<p><strong>ಕೂಡಲಸಂಗಮ</strong>: ‘ಬಸವಣ್ಣನವರಿಗಿಂತ ಪೂರ್ವದಲ್ಲಿ ಜೈನ ಧರ್ಮೀಯರು ಬಹುಸಂಖ್ಯಾತರಾಗಿದ್ದರು. ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದ ನಂತರ ಬಹುತೇಕ ಜೈನರು ಲಿಂಗಾಯತ ಧರ್ಮಕ್ಕೆ ಮತಾಂತರವಾದರು. ಚರಿತ್ರೆಯಲ್ಲಿ ಪರಂಪರೆಗಿಂತ ಆಧಾರಗಳು ಮುಖ್ಯ’ ಎಂದು ಸಿಂದಗಿ ಸಿ.ಎಂ.ಮನಗೂಳಿ ಪದವಿ ಕಾಲೇಜು ಪ್ರಾಧ್ಯಾಪಕ ಅರವಿಂದ ಮನಗೂಳಿ ಹೇಳಿದರು.</p>.<p>ಲಿಂಗಾಯತ ಪಂಚಮಸಾಲಿ ಪೀಠದಿಂದ ಕೂಡಲಸಂಗಮದ ಶೇಖಪ್ಪ ದೇಶಿ ಅವರ ಮನೆಯಲ್ಲಿ ಸೋಮವಾರ ನಡೆದ ‘ಮನೆ-ಮನದಲ್ಲಿ ಕೂಡಲಸಂಗಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಪಂಚಪೀಠಗಳಲ್ಲಿ ಎರಡು ಪೀಠಗಳನ್ನು ಪಂಚಮಸಾಲಿ ಸಮುದಾಯದವರಿಗೆ ನೀಡಬೇಕು ಎಂಬ ಬೇಡಿಕೆಯನ್ನು ಸಮುದಾಯದ ಮುಖಂಡರು ಇಟ್ಟರು. ಪಂಚಪೀಠದವರು ಒಪ್ಪದ ಕಾರಣ ಕೂಡಲಸಂಗಮ, ಹರಿಹರದಲ್ಲಿ ಪೀಠಗಳು ಹುಟ್ಟಿಕೊಂಡವು’ ಎಂದರು.</p>.<p>ಸಾನ್ನಿಧ್ಯ ವಹಿಸಿದ್ದ ಬಸವಜಯಮೃತ್ಯುಂಜಯ ಸ್ವಾಮೀಜಿ, ‘ಶ್ರಾವಣಮಾಸದ ಅಂಗವಾಗಿ 16 ವರ್ಷದಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದೆ. ಪ್ರತಿ ವರ್ಷ ಬಸವಾದಿ ಶರಣರ ವಚನ ಚಿಂತನೆಗಳ ಉಪನ್ಯಾಸ ಇರುತ್ತಿತ್ತು. ಈ ವರ್ಷ ಪಂಚಮಸಾಲಿ ಮಹಾನ್ ನಾಯಕರ ಪರಿಚಯಿಸುವ ಕಾರ್ಯ ಆರಂಭಿಸಿದ್ದೇವೆ. ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕುವವರೇ ಪಂಚಮಸಾಲಿಗಳು’ ಎಂದರು.</p>.<p>ಶೇಖಪ್ಪ ದೇಶಿ ಕುಟುಂಬದವರನ್ನು ಶ್ರೀಗಳು ಸನ್ಮಾನಿಸಿದರು. ಕಲಬುರಗಿ ಪಂಚಸೇನಾ ಅಧ್ಯಕ್ಷ ಸೋಮಶೇಖರ ಮಾಳಗಿ, ಮುಖಂಡರಾದ ಎಲ್.ಎಂ. ಪಾಟೀಲ, ಶರಣಪ್ಪ ಗಾಣಗೇರ, ಬಸವರಾಜ ಗೌಡರ, ಶೇಖರಗೌಡ ಗೌಡರ, ಗಿರೀಶಗೌಡ ಗೌಡರ, ಶರಣು ಪಾಟೀಲ, ಸಿದ್ದು ಪಾಟೀಲ, ಆದಪ್ಪ ಗೊರಚಿಕ್ಕನವರ ಇದ್ದರು.</p>.<div><blockquote>ಪಂಚಮಸಾಲಿ ಸಮುದಾಯ ಸಂಘಟಿಸಿದ ಶ್ರೇಯಸ್ಸು ಬಸವಜಯಮೃತ್ಯುಂಜಯ ಶ್ರೀಗಳಿಗೆ ಸಲ್ಲುತ್ತದೆ. ಪಂಚಮಸಾಲಿಗಳ ಶಕ್ತಿ ತೋರಿಸಿಕೊಟ್ಟಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಂಘಟನೆ ಕಾರ್ಯ ಮುಂದುವರಿಸಬೇಕು </blockquote><span class="attribution">ಅರವಿಂದ ಮನಗೂಳಿ ಪ್ರಾಧ್ಯಾಪಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡಲಸಂಗಮ</strong>: ‘ಬಸವಣ್ಣನವರಿಗಿಂತ ಪೂರ್ವದಲ್ಲಿ ಜೈನ ಧರ್ಮೀಯರು ಬಹುಸಂಖ್ಯಾತರಾಗಿದ್ದರು. ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪಿಸಿದ ನಂತರ ಬಹುತೇಕ ಜೈನರು ಲಿಂಗಾಯತ ಧರ್ಮಕ್ಕೆ ಮತಾಂತರವಾದರು. ಚರಿತ್ರೆಯಲ್ಲಿ ಪರಂಪರೆಗಿಂತ ಆಧಾರಗಳು ಮುಖ್ಯ’ ಎಂದು ಸಿಂದಗಿ ಸಿ.ಎಂ.ಮನಗೂಳಿ ಪದವಿ ಕಾಲೇಜು ಪ್ರಾಧ್ಯಾಪಕ ಅರವಿಂದ ಮನಗೂಳಿ ಹೇಳಿದರು.</p>.<p>ಲಿಂಗಾಯತ ಪಂಚಮಸಾಲಿ ಪೀಠದಿಂದ ಕೂಡಲಸಂಗಮದ ಶೇಖಪ್ಪ ದೇಶಿ ಅವರ ಮನೆಯಲ್ಲಿ ಸೋಮವಾರ ನಡೆದ ‘ಮನೆ-ಮನದಲ್ಲಿ ಕೂಡಲಸಂಗಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಪಂಚಪೀಠಗಳಲ್ಲಿ ಎರಡು ಪೀಠಗಳನ್ನು ಪಂಚಮಸಾಲಿ ಸಮುದಾಯದವರಿಗೆ ನೀಡಬೇಕು ಎಂಬ ಬೇಡಿಕೆಯನ್ನು ಸಮುದಾಯದ ಮುಖಂಡರು ಇಟ್ಟರು. ಪಂಚಪೀಠದವರು ಒಪ್ಪದ ಕಾರಣ ಕೂಡಲಸಂಗಮ, ಹರಿಹರದಲ್ಲಿ ಪೀಠಗಳು ಹುಟ್ಟಿಕೊಂಡವು’ ಎಂದರು.</p>.<p>ಸಾನ್ನಿಧ್ಯ ವಹಿಸಿದ್ದ ಬಸವಜಯಮೃತ್ಯುಂಜಯ ಸ್ವಾಮೀಜಿ, ‘ಶ್ರಾವಣಮಾಸದ ಅಂಗವಾಗಿ 16 ವರ್ಷದಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗಿದೆ. ಪ್ರತಿ ವರ್ಷ ಬಸವಾದಿ ಶರಣರ ವಚನ ಚಿಂತನೆಗಳ ಉಪನ್ಯಾಸ ಇರುತ್ತಿತ್ತು. ಈ ವರ್ಷ ಪಂಚಮಸಾಲಿ ಮಹಾನ್ ನಾಯಕರ ಪರಿಚಯಿಸುವ ಕಾರ್ಯ ಆರಂಭಿಸಿದ್ದೇವೆ. ಬಸವಣ್ಣನವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬದುಕುವವರೇ ಪಂಚಮಸಾಲಿಗಳು’ ಎಂದರು.</p>.<p>ಶೇಖಪ್ಪ ದೇಶಿ ಕುಟುಂಬದವರನ್ನು ಶ್ರೀಗಳು ಸನ್ಮಾನಿಸಿದರು. ಕಲಬುರಗಿ ಪಂಚಸೇನಾ ಅಧ್ಯಕ್ಷ ಸೋಮಶೇಖರ ಮಾಳಗಿ, ಮುಖಂಡರಾದ ಎಲ್.ಎಂ. ಪಾಟೀಲ, ಶರಣಪ್ಪ ಗಾಣಗೇರ, ಬಸವರಾಜ ಗೌಡರ, ಶೇಖರಗೌಡ ಗೌಡರ, ಗಿರೀಶಗೌಡ ಗೌಡರ, ಶರಣು ಪಾಟೀಲ, ಸಿದ್ದು ಪಾಟೀಲ, ಆದಪ್ಪ ಗೊರಚಿಕ್ಕನವರ ಇದ್ದರು.</p>.<div><blockquote>ಪಂಚಮಸಾಲಿ ಸಮುದಾಯ ಸಂಘಟಿಸಿದ ಶ್ರೇಯಸ್ಸು ಬಸವಜಯಮೃತ್ಯುಂಜಯ ಶ್ರೀಗಳಿಗೆ ಸಲ್ಲುತ್ತದೆ. ಪಂಚಮಸಾಲಿಗಳ ಶಕ್ತಿ ತೋರಿಸಿಕೊಟ್ಟಿದ್ದಾರೆ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಸಂಘಟನೆ ಕಾರ್ಯ ಮುಂದುವರಿಸಬೇಕು </blockquote><span class="attribution">ಅರವಿಂದ ಮನಗೂಳಿ ಪ್ರಾಧ್ಯಾಪಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>