<p><strong>ತೇರದಾಳ</strong>: ‘ಹಬ್ಬಗಳನ್ನು ಸೌಹಾರ್ದದಿಂದ ಆಚರಿಸಿದರೆ ಮಾತ್ರ ಅದಕ್ಕೊಂದು ಬೆಲೆ. ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಅನ್ನು ಕೋಮು ಸೌಹಾರ್ದದಿಂದ ಆಚರಿಸುವ ಮೂಲಕ ತಾಲ್ಲೂಕು ಆಡಳಿತಕ್ಕೆ ಸಹಕಾರ ನೀಡಬೇಕು’ ಎಂದು ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ ಹೇಳಿದರು.</p>.<p>ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸೋಮವಾರ ಜರುಗಿದ ಶಾಂತಿ ಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಹಬ್ಬ ಆಚರಣೆಯಲ್ಲಿ ಸಡಗರ– ಸಂಭ್ರಮವಿರಲಿ. ಸಂಬಂಧಗಳು ಕೆಡುವಂತಹ ಸಂಘರ್ಷಗಳು ಬೇಡ. ಚಿಕ್ಕ– ಪುಟ್ಟ ವಿಷಯಗಳಿಗೆ ತಕರಾರು ಮಾಡಿಕೊಳ್ಳದೆ ನಾವೆಲ್ಲರೂ ಒಂದು ಎಂಬ ಭಾವದಿಂದ ಇರಬೇಕು’ ಎಂದರು.</p>.<p>ಪುರಸಭೆ ಮುಖ್ಯಾಧಿಕಾರಿ ಎಫ್.ಬಿ. ಗಿಡ್ಡಿ ಮಾತನಾಡಿ, ‘ಬಸ್ ನಿಲ್ದಾಣದ ಬಳಿಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿಯೇ ಪಟಾಕಿ ಅಂಗಡಿಗಳನ್ನು ಹಾಕಿಸಲಾಗುವುದು. ಗಣೇಶ ವಿಸರ್ಜನೆಗೂ ಪ್ರತಿ ವರ್ಷದಂತೆ ಹೊಂಡವನ್ನು ಮಾಡಲಾಗುತ್ತದೆ. ಪರಿಸರ ರಕ್ಷಣೆ ಹಾಗೂ ಸಂರಕ್ಷಣೆಗೆ ಎಲ್ಲರೂ ಗಮನ ಕೊಡಬೇಕು’ ಎಂದರು.</p>.<p>ಪಿಎಸ್ಐ ಶಿವಾನಂದ ಸಿಂಗನ್ನವರ, ‘ಠಾಣೆ ವ್ಯಾಪ್ತಿಯಲ್ಲಿ ಸುಮಾರು 122 ಸ್ಥಳಗಳಲ್ಲಿ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುತ್ತವೆ. ಸುಮಾರು 3– 4 ಮುಸಲ್ಮಾನ್ ಕಮಿಟಿಯವರಿಂದ ಈದ್ ಮಿಲಾದ್ ಅಂಗವಾಗಿ ವೇದಿಕೆ ಹಾಗೂ ಮೆರವಣಿಗೆ ಕಾರ್ಯಕ್ರಮಗಳು ನಡೆಯುತ್ತವೆ. ಎಲ್ಲರೂ ನಿಯಮಗಳನ್ನು ಪಾಲಿಸಿ, ಸೌಹಾರ್ದದಿಂದ ಆಚರಿಸಬೇಕು. 16 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುತ್ತೇವೆ’ ಎಂದರು.</p>.<p>ಹೆಸ್ಕಾಂ ಎಸ್ಒ ಬಸವರಾಜ ಬಿರಾದಾರ ಮಾತನಾಡಿದರು. ಮುಖಂಡರಾದ ಹಣಮಂತ ರೋಡಕರ, ಸಂತೋಷ ಜಮಖಂಡಿ, ಶಂಕರ ಕುಂಬಾರ, ಅಮ್ಜದ್ಖಾನ್ ಇನಾಮ್ದಾರ, ಎಎಸ್ಐ ಎಂ.ಎಂ. ಗುಂಜಟ್ಟಿ, ಪುರಸಭೆ ಸದಸ್ಯರು, ಹಾಗೂ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮ ಮುಖಂಡರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೇರದಾಳ</strong>: ‘ಹಬ್ಬಗಳನ್ನು ಸೌಹಾರ್ದದಿಂದ ಆಚರಿಸಿದರೆ ಮಾತ್ರ ಅದಕ್ಕೊಂದು ಬೆಲೆ. ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಅನ್ನು ಕೋಮು ಸೌಹಾರ್ದದಿಂದ ಆಚರಿಸುವ ಮೂಲಕ ತಾಲ್ಲೂಕು ಆಡಳಿತಕ್ಕೆ ಸಹಕಾರ ನೀಡಬೇಕು’ ಎಂದು ತೇರದಾಳ ತಹಶೀಲ್ದಾರ್ ವಿಜಯಕುಮಾರ ಕಡಕೋಳ ಹೇಳಿದರು.</p>.<p>ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸೋಮವಾರ ಜರುಗಿದ ಶಾಂತಿ ಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ಹಬ್ಬ ಆಚರಣೆಯಲ್ಲಿ ಸಡಗರ– ಸಂಭ್ರಮವಿರಲಿ. ಸಂಬಂಧಗಳು ಕೆಡುವಂತಹ ಸಂಘರ್ಷಗಳು ಬೇಡ. ಚಿಕ್ಕ– ಪುಟ್ಟ ವಿಷಯಗಳಿಗೆ ತಕರಾರು ಮಾಡಿಕೊಳ್ಳದೆ ನಾವೆಲ್ಲರೂ ಒಂದು ಎಂಬ ಭಾವದಿಂದ ಇರಬೇಕು’ ಎಂದರು.</p>.<p>ಪುರಸಭೆ ಮುಖ್ಯಾಧಿಕಾರಿ ಎಫ್.ಬಿ. ಗಿಡ್ಡಿ ಮಾತನಾಡಿ, ‘ಬಸ್ ನಿಲ್ದಾಣದ ಬಳಿಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿಯೇ ಪಟಾಕಿ ಅಂಗಡಿಗಳನ್ನು ಹಾಕಿಸಲಾಗುವುದು. ಗಣೇಶ ವಿಸರ್ಜನೆಗೂ ಪ್ರತಿ ವರ್ಷದಂತೆ ಹೊಂಡವನ್ನು ಮಾಡಲಾಗುತ್ತದೆ. ಪರಿಸರ ರಕ್ಷಣೆ ಹಾಗೂ ಸಂರಕ್ಷಣೆಗೆ ಎಲ್ಲರೂ ಗಮನ ಕೊಡಬೇಕು’ ಎಂದರು.</p>.<p>ಪಿಎಸ್ಐ ಶಿವಾನಂದ ಸಿಂಗನ್ನವರ, ‘ಠಾಣೆ ವ್ಯಾಪ್ತಿಯಲ್ಲಿ ಸುಮಾರು 122 ಸ್ಥಳಗಳಲ್ಲಿ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೊಳ್ಳುತ್ತವೆ. ಸುಮಾರು 3– 4 ಮುಸಲ್ಮಾನ್ ಕಮಿಟಿಯವರಿಂದ ಈದ್ ಮಿಲಾದ್ ಅಂಗವಾಗಿ ವೇದಿಕೆ ಹಾಗೂ ಮೆರವಣಿಗೆ ಕಾರ್ಯಕ್ರಮಗಳು ನಡೆಯುತ್ತವೆ. ಎಲ್ಲರೂ ನಿಯಮಗಳನ್ನು ಪಾಲಿಸಿ, ಸೌಹಾರ್ದದಿಂದ ಆಚರಿಸಬೇಕು. 16 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸುತ್ತೇವೆ’ ಎಂದರು.</p>.<p>ಹೆಸ್ಕಾಂ ಎಸ್ಒ ಬಸವರಾಜ ಬಿರಾದಾರ ಮಾತನಾಡಿದರು. ಮುಖಂಡರಾದ ಹಣಮಂತ ರೋಡಕರ, ಸಂತೋಷ ಜಮಖಂಡಿ, ಶಂಕರ ಕುಂಬಾರ, ಅಮ್ಜದ್ಖಾನ್ ಇನಾಮ್ದಾರ, ಎಎಸ್ಐ ಎಂ.ಎಂ. ಗುಂಜಟ್ಟಿ, ಪುರಸಭೆ ಸದಸ್ಯರು, ಹಾಗೂ ಠಾಣಾ ವ್ಯಾಪ್ತಿಯ ವಿವಿಧ ಗ್ರಾಮ ಮುಖಂಡರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>