<p><strong>ಬಾಗಲಕೋಟೆ:</strong> ನವನಗರದಲ್ಲಿರುವ ಸಂಚಾರಿ ಪೊಲೀಸ್ ಠಾಣೆ ಪಕ್ಕ, ಎದುರಿನ ಫುಟ್ಪಾತ್ ಅತಿಕ್ರಮಣವಾಗಿದೆ. ಇದರಿಂದಾಗಿ ಜನರು ಕೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ.</p>.<p>ಪೊಲೀಸ್ ಠಾಣೆಯ ಒಳಗೆ, ಹೊರಗೆ ಹೋಗಬೇಕಾದರೆ ಫುಟ್ಪಾತ್ ಅತಿಕ್ರಮಣವಾಗಿರುವುದು ಕಾಣುತ್ತದೆ. ಆದರೂ, ಸಂಚಾರಿ ಪೊಲೀಸರು ಜಾಣ ಮೌನ ವಹಿಸಿದ್ದಾರೆ. ನವನಗರ ನಿರ್ವಹಣೆ ಮಾಡುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ತನಗೆ ಸಂಬಂಧವಿಲ್ಲ ಎನ್ನುವಂತಿದೆ.</p>.<p>ಪೊಲೀಸ್ ಠಾಣೆ ಮುಂದೆ ನಿಂತು ಹೆಲ್ಮೆಟ್ ಇಲ್ಲದೇ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ದಂಡ ಹಾಕಲಾಗುತ್ತದೆ. ಆ ಮೂಲಕ ಅವರಿಗೆ ಜೀವರಕ್ಷಣೆಯ ಪಾಠ ಹೇಳಲಾಗುತ್ತದೆ. ಆದರೆ, ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪಾದಚಾರಿಗಳ ಬಗೆಗೆ ಕಾಳಜಿ ತೋರಿಸುತ್ತಿಲ್ಲ.</p>.<p>ಸಂಚಾರಿ ಪೊಲೀಸ್ ಠಾಣೆ ಕಾಂಪೌಂಡ್ ಪಕ್ಕದಲ್ಲಿರುವ ಸ್ಟೀಟ್ ಅಂಗಡಿ ಫುಟ್ಪಾತ್ ಅತಿಕ್ರಮಣ ಮಾಡಿಕೊಂಡಿದೆ. ಅಲ್ಲಿ ಸಂಜೆ ಗ್ರಾಹಕರಿಗೆ ಕುಳಿತುಕೊಳ್ಳಲು ಟೇಬಲ್, ಕುರ್ಚಿ ಹಾಕಲಾಗುತ್ತದೆ. ಅಲ್ಲಿಂದ ಹೋಗುವವರು ರಸ್ತೆ ಇಳಿದು ಮತ್ತೇ ಫುಟ್ಪಾತ್ ಹತ್ತಬೇಕಾದ ಸ್ಥಿತಿ ಇದೆ.</p>.<p>ಠಾಣೆ ಅನತಿ ದೂರದಲ್ಲಿರುವ ಎದುರುಗಡೆಯಲ್ಲಿಯೂ ಅಂಗಡಿಗಳನ್ನು ಇಡಲಾಗಿದ್ದು, ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ಕೂಗಳತೆ ದೂರದಲ್ಲಿರುವ ತಹಶೀಲ್ದಾರ್, ಉಪವಿಭಾಗದ ಕಚೇರಿ ಮುಂದಿನ ಪರಿಸ್ಥಿತಿಯೂ ಭಿನ್ನವಾಗಿಲ್ಲ.</p>.<p>ಫುಟ್ಪಾತ್ ಜಾಗದಲ್ಲಿ ಸಾಕಷ್ಟು ಗೂಡಂಗಡಿಗಳನ್ನು ಇಡಲಾಗಿದ್ದರೂ, ಸಂಚಾರಿ ಪೊಲೀಸರಿಗೆ ಕಾಣದಿರುವುದು ಸೋಜಿಗ. ಪಾದಚಾರಿಗಳ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ. ಇದರಿಂದಾಗಿ ಆಗಾಗ ಅಪಘಾತಗಳು ನಡೆಯುತ್ತವೆ.</p>.