ಕುಳಗೇರಿ ಕ್ರಾಸ್: ಕುಳಗೇರಿ ಹೋಬಳಿಯ ಸುತ್ತಮುತ್ತಲೀನ ಗ್ರಾಮಗಳಲ್ಲಿ ಗುರುವಾರ ಮಧ್ಯಾಹ್ನ ಒಂದೂವರೆ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು. ಬಿತ್ತನೆಗೆ ಕಾದು ಕುಳಿತಿದ್ದ ರೈತರ ಮೊಗದಲ್ಲಿ ಮಳೆ ಮಂದಹಾಸ ಮೂಡಿಸಿದೆ.
ಹೋಬಳಿಯ ನೀರಲಕೇರಿ ಗ್ರಾಮದಲ್ಲಿ ಭರಮಗೌಡರ ಮನೆಯ ಚಾವಣಿ ಕುಸಿದು ಬಿದ್ದಿದೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಸ್ಥಳಕ್ಕೆ ಭೇಟಿ ನೀಡದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಭರಮಗೌಡ ಆಕ್ರೋಶ ವ್ಯಕ್ತಪಡಿಸಿದರು.
ಧಾರಾಕಾರ ಮಳೆಯಿಂದ ಬಹುತೇಕ ರೈತರು ಈ ವಾರಾಂತ್ಯದಲ್ಲಿ ನಿರೀಕ್ಷೆಗೂ ಮೀರಿ ಬರಡು ಬಿದ್ದ ಭೂಮಿಗಳನ್ನು ಹದ ಮಾಡಿ ಬಿತ್ತನೆ ಮಾಡಿದ ಬಹುತೇಕ ರೈತರು ಈ ಮಳೆ ಆಕಾಶಕ್ಕೆ ಭರ್ಚೆ ಹಾಕುವ ಕಾಲ ಬಂದಿತೆನಪ್ಪ ಈ ವರ್ಷ ಇಂತಃ ಮಳೆಯನ್ನು ಕಾಣುತ್ತೆದ್ದೆವಿಲ್ಲಪಾ ಎಂದು ಬಹಳಷ್ಟು ರೈತರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.