<p><strong>ಕೆರೂರ (ಬಾಗಲಕೋಟೆ)</strong>: ‘ಉಗಲವಾಟ ಗ್ರಾಮದಲ್ಲಿ ದ್ಯಾಮವ್ವನ ಗುಡಿಗೆ ಹೋಗಿದ್ದಕ್ಕೆ ಕೆಲವರು ನನ್ನನ್ನು ನಾಲ್ಕು ದಿನದ ಹಿಂದೆ ಕಂಬಕ್ಕೆ ಕಟ್ಟಿ ಬಡಿದಿದ್ದಾರೆ’ ಎಂದು ಅರ್ಜುನ ಮಾದರ ಎಂಬುವರು ಕೆರೂರ ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿದ್ದಾರೆ.</p>.<p>‘ದಲಿತನಾದ ನೀನು ದ್ಯಾಮವ್ವನ ಗುಡಿಯ ಗರ್ಭ ಗುಡಿಯೊಳಕ್ಕೆ ಏಕೆ ಹೋಗಿದ್ದಿ ಎಂದು ಕಂಬಕ್ಕೆ ಕಟ್ಟಿ ಹೊಡೆದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p>‘ಮುದಿಗೌಡ ಸತ್ಯಣ್ಣವರ, ಮಂಜುನಾಥ ಮೂಲಿಮನಿ, ತುಳಸಿಗೇರಪ್ಪ ತಳವಾರ ಇನ್ನೂ 18 ಜನರು ಸೇರಿ ಅವ್ಯಾಚ್ಯವಾಗಿ ಬೈದಿದ್ದಾರೆ’ ಎಂದು ದೂರಿನಲ್ಲಿ ಹೆಸರಿಸಲಾಗಿದೆ. </p>.<p>‘ಕೇರಿ ಜನರು ನಮ್ಮ ಏರಿಯಾಕ್ಕೆ ಬರಬೇಡಿ. ನೀವು ನಿಮ್ಮ ಏರಿಯಾದಲ್ಲಿರಿ. ನಾವು ನಮ್ಮ ಏರಿಯಾದಲ್ಲಿರುತ್ತೇವೆ ಎಂದು ಡಂಗುರ ಸಾರಲಾಗಿತ್ತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಮರನಾಥ ರೆಡ್ಡಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆರೂರ (ಬಾಗಲಕೋಟೆ)</strong>: ‘ಉಗಲವಾಟ ಗ್ರಾಮದಲ್ಲಿ ದ್ಯಾಮವ್ವನ ಗುಡಿಗೆ ಹೋಗಿದ್ದಕ್ಕೆ ಕೆಲವರು ನನ್ನನ್ನು ನಾಲ್ಕು ದಿನದ ಹಿಂದೆ ಕಂಬಕ್ಕೆ ಕಟ್ಟಿ ಬಡಿದಿದ್ದಾರೆ’ ಎಂದು ಅರ್ಜುನ ಮಾದರ ಎಂಬುವರು ಕೆರೂರ ಪೊಲೀಸ್ ಠಾಣೆಗೆ ಶನಿವಾರ ದೂರು ನೀಡಿದ್ದಾರೆ.</p>.<p>‘ದಲಿತನಾದ ನೀನು ದ್ಯಾಮವ್ವನ ಗುಡಿಯ ಗರ್ಭ ಗುಡಿಯೊಳಕ್ಕೆ ಏಕೆ ಹೋಗಿದ್ದಿ ಎಂದು ಕಂಬಕ್ಕೆ ಕಟ್ಟಿ ಹೊಡೆದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.</p>.<p>‘ಮುದಿಗೌಡ ಸತ್ಯಣ್ಣವರ, ಮಂಜುನಾಥ ಮೂಲಿಮನಿ, ತುಳಸಿಗೇರಪ್ಪ ತಳವಾರ ಇನ್ನೂ 18 ಜನರು ಸೇರಿ ಅವ್ಯಾಚ್ಯವಾಗಿ ಬೈದಿದ್ದಾರೆ’ ಎಂದು ದೂರಿನಲ್ಲಿ ಹೆಸರಿಸಲಾಗಿದೆ. </p>.<p>‘ಕೇರಿ ಜನರು ನಮ್ಮ ಏರಿಯಾಕ್ಕೆ ಬರಬೇಡಿ. ನೀವು ನಿಮ್ಮ ಏರಿಯಾದಲ್ಲಿರಿ. ನಾವು ನಮ್ಮ ಏರಿಯಾದಲ್ಲಿರುತ್ತೇವೆ ಎಂದು ಡಂಗುರ ಸಾರಲಾಗಿತ್ತು’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಅಮರನಾಥ ರೆಡ್ಡಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>