<p><strong>ಬಾದಾಮಿ:</strong> ಚಾಲುಕ್ಯ ದೊರೆಗಳ ಆಡಳಿತವು ವಂಶಪರಂಪರೆಯಾಗಿತ್ತು. ಯುವರಾಜರು ಸ್ಥಳೀಯ ಆಡಳಿತವನ್ನು ನೋಡಿಕೊಳ್ಳುವುದರ ಜೊತೆಗೆ ತಂದೆಯ ಜೊತೆಗೆ ಯುದ್ಧಕ್ಕೆ ಹೋಗುತ್ತಿದ್ದರು ಎಂದು ಧಾರವಾಡ ಕರ್ನಾಟಕ ವಿವಿ ಇತಿಹಾಸ ಮತ್ತು ಪ್ರಾಚ್ಯವಸ್ತು ವಿಭಾಗದ ಮುಖ್ಯಸ್ಥ ಎಲ್.ಪಿ. ಮಾರುತಿ ಹೇಳಿದರು.</p>.<p>ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಎಸ್.ಬಿ. ಮಮದಾಪೂರ ಪದವಿ ಕಾಲೇಜಿನಲ್ಲಿ ಮಂಗಳವಾರ ಚಾಲುಕ್ಯ ಉತ್ಸವ-2026 ರ ಅಂಗವಾಗಿ ನಡೆದ ಚಾಲುಕ್ಯರ ಇತಿಹಾಸ ಗೋಷ್ಠಿಯಲ್ಲಿ ಅವರು ‘ ಬಾದಾಮಿ ಚಾಲುಕ್ಯರ ಅಡಳಿತ ಕುರಿತು ಉಪನ್ಯಾಸ ನೀಡಿದರು.</p>.<p>‘ಚಾಲುಕ್ಯರು ಮೊದಲು ಗುಹಾಂತರ ದೇವಾಲಯಗಳನ್ನು ನಂತರ ರಾಚನಿಕ ದೇವಾಲಯಗಳನ್ನು ರೂಪಿಸಿದರು. ದ್ರಾವಿಡ, ನಾಗರ, ವೇಸರ ಮತ್ತು ಕದಂಬ ಶೈಲಿಯ ದೇವಾಲಯಗಳಲ್ಲಿ ಪರಧರ್ಮ ಸಹಿಷ್ಣುತೆ ಸಾರುವ ಮೂರ್ತಿ ಶಿಲ್ಪಗಳನ್ನು ಕೆತ್ತನೆ ಮಾಡಿದರು ’ ಎಂದು ಕರ್ನಾಟಕ ವಿವಿ ನಿವೃತ್ತ ಪ್ರಾಧ್ಯಾಪಕ ಆರ್.ಎಂ. ಷಡಕ್ಷರಯ್ಯ ‘ ಬಾದಾಮಿ ಚಾಲುಕ್ಯರ ದೇವಾಲಯಗಳು ಮತ್ತು ವಾಸ್ತುಶಿಲ್ಪ ’ ಕುರಿತು ಉಪನ್ಯಾಸ ನೀಡಿದರು.</p>.<p>ನಿವೃತ್ತ ಪ್ರಾಧ್ಯಾಪಕ ರಾಜಶೇಖರ್ ಬಸುಪಟ್ಟದ ಅಧ್ಯಕ್ಷತೆ ವಹಿಸಿ ಚಾಲುಕ್ಯರ ರಾಜರ ಬಗ್ಗೆ ತಿಳಿಸಿದರು. ವಿ.ಎಂ. ಜೋಶಿ ಚಾಲುಕ್ಯರ ಕುರಿತು ಆಶಯ ನುಡಿಗಳನ್ನು ಹೇಳಿದರು.</p>.<p>ಇದೇ ಸಂದರ್ಭದಲ್ಲಿ ಕರ್ನಾಟಕ ವಿವಿ ನಿವೃತ್ತ ಪ್ರಾಧ್ಯಾಪಕ ಶ್ರೀನಿವಾಸ ಪಾಡಿಗಾರ ರಚಿಸಿದ ಬಾಗಲಕೋಟೆ ಜಿಲ್ಲಾ ಆಡಳಿತ ಪ್ರಕಟಿಸಿದ ‘ಬಾದಾಮಿ ಚಾಲುಕ್ಯರು ’ ಕುರಿತು ಕಿರು ಹೊತ್ತಿಗೆಯನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಸಿ. ಮನ್ನಿಕೇರಿ ಬಿಡುಗಡೆ ಮಾಡಿದರು. ಬಸಮ್ಮ ನರಸಾಫುರ ನಿರೂಪಿಸಿದರು. ಆರ್.