<p>ಒಂದೆಡೆ ಜಿಲ್ಲಾಧಿಕಾರಿ ಕಚೇರಿ, ಒನ್ನೊಂದೆಡೆ ನವನಗರ ಬಸ್ ನಿಲ್ದಾಣ, ಮತ್ತೊಂದೆಡೆ ತಹಶೀಲ್ದಾರ್, ಉಪನೋಂದಣಿ ಅಧಿಕಾರಿ ಕಚೇರಿಗಳಿವೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಸಾವಿರಾರು ಜನರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಅವರಿಗೆ ಸುರಕ್ಷತೆ ಒದಗಿಸುವ ಕೆಲಸ ಆಗಬೇಕಿದೆ.</p>.<p>ಬಾಗಲಕೋಟೆಯ ಹಲವು ಪ್ರದೇಶ, ನವನಗರದ ವಿವಿಧೆಡೆಯೂ ಫುಟ್ಪಾತ್ ಅತಿಕ್ರಮಣವಾಗಿದೆ. ವೃತ್ತಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಸಂಚಾರಿ ಪೊಲೀಸರು ನಿತ್ಯ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರೂ ಫುಟ್ಪಾತ್ನತ್ತ ಗಮನ ಹರಿಸುತ್ತಿಲ್ಲ.</p>.<div><blockquote>ಫುಟ್ಪಾತ್ ಅತಿಕ್ರಮಣವಾಗಿರುವುದರಿಂದ ರಸ್ತೆ ಮೇಲೆ ನಡೆದುಕೊಂಡು ಹೋಗಬೇಕಾಗುತ್ತದೆ. ಯಾವುದಾದರೂ ವಾಹನ ಡಿಕ್ಕಿ ಹೊಡೆದರೆ ಕೇಳುವವರಿಲ್ಲ </blockquote><span class="attribution">ರಾಜಶೇಖರ ಅಂಗಡಿ ವಾಹನ ಸವಾರರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ನವನಗರದಲ್ಲಿರುವ ಸಂಚಾರಿ ಪೊಲೀಸ್ ಠಾಣೆ ಪಕ್ಕ, ಎದುರಿನ ಫುಟ್ಪಾತ್ ಅತಿಕ್ರಮಣವಾಗಿದೆ. ಇದರಿಂದಾಗಿ ಜನರು ಕೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ.</p>.<p>ಪೊಲೀಸ್ ಠಾಣೆಯ ಒಳಗೆ, ಹೊರಗೆ ಹೋಗಬೇಕಾದರೆ ಫುಟ್ಪಾತ್ ಅತಿಕ್ರಮಣವಾಗಿರುವುದು ಕಾಣುತ್ತದೆ. ಆದರೂ, ಸಂಚಾರಿ ಪೊಲೀಸರು ಜಾಣ ಮೌನ ವಹಿಸಿದ್ದಾರೆ. ನವನಗರ ನಿರ್ವಹಣೆ ಮಾಡುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ ತನಗೆ ಸಂಬಂಧವಿಲ್ಲ ಎನ್ನುವಂತಿದೆ.</p>.<p>ಪೊಲೀಸ್ ಠಾಣೆ ಮುಂದೆ ನಿಂತು ಹೆಲ್ಮೆಟ್ ಇಲ್ಲದೇ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ದಂಡ ಹಾಕಲಾಗುತ್ತದೆ. ಆ ಮೂಲಕ ಅವರಿಗೆ ಜೀವರಕ್ಷಣೆಯ ಪಾಠ ಹೇಳಲಾಗುತ್ತದೆ. ಆದರೆ, ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುವ ಪಾದಚಾರಿಗಳ ಬಗೆಗೆ ಕಾಳಜಿ ತೋರಿಸುತ್ತಿಲ್ಲ.</p>.