<p><strong>ಗುಳೇದಗುಡ್ಡ:</strong> ತಾಲ್ಲೂಕು ರಚನೆಯಾಗಿ ಆರು ವರ್ಷಗಳು ಗತಿಸಿದರೂ ಸಂಪೂರ್ಣವಾಗಿ ಎಲ್ಲ ಕಚೇರಿಗಳು ಇದುವರೆಗೆ ಆರಂಭವಾಗಿಲ್ಲ. ಇರುವ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.</p>.<p>ತಹಶೀಲ್ದಾರ್ ಕಚೇರಿ, ತಾಲ್ಲೂಕು ಪಂಚಾಯಿತಿ, ನೋಂದಣಿ, ಕೃಷಿ ಇಲಾಖೆ ಕಚೇರಿಗಳು ಮಾತ್ರ ಗುಳೇದಗುಡ್ಡದಲ್ಲಿವೆ. ಉಳಿದ ಇಲಾಖೆಗಳ ಕೆಲಸಗಳಿಗೆ ಸಾರ್ವಜನಿಕರು ಇನ್ನೂ ಬಾದಾಮಿಗೆ ಅಲೆದಾಡುವುದು ತಪ್ಪಿಲ್ಲ.</p>.<p>ತಹಶೀಲ್ದಾರ್ ಕಚೇರಿ: ಇದು ಕೋಟೆಕಲ್ ಸಮೀಪದ ಜಲಸಂಪನ್ಮೂಲ ಇಲಾಖೆಯ ಮಲಪ್ರಭಾ ಎಡದಂಡೆ ಕಾಲುವೆಯ ವಸತಿ ಗೃಹ ಕಟ್ಟಡದಲ್ಲಿ ಬಾಡಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಐದು ವಸತಿ ಗೃಹಗಳನ್ನು ಬಾಡಿಗೆ ಪಡೆದು ಕಚೇರಿಗಳಾಗಿ ಪರಿವರ್ತಿಸಿ ಕೆಲಸ ಮಾಡಲಾಗುತ್ತಿದೆ.</p>.<p>ತಾಲ್ಲೂಕು ಪಂಚಾಯಿತಿ ಕಚೇರಿ: ಇದಕ್ಕೂ ಸ್ವಂತ ಸೂರು ಇಲ್ಲ. ಪುರಸಭೆಗೆ ಸಂಬಂಧಿಸಿದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜಾಗ ಸಣ್ಣದಾಗಿದೆ. ಎರಡು ಕೊಠಡಿಗಳಲ್ಲೇ ಎಲ್ಲ ಕಾರ್ಯವನ್ನು ನಿರ್ವಹಿಸಬೇಕಾಗಿದೆ.</p>.<p>ಕೃಷಿ ಇಲಾಖೆ ಕಚೇರಿ (ರೈತ ಸಂಪರ್ಕ ಕೇಂದ್ರ): 2002 ರಲ್ಲೇ ಸರ್ಕಾರ ಹೋಬಳಿಗೊಂದು ರೈತ ಸಂಪರ್ಕ ಕೇಂದ್ರ ಸ್ಥಾಪಿಸಲಾಯಿತು. ಈ ಕಚೇರಿಗೂ ಸ್ವಂತ ಸೂರಿಲ್ಲ. ಬೀಜ, ಗೊಬ್ಬರ ದಾಸ್ತಾನು ಒಂದೆಡೆ, ಕಚೇರಿ ಒಂದೆಡೆ ಇರುವುದರಿಂದ ಕಷ್ಟವಾಗಿದೆ. ಬಸ್ ಘಟಕದ ಹತ್ತಿರ 13 ಗುಂಟೆ ಜಾಗ ಪಡೆಯಲಾಗಿದ್ದು, ಕಟ್ಟಡಕ್ಕೆ ಅನುದಾನ ಪಡೆದು ನಿರ್ಮಾಣವಾಗಬೇಕಿದೆ.</p>.<h2>ನೋಂದಣಿ ಕಚೇರಿ: </h2><p>ತಾಲ್ಲೂಕು ರಚನಾ ಪೂರ್ವದಿಂದಲೇ ಕಚೇರಿ ಆರಂಭಗೊಂಡಿದೆ. ಪುರಸಭೆಯ ಕಟ್ಟಡದಲ್ಲಿ ನೋಂದಣಿ ಇಲಾಖೆ ಬಾಡಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದೆ.</p>.<p>ದಿಕ್ಕಿಗೊಂದರಂತೆ ಕಚೇರಿ: ತಹಶೀಲ್ದಾರ್ ಕಚೇರಿಗೂ, ಕೃಷಿ ಇಲಾಖೆ ಕಚೇರಿಗೂ 2 ಕಿಲೋ ಮೀಟರ್ ಅಂತರದಲ್ಲಿವೆ. ಸಾರ್ವಜನಿಕರು ಅಲೆದಾಡಬೇಕಾದ ಸ್ಥಿತಿ ಇದೆ. ಎಲ್ಲ ಕಚೇರಿಗಳು ಒಂದೇ ಸೂರಿನಲ್ಲಿ ಆರಂಭವಾಗಬೇಕು ಎಂಬುದು ಸಾರ್ವಜನಿಕರ ಆಗ್ರಹ.