ಬಿ. ಸಂಕದಾಳ ಸ್ವಾಗತಿಸಿದರು.</p>.<p>ಗೋಷ್ಠಿಯಲ್ಲಿ ತಾಲ್ಲೂಕಿನ ಪ್ರೌಢ ಶಾಲೆಗಳ ಕನ್ನಡ ಮತ್ತು ಇತಿಹಾಸ ಶಿಕ್ಷಕರು ಪಾಲ್ಗೊಂಡಿದ್ದರು.</p>.<p><strong>ಕಿರು ಹೊತ್ತಿಗೆ ವಿವರ :</strong></p>.<p><strong>ಕೃತಿ :</strong> ಬಾದಾಮಿ ಚಾಲುಕ್ಯರು (ರಾಜಕೀಯ ಮತ್ತು ಸಾಂಸ್ಕೃತಿ ಇತಿಹಾಸ 543-757)</p>.<p><strong>ಕೃತಿಕಾರ :</strong> ಶ್ರೀನಿವಾಸ ಪಾಡಿಗಾರ</p>.<p><strong>ಹಕ್ಕುಗಳು :</strong> ಚಾಲುಕ್ಯ ಉತ್ಸವ ಸಮಿತಿ ಬಾಗಲಕೋಟೆ</p>.<p><strong>ಮುದ್ರಣ :</strong> ಸುಹಾಸ್ ಗ್ರಾಫಿಕ್ ಬೆಂಗಳೂರು</p>.<p><strong>ಪುಟ:</strong> 28, <strong>ಬೆಲೆ:</strong> ₹50</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ:</strong> ಚಾಲುಕ್ಯ ದೊರೆಗಳ ಆಡಳಿತವು ವಂಶಪರಂಪರೆಯಾಗಿತ್ತು. ಯುವರಾಜರು ಸ್ಥಳೀಯ ಆಡಳಿತವನ್ನು ನೋಡಿಕೊಳ್ಳುವುದರ ಜೊತೆಗೆ ತಂದೆಯ ಜೊತೆಗೆ ಯುದ್ಧಕ್ಕೆ ಹೋಗುತ್ತಿದ್ದರು ಎಂದು ಧಾರವಾಡ ಕರ್ನಾಟಕ ವಿವಿ ಇತಿಹಾಸ ಮತ್ತು ಪ್ರಾಚ್ಯವಸ್ತು ವಿಭಾಗದ ಮುಖ್ಯಸ್ಥ ಎಲ್.ಪಿ. ಮಾರುತಿ ಹೇಳಿದರು.</p>.<p>ವೀರಪುಲಿಕೇಶಿ ವಿದ್ಯಾ ಸಂಸ್ಥೆಯ ಎಸ್.ಬಿ. ಮಮದಾಪೂರ ಪದವಿ ಕಾಲೇಜಿನಲ್ಲಿ ಮಂಗಳವಾರ ಚಾಲುಕ್ಯ ಉತ್ಸವ-2026 ರ ಅಂಗವಾಗಿ ನಡೆದ ಚಾಲುಕ್ಯರ ಇತಿಹಾಸ ಗೋಷ್ಠಿಯಲ್ಲಿ ಅವರು ‘ ಬಾದಾಮಿ ಚಾಲುಕ್ಯರ ಅಡಳಿತ ಕುರಿತು ಉಪನ್ಯಾಸ ನೀಡಿದರು.</p>.<p>‘ಚಾಲುಕ್ಯರು ಮೊದಲು ಗುಹಾಂತರ ದೇವಾಲಯಗಳನ್ನು ನಂತರ ರಾಚನಿಕ ದೇವಾಲಯಗಳನ್ನು ರೂಪಿಸಿದರು. ದ್ರಾವಿಡ, ನಾಗರ, ವೇಸರ ಮತ್ತು ಕದಂಬ ಶೈಲಿಯ ದೇವಾಲಯಗಳಲ್ಲಿ ಪರಧರ್ಮ ಸಹಿಷ್ಣುತೆ ಸಾರುವ ಮೂರ್ತಿ ಶಿಲ್ಪಗಳನ್ನು ಕೆತ್ತನೆ ಮಾಡಿದರು ’ ಎಂದು ಕರ್ನಾಟಕ ವಿವಿ ನಿವೃತ್ತ ಪ್ರಾಧ್ಯಾಪಕ ಆರ್.