ಗುಳೇದಗುಡ್ಡ: ತಾಲ್ಲೂಕಿನ ಕೋಟೇಕಲ್ ಗ್ರಾಮದಿಂದ ಗುಳೇದಗುಡ್ಡ ಪಟ್ಟಣದ ಗುಲಾಬ ಟಾಕೀಜ್ ವರೆಗೆ ರಾಜ್ಯ ಹೆದ್ದಾರಿ ನಿರ್ಮಾಣವಾಗಿದ್ದು, ಹೆದ್ದಾರಿ ತುಂಬ ಉಸುಕು ಮಣ್ಣು ಬಿದ್ದಿದ್ದು ನಿತ್ಯ ರಸ್ತೆ ಮೇಲೆ ವಾಹನ ದಟ್ಟಣೆ ಸಂಚಾರ ಇರುವುದರಿಂದ ರಸ್ತೆ ಪಕ್ಕ ಇರುವ ವ್ಯಾಪಾರ ಮಳಿಗೆಯವರಿಗೆ ಬೈಕ್ ಸವಾರರಿಗೆ ಸಂಚರಿಸುವ ವಾಹನದ ದೂಳಿನಿಂದ ತೀವ್ರ ತೊಂದರೆಯಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಪಟ್ಟಣದ ನಾಗರಿಕರಾದ ಶಂಕರ ಜಿಗಳೂರ ಹಾಗೂ ವಿ.ಕೆ.ಬದಿ ಹೇಳಿದರು.