</p>.<p>ಮೂಲಸೌಲಭ್ಯಗಳ ಕೊರತೆ: ಈ ಎಲ್ಲಾ ಕಚೇರಿಗಳಲ್ಲಿಯೂ ಮೂಲಸೌಲಭ್ಯಗಳಿಲ್ಲ. ಶೌಚಾಲಯ, ಕುಡಿಯುವ ನೀರು ಮುಂತಾದ ಸೌಲಭ್ಯಗಳ ಕೊರತೆ ಎದುರಿಸುತ್ತಿವೆ.</p>.<p>ಪ್ರಜಾಸೌಧ ನಿರ್ಮಾಣ: ಇತ್ತೀಚಿಗೆ ಜರುಗಿದ ಸಚಿವ ಸಂಪುಟ ಸಭೆಯಲ್ಲಿ ₹8.60 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಸರ್ಕಾರ ತೀರ್ಮಾನ ಕೈಗೊಂಡಿದೆ. ಪ್ರಜಾಸೌಧವನ್ನು ವಿಳಂಬವಿಲ್ಲದೆ ನಿರ್ಮಿಸಬೇಕು ಎಂದು ನೇಕಾರ ಮುಖಂಡ ಅಶೋಲ ಹೆಗಡೆ ಆಗ್ರಹಿಸಿದರು.</p>.<div><blockquote>ಸರ್ಕಾರ ಈಗಾಗಲೇ ಪ್ರಜಾಸೌಧ ಮಾಡುವುದಾಗಿ ನಿರ್ಣಯ ಮಾಡಿದೆ. ಕಟ್ಟಡವಾದರೆ ಒಂದೇ ಸೂರಿನಡಿ ಎಲ್ಲ ಕಚೇರಿಗಳು ಕಾರ್ಯ ನಿರ್ವಹಿಸುತ್ತವೆ. ಅಲ್ಲಿಯವರೆಗೆ ಬಾಡಿಗೆ ಕಟ್ಟಡ ಅನಿವಾರ್ಯ</blockquote><span class="attribution"> ಮಧುರಾಜ್ ಪ್ರಭಾರ ತಹಶೀಲ್ದಾರ್ ಗುಳೇದಗುಡ್ಡ.</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳೇದಗುಡ್ಡ:</strong> ತಾಲ್ಲೂಕು ರಚನೆಯಾಗಿ ಆರು ವರ್ಷಗಳು ಗತಿಸಿದರೂ ಸಂಪೂರ್ಣವಾಗಿ ಎಲ್ಲ ಕಚೇರಿಗಳು ಇದುವರೆಗೆ ಆರಂಭವಾಗಿಲ್ಲ. ಇರುವ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.</p>.<p>ತಹಶೀಲ್ದಾರ್ ಕಚೇರಿ, ತಾಲ್ಲೂಕು ಪಂಚಾಯಿತಿ, ನೋಂದಣಿ, ಕೃಷಿ ಇಲಾಖೆ ಕಚೇರಿಗಳು ಮಾತ್ರ ಗುಳೇದಗುಡ್ಡದಲ್ಲಿವೆ. ಉಳಿದ ಇಲಾಖೆಗಳ ಕೆಲಸಗಳಿಗೆ ಸಾರ್ವಜನಿಕರು ಇನ್ನೂ ಬಾದಾಮಿಗೆ ಅಲೆದಾಡುವುದು ತಪ್ಪಿಲ್ಲ.</p>.<p>ತಹಶೀಲ್ದಾರ್ ಕಚೇರಿ: ಇದು ಕೋಟೆಕಲ್ ಸಮೀಪದ ಜಲಸಂಪನ್ಮೂಲ ಇಲಾಖೆಯ ಮಲಪ್ರಭಾ ಎಡದಂಡೆ ಕಾಲುವೆಯ ವಸತಿ ಗೃಹ ಕಟ್ಟಡದಲ್ಲಿ ಬಾಡಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಐದು ವಸತಿ ಗೃಹಗಳನ್ನು ಬಾಡಿಗೆ ಪಡೆದು ಕಚೇರಿಗಳಾಗಿ ಪರಿವರ್ತಿಸಿ ಕೆಲಸ ಮಾಡಲಾಗುತ್ತಿದೆ.</p>.<p>ತಾಲ್ಲೂಕು ಪಂಚಾಯಿತಿ ಕಚೇರಿ: ಇದಕ್ಕೂ ಸ್ವಂತ ಸೂರು ಇಲ್ಲ. ಪುರಸಭೆಗೆ ಸಂಬಂಧಿಸಿದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜಾಗ ಸಣ್ಣದಾಗಿದೆ. ಎರಡು ಕೊಠಡಿಗಳಲ್ಲೇ ಎಲ್ಲ ಕಾರ್ಯವನ್ನು ನಿರ್ವಹಿಸಬೇಕಾಗಿದೆ.