<p>ಸಂಚಾರಿ ಪೊಲೀಸ್ ಠಾಣೆ ಕಾಂಪೌಂಡ್ ಪಕ್ಕದಲ್ಲಿರುವ ಸ್ಟೀಟ್ ಅಂಗಡಿ ಫುಟ್ಪಾತ್ ಅತಿಕ್ರಮಣ ಮಾಡಿಕೊಂಡಿದೆ. ಅಲ್ಲಿ ಸಂಜೆ ಗ್ರಾಹಕರಿಗೆ ಕುಳಿತುಕೊಳ್ಳಲು ಟೇಬಲ್, ಕುರ್ಚಿ ಹಾಕಲಾಗುತ್ತದೆ. ಅಲ್ಲಿಂದ ಹೋಗುವವರು ರಸ್ತೆ ಇಳಿದು ಮತ್ತೇ ಫುಟ್ಪಾತ್ ಹತ್ತಬೇಕಾದ ಸ್ಥಿತಿ ಇದೆ.</p>.<p>ಠಾಣೆ ಅನತಿ ದೂರದಲ್ಲಿರುವ ಎದುರುಗಡೆಯಲ್ಲಿಯೂ ಅಂಗಡಿಗಳನ್ನು ಇಡಲಾಗಿದ್ದು, ಸಂಚರಿಸಲು ಸಾಧ್ಯವಿಲ್ಲದಂತಾಗಿದೆ. ಕೂಗಳತೆ ದೂರದಲ್ಲಿರುವ ತಹಶೀಲ್ದಾರ್, ಉಪವಿಭಾಗದ ಕಚೇರಿ ಮುಂದಿನ ಪರಿಸ್ಥಿತಿಯೂ ಭಿನ್ನವಾಗಿಲ್ಲ.</p>.<p>ಫುಟ್ಪಾತ್ ಜಾಗದಲ್ಲಿ ಸಾಕಷ್ಟು ಗೂಡಂಗಡಿಗಳನ್ನು ಇಡಲಾಗಿದ್ದರೂ, ಸಂಚಾರಿ ಪೊಲೀಸರಿಗೆ ಕಾಣದಿರುವುದು ಸೋಜಿಗ. ಪಾದಚಾರಿಗಳ ಜೀವಕ್ಕೆ ರಕ್ಷಣೆ ಇಲ್ಲದಂತಾಗಿದೆ. ಇದರಿಂದಾಗಿ ಆಗಾಗ ಅಪಘಾತಗಳು ನಡೆಯುತ್ತವೆ.</p>.<p>ಒಂದೆಡೆ ಜಿಲ್ಲಾಧಿಕಾರಿ ಕಚೇರಿ, ಒನ್ನೊಂದೆಡೆ ನವನಗರ ಬಸ್ ನಿಲ್ದಾಣ, ಮತ್ತೊಂದೆಡೆ ತಹಶೀಲ್ದಾರ್, ಉಪನೋಂದಣಿ ಅಧಿಕಾರಿ ಕಚೇರಿಗಳಿವೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ಸಾವಿರಾರು ಜನರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಅವರಿಗೆ ಸುರಕ್ಷತೆ ಒದಗಿಸುವ ಕೆಲಸ ಆಗಬೇಕಿದೆ.</p>.<p>ಬಾಗಲಕೋಟೆಯ ಹಲವು ಪ್ರದೇಶ, ನವನಗರದ ವಿವಿಧೆಡೆಯೂ ಫುಟ್ಪಾತ್ ಅತಿಕ್ರಮಣವಾಗಿದೆ. ವೃತ್ತಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಸಂಚಾರಿ ಪೊಲೀಸರು ನಿತ್ಯ ಅಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದರೂ ಫುಟ್ಪಾತ್ನತ್ತ ಗಮನ ಹರಿಸುತ್ತಿಲ್ಲ.</p>.<div><blockquote>ಫುಟ್ಪಾತ್ ಅತಿಕ್ರಮಣವಾಗಿರುವುದರಿಂದ ರಸ್ತೆ ಮೇಲೆ ನಡೆದುಕೊಂಡು ಹೋಗಬೇಕಾಗುತ್ತದೆ. ಯಾವುದಾದರೂ ವಾಹನ ಡಿಕ್ಕಿ ಹೊಡೆದರೆ ಕೇಳುವವರಿಲ್ಲ </blockquote><span class="attribution">ರಾಜಶೇಖರ ಅಂಗಡಿ ವಾಹನ ಸವಾರರು</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>