<p><strong>ಬಾದಾಮಿ</strong>: ‘ಇನ್ನೂರು ವರ್ಷಗಳ ಕಾಲ ಚಾಲುಕ್ಯರ ಕಾಲದಲ್ಲಿ ಕನ್ನಡ ಭಾಷೆ ಶ್ರೀಮಂತ ವಾಗಿರುವುದಕ್ಕೆ ಇಲ್ಲಿನ ಕನ್ನಡ ಶಾಸನಗಳು ಸಾಕ್ಷಿಯಾಗಿವೆ. ಈ ನೆಲ ಕನ್ನಡದ ಗಂಗೋತ್ರಿಯಾಗಿತ್ತು’ ಎಂದು ಸಾಹಿತಿ ವೈ.ಎಂ. ಯಾಕೊಳ್ಳಿ ಹೇಳಿದರು.</p>.<p>ಕಸಾಪ ತಾಲ್ಲೂಕು ಘಟಕದ ಆಶ್ರಯದಲ್ಲಿ ಇಲ್ಲಿನ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಆವರಣದ ಬಸವ ಮಂಟಪದ ಎಂ.ಜಿ. ವಾರಿ ವೇದಿಕೆಯಲ್ಲಿ ಸೋಮವಾರ ನಡೆದ 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ರವಿಕೀರ್ತಿ, ಅಚಲನ್ ಮತ್ತು ರಾಣಿ ವಿಜಯಾಂಬಿಕೆ ಕನ್ನಡ ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದರು. ಕನ್ನಡ ಕಾವ್ಯದ ತ್ರಿಪದಿ ಮೂಲ ರೂಪದ 7ನೇ ಶತಮಾನದ ಕಪ್ಪೆ ಅರಭಟ್ಟನ ಶಾಸನವು ಕನ್ನಡದಲ್ಲಿದೆ’ ಎಂದರು.</p>.<p>‘7 ಶತಮಾನದಿಂದ 21ನೇ ಶತಮಾನದವರೆಗೆ ಸಾಹಿತ್ಯ ಚಿಂತಕರನ್ನು ಈ ನೆಲ ನೀಡಿದೆ. ಕನ್ನಡ ಬಗ್ಗೆ ಚಿಂತನೆ ಮಾಡುವುದೇ ಸಾಹಿತ್ಯ ಸಮ್ಮೇಳನದ ಉದ್ದೇಶವಾಗಿದೆ. ಹೃದಯವನ್ನು ಬೆಸೆಯುವ, ಮಾನವೀಯ ಮೌಲ್ಯಗಳನ್ನು ತಿಳಿಸುವುದೇ ಸಾಹಿತ್ಯವಾಗಿದೆ ’ ಎಂದು ಹೇಳಿದರು.</p>.<p>‘ಚಾಲುಕ್ಯ ದೊರೆಗಳು ಸಾಮ್ರಾಜ್ಯವನ್ನು ವಿಸ್ತರಿಸುವುದರೊಂದಿಗೆ ಶಿಲ್ಪಕಲೆ, ಸಾಹಿತ್ಯ, ಸಂಗೀತ, ನಾಟ್ಯ, ನಾಟಕ ಲಲಿತ ಕಲೆಗಳಿಗೆ ಪ್ರೊತ್ಸಾಹ ನೀಡಿ ಇಡೀ ವಿಶ್ವವೇ ಬೆರಗುಗೊಳಿಸುವಂತದ ಸ್ಮಾರಕಗಳನ್ನು ನಿರ್ಮಿಸಿದರು’ ಎಂದು ಸಮ್ಮೇಳನದ ಅಧ್ಯಕ್ಷ ಜಿ.ಬಿ. ಶೀಲವಂತರ ಹೇಳಿದರು.</p>.