<p><strong>ಬಾಗಲಕೋಟೆ</strong>: ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ಓದಿಲ್ಲದೇ ರಾಜಕೀಯ ಪಯಣ ಆರಂಭಿಸಿದ ಎಚ್.ವೈ. ಮೇಟಿ ಅವರು, ವಿಧಾನಸೌಧವಲ್ಲದೇ ದೆಹಲಿಯ ಪಾರ್ಲಿಮೆಂಟ್ ಅನ್ನೂ ಪ್ರವೇಶಿಸಿದ್ದರು.</p>.<p>ಐದು ದಶಕಗಳ ಕಾಲ ರಾಜಕೀಯದ ವಿವಿಧ ಮೆಟ್ಟಿಲುಗಳನ್ನು ಏರಿದ್ದರು. ಸಂಸದರಾಗಿ ದೆಹಲಿಗೂ ಹೋಗಿದ್ದರು. ಆದರೆ ಜನ್ಮ ಸ್ಥಳವಾದ ‘ತಿಮ್ಮಾಪುರ’ ಅನ್ನು ಅವರು ಮರೆತಿರಲಿಲ್ಲ. ಜಿಲ್ಲೆಗೆ ಬಂದರೆ ನೇರವಾಗಿ ಅವರ ವಾಹನ ತಿಮ್ಮಾಪುರದ ಮನೆಗೆ ಹೋಗುತ್ತಿತ್ತು. ಅಲ್ಲಿಂದಲೇ ಕ್ಷೇತ್ರ, ಜಿಲ್ಲೆಯನ್ನು ಸುತ್ತುತ್ತಿದ್ದರು.</p>.<p>ಬಿಲ್ ಕೆರೂರ ಮಂಡಲ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನಕ್ಕೆ ಕಾಲಿಟ್ಟ ಅವರು, ಪಿಎಲ್ಡಿ ಬ್ಯಾಂಕ್ ನಿರ್ದೇಶಕ, ಬಿಡಿಸಿಸಿ ನಿರ್ದೇಶಕರಾಗುವ ಮೂಲಕ ಸಹಕಾರ ರಂಗದಲ್ಲಿಯೂ ತಮ್ಮದೇ ಹೆಜ್ಜೆ ಗುರುತು ಮೂಡಿಸಿದ್ದರು.</p>.<p>ಜನತಾ ಪರಿವಾರದ ನಾಯಕ: 1989ರಲ್ಲಿ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸುವಲ್ಲಿ ಅವರ ರಾಜಕೀಯ ಗುರು, ಶಾಸಕ ಜಿ.ವಿ. ಮಂಟೂರ ಅವರ ಪಾತ್ರ ದೊಡ್ಡದಾಗಿತ್ತು. ರಾಮಕೃಷ್ಣ ಹೆಗಡೆ ಅವರ ಮನವೊಲಿಸುವ ಮೂಲಕ ಮಂಟೂರ ಅವರು, ತಮ್ಮ ಶಿಷ್ಯನಿಗೆ ವಿಧಾನಸೌಧದ ಮೆಟ್ಟಿಲು ಏರಿಲು ಅವಕಾಶ ಮಾಡಿಕೊಟ್ಟಿದ್ದರು.</p>.<p>ಮುಂದೆ ಲೋಕಸಭೆಗೂ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಲೋಕಸಭಾ ಸದಸ್ಯರೂ ಆಗಿದ್ದರು.</p>.<p>ಸಿದ್ಧರಾಮಯ್ಯನವರ ಕಟ್ಟಾ ಅನುಯಾಯಿ: ರಾಜಕಾರಣದಲ್ಲಿ ದಿನಕ್ಕೊಬ್ಬ ನಾಯಕರ ಜೊತೆ ಗುರುತಿಸಿಕೊಳ್ಳುವ ಸಂದರ್ಭದಲ್ಲಿ ಎಚ್.ವೈ. ಮೇಟಿ ಅವರು ಮಾತ್ರ ನಾಲ್ಕು ದಶಕಗಳಿಂದ ಸಿದ್ದರಾಮಯ್ಯ ಅವರ ಕಟ್ಟಾ ಅನುಯಾಯಿಯಾಗಿದ್ದರು. ಜನತಾ ದಳ, ಜನತಾ ಪಕ್ಷ, ಕಾಂಗ್ರೆಸ್ಗೆ ಸಿದ್ದರಾಮಯ್ಯ ಅವರೊಂದಿಗೆ ರಾಜಕೀಯ ಪಯಣ ಮುಂದುವರೆಸಿದ್ದರು.</p>.<p>ಎಲ್ಲಿಯೇ ಹೋಗಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಬದನೆಕಾಯಿ ಪಲ್ಲೆ, ಕಾಳು ಪಲ್ಲೆ, ಮೊಸರು ಅವರ ಮೊದಲ ಆಯ್ಕೆಯಾಗಿರುತ್ತಿತ್ತು. ದೆಹಲಿಗೂ ತಮ್ಮ ಜೊತೆ ರೊಟ್ಟಿ ತೆಗೆದುಕೊಂಡು ಹೋಗುತ್ತಿದ್ದನ್ನು ಹಲವು ಕಡೆ ಸ್ಮರಿಸಿಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗಲಕೋಟೆ</strong>: ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ಓದಿಲ್ಲದೇ ರಾಜಕೀಯ ಪಯಣ ಆರಂಭಿಸಿದ ಎಚ್.