ಕಲಾದಗಿಯ ಕೆ.ಆರ್. ಶಿಲ್ಪಿ ಅವರು ಸೇರಿದಂತೆ ನಾಲ್ವರು ಬಾಗಲಕೋಟೆಯಿಂದ ಗ್ರಾಮಕ್ಕೆ ಬರುತ್ತಿದ್ದಾಗ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಅವರು ಕಾರು ನಿಲ್ಲಿಸಿ, ಕೆಳಗಿಳಿದರು. ಬೆಂಕಿ ಇಡೀ ಕಾರು ಆವರಿಸಿಕೊಂಡಿತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು, ಬೆಂಕಿ ನಂದಿಸಿದರು. ಪಿಎಸ್ಐ ವಿಠ್ಠಲ ಹಾವನ್ನವರ ಭೇಟಿ ನೀಡಿ, ಪರಿಶೀಲಿಸಿದರು.