ಮೇಟಿ ಅವರ ಅನಾರೋಗ್ಯದ ಬಗ್ಗೆ ಬೆಂಬಲಿಗರು ಆತಂಕಪಡುವ ಅಗತ್ಯವಿಲ್ಲ. ಬೆಂಗಳೂರಿಗೆ ರೈಲು, ಬಸ್ ಅಥವಾ ಕಾರಿನಲ್ಲಿ ಕರೆದೊಯ್ಯಲು ತಡವಾಗುವ ಕಾರಣ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ ಎಂದು ಪುತ್ರಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಬಾಯಕ್ಕ ಮೇಟಿ ಸುದ್ದಿಗಾರರಿಗೆ ತಿಳಿಸಿದರು. ಪುತ್ರ ಉಮೇಶ ಮೇಟಿ, ಆಪ್ತ ಸಹಾಯಕ ಹೊಳಬಸು ಶೆಟ್ಟರ್ ಮೇಟಿ ಅವರೊಂದಿಗೆ ಪ್ರಯಾಣ ಬೆಳಸಿದರು.