<p>‘ಚಾಲುಕ್ಯ ಶಿಲ್ಪಿಗಳು ಜೈನ, ವೈಷ್ಣವ, ಶೈವ, ಜೈನ, ಬೌದ್ಧ ಮೂರ್ತಿ ಶಿಲ್ಪಗಳನ್ನು ಸ್ಮಾರಕಗಳಲ್ಲಿ ಕೆತ್ತನೆ ಮಾಡಿ ಸರ್ವಧರ್ಮ ಸಹಿಷ್ಣುಗಳಾದರು. ರಾಮಾಯಣ, ಮಹಾಭಾರತ ಆಧಾರಿತ ಸಾಂಪ್ರದಾಯಿಕ ಮೂರ್ತಿ ಶಿಲ್ಪಗಳನ್ನು ರೂಪಿಸಿದರು’ ಎಂದು ಹೇಳಿದರು.</p>.<p>‘ಇಮ್ಮಡಿ ಪುಲಿಕೇಶಿ ನರ್ಮದಾ ನದಿ ದಂಡೆಯಲ್ಲಿ ಉತ್ತರ ಭಾರತದ ದೊರೆ ಹರ್ಷವರ್ಧನನ್ನು ಸೋಲಿಸಿದನು. ಅವನ ರಾಜ್ಯವನ್ನು ಮರಳಿ ಕೊಟ್ಟು ಔದಾರ್ಯ ಮೆರೆದನು. ‘ಕರ್ನಾಟ ಬಲ’ ಎಂಬ ಸೇನೆಯನ್ನು ಕಟ್ಟಿದ. ಭಾರತೀಯ ನೌಕಾಪಡೆಯ ಪಿತಾಮಹ ’ ಎಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ ಎಂದು ಹೇಳಿದರು.</p>.<p>ಚಾಲುಕ್ಯರ ನಾಡಿನಲ್ಲಿ ಕನ್ನಡ, ಸಂಸ್ಕೃತ ಭಾಷಾ ಶಾಸನ ಸಾಹಿತ್ಯ, ವಾಸ್ತುಶಿಲ್ಪ, ಸಂಗೀತ, ಚಿತ್ರಕಲೆ ಮತ್ತು ಸಮಕಾಲೀನ ಸಾಹಿತ್ಯ ಬೆಳೆದು ಬಂದ ಬಗ್ಗೆ ವಿವರಿಸಿದರು.</p>.<p>‘ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡುವುದರ ಬಗ್ಗೆ ಇಂದು ಗೊಂದಲಲ್ಲಿ ಇದ್ದಾರೆ. ಇಂಗ್ಲಿಷ್ ಶಿಕ್ಷಣ ಕೊಡಿಸಿದರೆ ಮಕ್ಕಳಿಗೆ ನೌಕರಿ ಬೇಗ ಸಿಗುತ್ತದೆ ಎಂಬ ಭಾವನೆ ಇದೆ. ಪೋಷಕರು ಮೊದಲು ಮಾತೃಭಾಷೆಯ ಶಿಕ್ಷಣ ಸರಿಯಾಗಿ ಕೊಡಿಸಿದರೆ ಇಂಗ್ಲಿಷ್ ಭಾಷೆ ಬರುತ್ತದೆ´ ಎಂದು ತಿಳಿಸಿದರು.</p>.<p>‘ಬಾದಾಮಿ, ಪಟ್ಟದಕಲ್ಲು ಮತ್ತು ಐಹೊಳೆ ಪ್ರವಾಸಿ ತಾಣಗಳು ಅಭಿವೃದ್ಧಿಯಾಗಿ ಪ್ರವಾಸೋದ್ಯಮ ಬೆಳೆಯಬೇಕಿದೆ ’ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.</p>.