<p><strong>ಬಾಗಲಕೋಟೆ: </strong>ನೇಕಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಜಿಲ್ಲೆಯ ನೇಕಾರ ಸಮುದಾಯದ ಒಕ್ಕೂಟ ಗುರುವಾರ ಒತ್ತಾಯಿಸಿತು.</p>.<p>ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ಎಂ.ಎಂ.ಹಂಡಿ, ನೇಕಾರ ಸಮುದಾಯವರು ಕಡುಬಡವ<br />ರಾಗಿದ್ದಾರೆ. ಸೀಮಿತ ಆದಾಯದಲ್ಲಿ ಬದುಕುತ್ತಿದ್ದಾರೆ ಈಗಲೂ ವಾರಕ್ಕೆ ಮೂರು ಸೀರೆ ನೇಯ್ದು ಅದರಲ್ಲಿ ಸಿಗುವ ಮಜೂರಿ ₹600ರಲ್ಲಿ ಬದುಕುವುದನ್ನು ಕಾಣಬಹುದು ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಸರ್ಕಾರ ನೇಕಾರರ ಅಭಿವೃದ್ಧಿಗೆ ನಿಗಮ ಸ್ಥಾಪನೆ ಮಾಡಿದರೆ ಅದರಿಂದ ಸಮುದಾಯದ ಸರ್ವಾಂಗೀಣಅಭಿವೃದ್ಧಿಗೆ ನೆರವಾಗಲಿದೆ. ಸರ್ಕಾರದ ಸವಲತ್ತುಗಳು ನೈಜ ಫಲಾನುಭವಿಗಳಿಗೆ ತಲುಪಲು ನೆರವಾಗಲಿದೆ ಎಂದು ತಿಳಿಸಿದರು.</p>.<p>ನೇಕಾರರ ಒಕ್ಕೂಟದಲ್ಲಿ ಕುರುಹಿನಶೆಟ್ಟಿ, ಪಸ್ಮಸಾಲಿ, ಸ್ವಕುಳಸಾಲಿ, ಹಟಗಾರ, ಬಣಗಾರ, ಶಿಂಪಿ, ಶಿವಶಿಂಪಿ, ಪಟ್ಟಸಾಲಿ, ಮಗ್ಗ, ಬಳಿಮಗ್ಗ, ಜಾಡ, ಕುರ್ಣಿ, ಕೋಷ್ಠಿ, ತೊಗಟವೀರ, ದೇವಾಂಗ ಸಮಾಜದವರು ಇದ್ದಾರೆ. ಈ ಸಮುದಾಯಗಳನ್ನು ಪ್ರವರ್ಗ 2ಎ ಮೀಸಲಾತಿ ಅಡಿಯಲ್ಲಿ ಗುರುತಿಸಿ ಸವಲತ್ತುಗಳನ್ನು ಕೊಡಲಾಗುತ್ತಿದೆ. ಆದರೆ ಆ ಪ್ರವರ್ಗದಲ್ಲಿ ಪ್ರಬಲ ಸಮುದಾಯದವರು ಇದ್ದು, ನೇಕಾರ ಸಮುದಾಯದವರು ಸವಲತ್ತು ವಂಚಿತರಾಗುತ್ತಿದ್ದಾರೆ. ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸಿದಲ್ಲಿ ಈ ಅಸಮತೋಲನ ತಪ್ಪಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಡಾ.ಎಂ.ಎಸ್.ದಡ್ಡೇನವರ, ಮುರಿಗೆಪ್ಪ ನಾರಾ, ಶ್ರೀನಿವಾಸ ಬಳ್ಳಾರಿ, ಕುಪ್ಪಸ್ತ, ಶಿರಗಣ್ಣವರ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ: </strong>ನೇಕಾರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಜಿಲ್ಲೆಯ ನೇಕಾರ ಸಮುದಾಯದ ಒಕ್ಕೂಟ ಗುರುವಾರ ಒತ್ತಾಯಿಸಿತು.</p>.<p>ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ಎಂ.ಎಂ.ಹಂಡಿ, ನೇಕಾರ ಸಮುದಾಯವರು ಕಡುಬಡವ<br />ರಾಗಿದ್ದಾರೆ. ಸೀಮಿತ ಆದಾಯದಲ್ಲಿ ಬದುಕುತ್ತಿದ್ದಾರೆ ಈಗಲೂ ವಾರಕ್ಕೆ ಮೂರು ಸೀರೆ ನೇಯ್ದು ಅದರಲ್ಲಿ ಸಿಗುವ ಮಜೂರಿ ₹600ರಲ್ಲಿ ಬದುಕುವುದನ್ನು ಕಾಣಬಹುದು ಎಂದು ಬೇಸರ ವ್ಯಕ್ತಪಡಿಸಿದರು.</p>.<p>ಸರ್ಕಾರ ನೇಕಾರರ ಅಭಿವೃದ್ಧಿಗೆ ನಿಗಮ ಸ್ಥಾಪನೆ ಮಾಡಿದರೆ ಅದರಿಂದ ಸಮುದಾಯದ ಸರ್ವಾಂಗೀಣಅಭಿವೃದ್ಧಿಗೆ ನೆರವಾಗಲಿದೆ. ಸರ್ಕಾರದ ಸವಲತ್ತುಗಳು ನೈಜ ಫಲಾನುಭವಿಗಳಿಗೆ ತಲುಪಲು ನೆರವಾಗಲಿದೆ ಎಂದು ತಿಳಿಸಿದರು.</p>.<p>ನೇಕಾರರ ಒಕ್ಕೂಟದಲ್ಲಿ ಕುರುಹಿನಶೆಟ್ಟಿ, ಪಸ್ಮಸಾಲಿ, ಸ್ವಕುಳಸಾಲಿ, ಹಟಗಾರ, ಬಣಗಾರ, ಶಿಂಪಿ, ಶಿವಶಿಂಪಿ, ಪಟ್ಟಸಾಲಿ, ಮಗ್ಗ, ಬಳಿಮಗ್ಗ, ಜಾಡ, ಕುರ್ಣಿ, ಕೋಷ್ಠಿ, ತೊಗಟವೀರ, ದೇವಾಂಗ ಸಮಾಜದವರು ಇದ್ದಾರೆ. ಈ ಸಮುದಾಯಗಳನ್ನು ಪ್ರವರ್ಗ 2ಎ ಮೀಸಲಾತಿ ಅಡಿಯಲ್ಲಿ ಗುರುತಿಸಿ ಸವಲತ್ತುಗಳನ್ನು ಕೊಡಲಾಗುತ್ತಿದೆ. ಆದರೆ ಆ ಪ್ರವರ್ಗದಲ್ಲಿ ಪ್ರಬಲ ಸಮುದಾಯದವರು ಇದ್ದು, ನೇಕಾರ ಸಮುದಾಯದವರು ಸವಲತ್ತು ವಂಚಿತರಾಗುತ್ತಿದ್ದಾರೆ. ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸಿದಲ್ಲಿ ಈ ಅಸಮತೋಲನ ತಪ್ಪಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಡಾ.ಎಂ.ಎಸ್.ದಡ್ಡೇನವರ, ಮುರಿಗೆಪ್ಪ ನಾರಾ, ಶ್ರೀನಿವಾಸ ಬಳ್ಳಾರಿ, ಕುಪ್ಪಸ್ತ, ಶಿರಗಣ್ಣವರ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>