ ಗ್ರಾಮದ ಪ್ರೌಢಶಾಲಾ ವಿದ್ಯಾರ್ಥಿಗಳು ಉಗಲವಾಟ ಗ್ರಾಮದಲ್ಲಿರುವ ಎರಡು ಪ್ರೌಢ ಶಾಲೆಗಳಿಗೆ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಡೆದುಕೊಂಡು ಹೋಗುತ್ತಾರೆ. ಮಳೆಗಾಲದಲ್ಲಿ ಇವರು ಶಾಲೆಗೆ ಹೋಗಲು ಪರದಾಡಬೇಕಿದೆ.</p>.<p>ಈ ಸೇತುವೆಗಳನ್ನು ಎತ್ತರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲ ಎಂದು ಮುಷ್ಟಿಗೇರಿ ಗ್ರಾಮದ ಸಿದ್ದಲಿಂಗಪ್ಪ ಘಟ್ಟಿ, ಹಳಗೇರಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಾ ಸೀಮಿಕೇರಿ ದೂರಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>