ವೈ. ಮೇಟಿ ಅವರು, ವಿಧಾನಸೌಧವಲ್ಲದೇ ದೆಹಲಿಯ ಪಾರ್ಲಿಮೆಂಟ್ ಅನ್ನೂ ಪ್ರವೇಶಿಸಿದ್ದರು.</p>.<p>ಐದು ದಶಕಗಳ ಕಾಲ ರಾಜಕೀಯದ ವಿವಿಧ ಮೆಟ್ಟಿಲುಗಳನ್ನು ಏರಿದ್ದರು. ಸಂಸದರಾಗಿ ದೆಹಲಿಗೂ ಹೋಗಿದ್ದರು. ಆದರೆ ಜನ್ಮ ಸ್ಥಳವಾದ ‘ತಿಮ್ಮಾಪುರ’ ಅನ್ನು ಅವರು ಮರೆತಿರಲಿಲ್ಲ. ಜಿಲ್ಲೆಗೆ ಬಂದರೆ ನೇರವಾಗಿ ಅವರ ವಾಹನ ತಿಮ್ಮಾಪುರದ ಮನೆಗೆ ಹೋಗುತ್ತಿತ್ತು. ಅಲ್ಲಿಂದಲೇ ಕ್ಷೇತ್ರ, ಜಿಲ್ಲೆಯನ್ನು ಸುತ್ತುತ್ತಿದ್ದರು.</p>.<p>ಬಿಲ್ ಕೆರೂರ ಮಂಡಲ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಜೀವನಕ್ಕೆ ಕಾಲಿಟ್ಟ ಅವರು, ಪಿಎಲ್ಡಿ ಬ್ಯಾಂಕ್ ನಿರ್ದೇಶಕ, ಬಿಡಿಸಿಸಿ ನಿರ್ದೇಶಕರಾಗುವ ಮೂಲಕ ಸಹಕಾರ ರಂಗದಲ್ಲಿಯೂ ತಮ್ಮದೇ ಹೆಜ್ಜೆ ಗುರುತು ಮೂಡಿಸಿದ್ದರು.</p>.<p>ಜನತಾ ಪರಿವಾರದ ನಾಯಕ: 1989ರಲ್ಲಿ ಗುಳೇದಗುಡ್ಡ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿಸುವಲ್ಲಿ ಅವರ ರಾಜಕೀಯ ಗುರು, ಶಾಸಕ ಜಿ.ವಿ. ಮಂಟೂರ ಅವರ ಪಾತ್ರ ದೊಡ್ಡದಾಗಿತ್ತು. ರಾಮಕೃಷ್ಣ ಹೆಗಡೆ ಅವರ ಮನವೊಲಿಸುವ ಮೂಲಕ ಮಂಟೂರ ಅವರು, ತಮ್ಮ ಶಿಷ್ಯನಿಗೆ ವಿಧಾನಸೌಧದ ಮೆಟ್ಟಿಲು ಏರಿಲು ಅವಕಾಶ ಮಾಡಿಕೊಟ್ಟಿದ್ದರು.</p>.<p>ಮುಂದೆ ಲೋಕಸಭೆಗೂ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಲೋಕಸಭಾ ಸದಸ್ಯರೂ ಆಗಿದ್ದರು.</p>.<p>ಸಿದ್ಧರಾಮಯ್ಯನವರ ಕಟ್ಟಾ ಅನುಯಾಯಿ: ರಾಜಕಾರಣದಲ್ಲಿ ದಿನಕ್ಕೊಬ್ಬ ನಾಯಕರ ಜೊತೆ ಗುರುತಿಸಿಕೊಳ್ಳುವ ಸಂದರ್ಭದಲ್ಲಿ ಎಚ್.ವೈ. ಮೇಟಿ ಅವರು ಮಾತ್ರ ನಾಲ್ಕು ದಶಕಗಳಿಂದ ಸಿದ್ದರಾಮಯ್ಯ ಅವರ ಕಟ್ಟಾ ಅನುಯಾಯಿಯಾಗಿದ್ದರು. ಜನತಾ ದಳ, ಜನತಾ ಪಕ್ಷ, ಕಾಂಗ್ರೆಸ್ಗೆ ಸಿದ್ದರಾಮಯ್ಯ ಅವರೊಂದಿಗೆ ರಾಜಕೀಯ ಪಯಣ ಮುಂದುವರೆಸಿದ್ದರು.</p>.<p>ಎಲ್ಲಿಯೇ ಹೋಗಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಬದನೆಕಾಯಿ ಪಲ್ಲೆ, ಕಾಳು ಪಲ್ಲೆ, ಮೊಸರು ಅವರ ಮೊದಲ ಆಯ್ಕೆಯಾಗಿರುತ್ತಿತ್ತು. ದೆಹಲಿಗೂ ತಮ್ಮ ಜೊತೆ ರೊಟ್ಟಿ ತೆಗೆದುಕೊಂಡು ಹೋಗುತ್ತಿದ್ದನ್ನು ಹಲವು ಕಡೆ ಸ್ಮರಿಸಿಕೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>