ಎಂ. ಷಡಕ್ಷರಯ್ಯ ‘ ಬಾದಾಮಿ ಚಾಲುಕ್ಯರ ದೇವಾಲಯಗಳು ಮತ್ತು ವಾಸ್ತುಶಿಲ್ಪ ’ ಕುರಿತು ಉಪನ್ಯಾಸ ನೀಡಿದರು.</p>.<p>ನಿವೃತ್ತ ಪ್ರಾಧ್ಯಾಪಕ ರಾಜಶೇಖರ್ ಬಸುಪಟ್ಟದ ಅಧ್ಯಕ್ಷತೆ ವಹಿಸಿ ಚಾಲುಕ್ಯರ ರಾಜರ ಬಗ್ಗೆ ತಿಳಿಸಿದರು. ವಿ.ಎಂ. ಜೋಶಿ ಚಾಲುಕ್ಯರ ಕುರಿತು ಆಶಯ ನುಡಿಗಳನ್ನು ಹೇಳಿದರು.</p>.<p>ಇದೇ ಸಂದರ್ಭದಲ್ಲಿ ಕರ್ನಾಟಕ ವಿವಿ ನಿವೃತ್ತ ಪ್ರಾಧ್ಯಾಪಕ ಶ್ರೀನಿವಾಸ ಪಾಡಿಗಾರ ರಚಿಸಿದ ಬಾಗಲಕೋಟೆ ಜಿಲ್ಲಾ ಆಡಳಿತ ಪ್ರಕಟಿಸಿದ ‘ಬಾದಾಮಿ ಚಾಲುಕ್ಯರು ’ ಕುರಿತು ಕಿರು ಹೊತ್ತಿಗೆಯನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎ.ಸಿ. ಮನ್ನಿಕೇರಿ ಬಿಡುಗಡೆ ಮಾಡಿದರು. ಬಸಮ್ಮ ನರಸಾಫುರ ನಿರೂಪಿಸಿದರು. ಆರ್.ಬಿ. ಸಂಕದಾಳ ಸ್ವಾಗತಿಸಿದರು.</p>.<p>ಗೋಷ್ಠಿಯಲ್ಲಿ ತಾಲ್ಲೂಕಿನ ಪ್ರೌಢ ಶಾಲೆಗಳ ಕನ್ನಡ ಮತ್ತು ಇತಿಹಾಸ ಶಿಕ್ಷಕರು ಪಾಲ್ಗೊಂಡಿದ್ದರು.</p>.<p><strong>ಕಿರು ಹೊತ್ತಿಗೆ ವಿವರ :</strong></p>.<p><strong>ಕೃತಿ :</strong> ಬಾದಾಮಿ ಚಾಲುಕ್ಯರು (ರಾಜಕೀಯ ಮತ್ತು ಸಾಂಸ್ಕೃತಿ ಇತಿಹಾಸ 543-757)</p>.<p><strong>ಕೃತಿಕಾರ :</strong> ಶ್ರೀನಿವಾಸ ಪಾಡಿಗಾರ</p>.<p><strong>ಹಕ್ಕುಗಳು :</strong> ಚಾಲುಕ್ಯ ಉತ್ಸವ ಸಮಿತಿ ಬಾಗಲಕೋಟೆ</p>.<p><strong>ಮುದ್ರಣ :</strong> ಸುಹಾಸ್ ಗ್ರಾಫಿಕ್ ಬೆಂಗಳೂರು</p>.<p><strong>ಪುಟ:</strong> 28, <strong>ಬೆಲೆ:</strong> ₹50</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>