<p>‘ಮೊಬೈಲ್ ಬಂದು ಕನ್ನಡ ಕೃತಿಗಳನ್ನು ಓದುವ ಹವ್ಯಾಸ ಕಡಿಮೆಯಾಗಿದೆ. ಪುಸ್ತಕಗಳು ಜ್ಞಾನವನ್ನು ಕೊಡುತ್ತವೆ. ವಿದ್ಯಾರ್ಥಿಗಳು ಪುಸ್ತಕಗಳ ಅಧ್ಯಯನ ಮಾಡಬೇಕು ’ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.</p>.<p>‘ಸಾಹಿತಿಗಳು ಪುಸ್ತಕ ಪ್ರಕಟಣೆ ಮಾಡಿ ಬಿಡುಗಡೆ ಮಾಡುವರು. ಆದರೆ ಕೃತಿಗಳ ಬಗ್ಗೆ ಚರ್ಚೆ ನಡೆಯಬೇಕು. ಚರ್ಚೆ ನಡೆದಾಗ ಮಾತ್ರ ಸಾಹಿತ್ಯ ಕೃತಿಯಲ್ಲಿ ಏನಿದೆ ಎಂಬುದು ಅರ್ಥವಾಗುತ್ತದೆ. ಕೃತಿ ಬರೆದ ಸಾಹಿತಿಗೂ ಗೌರವ ಬರಲು ಸಾಧ್ಯ’ ಎಂದು ತಿಳಿಸಿದರು.</p>.<p>‘ಈಚೆಗೆ ಸಂಶೋಧನೆ ಮತ್ತು ಸೃಜನಶೀಲ ಸಾಹಿತ್ಯದ ಕೃತಿಗಳು ಕೊರತೆ ಕಂಡುಬರುತ್ತಿದೆ. ವೈಚಾರಿಕ ಸಾಹಿತ್ಯ ಕೃತಿಗಳು ಹೊರಬರಲಿ’ ಎಂದು ಆಶಯ ವ್ಯಕ್ತಪಡಿಸಿದರು.</p>.<p>ನಿಕಟಪೂರ್ವ ಅಧ್ಯಕ್ಷ ದಾಜೀಬಾ ಜಗದಾಳೆ ಸಮ್ಮೇಳನದ ಅಧ್ಯಕ್ಷ ಜಿ.ಬಿ. ಶೀಲವಂತರಿಗೆ ಕನ್ನಡ ಸಾಹಿತ್ಯ ಪರಿಷತ್ ಧ್ವಜವನ್ನು ಹಸ್ತಾಂತರಿಸಿದರು.</p>.<p>ಪಿಕಾರ್ಡ್ ಬ್ಯಾಂಕ್ ಆವರಣದಿಂದ ವೀರಪುಲಿಕೇಶಿ ವಿದ್ಯಾಸಂಸ್ಥೆಯವರೆಗೆ ನಾಡದೇವಿ ಭುವನೇಶ್ವರಿ ಭಾವಚಿತ್ರ ಮತ್ತು ಸಮ್ಮೇಳನದ ಅಧ್ಯಕ್ಷ ಜಿ.ಬಿ. ಶೀಲವಂತರ ದಂಪತಿಯ ಮೆರವಣಿಗೆ ನಡೆಯಿತು. ಜಾನಪದ ಕಲಾತಂಡ ಮತ್ತು ಪೂರ್ಣಕುಂಭ ಹೊತ್ತ ಮಹಿಳೆಯರು ಇದ್ದರು.</p>.<p>ಎನ್.ಬಿ. ಬನ್ನೂರ, ಶಿವಕುಮಾರ ಹಿರೇಮಠ, ವೀರನಗೌಡ ಕರಿಗೌಡ್ರ, ಎಫ್.ಆರ್. ಪಾಟೀಲ, ಡಾ. ಕರವೀರಪ್ರಭು ಕ್ಯಾಲಕೊಂಡ ಹೊನ್ನಯ್ಯ ಹಿರೇಮಠ, ಮಹಾಂತೇಶ ಹಟ್ಟಿ ವೇದಿಕೆಯಲ್ಲಿ ಇದ್ದರು.</p>.