<p><strong>ಬಾಗಲಕೋಟೆ</strong>: ರಬಕವಿ-ಬನಹಟ್ಟಿ ತಾಲ್ಲೂಕಿನ ಸಂಗಾನಟ್ಟಿಯಲ್ಲಿ ಶುಕ್ರವಾರ ಗ್ರಾಮ ಪಂಚಾಯತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆಕಾಂಕ್ಷಿಗಳು ಎತ್ತಿನ ಬಂಡಿ ಏರಿ ಬಂದು ಗಮನ ಸೆಳೆದರು.</p>.<p>ಸಂಗಾನಟ್ಟಿ ಗ್ರಾಮದ ವಾರ್ಡ್ ನಂ 1 ಹಾಗೂ 2ರಲ್ಲಿ ಸ್ಫರ್ಧೆಗೆ ಮುಂದಾಗಿರುವ ರಾಘು ಸೈದಾಪುರ, ಸತ್ಯರಾಜು ಸೈದಾಪುರ, ಪಾರ್ವತಿ ಹಿಟ್ನಾಳ, ದುಂಡಪ್ಪ ಮೇಟಿ. ಮಾನವ್ವ ಗಾಡಿಕಾರ ಎತ್ತಿನ ಬಂಡಿ ಮೆರವಣಿಗೆಯ ನೇತೃತ್ವ ವಹಿಸಿದ್ದರು.</p>.<p>ಆಕಾಂಕ್ಷಿಗಳು ಇದ್ದ ಎತ್ತಿನ ಬಂಡಿಗಳನ್ನು ಹಿಂದೆ ಬೆಂಬಲಿಗರ ಸಾಲು ಸಾಲು ಬಂಡಿಗಳು ಹಿಂಬಾಲಿಸಿದವು. ಅದು ಭಜ೯ರಿ ಮೆರವಣಿಗೆಯಾಗಿ ಮಾರ್ಪಟ್ಟಿತ್ತು.</p>.<p>ನಾಮಪತ್ರ ಸಲ್ಲಿಸುವವರು ಗ್ರಾಮದಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದ್ದರು. ಏಕಕಾಲಕ್ಕೆ 25 ಎತ್ತಿನ ಬಂಡಿಗಳು ಮೆರವಣಿಗೆಯಲ್ಲಿ ಸಾಗಿ ಬಂದವು.</p>.<p>ಸಂಗಾನಟ್ಟಿ ಗ್ರಾಮದಿಂದ ಮದಭಾವಿ ಗ್ರಾಮ ಪಂಚಾಯ್ತಿ ಕಚೇರಿವರೆಗೆ ಸಾಗಿದ ಎತ್ತಿನ ಬಂಡಿ ಮೆರವಣಿಗೆ ವೇಳೆ ಆಕಾಂಕ್ಷಿಗಳು ಕೈಮುಗಿಯುತ್ತಾ ನಾಮಪತ್ರ ಸಲ್ಲಿಕೆಗೆ ಮೊದಲೇ ಮತಯಾಚನೆ ಮಾಡಿದರು.</p>.<p>ಎತ್ತಿನ ಬಂಡಿಗಳಿಗೆ ಕಬ್ಬಿನ ಜಲ್ಲೆ, ತಳಿರು ತೋರಣ ಕಟ್ಟಿ, ಎತ್ತುಗಳಿಗೆ ಬಣ್ಣ ಹಚ್ಚಿ ಅಲಂಕಾರ ಮಾಡಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ರಬಕವಿ-ಬನಹಟ್ಟಿ ತಾಲ್ಲೂಕಿನ ಸಂಗಾನಟ್ಟಿಯಲ್ಲಿ ಶುಕ್ರವಾರ ಗ್ರಾಮ ಪಂಚಾಯತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆಕಾಂಕ್ಷಿಗಳು ಎತ್ತಿನ ಬಂಡಿ ಏರಿ ಬಂದು ಗಮನ ಸೆಳೆದರು.</p>.<p>ಸಂಗಾನಟ್ಟಿ ಗ್ರಾಮದ ವಾರ್ಡ್ ನಂ 1 ಹಾಗೂ 2ರಲ್ಲಿ ಸ್ಫರ್ಧೆಗೆ ಮುಂದಾಗಿರುವ ರಾಘು ಸೈದಾಪುರ, ಸತ್ಯರಾಜು ಸೈದಾಪುರ, ಪಾರ್ವತಿ ಹಿಟ್ನಾಳ, ದುಂಡಪ್ಪ ಮೇಟಿ. ಮಾನವ್ವ ಗಾಡಿಕಾರ ಎತ್ತಿನ ಬಂಡಿ ಮೆರವಣಿಗೆಯ ನೇತೃತ್ವ ವಹಿಸಿದ್ದರು.</p>.<p>ಆಕಾಂಕ್ಷಿಗಳು ಇದ್ದ ಎತ್ತಿನ ಬಂಡಿಗಳನ್ನು ಹಿಂದೆ ಬೆಂಬಲಿಗರ ಸಾಲು ಸಾಲು ಬಂಡಿಗಳು ಹಿಂಬಾಲಿಸಿದವು. ಅದು ಭಜ೯ರಿ ಮೆರವಣಿಗೆಯಾಗಿ ಮಾರ್ಪಟ್ಟಿತ್ತು.</p>.<p>ನಾಮಪತ್ರ ಸಲ್ಲಿಸುವವರು ಗ್ರಾಮದಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದ್ದರು. ಏಕಕಾಲಕ್ಕೆ 25 ಎತ್ತಿನ ಬಂಡಿಗಳು ಮೆರವಣಿಗೆಯಲ್ಲಿ ಸಾಗಿ ಬಂದವು.</p>.<p>ಸಂಗಾನಟ್ಟಿ ಗ್ರಾಮದಿಂದ ಮದಭಾವಿ ಗ್ರಾಮ ಪಂಚಾಯ್ತಿ ಕಚೇರಿವರೆಗೆ ಸಾಗಿದ ಎತ್ತಿನ ಬಂಡಿ ಮೆರವಣಿಗೆ ವೇಳೆ ಆಕಾಂಕ್ಷಿಗಳು ಕೈಮುಗಿಯುತ್ತಾ ನಾಮಪತ್ರ ಸಲ್ಲಿಕೆಗೆ ಮೊದಲೇ ಮತಯಾಚನೆ ಮಾಡಿದರು.</p>.<p>ಎತ್ತಿನ ಬಂಡಿಗಳಿಗೆ ಕಬ್ಬಿನ ಜಲ್ಲೆ, ತಳಿರು ತೋರಣ ಕಟ್ಟಿ, ಎತ್ತುಗಳಿಗೆ ಬಣ್ಣ ಹಚ್ಚಿ ಅಲಂಕಾರ ಮಾಡಿದ್ದರು.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>