<p><strong>ಬಾಗಲಕೋಟೆ:</strong> ಎಚ್ಐವಿ ಸೋಂಕಿತ ಮಕ್ಕಳಿಗೆ 5 ತಿಂಗಳಿನಿಂದ ಸಹಾಯಧನ ಬಿಡುಗಡೆಯಾಗದ ಕಾರಣ ಮಕ್ಕಳು ಮತ್ತು ಪೋಷಕರು ವೈದ್ಯಕೀಯ ವೆಚ್ಚ ಪಾವತಿಗೂ ಪರದಾಡುವಂತಾಗಿದೆ.</p>.<p>ಪೌಷ್ಟಿಕ ಆಹಾರ ಸೇವನೆ, ವೈದ್ಯಕೀಯ ವೆಚ್ಚ ಮತ್ತು ಇತರ ವೆಚ್ಚಗಳಿಗೆ ಜಿಲ್ಲೆಯ 534 ಮಕ್ಕಳಿಗೆ ಪ್ರತಿ ತಿಂಗಳು ₹1,000 ಸಹಾಯ ಧನ ವಿಶೇಷ ಪಾಲನಾ ಯೋಜನೆಯಡಿ ನೀಡಲಾಗುತ್ತದೆ. ₹26.70 ಲಕ್ಷ 5 ತಿಂಗಳ ಸಹಾಯ ಧನ ಬಾಕಿ ಉಳಿದಿದೆ.</p>.<p>‘ಎಚ್ಐವಿ ಸೋಂಕಿತ ಮಕ್ಕಳ ಪೋಷಕರೂ ಸೋಂಕಿತರಾಗಿದ್ದು, ದುಡಿಯುವ ಚೈತನ್ಯ ಇರುವುದಿಲ್ಲ. ಕೆಲ ಮಕ್ಕಳ ಪೋಷಕರು ತೀರಿಕೊಂಡಿದ್ದು, ಸಂಬಂಧಿಕರ ಮನೆಯಲ್ಲಿದ್ದಾರೆ. ಎಚ್ಐವಿ ವಿರುದ್ಧ ಹೋರಾಡಲು ಪೌಷ್ಟಿಕ ಆಹಾರ ಸೇವನೆ ಅತ್ಯಗತ್ಯ. ಆದರೆ, ನಿಯಮಿತವಾಗಿ ಸಹಾಯ ಧನ ಸಿಗದ ಕಾರಣ ಆ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ’ ಎಂದು ಸೋಂಕುಪೀಡಿತರ ಆರೈಕೆದಾರರು ಹೇಳುತ್ತಾರೆ.</p>.<p>ಮಕ್ಕಳ ಪಾಲನಾ ಸಂಸ್ಥೆಯಿಂದ ಬಿಡುಗಡೆಯಾದ ಮಕ್ಕಳು, ಅನಾಥ, ಏಕಪೋಷಕ, ಜೈಲಿನಲ್ಲಿರುವ ಪಾಲಕರಿಗೆ ಮಕ್ಕಳಿಗೆ ಉತ್ತಮ ಕುಟುಂಬ ವಾತಾವರಣದಲ್ಲಿ ಬೆಳೆಯಲು ಮತ್ತು ಶಿಕ್ಷಣಕ್ಕೆ ಪ್ರಾಯೋಜಕತ್ವ ಯೋಜನೆಯಡಿ ಪ್ರತಿ ತಿಂಗಳು ₹4 ಸಾವಿರ ಸಹಾಯಧನ ನೀಡಲಾಗುತ್ತದೆ. ಜಿಲ್ಲೆಯ 195 ಮಕ್ಕಳಿಗೆ ಐದು ತಿಂಗಳಿಂದ ಬಿಡುಗಡೆಯಾಗಬೇಕಿದ್ದ ₹39 ಲಕ್ಷ ಅನುದಾನ ಬಿಡುಗಡೆಯಾಗಿಲ್ಲ. ಹೊಸದಾಗಿ 18 ಮಕ್ಕಳನ್ನು ಗುರುತಿಸಲಾಗಿದೆ.</p>.<p>ಮಕ್ಕಳ ಪಾಲನಾ ಸಂಸ್ಥೆಯಿಂದ ಬಿಡುಗಡೆಯಾದ ಮಕ್ಕಳ ಉನ್ನತ ವ್ಯಾಸಂಗ ಅಥವಾ ವೃತ್ತಿ ತರಬೇತಿಗಾಗಿ ಪ್ರತಿ ತಿಂಗಳು ₹5 ಸಾವಿರ ಸಹಾಯಧನ ನೀಡಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 10 ಮಕ್ಕಳಿಗೆ ನೀಡಲಾಗುತ್ತಿದ್ದು, 6 ತಿಂಗಳಿನಿಂದ ಸಹಾಯ ಧನ ಬಿಡುಗಡೆಯಾಗದ್ದರಿಂದ ಶಿಕ್ಷಣ ಮೊಟಕುಗೊಳ್ಳುವ ಆತಂಕ ಎದುರಾಗಿದೆ.</p>.