<p>ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಫ್. ಹೊರಕೇರಿ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾದಾಮಿ</strong>: ‘ಇನ್ನೂರು ವರ್ಷಗಳ ಕಾಲ ಚಾಲುಕ್ಯರ ಕಾಲದಲ್ಲಿ ಕನ್ನಡ ಭಾಷೆ ಶ್ರೀಮಂತ ವಾಗಿರುವುದಕ್ಕೆ ಇಲ್ಲಿನ ಕನ್ನಡ ಶಾಸನಗಳು ಸಾಕ್ಷಿಯಾಗಿವೆ. ಈ ನೆಲ ಕನ್ನಡದ ಗಂಗೋತ್ರಿಯಾಗಿತ್ತು’ ಎಂದು ಸಾಹಿತಿ ವೈ.ಎಂ. ಯಾಕೊಳ್ಳಿ ಹೇಳಿದರು.</p>.<p>ಕಸಾಪ ತಾಲ್ಲೂಕು ಘಟಕದ ಆಶ್ರಯದಲ್ಲಿ ಇಲ್ಲಿನ ವೀರಪುಲಿಕೇಶಿ ವಿದ್ಯಾಸಂಸ್ಥೆಯ ಆವರಣದ ಬಸವ ಮಂಟಪದ ಎಂ.ಜಿ. ವಾರಿ ವೇದಿಕೆಯಲ್ಲಿ ಸೋಮವಾರ ನಡೆದ 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>‘ರವಿಕೀರ್ತಿ, ಅಚಲನ್ ಮತ್ತು ರಾಣಿ ವಿಜಯಾಂಬಿಕೆ ಕನ್ನಡ ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದರು. ಕನ್ನಡ ಕಾವ್ಯದ ತ್ರಿಪದಿ ಮೂಲ ರೂಪದ 7ನೇ ಶತಮಾನದ ಕಪ್ಪೆ ಅರಭಟ್ಟನ ಶಾಸನವು ಕನ್ನಡದಲ್ಲಿದೆ’ ಎಂದರು.</p>.<p>‘7 ಶತಮಾನದಿಂದ 21ನೇ ಶತಮಾನದವರೆಗೆ ಸಾಹಿತ್ಯ ಚಿಂತಕರನ್ನು ಈ ನೆಲ ನೀಡಿದೆ. ಕನ್ನಡ ಬಗ್ಗೆ ಚಿಂತನೆ ಮಾಡುವುದೇ ಸಾಹಿತ್ಯ ಸಮ್ಮೇಳನದ ಉದ್ದೇಶವಾಗಿದೆ. ಹೃದಯವನ್ನು ಬೆಸೆಯುವ, ಮಾನವೀಯ ಮೌಲ್ಯಗಳನ್ನು ತಿಳಿಸುವುದೇ ಸಾಹಿತ್ಯವಾಗಿದೆ ’ ಎಂದು ಹೇಳಿದರು.</p>.<p>‘ಚಾಲುಕ್ಯ ದೊರೆಗಳು ಸಾಮ್ರಾಜ್ಯವನ್ನು ವಿಸ್ತರಿಸುವುದರೊಂದಿಗೆ ಶಿಲ್ಪಕಲೆ, ಸಾಹಿತ್ಯ, ಸಂಗೀತ, ನಾಟ್ಯ, ನಾಟಕ ಲಲಿತ ಕಲೆಗಳಿಗೆ ಪ್ರೊತ್ಸಾಹ ನೀಡಿ ಇಡೀ ವಿಶ್ವವೇ ಬೆರಗುಗೊಳಿಸುವಂತದ ಸ್ಮಾರಕಗಳನ್ನು ನಿರ್ಮಿಸಿದರು’ ಎಂದು ಸಮ್ಮೇಳನದ ಅಧ್ಯಕ್ಷ ಜಿ.ಬಿ. ಶೀಲವಂತರ ಹೇಳಿದರು.</p>.