ಪತ್ರ ಬರೆದರೂ ಬಿಡುಗಡೆಯಾಗಿಲ್ಲ ನೀರು
ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೂಡಲೇ 2 ಟಿಎಂಸಿ ಅಡಿ ನೀರು ಬಿಡುಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹಾರಾಷ್ಟ್ರದ ಮುಖ್ಯಮಂತ್ರಿಗೆ ಪತ್ರ ಬರೆದರೂ ತಿಂಗಳು ಕಳೆದರೂ ನೀರು ಬಿಡಗುಡೆಯಾಗಿಲ್ಲ. ಈ ಹಿಂದಿನ ವರ್ಷಗಳಲ್ಲಿ ಮಹಾರಾಷ್ಟ್ರ ಸರ್ಕಾರ ನೀರು ಬಿಡುಗಡೆ ಮಾಡುತ್ತಿತ್ತು. ಈ ಬಾರಿ ಬಿಡುಗಡೆ ಮಾಡಿಲ್ಲವಾದ್ದರಿಂದ ಕೆಲವು ಕಡೆಗಳಲ್ಲಿ ನೀರಿಗೆ ತೊಂದರೆಯಾಗಿದೆ.