<p>‘ಕೋವಿಡ್ ಸಂದರ್ಭದಲ್ಲಿ ಹಲವಾರು ಮಕ್ಕಳು ತಂದೆ–ತಾಯಿಯನ್ನು ಕಳೆದುಕೊಂಡರು. ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳ ಆರೈಕೆಗಾಗಿ ಪ್ರತಿ ತಿಂಗಳು ₹3,500 ನೀಡಲಾಗುತ್ತಿದೆ. ಆರು ತಿಂಗಳಿಂದ ಸಹಾಯ ಧನ ಬಿಡುಗಡೆಯಾಗಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿ ಐವರು ಮಕ್ಕಳು ಇಬ್ಬರನ್ನೂ ಕಳೆದುಕೊಂಡಿದ್ದು, ಸಂಬಂಧಿಕರ ಮನೆಗಳಲ್ಲಿ ವಾಸವಿದ್ದಾರೆ. ಸಹಾಯ ಧನ ಬಾರದ್ದರಿಂದ ಅವರಿಗೂ ತೊಂದರೆಯಾಗಿದೆ.</p>.<p>‘ನಿತ್ಯ ಪೌಷ್ಟಿಕ ಆಹಾರ ಸೇವಿಸಬೇಕು. ಆಗಾಗ ಕಾಡುವ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಉಚಿತವಾಗಿ ದೊರೆತರೂ, ಕೆಲವೊಂದು ಔಷಧಗಳನ್ನು ಹೊರಗಡೆ ತೆಗೆದುಕೊಳ್ಳಬೇಕು. ಪ್ರತಿ ತಿಂಗಳು ಸಹಾಯ ಧನ ನೀಡದಿದ್ದರೆ ತೀವ್ರ ತೊಂದರೆಯಾಗುತ್ತದೆ’ ಎಂದು ಬಾಲಕನೊಬ್ಬ ಅಳಲು ತೋಡಿಕೊಂಡನು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ:</strong> ಎಚ್ಐವಿ ಸೋಂಕಿತ ಮಕ್ಕಳಿಗೆ 5 ತಿಂಗಳಿನಿಂದ ಸಹಾಯಧನ ಬಿಡುಗಡೆಯಾಗದ ಕಾರಣ ಮಕ್ಕಳು ಮತ್ತು ಪೋಷಕರು ವೈದ್ಯಕೀಯ ವೆಚ್ಚ ಪಾವತಿಗೂ ಪರದಾಡುವಂತಾಗಿದೆ.</p>.<p>ಪೌಷ್ಟಿಕ ಆಹಾರ ಸೇವನೆ, ವೈದ್ಯಕೀಯ ವೆಚ್ಚ ಮತ್ತು ಇತರ ವೆಚ್ಚಗಳಿಗೆ ಜಿಲ್ಲೆಯ 534 ಮಕ್ಕಳಿಗೆ ಪ್ರತಿ ತಿಂಗಳು ₹1,000 ಸಹಾಯ ಧನ ವಿಶೇಷ ಪಾಲನಾ ಯೋಜನೆಯಡಿ ನೀಡಲಾಗುತ್ತದೆ. ₹26.70 ಲಕ್ಷ 5 ತಿಂಗಳ ಸಹಾಯ ಧನ ಬಾಕಿ ಉಳಿದಿದೆ.</p>.<p>‘ಎಚ್ಐವಿ ಸೋಂಕಿತ ಮಕ್ಕಳ ಪೋಷಕರೂ ಸೋಂಕಿತರಾಗಿದ್ದು, ದುಡಿಯುವ ಚೈತನ್ಯ ಇರುವುದಿಲ್ಲ. ಕೆಲ ಮಕ್ಕಳ ಪೋಷಕರು ತೀರಿಕೊಂಡಿದ್ದು, ಸಂಬಂಧಿಕರ ಮನೆಯಲ್ಲಿದ್ದಾರೆ. ಎಚ್ಐವಿ ವಿರುದ್ಧ ಹೋರಾಡಲು ಪೌಷ್ಟಿಕ ಆಹಾರ ಸೇವನೆ ಅತ್ಯಗತ್ಯ. ಆದರೆ, ನಿಯಮಿತವಾಗಿ ಸಹಾಯ ಧನ ಸಿಗದ ಕಾರಣ ಆ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ’ ಎಂದು ಸೋಂಕುಪೀಡಿತರ ಆರೈಕೆದಾರರು ಹೇಳುತ್ತಾರೆ.</p>.