<p>‘ಚಾಲುಕ್ಯ ಶಿಲ್ಪಿಗಳು ಜೈನ, ವೈಷ್ಣವ, ಶೈವ, ಜೈನ, ಬೌದ್ಧ ಮೂರ್ತಿ ಶಿಲ್ಪಗಳನ್ನು ಸ್ಮಾರಕಗಳಲ್ಲಿ ಕೆತ್ತನೆ ಮಾಡಿ ಸರ್ವಧರ್ಮ ಸಹಿಷ್ಣುಗಳಾದರು. ರಾಮಾಯಣ, ಮಹಾಭಾರತ ಆಧಾರಿತ ಸಾಂಪ್ರದಾಯಿಕ ಮೂರ್ತಿ ಶಿಲ್ಪಗಳನ್ನು ರೂಪಿಸಿದರು’ ಎಂದು ಹೇಳಿದರು.</p>.<p>‘ಇಮ್ಮಡಿ ಪುಲಿಕೇಶಿ ನರ್ಮದಾ ನದಿ ದಂಡೆಯಲ್ಲಿ ಉತ್ತರ ಭಾರತದ ದೊರೆ ಹರ್ಷವರ್ಧನನ್ನು ಸೋಲಿಸಿದನು. ಅವನ ರಾಜ್ಯವನ್ನು ಮರಳಿ ಕೊಟ್ಟು ಔದಾರ್ಯ ಮೆರೆದನು. ‘ಕರ್ನಾಟ ಬಲ’ ಎಂಬ ಸೇನೆಯನ್ನು ಕಟ್ಟಿದ. ಭಾರತೀಯ ನೌಕಾಪಡೆಯ ಪಿತಾಮಹ ’ ಎಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ ಎಂದು ಹೇಳಿದರು.</p>.<p>ಚಾಲುಕ್ಯರ ನಾಡಿನಲ್ಲಿ ಕನ್ನಡ, ಸಂಸ್ಕೃತ ಭಾಷಾ ಶಾಸನ ಸಾಹಿತ್ಯ, ವಾಸ್ತುಶಿಲ್ಪ, ಸಂಗೀತ, ಚಿತ್ರಕಲೆ ಮತ್ತು ಸಮಕಾಲೀನ ಸಾಹಿತ್ಯ ಬೆಳೆದು ಬಂದ ಬಗ್ಗೆ ವಿವರಿಸಿದರು.</p>.<p>‘ಪೋಷಕರು ಮಕ್ಕಳಿಗೆ ಶಿಕ್ಷಣ ಕೊಡುವುದರ ಬಗ್ಗೆ ಇಂದು ಗೊಂದಲಲ್ಲಿ ಇದ್ದಾರೆ. ಇಂಗ್ಲಿಷ್ ಶಿಕ್ಷಣ ಕೊಡಿಸಿದರೆ ಮಕ್ಕಳಿಗೆ ನೌಕರಿ ಬೇಗ ಸಿಗುತ್ತದೆ ಎಂಬ ಭಾವನೆ ಇದೆ. ಪೋಷಕರು ಮೊದಲು ಮಾತೃಭಾಷೆಯ ಶಿಕ್ಷಣ ಸರಿಯಾಗಿ ಕೊಡಿಸಿದರೆ ಇಂಗ್ಲಿಷ್ ಭಾಷೆ ಬರುತ್ತದೆ´ ಎಂದು ತಿಳಿಸಿದರು.</p>.<p>‘ಬಾದಾಮಿ, ಪಟ್ಟದಕಲ್ಲು ಮತ್ತು ಐಹೊಳೆ ಪ್ರವಾಸಿ ತಾಣಗಳು ಅಭಿವೃದ್ಧಿಯಾಗಿ ಪ್ರವಾಸೋದ್ಯಮ ಬೆಳೆಯಬೇಕಿದೆ ’ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.</p>.<p>‘ಮೊಬೈಲ್ ಬಂದು ಕನ್ನಡ ಕೃತಿಗಳನ್ನು ಓದುವ ಹವ್ಯಾಸ ಕಡಿಮೆಯಾಗಿದೆ. ಪುಸ್ತಕಗಳು ಜ್ಞಾನವನ್ನು ಕೊಡುತ್ತವೆ. ವಿದ್ಯಾರ್ಥಿಗಳು ಪುಸ್ತಕಗಳ ಅಧ್ಯಯನ ಮಾಡಬೇಕು ’ ಎಂದು ಅಧ್ಯಕ್ಷತೆ ವಹಿಸಿದ್ದ ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.