<p><strong>ಕೆರೂರ:</strong> ಗ್ರಾಮದಲ್ಲಿ ಯಾವುದೇ ಅಭಿವೃದ್ದಿ ಕಾಮಗಾರಿ ನಡೆದರೆ ಗ್ರಾಮಸ್ಥರ ನಿಗಾವಹಿಸಬೇಕು, ಕಳಪೆ ಕಾಮಗಾರಿಯಾದರೆ ನನಗೆ ಮಾಹಿತಿ ನೀಡಿರಿ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.</p>.<p>ಅವರು ಸಮೀಪದ ಅನವಾಲ, ಕಾಡರಕೊಪ್ಪ, ಯಂಡಿಗೇರಿ, ಕರಡಿಗುಡ್ಡ ಎಸ್.ಎ., ಗ್ರಾಮದಲ್ಲಿ ವಿವಿಧ ಕಾಮಗಾರಿ ಭೂಮಿ ಪೂಜೆ ಹಾಗೂ ಇನಾಂ ಯರಗೊಪ್ಪ, ಮಾಲಗಿ ಗ್ರಾಮಗಳಲ್ಲಿ ನೂತನ ಕೊಠಡಿಗಳನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.</p>.<p>ಅನವಾಲ ಗ್ರಾಮದಲ್ಲಿ ಸುಮಾರು ₹10 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಮತ್ತು ₹10 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, ಕಾಡರಕೊಪ್ಪ ಗ್ರಾಮದಲ್ಲಿ ₹13 ಲಕ್ಷ ವೆಚ್ಚದಲ್ಲಿ ಎರಡು ಶಾಲಾ ಕೊಠಡಿ ನಿರ್ಮಾಣ, ಯಂಡಿಗೇರಿ ಗ್ರಾಮದಲ್ಲಿ ₹10 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, ₹50 ಲಕ್ಷ ವೆಚ್ಚದಲ್ಲಿ ಕರಡಿಗುಡ್ಡ ಎಸ್ ಎ ಗ್ರಾಮದಿಂದ ನಿರಬೂದಿಹಾಳ ಹಾಗೂ ಯಂಡಿಗೇರಿ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಕಾಮಗಾರಿ ಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.</p>.<p>ಇನಾಂ ಯರಗೋಪ್ಪ ಗ್ರಾಮದಲ್ಲಿ ನಿರ್ಮಾಣವಾದ ಎರಡು ಪ್ರಾಥಮಿಕ ಶಾಲಾ ಕೊಠಡಿ, ಮಾಲಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿದರು.</p>.<p>ಹಲಕುರ್ಕಿ ಗ್ರಾಮದಲ್ಲಿ ಸೋಮವಾರ ದಿಗಂಬರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ವಧು-ವರರಿಗೆ ಆಶೀರ್ವದಿಸಿದರು.</p>.<p>ಧರ್ಮಣ್ಣ ಭಗವತಿ, ಪ್ರವೀಣ ಚಿಕ್ಕೂರ, ಶಿಕ್ಷಕ ರಸುಲ್ ಬಡೆಖಾನ, ಅಶೋಕ ರೂಗಿ, ಗದಿಗೆಪ್ಪ ತೊರಗಲ್, ಬಿ.ಎಸ್.ಮಾಚಾ, ಗೀತಾ ಉಪ್ಪಾರ, ಮಾಂತೇಶ ಹಡಪದ, ಪಿಡಿಒಗಳಾದ ಚೇತನ ಹೊಸಮನಿ, ಸುಮಂಗಲಾ ಮಳಿಯನ್ನವರ, ಎಂಜಿನಿಯರ್ ಅಜಿತ ಹಾಗೂ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆರೂರ:</strong> ಗ್ರಾಮದಲ್ಲಿ ಯಾವುದೇ ಅಭಿವೃದ್ದಿ ಕಾಮಗಾರಿ ನಡೆದರೆ ಗ್ರಾಮಸ್ಥರ ನಿಗಾವಹಿಸಬೇಕು, ಕಳಪೆ ಕಾಮಗಾರಿಯಾದರೆ ನನಗೆ ಮಾಹಿತಿ ನೀಡಿರಿ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.</p>.<p>ಅವರು ಸಮೀಪದ ಅನವಾಲ, ಕಾಡರಕೊಪ್ಪ, ಯಂಡಿಗೇರಿ, ಕರಡಿಗುಡ್ಡ ಎಸ್.ಎ., ಗ್ರಾಮದಲ್ಲಿ ವಿವಿಧ ಕಾಮಗಾರಿ ಭೂಮಿ ಪೂಜೆ ಹಾಗೂ ಇನಾಂ ಯರಗೊಪ್ಪ, ಮಾಲಗಿ ಗ್ರಾಮಗಳಲ್ಲಿ ನೂತನ ಕೊಠಡಿಗಳನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.</p>.<p>ಅನವಾಲ ಗ್ರಾಮದಲ್ಲಿ ಸುಮಾರು ₹10 ಲಕ್ಷ ವೆಚ್ಚದಲ್ಲಿ ಗ್ರಂಥಾಲಯ ಮತ್ತು ₹10 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, ಕಾಡರಕೊಪ್ಪ ಗ್ರಾಮದಲ್ಲಿ ₹13 ಲಕ್ಷ ವೆಚ್ಚದಲ್ಲಿ ಎರಡು ಶಾಲಾ ಕೊಠಡಿ ನಿರ್ಮಾಣ, ಯಂಡಿಗೇರಿ ಗ್ರಾಮದಲ್ಲಿ ₹10 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, ₹50 ಲಕ್ಷ ವೆಚ್ಚದಲ್ಲಿ ಕರಡಿಗುಡ್ಡ ಎಸ್ ಎ ಗ್ರಾಮದಿಂದ ನಿರಬೂದಿಹಾಳ ಹಾಗೂ ಯಂಡಿಗೇರಿ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಕಾಮಗಾರಿ ಗಳಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.</p>.<p>ಇನಾಂ ಯರಗೋಪ್ಪ ಗ್ರಾಮದಲ್ಲಿ ನಿರ್ಮಾಣವಾದ ಎರಡು ಪ್ರಾಥಮಿಕ ಶಾಲಾ ಕೊಠಡಿ, ಮಾಲಗಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾದ ಅಂಗನವಾಡಿ ಕಟ್ಟಡವನ್ನು ಉದ್ಘಾಟಿಸಿದರು.</p>.<p>ಹಲಕುರ್ಕಿ ಗ್ರಾಮದಲ್ಲಿ ಸೋಮವಾರ ದಿಗಂಬರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ವಧು-ವರರಿಗೆ ಆಶೀರ್ವದಿಸಿದರು.</p>.<p>ಧರ್ಮಣ್ಣ ಭಗವತಿ, ಪ್ರವೀಣ ಚಿಕ್ಕೂರ, ಶಿಕ್ಷಕ ರಸುಲ್ ಬಡೆಖಾನ, ಅಶೋಕ ರೂಗಿ, ಗದಿಗೆಪ್ಪ ತೊರಗಲ್, ಬಿ.ಎಸ್.ಮಾಚಾ, ಗೀತಾ ಉಪ್ಪಾರ, ಮಾಂತೇಶ ಹಡಪದ, ಪಿಡಿಒಗಳಾದ ಚೇತನ ಹೊಸಮನಿ, ಸುಮಂಗಲಾ ಮಳಿಯನ್ನವರ, ಎಂಜಿನಿಯರ್ ಅಜಿತ ಹಾಗೂ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>