<p>ಮಕ್ಕಳ ಪಾಲನಾ ಸಂಸ್ಥೆಯಿಂದ ಬಿಡುಗಡೆಯಾದ ಮಕ್ಕಳು, ಅನಾಥ, ಏಕಪೋಷಕ, ಜೈಲಿನಲ್ಲಿರುವ ಪಾಲಕರಿಗೆ ಮಕ್ಕಳಿಗೆ ಉತ್ತಮ ಕುಟುಂಬ ವಾತಾವರಣದಲ್ಲಿ ಬೆಳೆಯಲು ಮತ್ತು ಶಿಕ್ಷಣಕ್ಕೆ ಪ್ರಾಯೋಜಕತ್ವ ಯೋಜನೆಯಡಿ ಪ್ರತಿ ತಿಂಗಳು ₹4 ಸಾವಿರ ಸಹಾಯಧನ ನೀಡಲಾಗುತ್ತದೆ. ಜಿಲ್ಲೆಯ 195 ಮಕ್ಕಳಿಗೆ ಐದು ತಿಂಗಳಿಂದ ಬಿಡುಗಡೆಯಾಗಬೇಕಿದ್ದ ₹39 ಲಕ್ಷ ಅನುದಾನ ಬಿಡುಗಡೆಯಾಗಿಲ್ಲ. ಹೊಸದಾಗಿ 18 ಮಕ್ಕಳನ್ನು ಗುರುತಿಸಲಾಗಿದೆ.</p>.<p>ಮಕ್ಕಳ ಪಾಲನಾ ಸಂಸ್ಥೆಯಿಂದ ಬಿಡುಗಡೆಯಾದ ಮಕ್ಕಳ ಉನ್ನತ ವ್ಯಾಸಂಗ ಅಥವಾ ವೃತ್ತಿ ತರಬೇತಿಗಾಗಿ ಪ್ರತಿ ತಿಂಗಳು ₹5 ಸಾವಿರ ಸಹಾಯಧನ ನೀಡಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 10 ಮಕ್ಕಳಿಗೆ ನೀಡಲಾಗುತ್ತಿದ್ದು, 6 ತಿಂಗಳಿನಿಂದ ಸಹಾಯ ಧನ ಬಿಡುಗಡೆಯಾಗದ್ದರಿಂದ ಶಿಕ್ಷಣ ಮೊಟಕುಗೊಳ್ಳುವ ಆತಂಕ ಎದುರಾಗಿದೆ.</p>.<p>‘ಕೋವಿಡ್ ಸಂದರ್ಭದಲ್ಲಿ ಹಲವಾರು ಮಕ್ಕಳು ತಂದೆ–ತಾಯಿಯನ್ನು ಕಳೆದುಕೊಂಡರು. ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡ 18 ವರ್ಷದೊಳಗಿನ ಮಕ್ಕಳ ಆರೈಕೆಗಾಗಿ ಪ್ರತಿ ತಿಂಗಳು ₹3,500 ನೀಡಲಾಗುತ್ತಿದೆ. ಆರು ತಿಂಗಳಿಂದ ಸಹಾಯ ಧನ ಬಿಡುಗಡೆಯಾಗಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿ ಐವರು ಮಕ್ಕಳು ಇಬ್ಬರನ್ನೂ ಕಳೆದುಕೊಂಡಿದ್ದು, ಸಂಬಂಧಿಕರ ಮನೆಗಳಲ್ಲಿ ವಾಸವಿದ್ದಾರೆ. ಸಹಾಯ ಧನ ಬಾರದ್ದರಿಂದ ಅವರಿಗೂ ತೊಂದರೆಯಾಗಿದೆ.</p>.<p>‘ನಿತ್ಯ ಪೌಷ್ಟಿಕ ಆಹಾರ ಸೇವಿಸಬೇಕು. ಆಗಾಗ ಕಾಡುವ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಉಚಿತವಾಗಿ ದೊರೆತರೂ, ಕೆಲವೊಂದು ಔಷಧಗಳನ್ನು ಹೊರಗಡೆ ತೆಗೆದುಕೊಳ್ಳಬೇಕು. ಪ್ರತಿ ತಿಂಗಳು ಸಹಾಯ ಧನ ನೀಡದಿದ್ದರೆ ತೀವ್ರ ತೊಂದರೆಯಾಗುತ್ತದೆ’ ಎಂದು ಬಾಲಕನೊಬ್ಬ ಅಳಲು ತೋಡಿಕೊಂಡನು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>