</p>.<p>‘ಸಾಹಿತಿಗಳು ಪುಸ್ತಕ ಪ್ರಕಟಣೆ ಮಾಡಿ ಬಿಡುಗಡೆ ಮಾಡುವರು. ಆದರೆ ಕೃತಿಗಳ ಬಗ್ಗೆ ಚರ್ಚೆ ನಡೆಯಬೇಕು. ಚರ್ಚೆ ನಡೆದಾಗ ಮಾತ್ರ ಸಾಹಿತ್ಯ ಕೃತಿಯಲ್ಲಿ ಏನಿದೆ ಎಂಬುದು ಅರ್ಥವಾಗುತ್ತದೆ. ಕೃತಿ ಬರೆದ ಸಾಹಿತಿಗೂ ಗೌರವ ಬರಲು ಸಾಧ್ಯ’ ಎಂದು ತಿಳಿಸಿದರು.</p>.<p>‘ಈಚೆಗೆ ಸಂಶೋಧನೆ ಮತ್ತು ಸೃಜನಶೀಲ ಸಾಹಿತ್ಯದ ಕೃತಿಗಳು ಕೊರತೆ ಕಂಡುಬರುತ್ತಿದೆ. ವೈಚಾರಿಕ ಸಾಹಿತ್ಯ ಕೃತಿಗಳು ಹೊರಬರಲಿ’ ಎಂದು ಆಶಯ ವ್ಯಕ್ತಪಡಿಸಿದರು.</p>.<p>ನಿಕಟಪೂರ್ವ ಅಧ್ಯಕ್ಷ ದಾಜೀಬಾ ಜಗದಾಳೆ ಸಮ್ಮೇಳನದ ಅಧ್ಯಕ್ಷ ಜಿ.ಬಿ. ಶೀಲವಂತರಿಗೆ ಕನ್ನಡ ಸಾಹಿತ್ಯ ಪರಿಷತ್ ಧ್ವಜವನ್ನು ಹಸ್ತಾಂತರಿಸಿದರು.</p>.<p>ಪಿಕಾರ್ಡ್ ಬ್ಯಾಂಕ್ ಆವರಣದಿಂದ ವೀರಪುಲಿಕೇಶಿ ವಿದ್ಯಾಸಂಸ್ಥೆಯವರೆಗೆ ನಾಡದೇವಿ ಭುವನೇಶ್ವರಿ ಭಾವಚಿತ್ರ ಮತ್ತು ಸಮ್ಮೇಳನದ ಅಧ್ಯಕ್ಷ ಜಿ.ಬಿ. ಶೀಲವಂತರ ದಂಪತಿಯ ಮೆರವಣಿಗೆ ನಡೆಯಿತು. ಜಾನಪದ ಕಲಾತಂಡ ಮತ್ತು ಪೂರ್ಣಕುಂಭ ಹೊತ್ತ ಮಹಿಳೆಯರು ಇದ್ದರು.</p>.<p>ಎನ್.ಬಿ. ಬನ್ನೂರ, ಶಿವಕುಮಾರ ಹಿರೇಮಠ, ವೀರನಗೌಡ ಕರಿಗೌಡ್ರ, ಎಫ್.ಆರ್. ಪಾಟೀಲ, ಡಾ. ಕರವೀರಪ್ರಭು ಕ್ಯಾಲಕೊಂಡ ಹೊನ್ನಯ್ಯ ಹಿರೇಮಠ, ಮಹಾಂತೇಶ ಹಟ್ಟಿ ವೇದಿಕೆಯಲ್ಲಿ ಇದ್ದರು.</p>.<p>ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಫ್. ಹೊರಕೇರಿ ಸ್ವಾಗತಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>