ನೇಕಾರರ ಒಕ್ಕೂಟದಲ್ಲಿ ಕುರುಹಿನಶೆಟ್ಟಿ, ಪಸ್ಮಸಾಲಿ, ಸ್ವಕುಳಸಾಲಿ, ಹಟಗಾರ, ಬಣಗಾರ, ಶಿಂಪಿ, ಶಿವಶಿಂಪಿ, ಪಟ್ಟಸಾಲಿ, ಮಗ್ಗ, ಬಳಿಮಗ್ಗ, ಜಾಡ, ಕುರ್ಣಿ, ಕೋಷ್ಠಿ, ತೊಗಟವೀರ, ದೇವಾಂಗ ಸಮಾಜದವರು ಇದ್ದಾರೆ. ಈ ಸಮುದಾಯಗಳನ್ನು ಪ್ರವರ್ಗ 2ಎ ಮೀಸಲಾತಿ ಅಡಿಯಲ್ಲಿ ಗುರುತಿಸಿ ಸವಲತ್ತುಗಳನ್ನು ಕೊಡಲಾಗುತ್ತಿದೆ. ಆದರೆ ಆ ಪ್ರವರ್ಗದಲ್ಲಿ ಪ್ರಬಲ ಸಮುದಾಯದವರು ಇದ್ದು, ನೇಕಾರ ಸಮುದಾಯದವರು ಸವಲತ್ತು ವಂಚಿತರಾಗುತ್ತಿದ್ದಾರೆ. ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸಿದಲ್ಲಿ ಈ ಅಸಮತೋಲನ ತಪ್ಪಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರಾದ ಡಾ.ಎಂ.ಎಸ್.ದಡ್ಡೇನವರ, ಮುರಿಗೆಪ್ಪ ನಾರಾ, ಶ್ರೀನಿವಾಸ ಬಳ್ಳಾರಿ, ಕುಪ್ಪಸ್ತ, ಶಿರಗಣ್ಣವರ ಹಾಜರಿದ್ದರು.