‘ನೀವು ಮಾಧ್ಯಮದವರು ಯಾವ ಅಂಗಡಿಗೆ ಹೋಗಿ ಅಲ್ಲಿ ರಸಗೊಬ್ಬರ ಇದೆ ಎಂದು ಪರಿಶೀಲಿಸಿ ವರದಿ ಮಾಡಿದ್ದೀರಿ. ಅಧಿಕಾರಿಗಳು, ಜನಪ್ರತಿನಿಧಿಗಳು ಹೇಳಿದ್ದನ್ನು ಬರೆಯುತ್ತೀರಿ. ಇಂದಿನ ಸಮಸ್ಯೆಗೆ ಪರೋಕ್ಷವಾಗಿ ನೀವು ಕಾರಣರಾಗಿದ್ದೀರಿ. ವಾಸ್ತವ ಸಂಗತಿ ಬರೆದು ರೈತರಿಗೆ ನೆರವಾಗಿ’ ಎಂದು ಮಾಧ್ಯಮದವರನ್ನೂ ತರಾಟೆಗೆ ತೆಗೆದುಕೊಂಡರು.