ಹುನಗುಂದ ತಾಲ್ಲೂಕು ಪಂಚಾಯತಿ ಸಭಾಭವನದಲ್ಲಿ ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಸಮಿತಿ ಅಧ್ಯಕ್ಷ ನೂರಂದಗೌಡ (ಮುತ್ತಣ್ಣ) ಕಲಗೋಡಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ ನಡೆಯಿತು
‘ಗ್ಯಾರಂಟಿ: ಸಮಸ್ಯೆ ಪರಿಹರಿಸಿ’
-‘ಹೆಸ್ಕಾಂ ಎಇಇ ಈವರೆಗೆ ಸಭೆಗೆ ಹಾಜರಾಗಿಲ್ಲ. ಸಾರ್ವಜನಿಕರು ಮತ್ತು ಅಧಿಕಾರಿಗಳ ನಡುವೆ ಸಂಪರ್ಕ ಕೊರತೆ ಉಂಟಾಗುತ್ತಿದೆ. ಅಮೀನಗಡ ಕಮತಗಿ ಹಾಗೂ ಹುನಗುಂದ ಪಟ್ಟಣ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕರು ಕುಂದುಕೊರತೆ ಸಭೆ ಆಯೋಜಿಸಿ ಗ್ಯಾರಂಟಿ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರುಳಿಧರ ದೇಶಪಾಂಡೆ ಸೂಚಿಸಿದರು.