ಬ್ಯಾರೇಜ್ ಗೆ ಹೊಸ ಗೇಟ್ ಗಳನ್ನು ಅಳವಡಿಸುವ ನಿಟ್ಟಿನಲ್ಲಿ ಸರ್ಕಾರ ಆದಷ್ಟು ಬೇಗನೆ ಕ್ರಮ ತೆಗೆದುಕೊಳ್ಳಬೇಕು. ಹತ್ತು ಎಂ.ಎಂ. ದಪ್ಪವಿರುವ ಗೇಟ್ ಗಳು ಈಗ ಕೇವಲ 3 ರಿಂದ 4 ಎಂ.ಎಂ ದಪ್ಪವಾಗಿವೆ. ನೆರೆಯ ಮಹಾರಾಷ್ಟ್ರದಿಂದ ನೀರು ಬಿಡಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು.
ಸಿದ್ದು ಸವದಿ, ಶಾಸಕ ತೇರದಾಳ
ಭಾರಿ ವಾಹನಗಳ ಓಡಾಟದಿಂದ ಸೇತುವೆ ಕಂಪಿಸುತ್ತಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಬ್ಯಾರೇಜ್ ಗೆ ಇನ್ನಷ್ಟು ತೊಂದರೆಯಾಗಲಿದೆ.
ಜಗದೀಶ ಗುಡಗುಂಟಿಮಠ, ಶಾಸಕರು ಜಮಖಂಡಿ
ಹಿಪ್ಪರಗಿ ಬ್ಯಾರೇಜ್ ನಲ್ಲಿರುವ ಖಾಲಿ ಹುದ್ದೆಗಳ ಮಾಹಿತಿ
ಇನ್ನೂ ಈಗಿರುವು ಬ್ಯಾರೇಜ್ ಮೇಲಿರುವು ರಸ್ತೆ ಬ್ಯಾರೇಜ್ ನಿರ್ಹಣೆಗೆ ಮಾತ್ರ ಬಳಸಬೇಕಾಗಿದೆ. ಆದರೆ ಬೃಹತ್ ವಾಹನಗಳು ಓಡಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬ್ಯಾರೇಜ್ ಗೆ ಭಾರಿ ಸಮಸ್ಯೆಯಾಗುವುದು ಕಟ್ಟಿಟ್ಟ ಬುತ್ತಿ. ಮೂವರು ಜನ ಸಹಾಯಕ ಎಂಜಿನಿಯರ್ ಮತ್ತು ಮೂವರು ಕಿರಿಯ ಎಂಜಿನಿಯರ್ ಗಳನ್ನು ಸರ್ಕಾರ ಆದಷ್ಟು ಬೇಗನೆ ನೇಮಕ ಮಾಡಬೇಕು.
ಶಿವಮೂರ್ತಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹಿಪ್ಪರಗಿ ಬ್ಯಾರೇಜ್
ಈಚೇಗೆ ಗೇಟ್ ಕಿತ್ತು ಹೋದ ಪರಿಣಾಮವಾಗಿ ಅಪಾರ ಪ್ರಮಣದ ನೀರು ಹರಿದು ಹೋಗುತ್ತಿರುವುದು.