</p>.<p>ಕೃಷಿ ಇಲಾಖೆ ಕಚೇರಿ (ರೈತ ಸಂಪರ್ಕ ಕೇಂದ್ರ): 2002 ರಲ್ಲೇ ಸರ್ಕಾರ ಹೋಬಳಿಗೊಂದು ರೈತ ಸಂಪರ್ಕ ಕೇಂದ್ರ ಸ್ಥಾಪಿಸಲಾಯಿತು. ಈ ಕಚೇರಿಗೂ ಸ್ವಂತ ಸೂರಿಲ್ಲ. ಬೀಜ, ಗೊಬ್ಬರ ದಾಸ್ತಾನು ಒಂದೆಡೆ, ಕಚೇರಿ ಒಂದೆಡೆ ಇರುವುದರಿಂದ ಕಷ್ಟವಾಗಿದೆ. ಬಸ್ ಘಟಕದ ಹತ್ತಿರ 13 ಗುಂಟೆ ಜಾಗ ಪಡೆಯಲಾಗಿದ್ದು, ಕಟ್ಟಡಕ್ಕೆ ಅನುದಾನ ಪಡೆದು ನಿರ್ಮಾಣವಾಗಬೇಕಿದೆ.</p>.<h2>ನೋಂದಣಿ ಕಚೇರಿ: </h2><p>ತಾಲ್ಲೂಕು ರಚನಾ ಪೂರ್ವದಿಂದಲೇ ಕಚೇರಿ ಆರಂಭಗೊಂಡಿದೆ. ಪುರಸಭೆಯ ಕಟ್ಟಡದಲ್ಲಿ ನೋಂದಣಿ ಇಲಾಖೆ ಬಾಡಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದೆ.</p>.<p>ದಿಕ್ಕಿಗೊಂದರಂತೆ ಕಚೇರಿ: ತಹಶೀಲ್ದಾರ್ ಕಚೇರಿಗೂ, ಕೃಷಿ ಇಲಾಖೆ ಕಚೇರಿಗೂ 2 ಕಿಲೋ ಮೀಟರ್ ಅಂತರದಲ್ಲಿವೆ. ಸಾರ್ವಜನಿಕರು ಅಲೆದಾಡಬೇಕಾದ ಸ್ಥಿತಿ ಇದೆ. ಎಲ್ಲ ಕಚೇರಿಗಳು ಒಂದೇ ಸೂರಿನಲ್ಲಿ ಆರಂಭವಾಗಬೇಕು ಎಂಬುದು ಸಾರ್ವಜನಿಕರ ಆಗ್ರಹ.</p>.<p>ಮೂಲಸೌಲಭ್ಯಗಳ ಕೊರತೆ: ಈ ಎಲ್ಲಾ ಕಚೇರಿಗಳಲ್ಲಿಯೂ ಮೂಲಸೌಲಭ್ಯಗಳಿಲ್ಲ. ಶೌಚಾಲಯ, ಕುಡಿಯುವ ನೀರು ಮುಂತಾದ ಸೌಲಭ್ಯಗಳ ಕೊರತೆ ಎದುರಿಸುತ್ತಿವೆ.</p>.<p>ಪ್ರಜಾಸೌಧ ನಿರ್ಮಾಣ: ಇತ್ತೀಚಿಗೆ ಜರುಗಿದ ಸಚಿವ ಸಂಪುಟ ಸಭೆಯಲ್ಲಿ ₹8.60 ಕೋಟಿ ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಸರ್ಕಾರ ತೀರ್ಮಾನ ಕೈಗೊಂಡಿದೆ. ಪ್ರಜಾಸೌಧವನ್ನು ವಿಳಂಬವಿಲ್ಲದೆ ನಿರ್ಮಿಸಬೇಕು ಎಂದು ನೇಕಾರ ಮುಖಂಡ ಅಶೋಲ ಹೆಗಡೆ ಆಗ್ರಹಿಸಿದರು.</p>.<div><blockquote>ಸರ್ಕಾರ ಈಗಾಗಲೇ ಪ್ರಜಾಸೌಧ ಮಾಡುವುದಾಗಿ ನಿರ್ಣಯ ಮಾಡಿದೆ. ಕಟ್ಟಡವಾದರೆ ಒಂದೇ ಸೂರಿನಡಿ ಎಲ್ಲ ಕಚೇರಿಗಳು ಕಾರ್ಯ ನಿರ್ವಹಿಸುತ್ತವೆ. ಅಲ್ಲಿಯವರೆಗೆ ಬಾಡಿಗೆ ಕಟ್ಟಡ ಅನಿವಾರ್ಯ</blockquote><span class="attribution"> ಮಧುರಾಜ್ ಪ್ರಭಾರ ತಹಶೀಲ್ದಾರ್ ಗುಳೇದಗುಡ್ಡ.</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>