<p><strong>ಗುಳೇದಗುಡ್ಡ</strong>: ದೇಶವು ತ್ಯಾಗ, ಬಲಿದಾನಗಳ ಮೇಲೆ ನಿಂತಿದೆ. ರಾಣಿ ಚೆನ್ನಮ್ಮ, ಅಬ್ಬಕ್ಕನಂಥವರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ಅಗತ್ಯವಿದೆ ಎಂದು ಮುರುಘಾಮಠದ ಕಾಶೀನಾಥ ಶ್ರೀಗಳು ಹೇಳಿದರು.</p>.<p>ಅವರು ಮಂಗಳವಾರ ಜರುಗಿದ ವೀರವನಿತೆ ಕಿತ್ತೂರ ರಾಣಿ ಚೆನ್ನಮ್ಮರ 200 ನೇ ಹಾಗೂ ರಾಣಿ ಅಬ್ಬಕ್ಕರ 500 ನೇ ಜಯಂತೋತ್ಸವದ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಮಹಿಳೆ ಇವರಾಗಿದ್ದು ಇವರ ಆದರ್ಶ ಮಾದರಿಯಾಗಿದೆ ಎಂದು ಹೇಳಿದರು.</p>.<p>ಎಬಿವಿಪಿಯ ಸಂಜನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು ಮತ್ತು ಉತ್ತರ ಪ್ರಾಂತ್ಯ ಎಬಿವಿಪಿ ರಾಜ್ಯ ಉಪಾಧ್ಯಕ್ಷೆ ಸುಮಾ ಬೋಳರೆಡ್ಡಿ ಮಾತನಾಡಿದರು.</p>.<p>ಮಾಜಿಶಾಸಕ ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಶೋಕ ಹೆಗಡಿ, ಎಬಿವಿಪಿ ತಾಲ್ಲೂಕು ಅಧ್ಯಕ್ಷ ರವಿ ಉಪ್ಪಾರ, ಯುವ ಮುಖಂಡ ಭುವನೇಶ ಪೂಜಾರ, ಎಬಿವಿಪಿ ಕಾರ್ಯಕರ್ತರು ಶಾಲಾ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.</p>.<p><strong>ಮೆರವಣಿಗೆ</strong>: ರಾಣಿ ಚೆನ್ನಮ್ಮ ಹಾಗೂ ಅಬ್ಬಕ್ಕನವರ ಮೂರ್ತಿ ಮೆರವಣಿಗೆ ಭಂಡಾರಿ ಕಾಲೇಜಿನಿಂದ ಆರಂಭವಾಗಿ ಪವಾರ ಕ್ರಾಸ್, ಪುರಸಭೆ ಮಾರ್ಗವಾಗಿ, ಸರಾಫ್ ಬಜಾರ, ಕಂಠಿಪೇಟೆಯವರೆಗೆ ಸಾಗಿ ಅಲ್ಲಿ ಪೂಜೆಯೊಂದಿಗೆ ಮುಕ್ತಾಯಗೊಳಿಸಲಾಯಿತು. ನಂತರ ಬಾದಾಮಿಗೆ ಬೀಳ್ಕೊಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಳೇದಗುಡ್ಡ</strong>: ದೇಶವು ತ್ಯಾಗ, ಬಲಿದಾನಗಳ ಮೇಲೆ ನಿಂತಿದೆ. ರಾಣಿ ಚೆನ್ನಮ್ಮ, ಅಬ್ಬಕ್ಕನಂಥವರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವ ಅಗತ್ಯವಿದೆ ಎಂದು ಮುರುಘಾಮಠದ ಕಾಶೀನಾಥ ಶ್ರೀಗಳು ಹೇಳಿದರು.</p>.<p>ಅವರು ಮಂಗಳವಾರ ಜರುಗಿದ ವೀರವನಿತೆ ಕಿತ್ತೂರ ರಾಣಿ ಚೆನ್ನಮ್ಮರ 200 ನೇ ಹಾಗೂ ರಾಣಿ ಅಬ್ಬಕ್ಕರ 500 ನೇ ಜಯಂತೋತ್ಸವದ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಮಹಿಳೆ ಇವರಾಗಿದ್ದು ಇವರ ಆದರ್ಶ ಮಾದರಿಯಾಗಿದೆ ಎಂದು ಹೇಳಿದರು.</p>.<p>ಎಬಿವಿಪಿಯ ಸಂಜನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶ್ರೀಗಳು ಮತ್ತು ಉತ್ತರ ಪ್ರಾಂತ್ಯ ಎಬಿವಿಪಿ ರಾಜ್ಯ ಉಪಾಧ್ಯಕ್ಷೆ ಸುಮಾ ಬೋಳರೆಡ್ಡಿ ಮಾತನಾಡಿದರು.</p>.<p>ಮಾಜಿಶಾಸಕ ರಾಜಶೇಖರ ಶೀಲವಂತ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಶೋಕ ಹೆಗಡಿ, ಎಬಿವಿಪಿ ತಾಲ್ಲೂಕು ಅಧ್ಯಕ್ಷ ರವಿ ಉಪ್ಪಾರ, ಯುವ ಮುಖಂಡ ಭುವನೇಶ ಪೂಜಾರ, ಎಬಿವಿಪಿ ಕಾರ್ಯಕರ್ತರು ಶಾಲಾ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.</p>.<p><strong>ಮೆರವಣಿಗೆ</strong>: ರಾಣಿ ಚೆನ್ನಮ್ಮ ಹಾಗೂ ಅಬ್ಬಕ್ಕನವರ ಮೂರ್ತಿ ಮೆರವಣಿಗೆ ಭಂಡಾರಿ ಕಾಲೇಜಿನಿಂದ ಆರಂಭವಾಗಿ ಪವಾರ ಕ್ರಾಸ್, ಪುರಸಭೆ ಮಾರ್ಗವಾಗಿ, ಸರಾಫ್ ಬಜಾರ, ಕಂಠಿಪೇಟೆಯವರೆಗೆ ಸಾಗಿ ಅಲ್ಲಿ ಪೂಜೆಯೊಂದಿಗೆ ಮುಕ್ತಾಯಗೊಳಿಸಲಾಯಿತು. ನಂತರ ಬಾದಾಮಿಗೆ ಬೀಳ್ಕೊಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>